• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ಲೇಖನ

ದಲಿತರು ಮತ್ತು ಶೂದ್ರರು: ಪೆರಿಯಾರ್

by Dynamic Leader
17/09/2024
in ಲೇಖನ
0
0
SHARES
0
VIEWS
Share on FacebookShare on Twitter

ಪ್ರವಚನ: ಪೆರಿಯಾರ್
ಕನ್ನಡಕ್ಕೆ: ಡಿ.ಸಿ.ಪ್ರಕಾಶ್

‘ದಲಿತರ ಪ್ರಗತಿಗಾಗಿ ದುಡಿಯುತ್ತಿದ್ದೇವೆ’ ಎಂದು ಅಂದುಕೊಂಡು, ‘ಅವರಿಗಾಗಿ ದುಡಿಯುತ್ತಿದ್ದೇವೆ’ ಎಂದು ಹೇಳಿಕೊಂಡು ತಿರುಗಾಡುವುದೆಲ್ಲವೂ ಅವರನ್ನು ವಂಚಿಸಲಿಕ್ಕಾಗಿಯೇ ಎಂಬುದು ನನ್ನ ಅಭಿಪ್ರಾಯ. ಅಂದರೆ, ಯುರೋಪಿಯನ್ನರು ಭಾರತದ ಒಳಿತಿಗಾಗಿಯೇ ಭಾರತವನ್ನು ಆಳುತ್ತಿದ್ದಾರೆ ಎಂಬಂತಿದೆ. ಇದರಲ್ಲಿ ಬೇರೇನು ವಿಶೇಷತೆಯಿಲ್ಲ.

ನಮ್ಮ ದೇಶದಲ್ಲಿ ‘ದಲಿತ’ ಎಂಬ ಜಾತಿಯ ಹೆಸರು ಇರುವುದರಿಂದಲೇ ‘ಶೂದ್ರ’ ಎಂಬ ಜಾತಿಯ ಹಸರೂ ನಮ್ಮಲ್ಲಿದೆ. ‘ದಲಿತ’ ಎಂಬ ಜಾತಿ ಹೆಸರಿಗಿಂತ ‘ಶೂದ್ರ’ ಎಂಬ ಜಾತಿಯ ಹೆಸರೇ ಅವಹೇಳನಕಾರಿಯಾದದ್ದು. ಹಿಂದೂ ಶಾಸ್ತ್ರದ ಪ್ರಕಾರ, ದಲಿತ ಮಹಿಳೆಯರಲ್ಲಿ ಪತಿವ್ರತೆಯರೂ, ಪರಿಪೂರ್ಣ ತಾಯಿ, ತಂದೆಗೆ ಜನಿಸಿದವರೂ ಇರಬಹುದು. ಶೂದ್ರರಲ್ಲಿ ಹಾಗಿರಲು ಸಾಧ್ಯವಿಲ್ಲ. ಏಕೆಂದರೆ ‘ಶೂದ್ರಳು’ ಎಂದರೆ ದಾಸಿ, ವೇಶ್ಯೆಯ ಮಗಳು ಎಂಬುದು ಇದರರ್ಥ. ‘ಶೂದ್ರ’ ಎಂದರೆ ದಾಸಿಯ ಮಗ, ವೇಶ್ಯೆಯ ಮಗ ಎಂದರ್ಥ. ಇದನ್ನು ಒಪ್ಪದವನು ಹಿಂದೂ ಆಗಲಾರ ಎಂಬುದು ಶಾಸ್ತ್ರದ ನಿಯಮ.

