ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Human rights Archives » Dynamic Leader
October 23, 2024
Home Posts tagged Human rights
ದೇಶ

ನವದೆಹಲಿ: ಮಣಿಪುರದ ಮೇಲಿನ ವಿಶ್ವಸಂಸ್ಥೆಯ ಆರೋಪಗಳನ್ನು ತಳ್ಳಿಹಾಕಿದ ಭಾರತ, ಅವು “ಅನಗತ್ಯ, ಸುಳ್ಳು ಮತ್ತು ಊಹೆಗಳನ್ನು ಆಧರಿಸಿವೆ” ಎಂದು ಹೇಳಿದ್ದು, ಅಲ್ಲಿ ಶಾಂತಿ ನೆಲೆಸಿರುವುದಾಗಿಯೂ ಹೇಳಿದೆ.

ಮಣಿಪುರದ ಪರಿಸ್ಥಿತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯ ವಿಶೇಷ ಸಮಿತಿಯು ಪ್ರಕಟಿಸಿದ ವರದಿಯಲ್ಲಿ, “ಮಣಿಪುರದಲ್ಲಿ ತೀವ್ರ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮನೆಗಳನ್ನು ಸುಡುವುದು, ಜನರನ್ನು ಸ್ಥಳಾಂತರಿಸುವುದು, ಲೈಂಗಿಕ ಕಿರುಕುಳ, ತೊಂದರೆ ಮುಂತಾದ ತೀವ್ರ ಸಂಕಷ್ಟದಲ್ಲಿ ಜನ ಬದುಕುತ್ತಿದ್ದಾರೆ” ಎಂದು ಹೇಳಿದೆ.

ಅದಕ್ಕೆ ಪ್ರತ್ಯುತ್ತರ ನೀಡಿರುವ ಭಾರತ, “ಮಣಿಪುರದಲ್ಲಿ ಶಾಂತಿ ಮತ್ತು ಸ್ಥಿರತೆ ಇದೆ. ಇದನ್ನು ಮುಂದುವರಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿಶ್ವಸಂಸ್ಥೆಯ ಅಭಿಪ್ರಾಯಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಈ ಅಭಿಪ್ರಾಯ ತಪ್ಪಾಗಿದೆ. ಊಹೆಯ ಆಧಾರದ ಮೇಲೆ ನಿರ್ಧರಿಸಲಾಗಿದೆ. ಇದು ಅನಗತ್ಯವಾದದ್ದು. ಮಣಿಪುರದ ಪರಿಸ್ಥಿತಿ ಮತ್ತು ಭಾರತ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿಶ್ವಸಂಸ್ಥೆ ಅರ್ಥ ಮಾಡಿಕೊಳ್ಳುತ್ತಿಲ್ಲ.” ಎಂದು ಹೇಳಿದೆ.

ಕ್ರೈಂ ರಿಪೋರ್ಟ್ಸ್ ದೇಶ

ಮೇಕೆ ಮತ್ತು ಪಾರಿವಾಳಗಳನ್ನು ಕದ್ದಿದ್ದಕ್ಕಾಗಿ ದಲಿತ ಮಕ್ಕಳನ್ನು ತಲೆಕೆಳಗಾಗಿ ನೇತು ಹಾಕಲಾದ ಘಟನೆ ಅಹ್ಮದ್‌ನಗರ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಮುಂಬೈ: ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಗೆ ಸೇರಿದ ಶ್ರೀರಾಮಪುರ ತಾಲ್ಲೂಕಿನ ಹರೇಗಾಂವ್ ಗ್ರಾಮದಲ್ಲಿ, ಮೇಕೆ, ಪಾರಿವಾಳ ಕಳ್ಳತನ ಮಾಡಿದ್ದಾರೆ ಎಂದು ದಲಿತ ಕುಟುಂಬಕ್ಕೆ ಸೇರಿದ ಮಕ್ಕಳನ್ನು ಜೀವಂತವಾಗಿ ತಲೆಕೆಳಗಾಗಿ ನೇತುಹಾಕಿ ಥಳಿಸುತ್ತಿರುವ ಘಟನೆ ಆಘಾತವನ್ನು ಉಂಟುಮಾಡಿದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮವು ಓದುವುದನ್ನು ತಡೆಮಾಡಿತು; ದ್ರಾವಿಡ ಮಾದರಿ ಸರ್ಕಾರ ಹಸಿವು ನೀಗಿಸಿ ಓದುವಂತೆ ಮಾಡಿದೆ!

ಅಹಮದ್‌ನಗರಕ್ಕೆ ಸೇರಿದವರಾದ ರಾಜ್ಯ ಕಂದಾಯ ಸಚಿವ ರಾಮಕೃಷ್ಣ ವಿ.ಕೆ.ಪಾಟೀಲ್ ಅವರು ಆಸ್ಪತ್ರೆಗೆ ತೆರಳಿ ಮಕ್ಕಳು ಮತ್ತು ಅವರ ಪೋಷಕರನ್ನು ಭೇಟಿ ಮಾಡಿದ್ದಾರೆ. ಮತ್ತು ಹೆಚ್ಚಿನ ತನಿಖೆಗೆ ಆದೇಶ ಮಾಡಿದ್ದರೆ. ಇದೇ ವೇಳೆ ವಂಚಿತ್ ಬಹುಜನ ಅಘಾಡಿ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಮಾತನಾಡಿ, “ಜಾತಿ ತಾರತಮ್ಯ, ಅವಮಾನ, ನಿಂದನೆ, ಹಿಂಸೆ, ದೌರ್ಜನ್ಯ ಹೊಸದಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿ ಬದಲಾವಣೆ ತರೋಣ” ಎಂದರು.

