ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Godhra Archives » Dynamic Leader
October 23, 2024
Home Posts tagged Godhra
ರಾಜ್ಯ

ಕಾಂಗ್ರೆಸ್ಸಿನ ಹಿರಿಯ ಮುಖಂಡರು, ಪೆರಿಯಾರ್ ವಾದಿಗಳು, ಜಾತ್ಯತೀತ ಸಿದ್ಧಾಂತಃ ನಂಬಿರುವ ನೀವು ಇತ್ತೀಚಿಗೆ ಒಂದು ಹೇಳಿಕೆಯನ್ನು ನೀಡಿದ್ದೀರಾ. “ಅಯೋಧ್ಯೆಗೆ ರಾಮಮಂದಿರ ಉದ್ಘಾಟನೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು; ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರೂ ಆಗಬಹುದು” ಎನ್ನುವುದು ನಿಮ್ಮ ಹೇಳಿಕೆಯಾಗಿತ್ತು.

ಈ ನಿಮ್ಮ ಹೇಳಿಕೆಗೆ ಪ್ರತಿಕ್ರಿಯೆ ಎಂಬಂತೆ ಗೃಹ ಸಚಿವರಾದ ಡಾ.ಪರಮೇಶ್ವರ್ ರವರು ಇನ್ನೊಂದು ಹೇಳಿಕೆ ನೀಡಿದ್ದರು. “ಗೋಧ್ರಾ ರೀತಿಯ ಮತ್ತೊಂದು ದುರಂತ ಸಂಭವಿಸಲಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಗೃಹ ಇಲಾಖೆಗೂ ವಿಷಯ ಗೊತ್ತಿಲ್ಲ” ಎಂಬ ಹೇಳಿಕೆ ಅದಾಗಿತ್ತು.

ಈ ನಿಮ್ಮ ಹೇಳಿಕೆಗಳ ನಡುವೆ ಮುಸ್ಲಿಮರ ಗೊಂದಲ, ಸಂಕಟಗಳು ಎಷ್ಟು ಎಂಬ ಅಂದಾಜು ನಿಮಗೆ ಹಾಗೂ ನಿಮ್ಮ ಪಕ್ಷದ ಮುಖಂಡರಿಗೆ ಇದೆಯೇ? ಗೋಧ್ರಾ ದುರಂತದ ಭಯಾನಕತೆ ನಿಮಗೆ ನೆನಪಿದೆಯೇ? ಅಥವಾ ನಿಮಗೆ ಗೊತ್ತಿದೆಯೇ? ಈ ಘಟನೆಯ ಕುರಿತು ಬಹಿರಂಗವಾಗಿ ಹೇಳಿಕೆ ನೀಡುವಾಗ ಒಬ್ಬ ಜವಾಬ್ದಾರಿಯುತ ಭಾರತೀಯ ನಾಗರೀಕರಾಗಿ ವಿಶೇಷವಾಗಿ ಸಂವಿಧಾನಾತ್ಮಕ ಒಂದು ಸ್ಥಾನದಲ್ಲಿ ಇರುವ ನೀವು ಎಷ್ಟು ಎಚ್ಚರದಿಂದ ಇರಬೇಕು ಎನ್ನುವ ಅರಿವು ನಿಮಗಿದೆಯೇ?

ಗೋಧ್ರಾ ದುರಂತ ಒಂದು ಭೀಕರ ಹಾಗೂ ಭಾರತದ ಕರಾಳ ನೆನಪು. 2002ರ ಫೆಬ್ರುವರಿ 27 ರಂದು ಅಯೋಧ್ಯೆ ರೈಲ್ವೆ ನಿಲ್ದಾಣದಿಂದ ಮರಳುತ್ತಿದ್ದ ರೈಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, 59 ಮಂದಿ ಯಾತ್ರಿಕರು ಸುಟ್ಟು ಕರಕಲಾದರು. ಅದರ ಬೆನ್ನಲ್ಲೇ ದೇಶದ ವಿವಿಧೆಡೆ ಭುಗಿಲೆದ್ದ ವ್ಯಾಪಕ ಹಿಂಸಾಚಾರದಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು ಪ್ರಾಣ ಕಳೆದುಕೊಂಡರು. ಇದು ಇಂದಿಗೂ ಗುಜರಾತ್ ಹತ್ಯಾಕಾಂಡ ಎಂದೇ ಕರೆಯಲಾಗುತ್ತಿದೆ. ಇದು ಇತಿಹಾಸ.