ಆದ್ದರಿಂದ, ‘ಶೂದ್ರ’ ಎಂದು ಕರೆಯಲ್ಪಡುವ ನನ್ನಂತವರು, ‘ದಲಿತ’ ಎಂದು ಕರೆಸಿಕೊಳ್ಳುವವರ ಪ್ರಗತಿಗಾಗಿ ದುಡಿಯುತ್ತಿದ್ದೇನೆ ಎಂದು ಹೇಳಿಕೊಳ್ಳುವುದೆಲ್ಲವೂ ನಮ್ಮನ್ನು ‘ಶೂದ್ರ’ ಎಂದು ಯಾರೂ ಭಾವಿಸಬಾರದು ಎಂಬುದಕ್ಕಾಗಿಯೇ ಹೊರತು ಇದರಲ್ಲಿ ಬೇರೇನೂ ಇಲ್ಲ. ಹಾಗಾಗಿ, ನಾನು ನನಗಾಗಿ ಶ್ರಮಿಸುತ್ತಿರುವುದು ನಿಮ್ಮ ದೃಷ್ಟಿಯಲ್ಲಿ ನಿಮಗಾಗಿ ಶ್ರಮಿಸುತ್ತಿರುವುದಾಗಿ ತೋರುತ್ತದೆ. ನಿನ್ನನ್ನು ಕೀಳಾಗಿ ಕಾಣುವ ಮಹಿಳೆಯರು ಮತ್ತು ಪುರುಷರು, ತಮ್ಮನ್ನು ಇತರರು ನಿಮಗಿಂತ ಕೀಳಾಗಿ ಕಾಣುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇತರರನ್ನು ಕೀಳಾಗಿ ಭಾವಿಸುವ ಅಜ್ಞಾನದಿಂದಾಗಿ, ತಮ್ಮನ್ನು ಮತ್ತವರು ಕೀಳಾಗಿ ಭಾವಿಸುವುದು ತಮಗೆ ಹೀನವಾಗಿ ಕಾಣುವುದಿಲ್ಲ.

ಈ ಹಿನ್ನೆಲೆಯಲ್ಲಿ, ನಿಮ್ಮಲ್ಲಿನ ತಪ್ಪುಗಳನ್ನು ಪತ್ತೆಹಚ್ಚಿ, “ನಿಮ್ಮ ದೇಹದಲ್ಲಿ ದುರ್ವಾಸನೆ ಬೀಸುತ್ತಿದೆ; ನೀವು ಸ್ನಾನ ಮಾಡುವುದಿಲ್ಲ; ಬಟ್ಟೆ ಒಗೆಯುವುದಿಲ್ಲ; ನೀವು ಗೋಮಾಂಸ ತಿನ್ನುತ್ತೀರಿ; ನೀವು ಮದ್ಯಪಾನ ಮಾಡುತ್ತೀರಿ; ಇದನ್ನು ಬಿಟ್ಟುಬಿಡಿ” ಎಂದು ಉಪದೇಶ ಮಾಡುತ್ತಾರೆ.

ನೀವು ಬಟ್ಟೆ ಒಗೆಯದೆ, ಸ್ನಾನ ಮಾಡದೆ ಇರುವುದಕ್ಕೆ ಯಾರು ಹೊಣೆ ಎಂದು ಅವರು ಭಾವಿಸುತ್ತಿಲ್ಲ. ನಿಮಗೆ ಕುಡಿಯಲು ನೀರೇ ಇಲ್ಲದಿರುವಾಗ ಸ್ನಾನ ಮಾಡುವುದಾದರೂ ಹೇಗೆ! ಕೊಳಕು ಮತ್ತು ವಾಸನೆ ನಿಮ್ಮ ಜೊತೆಯಲ್ಲಿ ಹುಟ್ಟಿದ್ದೇ ಎಂದು ನಾನು ನಿಮ್ಮನ್ನು ಕೇಳುತ್ತೇನೆ.

ಸ್ನಾನ ಮಾಡಲು, ಬಟ್ಟೆ ಒಗೆಯಲು, ಹಲ್ಲುಜ್ಜಲು ನೀರು ಕೊಡದೆ, ಮಠಾಧೀಶರುಗಳನ್ನು, ಶಂಕರಾಚಾರ್ಯರನ್ನು ತಂದು ಮನೆಯಲ್ಲಿ ಕೂಡಿಹಾಕಿದರೆ ಅವರ ಬಟ್ಟೆ ಶುಚಿಯಾಗಿರುತ್ತದೆಯೇ! ಅವರ ಬಟ್ಟೆ ಸ್ವಚ್ಛವಾಗಿರುತ್ತದೆಯೇ? ಅವರ ದೇಹ ಮತ್ತು ಬಾಯಿ ದುರ್ವಾಸನೆ ಹೊಡೆಯುವುದಿಲ್ಲವೇ? ಯೋಚಿಸಿ ನೋಡಿ. ನೀವು ಒಬ್ಬರನ್ನು ಹಸಿವಿಗೆ ದೂಡಿ, ಅವನು ಸತ್ತ ಮೇಲೆ, “ಅವನು ಹಸಿವಿನಿಂದ ಸತ್ತಿದ್ದಾನೆ ಪಾಪಿ” ಎಂದು ಹೇಳಿದರೆ, ಆ ಪಾಪಿ ಯಾರೆಂದು ಯೋಚಿಸಿ ನೋಡಿ!

