• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ದೇಶ

ಒನ್ ರಾಬರಿ ಕಥೆಯಲ್ಲಿದೆ ಬಂಗಾರದ ವಿಷಯ!

by Dynamic Leader
17/12/2023
in ದೇಶ, ರಾಜ್ಯ
0
ಒನ್ ರಾಬರಿ ಕಥೆಯಲ್ಲಿದೆ ಬಂಗಾರದ ವಿಷಯ!
0
SHARES
0
VIEWS
Share on FacebookShare on Twitter

ವರದಿ: ಅರುಣ್ ಜಿ,.

ಬಂಗಾರದ ಬಿಸ್ಕೆಟ್ ಇದ್ದ ಬ್ಯಾಗನ್ನು ಪಡೆದುಕೊಳ್ಳಲು ಒಬ್ಬ ಯುವಕ ಹಾಗೂ ಶಾಸಕನೊಬ್ಬ ಪ್ರಯತ್ನಿಸುವಾಗ ನಡೆಯುವ ಘಟನೆಗಳನ್ನಿಟ್ಟುಕೊಂಡು ಮಾಡಿರುವ ಚಿತ್ರ ಒನ್ ರಾಬರಿ ಕಥೆ. 

ಖೈದಿ ಕೃಷ್ಣ (ರಣಧೀರ್ ಗೌಡ) ಪೊಲೀಸರಿಂದ ತಪ್ಪಿಸಿಕೊಂಡು ಬರುತ್ತಿರುವಾಗ ಹಾದಿಯಲ್ಲಿ ಕಾರೊಂದು  ಕಾಣಿಸುತ್ತದೆ. ಗೋಲ್ಡ್ ಬಿಸ್ಕಿಟ್ ಡೀಲ್ ಮಾಡಲು ಬಂದಿದ್ದ ಶಾಸಕನ ಕಾರದು. ಕೃಷ್ಣ ಬಚಾವಾಗಲೆಂದು ಅ ಕಾರಲ್ಲಿ ಕುಳಿತುಕೊಳ್ಳುತ್ತಾನೆ. ಶಾಸಕ (ಸುಂದರರಾಜ್) ಡೀಲ್ ಮುಗಿಸಿಕೊಂಡು ಕೋಟಿಗಟ್ಟಲೆ ಬೆಲೆಬಾಳುವ ಬಂಗಾರದ ಗಟ್ಟಿಗಳಿದ್ದ ಬ್ಯಾಗನ್ನು ತನ್ನ ಕಾರಿನ ಡಿಕ್ಕಿಯಲ್ಲಿಟ್ಟು ಮುಂದೆ ಬಂದು ಹತ್ತಬೇಕೆನ್ನುವಷ್ಟರಲ್ಲಿ ಕಾರು ಮುಂದೆ ಹೊರಟೇಬಿಡುತ್ತದೆ. ಕಕ್ಕಾಬಿಕ್ಕಿಯಾದ ಆ ಶಾಸಕ ಪೋಲೀಸರಿಗೆ ಕಾಲ್ ಮಾಡುತ್ತಾನೆ. ಆಗ ಕೃಷ್ಣ ಬಂಗಾರದ ಗಟ್ಟಿಯಿದ್ದ ಬ್ಯಾಗನ್ನು ರಾವ್‌ಗಡ ಎಂಬ ಹಳ್ಳಿಯ ಸಮೀಪದ ಬಯಲು ಜಾಗದಲ್ಲಿ ಗುಂಡಿ ತೆಗೆದು ಹೂತು ಅದರಮೇಲೆ ದೊಡ್ಡ ಕಲ್ಲನ್ನು ನೆಟ್ಟು ಬರುವಾಗ ಪೋಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಕೃಷ್ಣನ ಕೈಯಿಂದ ಬಂದ ರಕ್ತ ಆ ಕಲ್ಲಮೇಲೆ ಬಿದ್ದು ಅದೊಂಥರಾ ದೇವರಹಾಗೆ ಕಾಣಿಸುತ್ತದೆ. ಬೆಳಗಾದಮೇಲೆ ಊರಜನರಿಗೆ ಅದು ನೆಲದಲ್ಲೇ ಒಡಮೂಡಿದ ಕಲ್ಲು ದೇವರ ಹಾಗೆ ಗೋಚರಿಸುತ್ತದೆ.

