ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
National College Archives » Dynamic Leader
October 23, 2024
Home Posts tagged National College
ಬೆಂಗಳೂರು

ಮಂಜುಳಾ ರೆಡ್ಡಿ, ಹಿರಿಯ ವರದಿಗಾರರು

ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 5 ರಿಂದ 10 ರತನಕ ಅವರೇಕಾಯಿ ಮೇಳವನ್ನು ವಾಸವಿ ಕ್ಯಾಂಡಿಮೆಂಟ್ಸ್ ಅದ್ಧೂರಿಯಾಗಿ ನಡೆಸಲಿದೆ.

ವಾಸವಿ ಕ್ಯಾಂಡಿಮೆಂಟ್ಸ್ ವತಿಯಿಂದ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 2023 ರ ಜನವರಿ 5 ರಿಂದ 10 ರತನಕ ಈ ಅದ್ಧೂರಿ ಅವರೆಕಾಯಿ ಮೇಳ ನಡೆಯಲಿದೆ ಎಂದು ವಾಸವಿ ಕ್ಯಾಂಡಿಮೆಂಟ್ಸ್ ಮಾಲೀಕರಾದ ಗೀತಾ ಶಿವಕುಮಾರ್ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ  ತಿಳಿಸಿದರು .

ಗೀತಾ ಅವರು ಮಾತನಾಡುತ್ತಾ “ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೆ ಹೆಸರು ವಾಸಿಯಾದ ವಾಸವಿ ಕ್ಯಾಂಡಿಮೆಂಟ್ಸ್ ಕಳೆದ ಇಪ್ಪತ್ತು ವರ್ಷಗಳಿಂದ ವಿನೂತನವಾದ ಸಾಹಸ-ಪುಯೋಗವನ್ನು ಮಾಡುತ್ತಾ ಬರುತ್ತಿದೆ. ಅದರಲ್ಲಿ ಅಮೋಘ ಯಶಸ್ಸನ್ನೂ ಕಂಡಿದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್‌ನಲ್ಲಿ ವಾಸವಿ ಕ್ಯಾಂಡಿಮೆಂಟ್ಸ್ ನ ವತಿಯಿಂದ ಅವರೇಕಾಯಿ ಮೇಳವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಅವರೇಕಾಯಿಯಿಂದ ತಯಾರಾಗುವ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರಾ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಯಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗಲಿದೆ.  ಹೀಗಾಗಿ ಬೆಂಗಳೂರಿನ ಬಹಳಷ್ಟು ಜನ ಈ ವಾರ್ಷಿಕ ಅವರೇಕಾಯಿ ಮೇಳಕ್ಕಾಗಿ ಕಾಯುತ್ತಿರುತ್ತಾರೆ.

ನಮ್ಮ ಮಳಿಗೆ  ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ  ತೆರೆದಿರುತ್ತದೆ. ಸಂಜೆ 3 ರಿಂದ ರಾತ್ರಿ 10ರ ತನಕ ಮಾತ್ರ ವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿಗಳು ದೊರೆಯುತ್ತದೆ. ಮಾಗಡಿ ತಾಲೂಕಿನ ರೈತರು ಬೆಳೆದ ಅವರೇಕಾಯಿಯನ್ನು ವಾಸವಿ ಕ್ಯಾಂಡಿಮೆಂಟ್ಸ್ ನೇರವಾಗಿ ಖರೀದಿಸುತ್ತದೆ. ಆದ್ದರಿಂದ ಇದರಲ್ಲಿ ಯಾವುದೇ ಮಧ್ಯವರ್ತಿಗಳ ಪ್ರವೇಶವಿರುವುದಿಲ್ಲ. ನೇರವಾಗಿ ಬೆಳೆಗಾರರ ಮನೆಬಾಗಿಲಿಗೆ ತೆರೆಳಿ, ಅವರೇಕಾಯಿ ಖರೀದಿಸುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಲಾಭಕ್ಕಿಂತ ಹೆಚ್ಚು ಮೊತ್ತದ ಲಾಭ ನಮ್ಮ ಮೇಳದಿಂದ ಅವರಿಗೆ ಕೈಸೇರುತ್ತದೆ. ಇದರಿಂದ ಕಷ್ಟಪಟ್ಟು ಅವರೇಕಾಯಿ ಬೆಳೆದ ರೈತಬಾಂಧವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದು ಸಂತೃಪ್ತರಾಗುತ್ತಾರೆ.

ವರ್ಷದಿಂದ ವರ್ಷಕ್ಕೆ ಅವರೇಕಾಯಿ ಖರೀದಿಯೂ ಹೆಚ್ಚಳವಾಗುತ್ತಿದೆ. ಇದು ರೈತರಿಗೆ ಸಂತೋಷದ ವಿಷಯವೂ ಆಗಿದೆ.  ಕಷ್ಟಪಟ್ಟು  ಅವರೇಕಾಯಿ ಬೆಳೆದ ರೈತರನ್ನು ಸನ್ಮಾನಿಸುವ ಕಾರ್ಯಕ್ರಮವೂ ಇಲ್ಲಿ ನಡೆಯಲಿದೆ. ಈ ಬಾರಿ ಕೂಡಾ ಖರೀದಿದಾರರು ಪದಾರ್ಥಗಳನ್ನು ಮನೆಯಿಂದಲೇ ಸುಲುಭವಾಗಿ ಖರೀದಿಸಲು ಅನುಕೂಲವಾಗುವಂತೆ ಜ್ಯೊಮ್ಯಾಟೋ ಮತ್ತು ಡೆಂಜೋ ಮುಂತಾದ ಆನ್ ಲೈನ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ” ಎಂದು ವಾಸವಿ ಕ್ಯಾಂಡಿಮೆಂಟ್ಸ್ ಮಾಲೀಕರಾದ ಗೀತಾ ಶಿವಕುಮಾರ್ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಶಿವಶಂಕರ, ಸ್ವಾತಿ, ನರೇಶ್ ಉಪಸ್ಥಿತರಿದ್ದರು