ಗೋಧ್ರಾ ದುರ್ಘಟನೆಯ ಕುರಿತು ನಾನಾವತಿ-ಮೆಹ್ತಾ ಆಯೋಗಗಳು ವಿಚಾರಣೆ ನಡೆಸಿದವು. 31 ಮುಸ್ಲಿಮರು ತಪ್ಪಿತಸ್ಥರು ಎಂದು ವರದಿ ಬಂತು.‌ ತಪ್ಪಿತಸ್ಥರ ಶಿಕ್ಷೆಯ ತೀರ್ಪನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿಯಿತು.

ಈ ಇತಿಹಾಸದ ಘಟನೆಯ ನಂತರ ನೀವು ಹೇಳ ಬಯತ್ತಿರುವುದೇನು? ಕರ್ನಾಟಕದಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸಬಹುದು ಎಂಬ ಮಾಹಿತಿಯೇ ಅಥವಾ ಗುಮಾನಿಯೆ? ಅಲ್ಲದೆ ನೀವು “ಇದರ ಬಗ್ಗೆ ನನಗೆ ಮಾಹಿತಿ ಇದ್ದೇ ಮಾತನಾಡುತ್ತಿದ್ದೇನೆ” ಎಂದೂ ಸಹ ಹೇಳಿದ್ದೀರ.

ನೀವು ಒಬ್ಬ ಹಿರಿಯ ಜವಾಬ್ದಾರಿಯುತ ಕಾಂಗ್ರೆಸ್ ನಾಯಕರಾಗಿ, ಇಂತಹ ಗಂಭೀರ ಮಾಹಿತಿಯನ್ನು ಪತ್ರಿಕಾ ಗೋಷ್ಠಿಯಲ್ಲಿ ಬಹಿರಂಗ ಗೊಳಿಸುವ ಅಗತ್ಯವಿತ್ತೆ? ನಿಮಗೆ ಇದೊಂದು ಗಂಭೀರ ಮಾಹಿತಿ ಎಂದಾಗಿದ್ದರೆ, ನಿಮ್ಮದೇ ಪಕ್ಷದ ಸರ್ಕಾರದ ಗೃಹ ಸಚಿವರಿಗೆ ಮಾಹಿತಿ ನೀಡುವುದರ ಮೂಲಕ ತಕ್ಷಣ ರಾಜ್ಯ ಪೊಲೀಸ್ ಇಲಾಖೆಯನ್ನು ಎಚ್ಚರಿಸಿ, ಗುಪ್ತಚರ ಇಲಾಖೆಯನ್ನು ಸಕ್ರಿಯ ಗೊಳಿಸಬೇಕಿತ್ತು.

ಶಾಂತಿ-ಶಿಸ್ತು ಪಾಲಿಸುವ ವಿಷಯದಲ್ಲಿ ಯಾವುದೇ ಪಕ್ಷದ ನೇತೃತ್ವದ ಸರ್ಕಾರದ ರಾಜಕಾರಣದ ಲೆಕ್ಕಾಚಾರ ಸರಿಯಲ್ಲ.  ಕಾಂಗ್ರೆಸ್ ಪಕ್ಷದೊಳಗಿನ ನಾಯಕರ ಒಳ ಭಿನ್ನಮತ ಬಹಿರಂಗ ಕಾಳಗವಾಗಿ, ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಸಮಾರಂಭದ ಹಿನ್ನೆಲೆಯಲ್ಲಿ ಅಯೋದ್ಯೆ v/s ಮುಸ್ಲಿಂ ಎಂಬಂತೆ ಬಿಂಬಿಸಿ ಸಮಾಜದಲ್ಲಿ ಶಾಂತಿ ಕದಡುವ ದಾಳವಾಗಿಸುವುದೂ ಸಹ ಅನ್ಯಾಯ.