ಅಲ್ಲದೆ, ಗೋಮಾಂಸ ತಿಂದು ಮದ್ಯಪಾನ ಮಾಡುತ್ತಿರುವುದೇ ನೀವು ದಲಿತರಾಗಿರಲು ಕಾರಣ ಎಂದು ಹೇಳುವುದು ಸಮಂಜಸವಲ್ಲ. ಗೋಮಾಂಸ ತಿಂದು ಮದ್ಯ ಸೇವಿಸುವವರೆ ಇಂದು ಜಗತ್ತನ್ನು ಆಳುತ್ತಿದ್ದಾರೆ. ಅಲ್ಲದೆ, ನೀವು ಗೋಮಾಂಸ ತಿನ್ನುತ್ತಿರುವುದು ನಿಮ್ಮ ತಪ್ಪಲ್ಲ. ನಿಮಗೆ, ಇತರರಂತೆ ಸರಿಯಾಗಿ ಸಂಪಾದಿಸುವ, ಉದಾರವಾಗಿ ತಿನ್ನುವ, ಬೀದಿಯಲ್ಲಿ ನಡೆಯುವ, ಸ್ವತಂತ್ರವಾಗಿ ಎಲ್ಲಿಯಾದರೂ ಹೋಗಿ ದುಡಿದು ಸಂಪಾದಿಸುವ ಅವಕಾಶವನ್ನು ನೀಡದಿರುವುದರಿಂದ, ಸ್ವಲ್ಪ ಹಣಕ್ಕೆ ಹೆಚ್ಚು ಆಹಾರವಾಗಬಹುದಾದ ಗೋಮಾಂಸವನ್ನು ತಿನ್ನಬೇಕಾಯಿತು.

ಗೋಮಾಂಸವನ್ನು ಅನುಮತಿಸುವ ಧರ್ಮಗಳಿಗೆ ಸೇರಿದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿಯೂ ಕೆಲವರು ಸ್ವಲ್ಪ ಧಾರಾಳವಾಗಿ ಹಣ ಸಂಪಾದಿಸಲು ತೊಡಗಿದ ಕೂಡಲೇ “ನಮ್ಮಲ್ಲಿ ಗೋಮಾಂಸ ತಿನ್ನುವ ಪದ್ಧತಿ ಇಲ್ಲ” ಎಂದು ಹೇಳುತ್ತಾರೆ. ಆದ್ದರಿಂದ, ನಮ್ಮ ದೇಶದಲ್ಲಿ ದನದ ಮಾಂಸ ತಿನ್ನಲು ಬಡತನವೇ ಮುಖ್ಯ ಕಾರಣವಾಗಿದೆ. ಅಲ್ಲದೆ, ಮೇಕೆ, ಕೋಳಿ, ಮೀನು ಮತ್ತು ಹಂದಿ ಮಾಂಸಕ್ಕಿಂತ ದನದ ಮಾಂಸ ತಿನ್ನುವುದು ಅಷ್ಟುದೊಡ್ಡ ಪಾಪವಾಗಿದೆಯೇ?

