ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
NRI Archives » Dynamic Leader
October 23, 2024
Home Posts tagged NRI
ವಿದೇಶ

ಮೆಕ್ಸಿಕೋ ಚೀನಾವನ್ನು ಹಿಂದಿಕ್ಕಿ ದೊಡ್ಡ ಪ್ರಮಾಣದಲ್ಲಿ ತಾಯಿನಾಡಿಗೆ ಹಣ ರವಾನಿಸುವ ಎರಡನೇ ದೊಡ್ಡ ದೇಶವಾಗಿ ಭಾರತ ಪ್ರಗತಿ ಸಾಧಿಸಿದೆ.!

ವಿದೇಶದಲ್ಲಿ ಕೆಲಸ ಮಾಡುವ ಅನಿವಾಸಿ ಭಾರತೀಯರು, ಭಾರತದಲ್ಲಿ ನೆಲೆಸಿರುವ ಕುಟುಂಬದವರು, ಸ್ನೇಹಿತರು ಅಥವಾ ಸಂಬಂಧಿಕರಿಗೆ ರವಾನೆ ಮಾಡುವ ಹಣವನ್ನು Remittance ಎನ್ನುತ್ತಾರೆ. ಈ ನಿಟ್ಟಿನಲ್ಲಿ ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮುಂತಾದ ವಿವಿಧ ದೇಶಗಳಲ್ಲಿ ಸುಮಾರು ಒಂದು ಕೋಟಿ 80 ಲಕ್ಷ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೀಗೆ ವಿದೇಶಗಳಲ್ಲಿ ವಾಸಿಸುವ ಜನರು, ತಮ್ಮ ದೇಶಗಳಿಗೆ ಕಳುಹಿಸುವ ಹಣದ ಬಗ್ಗೆ ವಿಶ್ವಸಂಸ್ಥೆ ವಾರ್ಷಿಕವಾಗಿ ವರದಿಯೊಂದನ್ನು ಪ್ರಕಟಿಸುತ್ತದೆ. ‘ವಿಶ್ವ ವಲಸೆ ವರದಿ’ ಎಂಬ ಶೀರ್ಷಿಕೆಯಡಿ ಪ್ರಕಟಿಸಿರುವ ಈ ವರ್ಷದ ವರದಿಯಲ್ಲಿ, ಶ್ರೇಯಾಂಕದಲ್ಲಿ ಭಾರತ, ಮೆಕ್ಸಿಕೊ, ಚೀನಾ, ಫಿಲಿಪೈನ್ಸ್ ಮತ್ತು ಫ್ರಾನ್ಸ್ ಮೊದಲ 5 ಸ್ಥಾನಗಳನ್ನು ಪಡೆದುಕೊಂಡಿದ್ದರೂ, ಮೆಕ್ಸಿಕೋ ಚೀನಾವನ್ನು ಹಿಂದಿಕ್ಕಿ ದೊಡ್ಡ ಪ್ರಮಾಣದಲ್ಲಿ ತಾಯಿನಾಡಿಗೆ ಹಣ ರವಾನಿಸುವ ಎರಡನೇ ದೊಡ್ಡ ದೇಶವಾಗಿ ಭಾರತ ಪ್ರಗತಿ ಸಾಧಿಸಿದೆ.

2010ರಲ್ಲಿ 53.48 ಬಿಲಿಯನ್ ಡಾಲರ್, 2015ರಲ್ಲಿ 68.91 ಬಿಲಿಯನ್ ಡಾಲರ್, 2020ರಲ್ಲಿ 83.15 ಬಿಲಿಯನ್ ಡಾಲರ್ ಮತ್ತು 2022ರಲ್ಲಿ 111.22 ಬಿಲಿಯನ್ ಡಾಲರ್ (ಒಟ್ಟು ರೂ.9.28 ಲಕ್ಷ ಕೋಟಿ) ಕಳುಹಿಸಿಕೊಡಲಾಗಿದೆ. ಭಾರತದ ನಂತರ, ಮೆಕ್ಸಿಕೋ 61.1 ಬಿಲಿಯನ್ ಡಾಲರ್‌ನೊಂದಿಗೆ ಎರಡನೇ ಸ್ಥಾನದಲ್ಲಿ, ಚೀನಾ 51 ಬಿಲಿಯನ್ ಡಾಲರ್‌ನೊಂದಿಗೆ ಮೂರನೇ ಸ್ಥಾನದಲ್ಲಿ, ಫಿಲಿಪೈನ್ಸ್ 38.05 ಬಿಲಿಯನ್ ಡಾಲರ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿ, ಫ್ರಾನ್ಸ್ 30.04 ಡಾಲರ್‌ನೊಂದಿಗೆ ಐದನೇ ಸ್ಥಾನದಲ್ಲಿದೆ ಎಂದು ವರದಿಮಾಡಿದೆ.