ಭಾರತೀಯ ಮುಸ್ಲಿಮರು ಬಾಬ್ರಿ ಮಸೀದಿಯ ವಿವಾದದಲ್ಲಿ ಸುಪ್ರೀಂ ಕೋರ್ಟಿನ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪಿನಂತೆಯೇ ಅಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಮುಸ್ಲಿಮರಿಗೆ ಮಾತ್ರವಲ್ಲ ಸೌಹಾರ್ದ ಬಯಸುವ ಎಲ್ಲಾ ಭಾರತೀಯರಿಗೂ ದೇಶದಲ್ಲಿ ಈಗ ಶಾಂತಿ ಬೇಕಾಗಿದೆ.

ಬಿಜೆಪಿ ಪಕ್ಷ ರಾಮ ಮಂದಿರದ ಉದ್ಘಾಟನೆಯನ್ನು ರಾಜಕೀಯಕ್ಕೆ, ಹಿಂದೂಗಳ ವೋಟು ಪಡೆಯುವ ತಂತ್ರಗಾರಿಕೆಗೆ ಬಳಸುತ್ತಿದೆ ಎನ್ನುವುದು ಸ್ಪಷ್ಟ. ಅದನ್ನು ರಾಜಕೀಯವಾಗಿ ವಿರೋಧಿಸುವ ಭರದಲ್ಲಿ, ನೀವು ಅನಗತ್ಯ ಕಾನೂನು ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಮಾತ್ರ ಅಕ್ಷಮ್ಯ.

ಶಾಂತಿ, ಕಾನೂನು, ಶಿಸ್ತು ಪಾಲನೆ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಅದನ್ನು ನಿರ್ವಹಿಸುವಾಗ ಕ್ಷುಲ್ಲಕ ರಾಜಕೀಯ ಹೇಳಿಕೆಗಳನ್ನು ನಿಮ್ಮಂತಹ ಪ್ರಬುದ್ಧರು ನೀಡಬಾರದು. ನೈಜವಾಗಿ ನಿಮ್ಮ ಬಳಿ ಈ ಮಾಹಿತಿ ಇದ್ದರೆ, ದಯವಿಟ್ಟು ಈ ಕೂಡಲೇ ಮುಖ್ಯ ಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಭೇಟಿಮಾಡಿ ದೂರು ನೀಡಿ.

ಈ ದುರ್ಗಟನೆ ನಡೆಯದೆ ತಡೆಯಲು ನಿಷ್ಠಾವಂತಿಕೆಯಿಂದ ಪ್ರಯತ್ನಿಸಿ. ಅದು ಬಿಟ್ಟು ಇಂತಹ ಊಹ-ಪೋಹ ಬಹಿರಂಗ ಹೇಳಿಕೆಗಳನ್ನು ನೀವು ನೀಡ ಬೇಡಿ. ಜಾತ್ಯತೀತ, ಸೌಹಾರ್ದ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡೋಣ. ವಯಕ್ತಿತ್ವ/ಪಕ್ಷ ರಾಜಕಾರಣಕ್ಕೆ ದೂರ ಇಡೋಣ.

ಇಂತಿ ನಿಮ್ಮ ಸೌಹಾರ್ದ ಗೆಳೆಯ,
ಖಾಸಿಂ ಸಾಬ್ ಎ

ದೇಶ

ಗುಜರಾತ್ ಗಲಭೆಗಳ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲು ಮುಂದಾದ ವಿದ್ಯಾರ್ಥಿಗಳು! ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ.!!