ಇದನ್ನೂ ಓದಿ: ಗಾಂಧಿಯನ್ನು ಕೊಂದವರು ಜೈ ಭೀಮ್ ಚಿತ್ರಕ್ಕೆ ಹೇಗೆ ಪ್ರಶಸ್ತಿ ನೀಡುತ್ತಾರೆ?: ನಟ ಪ್ರಕಾಶ್ ರಾಜ್ ಪ್ರಶ್ನೆ!

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ಮಹೇಶ್ ಥಾಬೆ ಮಾತನಾಡಿ, “ದಲಿತರ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: ಇನ್ನು ಕೆಲವು ಪಕ್ಷಗಳು “ಇಂಡಿಯಾ” ಮೈತ್ರಿಕೂಟಕ್ಕೆ ಸೇರಲಿವೆ: ನಿತೀಶ್ ಕುಮಾರ್

ವಿದೇಶ

ಪ್ಯೊಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರ ಆಡಳಿತ ನಡೆಯುತ್ತಿದೆ. ಅಲ್ಲಿ ಅಧ್ಯಕ್ಷರಾಗಿರುವ ಕಿಮ್ ಜಾಂಗ್ ಉನ್ ವಿವಿಧ ಹೇಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಉತ್ತರ ಕೊರಿಯಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ದಕ್ಷಿಣ ಕೊರಿಯಾ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯನ್ನು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯವು ಬಿಡುಗಡೆ ಮಾಡಿದೆ, ಇದು ಕೊರಿಯನ್ ನಡುವಿನ ವ್ಯವಹಾರಗಳನ್ನು ನಿರ್ವಹಿಸುತ್ತದೆ. 450 ಪುಟಗಳ ವರದಿಯು 2017 ರಿಂದ 2022 ರವರೆಗೆ ತಮ್ಮ ದೇಶದಿಂದ ಪಲಾಯನ ಮಾಡಿದ 500ಕ್ಕೂ ಹೆಚ್ಚು ಉತ್ತರ ಕೊರಿಯನ್ನರಿಂದ ಸಂಗ್ರಹಿಸಲಾದ ಸಾಕ್ಷ್ಯವನ್ನು ಒಳಗೊಂಡಿದೆ. “ಉತ್ತರ ಕೊರಿಯಾದ ನಾಗರಿಕರ ಬದುಕುವ ಹಕ್ಕಿಗೆ ಹೆಚ್ಚಿನ ಬೆದರಿಕೆ ಇದೆ ಎಂದು ತೋರುತ್ತದೆ” ಎಂದು ಸಚಿವಾಲಯ ವರದಿಯಲ್ಲಿ ತಿಳಿಸಿದೆ.

“ಡ್ರಗ್ ಅಪರಾಧಗಳು, ದಕ್ಷಿಣ ಕೊರಿಯಾದ ವೀಡಿಯೊಗಳ ವಿತರಣೆ ಮತ್ತು ಧಾರ್ಮಿಕ ಹಾಗೂ ಮೂಢನಂಬಿಕೆಯ ಚಟುವಟಿಕೆಗಳು ಸೇರಿದಂತೆ ಮರಣದಂಡನೆಯನ್ನು ಸಮರ್ಥಿಸದ ಕೃತ್ಯಗಳಿಗೆ ಮರಣದಂಡನೆಗಳನ್ನು ವ್ಯಾಪಕವಾಗಿ ನೀಡಲಾಗುತ್ತಿದೆ” ಎಂದು ಅದು ವಿವರಿಸಿದೆ. ವರದಿಯು ಉತ್ತರ ಕೊರಿಯಾದ ಆಡಳಿತದ ಹಿಂಸಾತ್ಮಕ ಕ್ರಮಗಳನ್ನು ವಿವರಿಸಿದೆ. ಗರ್ಭಿಣಿ ಮಹಿಳೆ ತನ್ನ ಮನೆಯಲ್ಲಿ ನೃತ್ಯ ಮಾಡುತ್ತಿದ್ದಾಗ ದಿವಂಗತ ಕಿಮ್ ಇಲ್-ಸಂಗ್ ಅವರ ಭಾವಚಿತ್ರವನ್ನು ತೋರಿಸಿದ ನಂತರ ಅವಳು ಕೊಲ್ಲಲ್ಪಟ್ಟಳು ಎಂದು ಹೇಳಿದೆ. 16 ಮತ್ತು 17 ವರ್ಷ ವಯಸ್ಸಿನ ಆರು ಹದಿಹರೆಯದವರನ್ನು ಗುಂಡಿಕ್ಕಿ ಗಲ್ಲಿಗೇರಿಸಲಾಗಿದೆ ಎಂದು ವರದಿ ಹೇಳಿದೆ. ಮಕ್ಕಳಿಗೆ ಮರಣದಂಡನೆ, ಆರು ತಿಂಗಳ ಗರ್ಭಿಣಿಗೆ ಮರಣದಂಡನೆಯಂತಹ ಅತ್ಯಂತ ಕ್ರೂರ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಉತ್ತರ ಕೊರಿಯಾ ಹೊಂದಿದೆ. ಅದೇ ರೀತಿ ಕಡಿಮೆ ಎತ್ತರವಿರುವ ಮಹಿಳೆಯರಿಗೆ ಅಂಡಾಶಯಗಳನ್ನು ತೆಗೆಯಲಾಗುತ್ತಿದೆ ಎಂಬ ಆರೋಪವನ್ನೂ ದಕ್ಷಿಣ ಕೊರಿಯಾ ಮಾಡಿದೆ. North Korea committed horrific human rights violations including the execution of a six-month pregnant woman who pointed at the portrait of Kim Il-sung, the country’s founder. An extensive South Korean report which has been publicised for the first time, Kim Jong-un is said to have ordered the execution of homosexuals, religious persons and North Koreans who tried to flee the country.