ನಂತರ ಅಲ್ಲಿನ ಜನ ಅದಕ್ಕೊಂದು ಗುಡಿಯನ್ನೂ  ನಿರ್ಮಿಸುತ್ತಾರೆ. ಇತ್ತ ಪುನ: ಜೈಲುಸೇರಿದ ಕೃಷ್ಣ ಕೆಲ ವರ್ಷಗಳ ನಂತರ ಸೆರೆವಾಸ ಮುಗಿಸಿಕೊಂಡು ಹೊರಬರುತ್ತಾನೆ. ತಾನು ಬಚ್ಚಿಟ್ಟ ಬಂಗಾರ ಹುಡುಕಿಕೊಂಡು ಬರುವ ಆತನಿಗೆ ಅಲ್ಲಿ ಗುಡಿ ನಿರ್ಮಾಣವಾಗಿರುವುದು ಕಂಡು ದಿಗಿಲಾಗುತ್ತದೆ. ನಂತರ ಸರ್ವೇ ಆಫೀಸರ್ ವೇಶದಲ್ಲಿ ಆ ಊರನ್ನು ಸೇರಿಕೊಂಡ ಕೃಷ್ಣ ಬಂಗಾರವಿದ್ದ ಬ್ಯಾಗನ್ನು ಹೇಗೆ ಎಗರಿಸುವುದೆಂದು ಪ್ಲಾನ್ ಮಾಡುತ್ತಾನೆ. ತನ್ನ ಗೆಳೆಯ ಡೀಲ್ ಡಿಂಗ್ರಿ (ಶಿವರಾಜ್ ಕೆ.ಆರ್.ಪೇಟೆ) ಯನ್ನೂ ಅಲ್ಲಿಗೆ ಕರೆಸಿಕೊಳ್ಳುತ್ತಾನೆ. ಇದೇ ಸಮಯದಲ್ಲಿ ಆ ಊರಿನ ಟೀಚರ್ ರಾಧಾಳ (ರಿಷ್ವಿ ಭಟ್) ಪರಿಚಯವಾಗುತ್ತದೆ. ಕೃಷ್ಣನ ರೂಪಕ್ಕೆ ಟೀಚರ್ ರಾಧಾ ಮನಸೋಲುತ್ತಾಳೆ. ಹೀಗೇ ಸಾಗುವ ಕಥೆಯಲ್ಲಿ  ಮಧ್ಯಂತರದ ನಂತರ ಎದುರಾಗೋ ಒಂದಷ್ಟು ಟ್ವಿಸ್ಟ್ಗಳು ನೋಡುಗರಲ್ಲಿ  ಕುತೂಹಲ ಕೆರಳಿಸುತ್ತ ಸಾಗುತ್ತವೆ. ಇತ್ತ ಶಾಸಕ ತನ್ನ ಬಂಗಾರವನ್ನು ಕದ್ದೊಯ್ದವನನ್ನು ಹಿಡಿದೇ ತೀರಬೇಕೆಂದು ಸಾಕಷ್ಟು ಪ್ರಯತ್ನ ಮಾಡುತ್ತಾನೆ. ನಕಲಿ ಸರ್ವೇಯರ್ ಒಬ್ಬನನ್ನು ಊರಿಗೆ ಕಳಿಸುತ್ತಾನೆ.

ಇಷ್ಟೆಲ್ಲ ನಡೆಯುತ್ತಿದ್ದರೂ ಊರಲ್ಲಿದ್ದ ಕಲ್ಲುದೇವರ ಗುಡಿಯಲ್ಲಿ ಚಿನ್ನದ ಬ್ಯಾಗ್ ಸುರಕ್ಷಿತವಾಗಿರುತ್ತದೆ, ಕೊನೆಗೆ ಆ ಬಂಗಾರದ ಗಟ್ಟಿಗಳಿದ್ದ ಬ್ಯಾಗ್ ಯಾರ ಪಾಲಾಯಿತು, ನಕಲಿ ಸರ್ವೇಯರ್ ಏನಾದ, ಕೃಷ್ಣ ಆ ನಿಧಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತೇ ಹೀಗೆ ನಿಮ್ಮ ಮನದಲ್ಲಿ ಏಳುವ ನೂರಾರು ಪ್ರಶ್ನೆಗಳಿಗೆ ಉತ್ತರ ಚಿತ್ರದಲ್ಲಿದೆ. ತಡಮಾಡದೆ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಕಳ್ಳ ಕೃಷ್ಣನ ರಾಬರಿ ಕಥೆಯನ್ನು ನೋಡಿಕೊಂಡು ಬನ್ನಿ. ಲಾಜಿಕ್ ಹುಡುಕದೆ ಒಂದು ಸಿನಿಮಾ ಆಗಿ ನೋಡುತ್ತ ಹೋದಂತೆ ಚಿತ್ರವು ಖಂಡಿತ ಒಳ್ಳೆಯ ಮನರಂಜನೆ ನೀಡುತ್ತದೆ. ಇಡೀ ಕಥೆಯನ್ನು ಎಂಟರ್‌ಟೈನಿಂಗ್ ಆಗಿ ನಿರ್ದೇಶಕ ಗೋಪಾಲ್ ಹಳ್ಳೇರ ಹೊನ್ನಾವರ ಅವರು ತೆಗೆದುಕೊಂಡು ಹೋಗಿದ್ದಾರೆ. ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮನ್ವಿ ಕ್ರಿಯೇಷನ್ಸ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಾಯಕ ರಣದೀರ್‌ ಗೌಡ ಕಳ್ಳನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ನಾಯಕಿ ರಿಶ್ವಿ ಭಟ್ ಉತ್ತರ ಕರ್ನಾಟಕದ ಭಾಷೆಯನ್ನು ಕಷ್ಟಪಟ್ಟು ಮಾತಾಡಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ ಅವರ ಪಾತ್ರಕ್ಕೆ ಹೆಚ್ಚಿನ ಸೀನ್ ನೀಡುವ ಅವಕಾಶವಿತ್ತು. ನಿರ್ಮಾಪಕ ಸಂತೋಷ್ ನಾಗೇನಹಳ್ಳಿ ಅವರು ಪೋಲೀಸ್ ಇನ್ಸ್ಪೆಕ್ಟರ್ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿನ ಶ್ರೀವತ್ಸ ಸಂಗೀತ ಸಂಯೋಜನೆಯ ನಾಟಿ ಸ್ಟೈಲ್ ಹಾಡು ಸಖತ್ ಕ್ಯಾಚಿ ಆಗಿದೆ. ಉಳಿದಂತೆ ಬರುವ ಡ್ರೀಮ್ ಸಾಂಗ್ ಗಳು ಕಲರ್ ಫುಲ್ ಆಗಿ ಮೂಡಿಬಂದಿವೆ. ಚಿತ್ರದ ಕ್ಯಾಮೆರಾ ವರ್ಕ್ ಉತ್ತಮವಾಗಿದೆ.

