ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Villupuram Archives » Dynamic Leader
October 17, 2024
Home Posts tagged Villupuram
ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಜಾತಿ ವಿವಾದಗಳು ಉದ್ಭವಿಸುವ ಗ್ರಾಮಗಳಲ್ಲಿ ಎರಡೂ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಲು ಸಂತರುಗಳನ್ನು ಒಳಗೊಂಡ ಶಾಂತಿ ಸಮಿತಿಗಳನ್ನು ಸ್ಥಾಪಿಸುವಂತೆ, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಮಿಳುನಾಡಿನ ‘ಹಿಂದೂ ಮುನ್ನನಿ’ ಸಂಘಟನೆಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ತಮಿಳುನಾಡು, ವಿಳುಪುರಂ ಜಿಲ್ಲೆಯ, ಮೇಲ್ಪಾದಿ ಗ್ರಾಮದ ಧರ್ಮರಾಜ ದ್ರೌಪತಿ ಅಮ್ಮನ್ ದೇವಸ್ಥಾನದಲ್ಲಿ, ಪೂಜೆಯ ಹಕ್ಕಿನ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದರಿಂದ ಕಂದಾಯ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಬೀಗ ಹಾಕಿ ಹಾಕಿದ್ದಾರೆ. ಈ ವಿವಾದ ಇತ್ಯರ್ಥವಾಗುವ ಮುನ್ನ ಕರೂರು ಜಿಲ್ಲೆ, ಕಡವೂರು ಸಮೀಪದ ವೀರನಂಪಟ್ಟಿ ಗ್ರಾಮದ ಕಾಳಿಯಮ್ಮನ ದೇವಸ್ಥಾನಕ್ಕೂ ಬೀಗ ಹಾಕಲಾಗಿದೆ. ದೇವಾಲಯದ ಪೂಜೆಗೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಸಂಘರ್ಷವಾಗಿದೆ.

ಮೇಲ್ಪಾದಿ ಗ್ರಾಮದ ಧರ್ಮರಾಜ ದ್ರೌಪತಿ ಅಮ್ಮನ್ ದೇವಸ್ಥಾನ

ದೇವಸ್ಥಾನಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಅವಕಾಶ ನೀಡದಿರುವ ಸಮಸ್ಯೆ ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ಕಾರಣ, ಪ್ರತಿಯೊಂದು ಹಳ್ಳಿಗಳಲ್ಲಿಯೂ ಎಲ್ಲಾ ಸಮುದಾಯದ ಜನರ ಉಪಯೋಗಕಾಗಿ ‘ಸಾಮಾನ್ಯ ದೇವಾಲಯ, ಸಾಮಾನ್ಯ ಬಾವಿ, ಸಾಮಾನ್ಯ ಸ್ಮಶಾನ’ ಎಂದು ಆರ್‌ಎಸ್‌ಎಸ್ ಘೋಷಿಸಿದೆ. ಅದನ್ನು ಜನರಿಗೆ ಪ್ರಚಾರ ಮಾಡಲು, ತನ್ನ ಸ್ವಯಂಸೇವಕರಿಗೆ ಸಲಹೆಯನ್ನೂ ನೀಡಿದೆ.

ಹಿಂದೂಗಳಾದ ಎಲ್ಲರಿಗೂ ಹಿಂದೂ ದೇವಾಲಯಗಳಲ್ಲಿ ಪೂಜೆ ಮಾಡುವ ಹಕ್ಕಿದೆ. ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂಬುದು ಹಿಂದೂ ಮುನ್ನನಿಯ ನಿಲುವಾಗಿದೆ ಎಂದು ಹೇಳುತ್ತಾರೆ. ಕೆಲವೆಡೆ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾದಾಗ, ಸರ್ಕಾರದ ಕ್ರಮವು ಎರಡೂ ಕಡೆ ಸಾಮರಸ್ಯವನ್ನು ತರುವಂತದ್ದಾಗಿರಬೇಕು. ಸಮಸ್ಯೆ ಮುಂದುವರಿಯಲು ಅವಕಾಶ ಮಾಡಿಕೊಡಬಾರದು.

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ

ಮೇಲ್ಪಾದಿ ಗ್ರಾಮದ ಸಮಸ್ಯೆಯ ಬಗ್ಗೆ ಹಿಂದೂ ಮುನ್ನನಿ ಮುಖಂಡರನ್ನು ವಿಚಾರಿಸಿದ, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಜಾತಿ ಸಮಸ್ಯೆ ಇರುವ ಗ್ರಾಮಗಳಲ್ಲಿ ‘ಸಂತರ ಶಾಂತಿ ಸಮಿತಿ’ ರಚಿಸಿ, ಎರಡು ಕಡೆಯ ನಡುವೆ ಸಮನ್ವಯ ಕಾರ್ಯದಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಂತೆ ಶೀಘ್ರದಲ್ಲೇ ಶಾಂತಿ ಸಮಿತಿ ರಚಿಸಲಾಗುವುದು ಎಂದು ಮುಖಂಡರೊಬ್ಬರಿಂದ ತಿಳಿದುಬಂದಿದೆ.

ಸಂತರ ಶಾಂತಿ ಸಮಿತಿಯಿಂದ ಎರಡು ಸಮುದಾಯಗಳ ನಡುವೆ ಸಾಮರಸ್ಯ ಉಂಟಾದರೆ ಒಳ್ಳೆಯದು. ಅದೇ ವೇಳೆಯಲ್ಲಿ ಸಂತರ ಶಾಂತಿ ಸಮಿತಿಯ ಹೆಸರಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆಯದಂತೆ ನೋಡಿಕೊಳ್ಳುವುದು ಕೂಡ ಆರ್‌ಎಸ್‌ಎಸ್ ಸಂಘಟನೆಯ ಕರ್ತವ್ಯವೆಂಬುದನ್ನು ಅದರ ನಾಯಕರು ಮನವರಿಕೆ ಮಾಡಿಕೊಳ್ಳಬೇಕು.

ವೀರನಂಪಟ್ಟಿ ಗ್ರಾಮದ ಕಾಳಿಯಮ್ಮನ ದೇವಸ್ಥಾನ

Dalits denied entry: Tamil Nadu government seals Melpathi’s Dharmaraja Draupadi Amman temple

The Tamil Nadu government on Wednesday, 7 June, sealed the Sri Dharmaraja Draupadi Amman temple in Melpathi village of Villupuram district where caste Hindus continue to deny entry to members of the Scheduled Caste (SC) community.

After several rounds of talks with members of the dominant Vanniyar community of the village and representatives of the SC community failed, revenue officials, on the orders of District Collector Dr C Palani, sealed the temple on Wednesday morning.