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯತ್ನಿಸಿದಾಗ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಬಿಸಿ ಸುದ್ದಿ ಸಂಸ್ಥೆ 2002ರ ಗುಜರಾತ್ ಗಲಭೆಯ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಪ್ರಕಟಿಸಿತ್ತು. ಕೇಂದ್ರ ಸರ್ಕಾರ ಸಾಕ್ಷ್ಯಚಿತ್ರವನ್ನು ನಿಷೇಧಿಸಿತ್ತು. ಈ ವೇಳೆ ದೆಹಲಿ ವಿಶ್ವವಿದ್ಯಾಲಯದಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲು ವಿದ್ಯಾರ್ಥಿಗಳು ಯತ್ನಿಸಿದ್ದರು. ತಕ್ಷಣ ಅಲ್ಲಿಗೆ ತೆರಳಿದ ದೆಹಲಿ ಪೊಲೀಸರು ಸಾಕ್ಷ್ಯಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಲ್ಲಿಂದ ಹೊರಹಾಕಲು ಯತ್ನಿಸಿದರು. ವಿದ್ಯಾರ್ಥಿಗಳು ಗುಂಪುಗೂಡುವುದನ್ನು ತಡೆಯಲು ಆ ಪ್ರದೇಶದಲ್ಲಿ 144 ನಿಷೇಧಾಜ್ಞೆಯನ್ನೂ ಹೊರಡಿಸಲಾಗಿದೆ.

ನಿಷೇಧದ ನಡುವೆಯೂ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶಿಸಲು ಮುಂದಾದಾಗ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ವಿದ್ಯಾರ್ಥಿಗಳನ್ನು ಬಂದಿಸಿ ಪೊಲೀಸ್ ವಾಹನಕ್ಕೆ ಏರಿಸಲಾಯಿತು. ಈ ಘಟನೆಯಿಂದ ಇಡೀ ಪ್ರದೇಶ ಉದ್ವಿಗ್ನವಾಗಿ ಕಾಣುತ್ತಿದೆ

ದೇಶ ರಾಜಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು

ಇಂಗ್ಲೆಂಡಿನ ಪ್ರಸಿದ್ಧ ಖಾಸಗಿ ಮಾಧ್ಯಮ ಸಂಸ್ಥೆಯಾದ ಬಿಬಿಸಿ, ಭಾರತದಲ್ಲಿ 2002ರ ಗುಜರಾತ್ ಗಲಭೆಗಳ ಕುರಿತು ರಹಸ್ಯ ತನಿಖೆ ನಡೆಸಿ, ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಗಲಭೆಗೆ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಕೂಡ ಕಾರಣ ಎಂಬ ಸುದ್ದಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ‘ಭಾರತ-ಮೋದಿ ಪ್ರಶ್ನೆಗಳು’ ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ಈ ಸಾಕ್ಷ್ಯಚಿತ್ರಕ್ಕೆ ವಿವಿಧೆಡೆಯಿಂದ ಬೆಂಬಲ-ವಿರೋಧ ವ್ಯಕ್ತವಾಗಿತ್ತು. ಈ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಭಾರದಲ್ಲಿ ಸಾಕ್ಷ್ಯಚಿತ್ರವನ್ನು ನಿಷೇಧ ಮಾಡಿರುತ್ತದೆ.