ಸಿನಿಮಾ ರೇಟಿಂಗ್ 3/5

Tags: 1 Robbery Kathe Cinema1 Robbery Kathe Film1 Robbery Kathe Movies
Previous Post

ಮನೀಶ್ ಸಿಸೋಡಿಯಾವನ್ನು ಅತ್ಯಂತ ಅಪಾಯಕಾರಿ ಕ್ರಿಮಿನಲ್‌ಗಳೊಂದಿಗೆ ಜೈಲಿನಲ್ಲಿ ಇರಿಸಲಾಗಿದೆ?

Next Post

KMU ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಸೈಯದ್ ನದೀಮ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಾದಿಕ್ ಅವರು ಆಯ್ಕೆ!

Dynamic Leader

Next Post
KMU ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಸೈಯದ್ ನದೀಮ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಾದಿಕ್ ಅವರು ಆಯ್ಕೆ!

KMU ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಸೈಯದ್ ನದೀಮ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಾದಿಕ್ ಅವರು ಆಯ್ಕೆ!

Stay Connected test

  • 23.9k Followers
  • 99 Subscribers
  • Trending
  • Comments
  • Latest
edit post
ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
edit post
ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025
edit post
ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

12/04/2025
edit post
ಕೆ.ಆರ್.ಪುರಂ: ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ!

ಕೆ.ಆರ್.ಪುರಂ: ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ!

14/04/2025
edit post
ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0
edit post
‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0
edit post
ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0
edit post
ಕೊರೊನಾ ಆರ್ಭಟಕ್ಕೆ ಚೀನಾ ತತ್ತರ!

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
edit post
ಪರಿಸ್ಥಿತಿ ಬದಲಾಗುತ್ತದೆ, ಚಿಂತಿಸಬೇಡಿ: ಕಾಶ್ಮೀರದಲ್ಲಿ ರಾಹುಲ್ ಸಾಂತ್ವನ!

ಪರಿಸ್ಥಿತಿ ಬದಲಾಗುತ್ತದೆ, ಚಿಂತಿಸಬೇಡಿ: ಕಾಶ್ಮೀರದಲ್ಲಿ ರಾಹುಲ್ ಸಾಂತ್ವನ!

24/05/2025
edit post
ಸುಳ್ಳಿನಿಂದ ಬಿಜೆಪಿ ಹುಟ್ಟಿತಾ ಅಥವಾ ಬಿಜೆಪಿಯಿಂದಲೇ ಸುಳ್ಳು ಹುಟ್ಟಿತಾ? – ಪ್ರಿಯಾಂಕ್ ಖರ್ಗೆ

ಸುಳ್ಳಿನಿಂದ ಬಿಜೆಪಿ ಹುಟ್ಟಿತಾ ಅಥವಾ ಬಿಜೆಪಿಯಿಂದಲೇ ಸುಳ್ಳು ಹುಟ್ಟಿತಾ? – ಪ್ರಿಯಾಂಕ್ ಖರ್ಗೆ

23/05/2025
edit post
30 ದಿನಗಳು ಕಳೆದರೂ ಪಹಲ್ಗಾಮ್ ಬೈಸರನ್ ಕಣಿವೆಯಲ್ಲಿ ದಾಳಿ ನಡೆಸಿದ ಭಯೋತ್ಪಾದಕರ ಬಗ್ಗೆ ಯಾವುದೇ ಸುಳಿವು ಇಲ್ಲ.

ಪಹಲ್ಗಾಮ್ ದಾಳಿ ನಡೆದು ಒಂದು ತಿಂಗಳು ಕಳೆದಿದೆ; ಇನ್ನೂ ಉತ್ತರಿಸಲಾಗದ 4 ಪ್ರಶ್ನೆಗಳು!

23/05/2025
edit post
ತಮಿಳುನಾಡಿಗೆ 40 ಟಿಎಂಸಿ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದೆ.

ಕಾವೇರಿಯಲ್ಲಿ ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಲು ಆದೇಶ!

22/05/2025

Recent News

edit post
ಪರಿಸ್ಥಿತಿ ಬದಲಾಗುತ್ತದೆ, ಚಿಂತಿಸಬೇಡಿ: ಕಾಶ್ಮೀರದಲ್ಲಿ ರಾಹುಲ್ ಸಾಂತ್ವನ!

ಪರಿಸ್ಥಿತಿ ಬದಲಾಗುತ್ತದೆ, ಚಿಂತಿಸಬೇಡಿ: ಕಾಶ್ಮೀರದಲ್ಲಿ ರಾಹುಲ್ ಸಾಂತ್ವನ!

24/05/2025
edit post
ಸುಳ್ಳಿನಿಂದ ಬಿಜೆಪಿ ಹುಟ್ಟಿತಾ ಅಥವಾ ಬಿಜೆಪಿಯಿಂದಲೇ ಸುಳ್ಳು ಹುಟ್ಟಿತಾ? – ಪ್ರಿಯಾಂಕ್ ಖರ್ಗೆ

ಸುಳ್ಳಿನಿಂದ ಬಿಜೆಪಿ ಹುಟ್ಟಿತಾ ಅಥವಾ ಬಿಜೆಪಿಯಿಂದಲೇ ಸುಳ್ಳು ಹುಟ್ಟಿತಾ? – ಪ್ರಿಯಾಂಕ್ ಖರ್ಗೆ

23/05/2025
edit post
30 ದಿನಗಳು ಕಳೆದರೂ ಪಹಲ್ಗಾಮ್ ಬೈಸರನ್ ಕಣಿವೆಯಲ್ಲಿ ದಾಳಿ ನಡೆಸಿದ ಭಯೋತ್ಪಾದಕರ ಬಗ್ಗೆ ಯಾವುದೇ ಸುಳಿವು ಇಲ್ಲ.

ಪಹಲ್ಗಾಮ್ ದಾಳಿ ನಡೆದು ಒಂದು ತಿಂಗಳು ಕಳೆದಿದೆ; ಇನ್ನೂ ಉತ್ತರಿಸಲಾಗದ 4 ಪ್ರಶ್ನೆಗಳು!

23/05/2025
edit post
ತಮಿಳುನಾಡಿಗೆ 40 ಟಿಎಂಸಿ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದೆ.

ಕಾವೇರಿಯಲ್ಲಿ ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಲು ಆದೇಶ!

22/05/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಪರಿಸ್ಥಿತಿ ಬದಲಾಗುತ್ತದೆ, ಚಿಂತಿಸಬೇಡಿ: ಕಾಶ್ಮೀರದಲ್ಲಿ ರಾಹುಲ್ ಸಾಂತ್ವನ!

ಪರಿಸ್ಥಿತಿ ಬದಲಾಗುತ್ತದೆ, ಚಿಂತಿಸಬೇಡಿ: ಕಾಶ್ಮೀರದಲ್ಲಿ ರಾಹುಲ್ ಸಾಂತ್ವನ!

24/05/2025
ಸುಳ್ಳಿನಿಂದ ಬಿಜೆಪಿ ಹುಟ್ಟಿತಾ ಅಥವಾ ಬಿಜೆಪಿಯಿಂದಲೇ ಸುಳ್ಳು ಹುಟ್ಟಿತಾ? – ಪ್ರಿಯಾಂಕ್ ಖರ್ಗೆ

ಸುಳ್ಳಿನಿಂದ ಬಿಜೆಪಿ ಹುಟ್ಟಿತಾ ಅಥವಾ ಬಿಜೆಪಿಯಿಂದಲೇ ಸುಳ್ಳು ಹುಟ್ಟಿತಾ? – ಪ್ರಿಯಾಂಕ್ ಖರ್ಗೆ

23/05/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS