ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Racism Archives » Dynamic Leader
October 23, 2024
Home Posts tagged Racism
ರಾಜಕೀಯ

ಡಿ.ಸಿ.ಪ್ರಕಾಶ್

ಇಸ್ಲಾಂ ವಿರೋಧದ ನಂತರ ಬಿಜೆಪಿ ವರ್ಣ ಆಧಾರಿತ ರಾಜಕಾರಣವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿದೆ!

ಮುಸ್ಲಿಮರು ಮತ್ತು ಅಲ್ಪಸಂಖ್ಯಾತರನ್ನು ದಮನ ಮಾಡಿ, ವಿಭಜನೆಯನ್ನು ಸೃಷ್ಟಿಸಿ ಆ ಮೂಲಕ ಬಹುಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯುವುದು ಆರ್.ಎಸ್.ಎಸ್ ಸಿದ್ಧಾಂತದ ಬಿಜೆಪಿಯ ಉದ್ದೇಶವಾಗಿದೆ. ಹೀಗಾಗಿ ಜಾತಿ ತಾರತಮ್ಯ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯದ ಬಗ್ಗೆ ಮಾತನಾಡುವುದು ಬಿಜೆಪಿಯ ಮೂಲ ರಚನೆಯಾಗಿದೆ.

ಆದರೂ ಇಂತಹ ಚಟುವಟಿಕೆಗಳು ಇಲ್ಲಿಯವರೆಗೆ ಗುಟ್ಟಾಗಿ ನಡೆಯುತ್ತಿದ್ದವು. ಆದರೆ ತನ್ನ 10 ವರ್ಷಗಳ ಆಡಳಿತದಲ್ಲಿ ಹಲವು ವೈಫಲ್ಯಗಳನ್ನು ಕಂಡ ಮೋದಿ ಸರಕಾರ, ಈ ಬಾರಿ ಖಂಡಿತವಾಗಿಯೂ ಸೋಲಲಿದೆ ಎಂದು ಅರಿವಾಗಿ, ನಿರಂತರ ದ್ವೇಷ ಅಭಿಯಾನಗಳನ್ನು ಮುನ್ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಮೋದಿ ಈಗ ಮುಸ್ಲಿಮರನ್ನು ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಹಿರಂಗವಾಗಿ ಟೀಕಿಸುತ್ತಿದ್ದಾರೆ.

ಬಿಜೆಪಿ ನಾಯಕರು, ಮುಸ್ಲಿಮರು ಎಂದರೇ ಶತ್ರುಗಳು ಎಂಬಂತಹ ವರ್ತನೆಯನ್ನು ಬಿತ್ತುತ್ತಿದ್ದಾರೆ. ಇದರಿಂದಾಗಿ ಮುಸ್ಲಿಮರ ಅಸ್ತಿತ್ವವೇ ಪ್ರಶ್ನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು, ಮುಸ್ಲಿಮರ ಮೇಲೆ ದ್ವೇಷ ಸಾಧಿಸಿದರೆ ಸಾಕಾಗದು, ಜನಾಂಗೀಯ ದ್ವೇಷವನ್ನು ಬಿತ್ತಿದರೆ ಮಾತ್ರ ಮತಗಳು ಹೆಚ್ಚಾಗುತ್ತವೆ ಎಂದು ಭಾವಿಸಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಮೋದಿ ಅವರು, ‘ಕಾಂಗ್ರೆಸ್ ಪಕ್ಷವು, ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬಣ್ಣದ ಕಾರಣಕ್ಕಾಗಿಯೇ ಮತ ಹಾಕಲಿಲ್ಲ’ ಎಂಬ ಹೊಸ ಸುಳ್ಳನ್ನು ಉಗುಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ‘ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಸೂಚಿಸಿದಂತೆಯೇ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೂಡ ಮತ್ತೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬೆಂಬಲಿಸಿದವು, ಅದಕ್ಕೂ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ, ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಏಕೆ ಆಹ್ವಾನಿಸಲಿಲ್ಲ? ಅವರ ಬಣ್ಣದ ಕಾರಣದಿಂದಲೇ ಎಂಬ ಪ್ರಶ್ನೆಗಳು ಮೋದಿಯತ್ತ ಹರಿದಾಡುತ್ತಿವೆ. ಇಂತಹ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಚುನಾವಣಾ ಆಯೋಗ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ಟೀಕೆಗೆ ಗುರಿಯಾಗಿದೆ.

ದೇಶ

ಬಿಜೆಪಿ ಎಲ್ಲವನ್ನೂ ಏಕೀಕರಿಸುವ ವಿಚಾರದಿಂದಲೇ ಇದೆಲ್ಲವೂ ಜಟಿಲವಾಗುತ್ತಿದೆ. ‘ಆಫ್ರಿಕನ್ನರಂತೆ’ ಎಂದು ಅವರು ಹೇಳಿದ ಕೂಡಲೇ ನಾವು ಅದನ್ನು ಚರ್ಮದ ಬಣ್ಣಕ್ಕೆ ಹೋಲಿಕೆ ಮಾಡಿ ಮಾತನಾಡುವುದು ಎಷ್ಟು ಸರಿ?

ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡಾ ಅವರು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ, ಉತ್ತರದ ಜನರು ಬಿಳಿಯರಂತೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುವ ಭಾರತದಂತಹ ವೈವಿಧ್ಯಮಯ ದೇಶವನ್ನು ನಾವು ಎಕತೆಯಿಂದ ಇಟ್ಟುಕೊಳ್ಳಬಹುದು, ನಾವೆಲ್ಲರೂ ಸಹೋದರ, ಸಹೋದರಿಯರು. ನಾವು ವಿವಿಧ ಧರ್ಮಗಳು, ಭಾಷೆಗಳು, ಪದ್ಧತಿಗಳು, ಜನಾಂಗಗಳಾಗಿದ್ದರೂ ವೈವಿಧ್ಯಮಯ ಆಹಾರಗಳನ್ನು ಗೌರವಿಸುತ್ತೇವೆ. ಇದು ನಾವು ನಂಬಿರುವ ಭಾರತ, ಇಲ್ಲಿ ಎಲ್ಲರಿಗೂ ಅವಕಾಶವಿದೆ” ಎಂದು ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ” ಚರ್ಮದ ಬಣ್ಣದಿಂದ ಭಾರತೀಯರನ್ನು ನಿರ್ಣಯಿಸುವುದನ್ನು ದೇಶ ಸಹಿಸುವುದಿಲ್ಲ. ರಾಹುಲ್ ಗಾಂಧಿಯವರ ರಾಜಕೀಯ ಸಲಹೆಗಾರ ಪಿತ್ರೋಡಾ ಅವರ ಮಾತು ನನ್ನನ್ನು ದಂಗುಬಡಿಸಿದೆ. ನನ್ನನ್ನು ನಿಂದಿಸಿದಾಗ ನಾನು ಅದನ್ನು ಸಹಿಸಬಲ್ಲೆ, ಆದರೆ ನನ್ನ ಜನರನ್ನು ನಿಂದಿಸಿದಾಗ ನಾನು ಅದನ್ನು ಸಹಿಸಲಾರೆ” ಎಂದು ಹೇಳಿದರು.

ಕಾಂಗ್ರೆಸ್‌ಗೂ ಇದಕ್ಕೂ ಸಂಬಂಧವಿಲ್ಲ:
ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷ ಈ ವಿಚಾರಗಳಿಂದ ಸಂಪೂರ್ಣ ದೂರ ಸರಿಯುವುದಾಗಿ ಹೇಳಿದೆ. ಈ ಕುರಿತು ತಮ್ಮ ‘ಎಕ್ಸ್’ ಪೇಜ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, “ಭಾರತದ ವೈವಿಧ್ಯತೆಯನ್ನು ವಿವರಿಸಲು ಸ್ಯಾಮ್ ಪಿತ್ರೋಡಾ ಬಳಸಿದ ಸಾದೃಶ್ಯಗಳು ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತಹ ಸಾದೃಶ್ಯಗಳಿಂದ ಸಂಪೂರ್ಣವಾಗಿ ದೂರ ಸರಿಯುತ್ತದೆ” ಎಂದು ಹೇಳಿದ್ದಾರೆ.

ನಾವು ಆಫ್ರಿಕಾದಿಂದ ಬಂದವರೇ:
ಇಲ್ಲಿಯವರೆಗೆ ನಾವು ನಮ್ಮನ್ನು ಆಫ್ರಿಕಾದಿಂದ ಬಂದವರಾಗಿಯೇ ಕಾಣುತ್ತಿದ್ದೇವೆ. ಅದು ಆರ್ಯರಾಗಿರಲೀ ಅಥವಾ ದ್ರಾವಿಡರಾಗಿರಲೀ ನಾವು ಆಫ್ರಿಕಾ ಖಂಡದಿಂದಲೇ ಇಲ್ಲಿಗೆ ವಲಸೆ ಬಂದಿರುವುದು. ಹೀಗಿರುವಾಗ, ಇದರಲ್ಲಿ ಆಫ್ರಿಕಾ ಎಂದು ಹೇಳುವಾಗ ನಾನು ಅದನ್ನು ಅವಮಾನಿಸುವ ವಿಷಯವಾಗಿ ನೋಡುವುದಿಲ್ಲ. ಚರ್ಮದ ಬಣ್ಣವನ್ನು ಆಧರಿಸಿಯೇ ಪಿತ್ರೋಡಾ ಹೇಳಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇದು ಸುಳ್ಳು.

ಡಿ.ಸಿ.ಪ್ರಕಾಶ್

ಪಿತ್ರೋಡಾ ಹೇಳಿದ್ದರಲ್ಲಿ ಎಂತಹ ವಿಭಜಕತೆ ಇದೆ?
ಪಿತ್ರೋಡಾ ಹೇಳಿದ್ದರಲ್ಲಿ ಎಂತಹ ವಿಭಜಕತೆ ಇದೆ ಎಂದು ಅರ್ಥವಾಗುತ್ತಿಲ್ಲ. ಜನರು ವಿಭಿನ್ನ ಜನಾಂಗಕ್ಕೆ (Racial) ಸೇರಿದವರು; ಪ್ರತಿಯೊಬ್ಬರೂ ವಿಭಿನ್ನ ಮುಖದ ಆಕಾರ, ವಿಭಿನ್ನ ಬಣ್ಣಗಳನ್ನು ಹೊಂದಿರುತ್ತಾರೆ. ಮಂಗೋಲಿಯನ್ ಅಥವಾ ಸಂಬಂಧಿತ ಜನಾಂಗೀಯ ಗುಂಪುಗಳಿಗೆ ಸೇರಿದ ಈಶಾನ್ಯದ ಜನರ ಮುಖವಾಡ ಒಂದೇ ಆಗಿರುತ್ತದೆ.

ದಕ್ಷಿಣದ ಜನರನ್ನು ಜನಾಂಗೀಯ ಗುಂಪುಗಳಾಗಿ ನೋಡುವಾಗ ನಾವು ದ್ರಾವಿಡರು ಎಂದೇ ಗುರುತಿಸಿಕೊಳ್ಳುತ್ತೇವೆ. ನಾವು ದ್ರಾವಿಡರು ಎಂದು ಹೇಳುವಾಗ, ಅದಕ್ಕೆ ಸೇರಿದ ಅಂಶಗಳಾಗಿ ನಮ್ಮಲ್ಲಿ ಕಪ್ಪು ಮೈಬಣ್ಣ, ಗುಂಗುರು ಕೂದಲು, ದೃಢವಾದ ದೇಹ ಮೈಕಟ್ಟು ಮುಂತಾದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ. ಹೀಗೆ ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಗುಣಲಕ್ಷಣಗಳಿರುವಾಗ ಹೀಗೆ ಹೇಳುವುದರಲ್ಲಿ ತಪ್ಪೇನೂ ಕಾಣುತ್ತಿಲ್ಲ.

ಬಿಜೆಪಿಯವರು ಇದನ್ನು ವಿಭಜನೆಯ ವಿಷಯವಾಗಿದೆ ತೆಗೆದುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಭಿನ್ನತೆಗಳಿದ್ದರೂ ಭಾರತೀಯರು ತಮ್ಮ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದಾರೆ ಎಂದೇ ಪಿತ್ರೋಡಾ ಹೇಳಿದ್ದಾರೆ. ಬಿಜೆಪಿ ಎಲ್ಲವನ್ನೂ ಏಕೀಕರಿಸುವ ವಿಚಾರದಿಂದಲೇ ಇದೆಲ್ಲವೂ ಜಟಿಲವಾಗುತ್ತಿದೆ. ‘ಆಫ್ರಿಕನ್ನರಂತೆ’ ಎಂದು ಅವರು ಹೇಳಿದ ಕೂಡಲೇ ನಾವು ಅದನ್ನು ಚರ್ಮದ ಬಣ್ಣಕ್ಕೆ ಹೋಲಿಕೆ ಮಾಡಿ ಮಾತನಾಡುವುದು ಎಷ್ಟು ಸರಿ? ಅವರು ಎಲ್ಲಿಯೂ ಬಣ್ಣದ ಬಗ್ಗೆ ಮಾತನಾಡಲಿಲ್ಲ.

ಆಫ್ರಿಕನ್ನರು ಎಂದು ಹೇಳುವುದು ಅವಹೇಳನಕಾರಿಯೇ?
ಹಾಗಿದ್ದರೆ ಯಾರಲ್ಲಿ ವರ್ಣಭೇದ (Racism) ನೀತಿ ಇದೆ. ಆಫ್ರಿಕಾದಲ್ಲಿಯೂ ಸಹ, ವಿವಿಧ ಬಣ್ಣಗಳ ಜನರು ಅಸ್ತಿತ್ವದಲ್ಲಿದ್ದಾರೆ. ನಾವೆಲ್ಲರೂ ಒಂದೇ ಮಂಗನಿಂದಲೇ ಬಂದಿದ್ದೇವೆ ಎಂಬುದನ್ನು ಮರೆಯಬಾರದು. ಪೂರ್ವದ ಜನರು ಚೀನಿಯರಂತೆ, ಉತ್ತರದ ಜನರು ಬಿಳಿಯರಂತೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಎಂಬುದೆಲ್ಲವೂ ಬಿಜೆಪಿಗೆ ಸಮಸ್ಯೆಯಿಲ್ಲ ಪಶ್ಚಿಮದ ಜನರು ಅರಬ್ಬರಂತೆ ಎಂದು ಸ್ಯಾಮ್ ಪಿತ್ರೋಡಾ ಹೇಳಿರುವುದೇ ಬಿಜೆಪಿ ಮತ್ತು ಮೋದಿಯವರಿಗೆ ಸಮಸ್ಯೆ ಆಗಿರುವಂತೆ ಕಾಣುತ್ತದೆ.

ಡಿ.ಸಿ.ಪ್ರಕಾಶ್, ಸಂಪಾದಕರು
Email:dynamicleaderdesk@gmail.com