ಫೆಬ್ರವರಿ 27, 2002 ರಂದು ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ 59 ಜನರು ಪ್ರಾಣ ಕಳೆದುಕೊಂಡರು. ಇದನ್ನು ಆಧರಿಸಿ ಗುಜರಾತ್ ನಲ್ಲಿ ಗಲಭೆಗಳು ನಡೆದವು. ಈ ಗಲಭೆಯ ಸಂದರ್ಭದಲ್ಲಿ 790 ಮುಸ್ಲಿಮರು, 254 ಹಿಂದೂಗಳು ಕೊಲ್ಲಲ್ಪಟ್ಟಿರುವುದಾಗಿ ಮತ್ತು 223 ಮಂದಿ ನಾಪತ್ತೆಯಾಗಿದ್ದು, 2500 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು 2005ರಲ್ಲಿ ಸಂಸತ್ತಿನಲ್ಲಿ ಹೇಳಿದ್ದನ್ನೇ ಬಿಬಿಸಿ ತನ್ನ ಸಾಕ್ಷ್ಯಚಿತ್ರದಲ್ಲೂ ಹೇಳಿಕೊಂಡಿದೆ.

2001-2006ರಲ್ಲಿ ಬ್ರಿಟನ್‌ನ ವಿದೇಶಾಂಗ ಸಚಿವರಾಗಿದ್ದ ಜಯಿಕಾ ಸ್ಟ್ರಾ ಅಂದು ಗಲಭೆಯ ಬಗ್ಗೆ ಮಾತನಾಡಿರುವುದು ಕೂಡ ಈ ಸಾಕ್ಷ್ಯಚಿತ್ರದಲ್ಲಿದೆ. ಅಲ್ಲದೆ ಮೋದಿಯವರು ಬಿಬಿಸಿ ದೂರದರ್ಶನಕ್ಕೆ ನೀಡಿದ್ದ ಸಂದರ್ಶನವನ್ನೂ ಇದರೊಂದಿಗೆ ಲಗತ್ತಿಸಲಾಗಿದೆ.

ಈ ಸಾಕ್ಷ್ಯಚಿತ್ರ ಬಿಡುಗಡೆಯಾದ ನಂತರ ಈ ಬಗ್ಗೆ ಚರ್ಚೆಗಳು ಪ್ರಾರಂಭವಾದವು. ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ‘ಸಾಕ್ಷ್ಯಚಿತ್ರವನ್ನು ಭಾರತ ವಿರೋಧಿ ಪ್ರಚಾರಕ್ಕಾಗಿ ತಯಾರಿಸಲ್ಪಟ್ಟಿದೆ. ಇದು ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ ಕಂಪನಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಟೀಕಿಸಿದ್ದರು. ಇದರ ನಂತರ ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಬಿಸಿಯಾದವು. ನಿರ್ದಿಷ್ಟವಾಗಿ ಹೇಳುವುದಾದರೆ, Who is BBC? ಹ್ಯಾಶ್‌ಟ್ಯಾಗ್ ಟ್ರೆಂಡ್ ಆಯಿತು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಮಾಹಿತಿ ತಂತ್ರಜ್ಞಾನ ನಿಯಮಗಳ (2021) ಅಡಿಯಲ್ಲಿ ಕೆಲವು ಒತ್ತಾಯಗಳನ್ನು ಮುಂದಿಟ್ಟರು. ಈ ಕುರಿತು ಕೇಂದ್ರ ಸರ್ಕಾರದ ಕೆಲವು ಅಧಿಕಾರಿಗಳು ‘BBC ಸಾಕ್ಷ್ಯ ಚಿತ್ರವನ್ನು ಪರಿಶೀಲಿಸಿದಾಗ, ಇದು ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಯನ್ನು ಕಳಂಕಗೊಳಿಸುತ್ತದೆ ಮತ್ತು ಭಾರತದಲ್ಲಿನ ವಿವಿಧ ಸಮುದಾಯಗಳ ನಡುವೆ ವಿಭಜನೆಯನ್ನು ಉಂಟುಮಾಡುವ ರೀತಿಯಲ್ಲಿದೆ. ಹಾಗಾಗಿ ಭಾರತದ ಸಮಗ್ರತೆಗೆ ಧಕ್ಕೆ ತರುವ ಇದನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಮನವಿ ಮಾಡಿದ್ದೇವೆ’ ಎಂದು ಹೇಳಿದ್ದಾರೆ. ಹೀಗಾಗಿ, ಪ್ರಸಾರ ಸಚಿವಾಲಯವು ವೀಡಿಯೊ ಕಾಣಿಸಿಕೊಂಡಿರುವ ಟ್ವಿಟರ್ ಮತ್ತು ಯೂಟ್ಯೂಬ್ ಖಾತೆಗಳಿಂದ ಸಾಕ್ಷ್ಯ ಚಿತ್ರವನ್ನು ತೆಗೆದುಹಾಕಲು ವಿನಂತಿಸಿ ಕೊಂಡಿತ್ತು. ಸಂಬಂಧಪಟ್ಟ ಕಂಪನಿಗಳು ಅದನ್ನು ಒಪ್ಪಿಕೊಂಡು ತೆಗೆದುಹಾಕಿವೆ ಎಂದು ವರದಿಯಾಗಿದೆ.

ಗೋಧ್ರ ಗಲೆಭೆಯ ಸಂಧರ್ಭದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ

ಸಾಕ್ಷ್ಯಚಿತ್ರದ ಎರಡನೇ ಭಾಗವು ಈ ವಾರ ಬಿಡುಗಡೆಯಾಗಲಿದ್ದು, ಭಾರತ ಸರ್ಕಾರವು ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ. ಅದೇ ಸಂದರ್ಭದಲ್ಲಿ, ‘ವ್ಯಾಪಕ ಸಂಶೋಧನೆಯ ನಂತರವೇ ಸಾಕ್ಷ್ಯಚಿತ್ರವನ್ನು ಮಾಡಲಾಯಿತು’ ಎಂದು ಬಿಬಿಸಿ ವಿವರಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಶಶಿಕಾಂತ್ ಸೆಂಥಿಲ್, ‘ಬಿಬಿಸಿ ಬಿಡುಗಡೆ ಮಾಡಿರುವ ಸಾಕ್ಷ್ಯಚಿತ್ರದಲ್ಲಿ ಹೊಸದೇನೂ ಇಲ್ಲ. ಅದು ಈಗಾಗಲೇ ಪ್ರಕಟವಾಗಿರುವ ಹಳೆಯ ಮಾಹಿತಿಯೇ ಆಗಿದೆ. ಈ ಗಲಭೆಗೆ ಮೋದಿಯೇ ಕಾರಣ ಎಂದು ಈ ಹಿಂದೆಯೂ ಹಲವರು ಮಾತನಾಡಿದ್ದಾರೆ. ಆದರೆ, ಅವರಲ್ಲಿ ಯಾರೂ ಈಗ ಜೀವಂತವಾಗಿಲ್ಲ. ಜೀವಂತವಾಗಿದ್ದಿದ್ದರೆ ಅವರೆಲ್ಲರು ಇಂದು ಜೈಲು ಪಾಲಾಗುತ್ತಿದ್ದರು. ಪ್ರಸ್ತುತ ಈ ಸಾಕ್ಷ್ಯಚಿತ್ರವನ್ನು ಯುಕೆ ಮೂಲದ ಬಿಬಿಸಿ ತನಿಖೆ ಮಾಡಿ, ಕ್ಷೇತ್ರ ಅಧ್ಯಯನ ನಡೆಸಿ, ಸಿದ್ಧಪಡಿಸಿದ ಸಂಶೋಧನಾ ಪ್ರಬಂಧವಾಗಿರುತ್ತದೆ. ಇದು ನಿಜವೆಂದು ಎಲ್ಲರಿಗೂ ತಿಳಿದಿದ್ದೆ. ಅವರು ಅದನ್ನು ವರದಿಯ ರೂಪದಲ್ಲಿ ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ಆದ್ದರಿಂದ, ನನ್ನ ದೃಷ್ಟಿಯಲ್ಲಿ ಇದು ನರಮೇಧದ ಸಾಕ್ಷಿಯಾಗಿದೆ. ಶ್ರೀಲಂಕಾ ತಮಿಳರನ್ನು ಕೊಂದ ರಾಜಪಕ್ಸೆಯ ಬಗ್ಗೆ ನಾವು ಯೋಚಿಸುತ್ತಿದ್ದಂತೆ, ಈ ನರಮೇಧವೂ ಹೌದು. ಹಾಗಾಗಿ ಅವರು ತೋರಿಸಿದ್ದರಲ್ಲಿ ತಪ್ಪೇನೂ ಇಲ್ಲ. ಈ ಗಲಭೆಗಳು ನಡೆದು 20 ವರ್ಷಗಳಾದರೂ ಇದಕ್ಕೆ ಕಾರಣರಾದ ನರೇಂದ್ರ ಮೋದಿಯವರು ಒಮ್ಮೆಯೂ ವಿಷಾದ ವ್ಯಕ್ತಪಡಿಸಿಲ್ಲ ಎಂಬುದು ಐತಿಹಾಸಿಕ ಸತ್ಯ. ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ’ ಎಂದರು.

ರಾಜಪಕ್ಷ ಸಹೋದರರು

ಅವರು ಮುಂದುವರಿದು, ಗುಜರಾತ್ ಗಲಭೆ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಇಂಗ್ಲಿಷ್ ನಿರೂಪಕರು ಕೇಳಿದ ಪ್ರಶ್ನೆಗೆ, ‘ಮಾನವ ಹಕ್ಕುಗಳ ಬಗ್ಗೆ ನೀವು ಕಲಿಸುವ ಅಗತ್ಯವಿಲ್ಲ’ ಎಂದು ಮೋದಿ ಹೇಳಿದ್ದನ್ನೇ ಆಧಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬ್ರಿಟಿಷ್ ಇಂಡಿಯಾದ ದಬ್ಬಾಳಿಕೆಯ ಹಿನ್ನೆಲೆ ಮತ್ತು ಕಂಪನಿಯ ಬಗ್ಗೆ ಮಾತನಾಡುತ್ತಾ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದು ವಾದದ ಸುಳ್ಳು (Argumentative Fallacies) ಈ ಅಪರಾಧ ಏಕೆ ನಡೆಯಿತು ಎಂದು ಕೇಳಿದರೆ ಅದಕ್ಕೆ ಉತ್ತರ ಹೇಳಬೇಕು. ಅದರಿಂದ ತಪ್ಪಿಸಿಕೊಳ್ಳಲು ಇನ್ನೊಂದು ಅಪರಾಧದ ಬಗ್ಗೆ ಮಾತನಾಡಬಾರದು.

ಆದರೆ, ಬಹುತೇಕ ಬಿಜೆಪಿ ಸದಸ್ಯರು ಈ ರೀತಿಯ ವಾದವನ್ನೆ ಅನುಸರಿಸುತ್ತಿದ್ದಾರೆ. 3000 ಜೀವಗಳ ಮೇಲೆ ಚೆಲ್ಲಾಟವಾಡಿ, ಅವರನ್ನು ಅಪಾಯಕಾರಿ ಪರಿಸ್ಥಿತಿಗೆ ತಳ್ಳಿದಕ್ಕಾಗಿ ಪಶ್ಚಾತ್ತಾಪ ಪಡುವುದು ಮಾನವನ ಸಹಜ ಗುಣ. ಈ ಗಲಭೆಯ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಬಹು ಪಶ್ಚಾತ್ತಾಪಗಳು ಇದ್ದಿರಬೇಕು. ಆದರೆ ಯಾವುದೇ ಪಶ್ಚಾತ್ತಾಪವನ್ನು ವ್ಯಕ್ತಪಡಿಸದ ವ್ಯಕ್ತಿಯನ್ನು, ಈ ಘಟನೆಗೆ ಅವರು ಹೊಣೆಯಲ್ಲ ಎಂದು ಹೇಳುವುದು ಎಷ್ಟು ಸರಿ’ ಎಂದು ಕೇಳುತ್ತಾರೆ.