ರಾಜಕೀಯ

ನ್ಯೂಯಾರ್ಕ್: ಬಿಜೆಪಿಯನ್ನು ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುವುದನ್ನೇ ರೂಡಿಸಿಕೊಂಡಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಅಮೆರಿಕಕ್ಕೆ ತೆರಳಿರುವ ಕಾಂಗ್ರೆಸ್‌ನ ಮಾಜಿ ನಾಯಕ ರಾಹುಲ್‌ ಗಾಂಧಿ, ನ್ಯೂಯಾರ್ಕ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ, “ನೀವು ಬಿಜೆಪಿಯನ್ನು ಏನೇ ಕೇಳಿದರೂ ಅದಕ್ಕೆ ಉತ್ತರ ಕೊಡದೆ, ಅದರಿಂದ ಹಾದುಹೋಗುವುದನ್ನು ಕಾಣಬಹುದು. ಒಡಿಶಾ ರೈಲು ಅಪಘಾತದ ಬಗ್ಗೆ ಬಿಜೆಪಿಯವರನ್ನು ಪ್ರಶ್ನೆ ಮಾಡಿ; 50 ವರ್ಷಗಳ ಹಿಂದಿನ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಬಿಜೆಪಿಯವರ ಬಳಿ ಇರುವ ತಕ್ಷಣದ ಉತ್ತರ ಏನು ಗೊತ್ತೆ? ಇತಿಹಾಸವನ್ನು ನೋಡಿ ಎಂಬುದೇ. ಬಿಜೆಪಿ ಮತ್ತು ಆರೆಸ್ಸೆಸ್ ಎರಡೂ ಇತರರನ್ನು ದೂಷಿಸುವ ಪ್ರವೃತ್ತಿಯನ್ನು ಹೊಂದಿದೆ.

ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ರೈಲು ಅಪಘಾತಗಳು ಸಂಭವಿಸಿದರೆ ತಕ್ಷಣವೇ ಸಚಿವರು ರಾಜೀನಾಮೆ ನೀಡುತ್ತಿದ್ದರು. ಕೇಂದ್ರ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಸರಿಯಾದ ಕ್ರಮವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ರೈಲು ಅಪಘಾತಗಳು ನಡೆದಿವೆ; ಬ್ರಿಟಿಷರ ಆಡಳಿತವೇ ಅದಕ್ಕೆ ಕಾರಣ ಎಂದು ಹೇಳಿ, ಕಾಂಗ್ರೆಸ್ ಸರಕಾರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿ, ಆರೆಸ್ಸೆಸ್, ಪ್ರಧಾನಿ ಮೋದಿ ಯಾರೇ ಆಗಲಿ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವುದಿಲ್ಲ. ಅವರು ಹಿಂದಿನದನ್ನು ದೂಷಿಸುವುದನ್ನೇ ವಾಡಿಕೆಯಾಗಿ ಮಾಡಿಕೊಂಡಿದ್ದಾರೆ.

ಇತರರನ್ನು ದೂಷಿಸಿ ತಪ್ಪಿಸಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಅನಿವಾಸಿ ಭಾರತೀಯರ (NRI) ಪಾತ್ರ ಪ್ರಮುಖವಾದದ್ದು. ಮಹಾತ್ಮಾ ಗಾಂಧಿಯವರು ಕೂಡ ಅನಿವಾಸಿ ಭಾರತೀಯರಾಗಿದ್ದರು. ನೆಹರೂ, ಅಂಬೇಡ್ಕರ್, ವಲ್ಲಭ ಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಎಲ್ಲರೂ ಅನಿವಾಸಿ ಭಾರತೀಯರೇ. ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದರೂ ಸಹ ಅವರು ಒಟ್ಟಿಗೆ ಕೆಲಸ ಮಾಡಿದರು. ಇದನ್ನೇ ನಾನು ಭಾರತೀಯ ಸಮಾಜದಿಂದ ನಿರೀಕ್ಷಿಸುತ್ತೇನೆ” ಎಂದರು.