ಕೋಳಿ, ಮೀನು ಮತ್ತು ಹಂದಿಗಳು ಲಾಲಾರಸ, ಹುಳುಗಳು, ಕೊಳಕು ಮತ್ತು ಮಲವನ್ನು ತಿನ್ನುತ್ತವೆ. ಹಾಗಿರುವಾಗ, ಇದನ್ನು ತಿನ್ನುವ ಉತ್ತರದ ಬ್ರಾಹ್ಮಣರಿಂದ ದಕ್ಷಿಣದ ಶೂದ್ರರವರೆಗೂ ಒಳ್ಳೆಯ ಜಾತಿ ಮತ್ತು ಸ್ಪರ್ಶಕ್ಕೆ ಅರ್ಹರಾಗಿರುವಾಗ! ಹುಲ್ಲು, ಹತ್ತಿ, ಹೊಟ್ಟು ತಿನ್ನುವ ಹಸುವಿನ ಮಾಂಸ ತಿಂದ ಮಾತ್ರಕ್ಕೆ ಮನುಷ್ಯ ಹೇಗೆ ಕೀಳಾಗುತ್ತಾನೆ? ಬದಲಾಗಿ, ದನದ ಮಾಂಸ ತಿನ್ನುವವರನ್ನು “ಮುಟ್ಟಬೇಡ; ಬೀದಿಯಲ್ಲಿ ನಡೆಯಬೇಡ; ಹೊಂಡದಲ್ಲಿ ನೀರು ಕುಡಿಯಬೇಡ; ಊರಿನೊಳಗೆ ಇರಬೇಡ” ಎನ್ನುತ್ತಾರ! ಇದು ನಿಜವಾದ ಕಾರಣವೇ ಅಲ್ಲ. ಇದು ಉದ್ದೇಶಪೂರ್ವಕವಾಗಿ, ಬೇಕೆಂದೇ ನಿಮ್ಮನ್ನು ಶೋಷಿಸಲು ಯೋಗ್ಯ ಬೇಜವಾಬ್ದಾರಿಯ ಕಾರಣವಾಗಿದೆ ಎಂಬುದು ನನ್ನ ಅಭಿಪ್ರಾಯ.

ಮದ್ಯಪಾನ ಮತ್ತು ಗೋಮಾಂಸವನ್ನು ತಿರಸ್ಕರಿಸುವುದನ್ನು ನಾನು ವಿರೋಧಿಸುತ್ತಿಲ್ಲ. ಮದ್ಯಪಾನ ಮತ್ತು ಗೋಮಾಂಸವನ್ನು ತ್ಯಜಿಸುವುದರಿಂದ ನಿಮ್ಮ ಜಾತಿ  ಮೇಲೇರುತ್ತದೆ ಎಂದು ಕೆಲವರು ಹೇಳುವ ಅಸಂಬದ್ಧ ಕಾರಣವನ್ನು ನಾನು ಒಪ್ಪಲಾರೆ. ನಿಮ್ಮ ಜಾತಿ ಮೇಲೇರಲು ಮದ್ಯ ಮತ್ತು ಗೋಮಾಂಸವನ್ನು ತ್ಯಜಿಸಿ ಎಂದು ನಾನು ಕೇಳುವುದಿಲ್ಲ. ಅದಕ್ಕಾಗಿ ನೀವು ತ್ಯಜಿಸುವ ಅಗತ್ಯವೂ ಇಲ್ಲ.

ನಮ್ಮ ದೇಶದಲ್ಲಿ, ತೆಂಗಿನಮರ ಮತ್ತು ತಾಳೆ ಮರಗಳಿಂದ ಸಿಗುವ ಸೇಂದಿ, ತಯಾರಿಸುವ ಸಾರಾಯಿ ಮತ್ತು ವಿದೇಶಗಳಿಂದ ಬರುವ ಮದ್ಯಪಾನಗಳು, ಚೆನ್ನೈ ಪ್ರಾಂತ್ಯದ 15.20 ಕೋಟಿ ರೂ.ಗಳ ವಹಿವಾಟಿನ ಎಲ್ಲ ರೀತಿಯ ಮದ್ಯಪಾನಗಳನ್ನು ನೀವೇ ಕುಡಿಯುತ್ತಿದ್ದಿರಾ? ಇದನ್ನು ಯಾರಾದರೂ ನಂಬುತ್ತಾರೆಯೇ? ಯಾರೂ ನಂಬುವುದಿಲ್ಲ. ಆದ್ದರಿಂದ ನೀವು, ಜಾತಿಯ ಉನ್ನತಿಯ ಉದ್ದೇಶದಿಂದ ಇವುಗಳನ್ನು ಬಿಡಲು ಬಯಸಿದರೆ, ಮೊದಲು ಇತರರು ಬಿಡಲಿ.

ಮದ್ಯವು ಮಾನವ ನೈತಿಕತೆಗೆ ವಿರುದ್ಧವಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಮದ್ಯಪಾನ ನಿಷಧಕ್ಕಾಗಿ ನಾನೂ ಒಂದಿಷ್ಟು ಸೇವೆ ಸಲ್ಲಿಸಿದ್ದೇನೆ. ಆದರೆ ಜಾತಿ ಉನ್ನತಿಗಾಗಿ ಎಲ್ಲ ಜಾತಿಯವರು ಸೇವಿಸುವ ಮದ್ಯಕ್ಕೆ ಯಾವುದೇ ನಿಷೇಧವಿರುವುದಿಲ್ಲ. ಆದ್ದರಿಂದ, ಜಾತಿ ಔನ್ನತ್ಯಕ್ಕೆ ಮದ್ಯಪಾನ ನಿಶೇಧ, ಮಾಂಸಾಹಾರ ವರ್ಜನೆ ಅಗತ್ಯ ಎಂದು ಹೇಳುತ್ತಿರುವುದು ಉದ್ದೇಶಪೂರ್ವಕವಾಗಿ ಹೇಳುತ್ತಿರುವ ಸುಳ್ಳು.

ಆದರೂ, ನಿಮ್ಮಲ್ಲಿರುವ ಕೆಲವು ತಪ್ಪುಗಳನ್ನು ಹೇಳದೆ ಇರಲು ಆಗುತ್ತಿಲ್ಲ. ಅಂದರೆ, ನಿಮ್ಮ ಜಾತಿಗೆ ನೀವೇ ಅವಮಾನವನ್ನು ತಂದುಕೊಳ್ಳುತ್ತಿದ್ದೀರಿ. ಅನಗತ್ಯವಾಗಿ ಯಾರನ್ನು ಕಂಡರೂ ‘ಸ್ವಾಮಿ’ ಎಂದು ನಮಸ್ಕರಿಸುತ್ತೀರಿ. ನೀವು ಕೀಳು ಎಂಬ ಭಾವನೆ ನಿಮ್ಮ ರಕ್ತದಲ್ಲಿದೆ. ಅದು ಬದಲಾಗಬೇಕು. ನೀವು ಒಬ್ಬರನ್ನು ಕಂಡಾಗ, ಅವರ ಮತ್ತು ನಿಮ್ಮ ನಡುವಿನ ವ್ಯತ್ಯಾಸವೇನು ಎಂಬುದು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬೇಕು. ಸ್ವಾಭಿಮಾನದ ಬಗ್ಗೆ ಎಚ್ಚರವಿರದ ಜಾತಿಗಳನ್ನು ಬೆಳೆಸಿದರೂ ಮೇಲೇಳುವುದಿಲ್ಲ. ಅವನಿಗೆ ತಾನೊಬ್ಬ ಮನುಷ್ಯ ಎಂಬ ಭಾವನೆ ಮೊದಲು ಬರಬೇಕು.

ನೀವು ಇನ್ನು ಮುಂದೆ ಯಾರನ್ನೂ ‘ಸ್ವಾಮಿ’ ಎಂದು ಕರೆಯಬಾರದು. ಬೇಕಿದ್ದರೆ ‘ಸರ್’ ಎಂದು ಕರೆಯಿರಿ. ನೀವಾಗಿಯೇ ನುಸುಳಿಕೊಳ್ಳುವುದು, ದೂರವಾಗುವುದು ಮುಂತಾದ ದುರ್ಗುಣಗಳು ನಿಮ್ಮನ್ನು ಬಿಟ್ಟು ದೂರವಾಗಬೇಕು. ಆಗ ಮಾತ್ರ ನಿಮ್ಮನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.

Source: Thoughts of Periyar E.V.R-1
ತಮಿಳುನಾಡಿನ ಶಿವಗಂಗೈ ಜಿಲ್ಲೆ, ಸಿರಾವಯಲ್ ನಲ್ಲಿ ದಿನಾಂಕ: 07.04.1926 ರಂದು ಪೆರಿಯಾರ್ ಮಾಡಿದ ಪ್ರವಚನ: ದಿನಾಂಕ: 25.04.1926 ರಂದು ‘ಕುಡಿ ಅರಸು’ (Republic) ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tags: D.C.PrakashDalits and ShudrasPeriyarThoughts of Periyarಗೋಮಾಂಸಡಿ.ಸಿ.ಪ್ರಕಾಶ್ಥಾಟ್ಸ್ ಆಫ್ ಪೆರಿಯಾರ್ದಲಿತರುದಲಿತರು ಮತ್ತು ಶೂದ್ರರುಪೆರಿಯಾರ್ಮದ್ಯಪಾನಶೂದ್ರರುಸ್ವಾಮಿ
Previous Post

ಭಿಲಾಯ್ ಕನ್ನಡ ಸಂಘದವರ ಕನ್ನಡತನ, ಮಾತೃಭಾಷಾ ಪ್ರೇಮ, ತಾಯ್ನಾಡಿನ ಬಗೆಗಿನ ಅಕ್ಕರೆಯನ್ನು ಕಂಡು ನನ್ನ ಮನಸ್ಸು ತುಂಬಿ ಬಂದಿದೆ: ಹೆಚ್.ಡಿ.ಕುಮಾರಸ್ವಾಮಿ

Next Post

ಪೇಜರ್ ಸ್ಫೋಟಗೊಂಡಿದ್ದು ಹೇಗೆ? ಜಗತ್ತನ್ನೇ ಬೆಚ್ಚಿಬೀಳಿಸಿದ ಘಟನೆ; ಮಾಡಿದವರು ಯಾರು? ಬಹಿರಂಗವಾಗದ ಶಾಕಿಂಗ್ ನ್ಯೂಸ್!

Next Post

ಪೇಜರ್ ಸ್ಫೋಟಗೊಂಡಿದ್ದು ಹೇಗೆ? ಜಗತ್ತನ್ನೇ ಬೆಚ್ಚಿಬೀಳಿಸಿದ ಘಟನೆ; ಮಾಡಿದವರು ಯಾರು? ಬಹಿರಂಗವಾಗದ ಶಾಕಿಂಗ್ ನ್ಯೂಸ್!

Stay Connected test

  • 23.9k Followers
  • 99 Subscribers
  • Trending
  • Comments
  • Latest
edit post

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
edit post
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025
edit post
ಚಂದ್ರಬಾಬು ನಾಯ್ಡು

ಚಲಾವಣೆಯಲ್ಲಿರುವ 500 ರೂಪಾಯಿ ನೋಟುಗಳನ್ನು ಹಿಂಪಡೆಯಬೇಕು: ಚಂದ್ರಬಾಬು ನಾಯ್ಡು ಒತ್ತಾಯ!

28/05/2025
edit post

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025
edit post

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0
edit post

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0
edit post

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0
edit post

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
edit post
ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಯಲ್ಲಿ ಯಾವುದೇ ಒಪ್ಪಂದಕ್ಕೆ ಬರದಿದ್ದರೆ, ನಾವು ಅದರಿಂದ ವಿಮುಖರಾಗಬಹುದು. ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಭಾರತ ಅಮೆರಿಕದ ಮೇಲೆ ಅವಲಂಬಿತವಾಗಿಲ್ಲ; ವ್ಯಾಪಾರ ಒಪ್ಪಂದದ ಬಗ್ಗೆ ಶಶಿ ತರೂರ್ ಅಭಿಪ್ರಾಯ!

31/07/2025
edit post
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಳೆ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಆಪರೇಷನ್ ಸಿಂಧೂರ ಕುರಿತ ಚರ್ಚೆಯ ಪ್ರಮುಖ ಘಟನೆಯಾಗಿ ವಿರೋಧ ಪಕ್ಷಗಳಿಗೆ ಉತ್ತರಿಸಲಿದ್ದಾರೆ.

