ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Gaza Archives » Dynamic Leader
October 23, 2024
Home Posts tagged Gaza
ವಿದೇಶ

“ಪ್ರಸ್ತುತ ಜಾಗತಿಕ ವಾಸ್ತವದೊಂದಿಗೆ ನಾವು ಯುದ್ಧವನ್ನು ನಿರ್ವಹಿಸಲು ಸಾಧ್ಯವಿಲ್ಲ. ಗಾಜಾಕ್ಕೆ ಬರುತ್ತಿರುವ ಮಾನವೀಯ ನೆರವು ಇಸ್ರೇಲ್‌ಗೆ ಅಪಾಯವನ್ನು ತಂದೊಡ್ಡುತ್ತದೆ.” – ಇಸ್ರೇಲ್ ಹಣಕಾಸು ಮಂತ್ರಿ.

ಇಸ್ರೇಲ್ – ಹಮಾಸ್ ನಡುವೆ ಒಂದು ವರ್ಷದಿಂದ ಯುದ್ಧ ನಡೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಮತ್ತು 71 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 39,623 ಜನರು ಸಾವನ್ನಪ್ಪಿದ್ದಾರೆ. 91,469 ಜನರು ಗಾಯಗೊಂಡಿದ್ದಾರೆ ಎಂದು ಅಧಿಕೃತವಾಗಿ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ, ಇಸ್ರೇಲ್‌ನ ಹಣಕಾಸು ಮಂತ್ರಿ ಮತ್ತು ಬಲಪಂಥೀಯ ಬೆಂಬಲಿಗರಾದ ಬೆಜಲೆಲ್ ಸ್ಮೊಟ್ರಿಚ್ (Bezalel Smotrich) ಅವರು ಯಾದ್ ಬಿನ್ಯಾಮಿನ್‌ (Yad Binyamin)ನಲ್ಲಿ ಇಸ್ರೇಲ್ ಹಯೋಮ್ ಔಟ್‌ಲೆಟ್ (Hayom Outlet) ಆಯೋಜಿಸಿದ್ದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಇಸ್ರೇಲ್‌ ಹಣಕಾಸು ಮಂತ್ರಿ ಬೆಜಲೆಲ್ ಸ್ಮೊಟ್ರಿಚ್

“2005ರಲ್ಲಿ ಇಸ್ರೇಲ್ ಗಾಜಾದಿಂದ ಹೊರನಡೆಯದಿದ್ದರೆ, ಅಕ್ಟೋಬರ್ 7ರ ದಾಳಿ ನಡೆಯುತ್ತಿರಲಿಲ್ಲ. ಪ್ರಸ್ತುತ ಜಾಗತಿಕ ವಾಸ್ತವದೊಂದಿಗೆ ನಾವು ಯುದ್ಧವನ್ನು ನಿರ್ವಹಿಸಲು ಸಾಧ್ಯವಿಲ್ಲ. ಗಾಜಾಕ್ಕೆ ಬರುತ್ತಿರುವ ಮಾನವೀಯ ನೆರವು ಇಸ್ರೇಲ್‌ಗೆ ಅಪಾಯವನ್ನು ತಂದೊಡ್ಡುತ್ತದೆ.

ನಮ್ಮ ಒತ್ತೆಯಾಳುಗಳನ್ನು ಹಿಂತಿರುಗಿಸುವವರೆಗೆ ಗಾಜಾದ 2 ಮಿಲಿಯನ್ ನಾಗರಿಕರು ಹಸಿವಿನಿಂದ ಸಾವನ್ನಪ್ಪಿದರೂ ಸಹ, ಗಾಜಾ ಪಟ್ಟಿಗೆ ಮಾನವೀಯ ನೆರವನ್ನು ತಡೆಹಿಡಿಯುವುದು ನೈತಿಕವಾಗಿ ಸಮರ್ಥನೆಯಾಗಿದೆ. ಆದರೆ ಅಂತಾರಾಷ್ಟ್ರೀಯ ಸಮುದಾಯ ಅದಕ್ಕೆ ಅವಕಾಶ ನೀಡುವುದಿಲ್ಲ.

ಅದಕ್ಕಾಗಿಯೇ ನಾವು ಗಾಜಾಕ್ಕೆ ಸಹಾಯವನ್ನು ಅನುಮತಿಸುತ್ತಿದ್ದೇವೆ. ನಾವು ಇಂದು ಒಂದು ನಿರ್ದಿಷ್ಟ ವಾಸ್ತವದಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಈ ಯುದ್ಧಕ್ಕೆ ಅಂತಾರಾಷ್ಟ್ರೀಯ ಮನ್ನಣೆಯ ಅಗತ್ಯವಿದೆ.” ಎಂದು ಹೇಳಿದ್ದಾರೆ.

ವಿದೇಶ

ಟೆಲ್ ಅವೀವ್: ನಿನ್ನೆ (ಶುಕ್ರವಾರ) ಮುಂಜಾನೆಯಿಂದ ಸೆಂಟ್ರಲ್ ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಗಾಜಾದಲ್ಲಿ ನಿರುದ್ಯೋಗವು ಶೇ.80 ರನ್ನು ಸಮೀಪಿಸುತ್ತಿದೆ ಎಂದು ವರದಿ ಮಾಡಿದೆ.

ಹಮಾಸ್ ಜೊತೆ ಇಸ್ರೇಲ್ ನ ಯುದ್ಧ ಮುಂದುವರಿದಿದ್ದು, ವಿಶ್ವ ನಾಯಕರು ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಆದರೆ ಇಸ್ರೇಲ್ ಅದಕ್ಕೆ ಕಿವಿಗೊಡದೆ ಕಣ್ಣುಮುಚ್ಚಿ ದಾಳಿ ನಡೆಸುತ್ತಿದೆ. ನಿನ್ನೆ ಗಾಜಾದಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 40 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ.

ಇದರ ಬೆನ್ನಲ್ಲೇ ನಿನ್ನೆ (ಶುಕ್ರವಾರ) ಮುಂಜಾನೆಯಿಂದ ಸೆಂಟ್ರಲ್ ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ. ಅಲ್ಲದೆ, ಕಳೆದ 24 ಗಂಟೆಗಳಲ್ಲಿ 77 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 221 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಜಾಗತಿಕವಾಗಿ ಕದನ ವಿರಾಮ ಒಪ್ಪಂದವನ್ನು ಜಾರಿಗೆ ತರಲು ಒತ್ತಡ ಹೆಚ್ಚುತ್ತಲೇ ಇದ್ದು, ಇತ್ತೀಚಿನ ಕದನ ವಿರಾಮ ಪ್ರಸ್ತಾವನೆಗೆ ಹಮಾಸ್ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ ಎಂದು ಈಜಿಪ್ಟ್ ಮತ್ತು ಕಟಾರ್ ನ ಮಧ್ಯಸ್ಥರು ಹೇಳುತ್ತಿದ್ದಾರೆ.

ಏತನ್ಮಧ್ಯೆ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಗಾಜಾದಲ್ಲಿ ನಿರುದ್ಯೋಗವು ಶೇ.80 ರಷ್ಟು ಸಮೀಪಿಸುತ್ತಿದೆ ಎಂದು ಹೇಳಿದೆ. ಅದೇ ಸಮಯದಲ್ಲಿ, ಆಕ್ರಮಿತ ಪಶ್ಚಿಮ ದಂಡೆಯಲ್ಲಿ (West Bank) ನಿರುದ್ಯೋಗವು ಸುಮಾರು ಶೇ.32 ರಷ್ಟು ತಲುಪಿದೆ. ಜೊತೆಗೆ ಆ ಭಾಗದ ಜನರು ವೇತನ ಕೊರತೆ ಎಂಬ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಹೀಗಾಗಿ, ಗಾಜಾ ಜನರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ.

ಅಕ್ಟೋಬರ್ 7 ರಿಂದ ಇಲ್ಲಿಯವರೆಗೆ ಗಾಜಾ ಮೇಲೆ ಇಸ್ರೇಲ್ ನಡೆಸಿರುವ ದಾಳಿಯಲ್ಲಿ 36,731 ಜನರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೇ 83,530 ಮಂದಿ ಗಾಯಗೊಂಡಿದ್ದಾರೆ. ಹಮಾಸ್ ದಾಳಿಗಳಿಂದ ಇಸ್ರೇಲ್ ನಲ್ಲಿ ಸತ್ತವರ ಸಂಖ್ಯೆ 1,139 ಆಗಿರುವುದು ಗಮನಾರ್ಹ.

ದೇಶ

ಶ್ರೀನಗರ: ಪಾಕಿಸ್ತಾನದೊಂದಿಗೆ ಮಾತುಕತೆಗೆ ಏಕೆ ಸಿದ್ಧರಿಲ್ಲ? ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು. ಆದರೆ ನಮ್ಮ ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ವಾಜಪೇಯಿ ಹೇಳಿದ್ದರು. ನೆರೆಯ ದೇಶದೊಂದಿಗೆ ಸ್ನೇಹದಿಂದ ಇದ್ದರೆ ಇಬ್ಬರೂ ಪ್ರಗತಿ ಹೊಂದಬಹುದು. ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರಿಸುವುದು ಅಗತ್ಯವಾಗಿದೆ. ಈಗ ನವಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ.

ನಾವು ಭಾರತದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ ಎನ್ನುತ್ತಾರೆ. ನಾವು ಪಾಕಿಸ್ತಾನದೊಂದಿಗೆ ಏಕೆ ಮಾತನಾಡಲು ಸಿದ್ಧರಿಲ್ಲ? ಪಾಕಿಸ್ತಾನದೊಂದಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಇಸ್ರೇಲಿ ಪಡೆಗಳಿಂದ ಬಾಂಬ್ ದಾಳಿಗೊಳಗಾದ ಗಾಜಾದ ಪರಿಸ್ಥಿತಿ ನಮಗೂ ಬರಲಿದೆ. ಜಮ್ಮು ಮತ್ತು ಕಾಶ್ಮೀರ ಮುಂದಿನ ಗಾಜಾ ಆಗಲಿದೆ. ಎಂದು ಅವರು ಹೇಳಿದ್ದಾರೆ.

ವಿದೇಶ

ವಾಷಿಂಗ್ಟನ್, ಪ್ಯಾಲೆಸ್ತೀನ್‌ನ ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಹಮಾಸ್ ಅನ್ನು ನಿರ್ಮೂಲನೆ ಮಾಡುತ್ತೇವೆ ಎಂಬ ಘೋಷಣೆಯೊಂದಿಗೆ ಇಸ್ರೇಲ್ ಆಕ್ರಮಣಕಾರಿ ದಾಳಿ ನಡೆಸುತ್ತಿದೆ. ಸುಮಾರು 2 ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧದಿಂದಾಗಿ ಗಾಜಾದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.

ಇದರ ಪರಿಣಾಮವಾಗಿ, ವಿವಿಧ ದೇಶಗಳು ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮವನ್ನು ಉತ್ತೇಜಿಸಿವೆ. ಆದಾಗ್ಯೂ, ಕದನ ವಿರಾಮ ಮಾತುಕತೆ ವಿಫಲವಾಗಿ ಕೊನೆಗೊಂಡಿತು. ತರುವಾಯ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಶ್ವಸಂಸ್ಥೆಯ ಸಂವಿಧಾನ ಆರ್ಟಿಕಲ್ 99 ಅನ್ನು ಬಳಸಿಕೊಂಡು ತುರ್ತು ಸಭೆಗೆ ಕರೆ ನೀಡಿದರು. ಈ ಸಭೆಯಲ್ಲಿ, ಗಾಜಾದಲ್ಲಿ ಕದನ ವಿರಾಮದ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಿರ್ಣಯವನ್ನು ತರಲಾಯಿತು. ಈ ನಿರ್ಣಯವನ್ನು ಅಮೆರಿಕ ತನ್ನ ವೀಟೋ ಅಧಿಕಾರವನ್ನು ಬಳಸಿ ನಿರಾಕರಿಸಿದೆ.

ಹಮಾಸ್ ಬಳಿ ಇನ್ನೂ 100ಕ್ಕೂ ಹೆಚ್ಚು ಒತ್ತೆಯಾಳುಗಳು ಇದ್ದು, ಕದನ ವಿರಾಮ ನಿರ್ಣಯವು ಅವರ ಕೈಗೆ ಅಧಿಕಾರವನ್ನು ನೀಡುತ್ತದೆ ಎಂದು ಹೇಳಿ, ಅಮೆರಿಕ ತನ್ನ ವೀಟೋ ಅಧಿಕಾರವನ್ನು ಬಳಸಿ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿ ನಿರಾಕರಿಸಿದೆ. ಈ ಕುರಿತು ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ಉಪ ರಾಯಭಾರಿ ರಾಬರ್ಟ್ ವುಡ್, “ಕದನ ವಿರಾಮ ಮತ್ತೊಂದು ಕದನವನ್ನು ಸೃಷ್ಟಿಸುತ್ತದೆ. ಏಕೆಂದರೆ ಹಮಾಸ್ ಶಾಶ್ವತ ಶಾಂತಿಗಾಗಿ ಎರಡು ದೇಶಗಳ ಪರಿಹಾರವನ್ನು ಕಾಣಲು ಬಯಸುತ್ತಿಲ್ಲ” ಎಂದು ಹೇಳಿದ್ದಾರೆ.

ವಿದೇಶ

ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಅವರನ್ನು ಗಾಜಾ ಗಡಿಗೆ ಬಂದು ಇಸ್ರೇಲ್ ಮಾಡಿರುವ ವಿನಾಶವನ್ನು ನೋಡುವಂತೆ ಹಮಾಸ್‌ನ ಹಿರಿಯ ನಾಯಕರೊಬ್ಬರು ಆಹ್ವಾನಿಸಿದ್ದಾರೆ.

“ಗಾಜಾ ಗಡಿಗೆ ಬಂದು, ಗಾಜಾದ ಜನರ ವಿರುದ್ಧ ನಡೆದ ವಿಧ್ವಂಸಕ ಕೃತ್ಯಗಳನ್ನು ಪ್ರತ್ಯಕ್ಷವಾಗಿ ನೋಡಿ ತಿಳಿದುಕೊಳ್ಳುವಂತೆ ನಾವು ಅವರಿಗೆ ಕರೆ ನೀಡುತ್ತೇವೆ. 50 ದಿನಗಳಲ್ಲಿ, ಗಾಜಾದ ರಕ್ಷಣೆಯಿಲ್ಲದ ಮನೆಗಳ ಮೇಲೆ ಇಸ್ರೇಲ್ 40,000 ಟನ್ ಸ್ಫೋಟಕಗಳನ್ನು ಬೀಳಿಸಿದೆ. ಮತ್ತು ಅಮೆರಿಕ, ಇಸ್ರೇಲ್ ನೊಂದಿಗೆ ಸಂಬಂಧಗಳನ್ನು ವಿಸ್ತರಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಕುರಿತು ಮರುಪರಿಶೀಲನೆ ಮಾಡಬೇಕು” ಎಂದು ಹಮಾಸ್‌ನ ಹಿರಿಯ ನಾಯಕ ಒಸಾಮಾ ಹಮ್ದಾನ್ ಹೇಳಿದ್ದಾರೆ.

ಈ ಹಿಂದೆ ಇಸ್ರೇಲ್‌ಗೆ ಭೇಟಿ ನೀಡಿದ್ದ ಎಲಾನ್ ಮಸ್ಕ್, ಹಮಾಸ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದರು. ಮತ್ತು ಎಲಾನ್ ಮಸ್ಕ್ ಅವರು ದ್ವೇಷ ಹರಡುವುದನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು.

ವಿದೇಶ

ಇಸ್ರೇಲ್ ಸೇನೆಯು ಗಾಜಾದ ಮೇಲೆ ವೈಟ್ ಪಾಸ್ಪರಸ್ (ಬಿಳಿ ರಂಜಕ) ಬಾಂಬ್‌ಗಳನ್ನು ಬೀಳಿಸಿದೆ ಎಂದು ಆರೋಪಿಸಲಾಗಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಯುದ್ಧ ತೀವ್ರಗೊಂಡಿದೆ. ಹಮಾಸ್, ಮೊದಲು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ ಅನೇಕ ಸಾವುನೋವುಗಳಿಗೆ ಕಾರಣವಾದಾಗ, ಇಸ್ರೇಲ್ ಉಗ್ರವಾಗಿ ಪ್ರತಿದಾಳಿ ನಡೆಸುತ್ತಿದೆ. ಹಮಾಸ್ ವಶಪಡಿಸಿಕೊಂಡ ಗಾಜಾ ಗಡಿಯಲ್ಲಿರುವ ಪ್ರದೇಶಗಳ ಮೇಲೆ ಇಸ್ರೇಲ್ ಮತ್ತೆ ಹಿಡಿತ ಸಾಧಿಸಿದೆ. ಜೊತೆಗೆ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸುವುದನ್ನು ಮುಂದುವರೆಸಿದೆ. ಈ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ.

ನಾಲ್ಕನೇ ದಿನವೂ ಯುದ್ಧ ಮುಂದುವರಿದಿದ್ದು, ಇಸ್ರೇಲ್ ಅಂತಾರಾಷ್ಟ್ರೀಯವಾಗಿ ನಿಷೇಧಿತ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗಿದೆ. ಉತ್ತರ ಗಾಜಾದಲ್ಲಿ ಇಸ್ರೇಲಿ ಸೇನೆಯು ಹೆಚ್ಚು ಜನನಿಬಿಡ ಪ್ರದೇಶಗಳ ಮೇಲೆ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬೀಳಿಸುತ್ತಿದೆ ಎಂದು ಹೇಳಿಕೊಳ್ಳುವ ವೀಡಿಯೊ ಮತ್ತು ಫೋಟೋಗಳನ್ನು ಪ್ಯಾಲೆಸ್ಟೀನಿಯರು ಬಿಡುಗಡೆ ಮಾಡಿದ್ದಾರೆ. ಇದರಿಂದ ಜನರು ಭಯಭೀತರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಂಕಿಯ ಮಳೆ ಬೀಳುವಂತಿದೆ. ಆದರೆ ಈ ವೀಡಿಯೋ ವಾಸ್ತವವಾಗಿ ಗಾಜಾದಲ್ಲಿ ರೆಕಾರ್ಡ್ ಆಗಿದೆಯೇ? ಇತ್ತೀಚಿನ ವೀಡಿಯೊನಾ? ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ವೈಟ್ ಪಾಸ್ಪರಸ್ ಶೀಘ್ರದಲ್ಲೇ ಹೊತ್ತಿ ಉರಿಯುವ ರಾಸಾಯನಿಕವಾಗಿದೆ. ಗಾಳಿಗೆ ಒಡ್ಡಿಕೊಂಡಾಗ ಅದು ತ್ವರಿತವಾಗಿ ಮತ್ತು ಪ್ರಕಾಶಮಾನವಾಗಿ ಉರಿಯುತ್ತದೆ. ಅಮೆರಿಕಾ ಸೇರಿದಂತೆ ವಿವಿಧ ದೇಶಗಳ ಸೇನೆಗಳು, ಶತ್ರುಗಳ ಗುರಿಗಳನ್ನು ನಾಶಪಡಿಸಲು ಮತ್ತು ಹಾನಿ ಮಾಡಲು ಬೆಂಕಿಯ ಆಯುಧವಾಗಿ ವೈಟ್ ಪಾಸ್ಪರಸ್ ಬಾಂಬುಗಳನ್ನು ಬಳಸುತ್ತವೆ.

ಈ ರಾಸಾಯನಿಕವು ಹೊತ್ತಿಕೊಂಡಾಗ ಹೆಚ್ಚಿನ ಶಾಖವನ್ನು (ಸುಮಾರು 815 ° C) ಉತ್ಪಾದಿಸುತ್ತದೆ ಮತ್ತು ದಟ್ಟವಾದ ಬಿಳಿ ಹೊಗೆಯನ್ನು ಹೊರಸೂಸುತ್ತದೆ. ಉದ್ವಿಗ್ನ ಪ್ರದೇಶಗಳಲ್ಲಿ ಶತ್ರುವನ್ನು ಅಸ್ಥಿರಗೊಳಿಸಲು ಹೊಗೆ ವಲಯವನ್ನು ರಚಿಸಲು ಸೇನೆಗಳು ಈ ರೀತಿಯ ರಾಸಾಯನಿಕವನ್ನು ಬಳಸುತ್ತವೆ.

ಒಮ್ಮೆ ವೈಟ್ ಪಾಸ್ಪರಸ್ ಹೊತ್ತಿಕೊಂಡರೆ ಅದನ್ನು ಆರಿಸುವುದು ಬಹಳ ಕಷ್ಟ. ಹೊತ್ತಿ ಉರಿಯುವ ಈ ರಾಸಾಯನಿಕವು ಮಾನವನ ಚರ್ಮ ಮತ್ತು ಬಟ್ಟೆ ಸೇರಿದಂತೆ ಹಲವು ಪ್ರದೇಶಗಳಿಗೆ ಅಂಟಿಕೊಂಡರೆ ಬಹಳ ತೊಂದರೆಯಾಗುತ್ತದೆ. ಅಂಗಾಂಶ ಮತ್ತು ಮೂಳೆಗೆ ಆಳವಾಗಿ ತೂರಿಕೊಳ್ಳುತ್ತದೆ ಮತ್ತು ತೀವ್ರವಾದ ಸುಡುವಿಕೆಗೆ ಕಾರಣವಾಗುತ್ತದೆ.

ನಾಗರಿಕರ ಮೇಲೆ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬಳಸುವುದನ್ನು ಯುದ್ಧ ಅಪರಾಧ ಎಂದು ಪರಿಗಣಿಸಲಾಗುತ್ತದೆ. ರಷ್ಯಾ ಇತ್ತೀಚೆಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಈ ರೀತಿಯ ಬಾಂಬ್ ಅನ್ನು ಬಳಸಿದೆ ಎಂದು ಆರೋಪಿಸಲಾಗಿದೆ ಎಂಬುದು ಗಮನಾರ್ಹ.