ಆಪರೇಷನ್ ಸಿಂಧೂರ ಮುಗಿದಿಲ್ಲ ಎಂದು ಹೇಳುವುದಾದರೇ ಅದು ಹೇಗೆ ಯಶಸ್ವಿಯಾಗುತ್ತದೆ: ವಿರೋಧ ಪಕ್ಷಗಳು

28/07/2025
edit post
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ!

28/07/2025
edit post
ದೇಶದ ವಿವಿಧ ಭಾಗಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವಯಂಪ್ರೇರಿತ ತನಿಖೆಗೆ ಮುಂದಾಗಿದೆ.

Rabies Death: ನಾಯಿ ಕಡಿತದ ಪ್ರಮಾಣ ಹೆಚ್ಚಳ; ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್!

28/07/2025

Recent News

edit post
ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಯಲ್ಲಿ ಯಾವುದೇ ಒಪ್ಪಂದಕ್ಕೆ ಬರದಿದ್ದರೆ, ನಾವು ಅದರಿಂದ ವಿಮುಖರಾಗಬಹುದು. ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಭಾರತ ಅಮೆರಿಕದ ಮೇಲೆ ಅವಲಂಬಿತವಾಗಿಲ್ಲ; ವ್ಯಾಪಾರ ಒಪ್ಪಂದದ ಬಗ್ಗೆ ಶಶಿ ತರೂರ್ ಅಭಿಪ್ರಾಯ!

31/07/2025
edit post
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಳೆ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಆಪರೇಷನ್ ಸಿಂಧೂರ ಕುರಿತ ಚರ್ಚೆಯ ಪ್ರಮುಖ ಘಟನೆಯಾಗಿ ವಿರೋಧ ಪಕ್ಷಗಳಿಗೆ ಉತ್ತರಿಸಲಿದ್ದಾರೆ.

ಆಪರೇಷನ್ ಸಿಂಧೂರ ಮುಗಿದಿಲ್ಲ ಎಂದು ಹೇಳುವುದಾದರೇ ಅದು ಹೇಗೆ ಯಶಸ್ವಿಯಾಗುತ್ತದೆ: ವಿರೋಧ ಪಕ್ಷಗಳು

28/07/2025
edit post
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ!

28/07/2025
edit post
ದೇಶದ ವಿವಿಧ ಭಾಗಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವಯಂಪ್ರೇರಿತ ತನಿಖೆಗೆ ಮುಂದಾಗಿದೆ.

Rabies Death: ನಾಯಿ ಕಡಿತದ ಪ್ರಮಾಣ ಹೆಚ್ಚಳ; ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್!

28/07/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಯಲ್ಲಿ ಯಾವುದೇ ಒಪ್ಪಂದಕ್ಕೆ ಬರದಿದ್ದರೆ, ನಾವು ಅದರಿಂದ ವಿಮುಖರಾಗಬಹುದು. ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಭಾರತ ಅಮೆರಿಕದ ಮೇಲೆ ಅವಲಂಬಿತವಾಗಿಲ್ಲ; ವ್ಯಾಪಾರ ಒಪ್ಪಂದದ ಬಗ್ಗೆ ಶಶಿ ತರೂರ್ ಅಭಿಪ್ರಾಯ!

31/07/2025
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಳೆ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಆಪರೇಷನ್ ಸಿಂಧೂರ ಕುರಿತ ಚರ್ಚೆಯ ಪ್ರಮುಖ ಘಟನೆಯಾಗಿ ವಿರೋಧ ಪಕ್ಷಗಳಿಗೆ ಉತ್ತರಿಸಲಿದ್ದಾರೆ.

ಆಪರೇಷನ್ ಸಿಂಧೂರ ಮುಗಿದಿಲ್ಲ ಎಂದು ಹೇಳುವುದಾದರೇ ಅದು ಹೇಗೆ ಯಶಸ್ವಿಯಾಗುತ್ತದೆ: ವಿರೋಧ ಪಕ್ಷಗಳು

28/07/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS