ವಿದೇಶ Archives » Page 9 of 12 » Dynamic Leader
October 23, 2024
Home Archive by category ವಿದೇಶ (Page 9)

ವಿದೇಶ

ವಿದೇಶ ಶಿಕ್ಷಣ

ಮನುಷ್ಯರು ಭೂಮಿಯಿಂದ ಹೆಚ್ಚು ಅಂತರ್ಜಲವನ್ನು ಹೀರಿಕೊಳ್ಳುತ್ತಾರೆ. ಪರಿಣಾಮವಾಗಿ, 1993 ಮತ್ತು 2010 ರ ನಡುವೆ ಭೂಮಿಯು 80 ಸೆಂ.ಮೀ. ಪೂರ್ವ ಭಾಗಕ್ಕೆ ವಾಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದು ಭೂಮಿಯ ಹವಾಮಾನದ ಮೇಲೆ ದೊಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಅವರು ಹೆಚ್ಚರಿಸಿದ್ದಾರೆ. ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಸಂಶೋಧನಾ ವರದಿಯಲ್ಲಿ, 1993 ರಿಂದ 2010 ರವರೆಗೆ, ಮನುಷ್ಯರಿಂದ 2150 ಗಿಗಾ ಟನ್ ಅಂತರ್ಜಲವನ್ನು ಹೀರಿಕೊಳ್ಳಲಾಗಿದೆ. ಇದು 6 ಮಿಲಿ ಮೀಟರ್‌ಗಿಂತ ಹೆಚ್ಚು ಸಮುದ್ರ ಮಟ್ಟ ಏರಿಕೆಗೆ ಸಮನಾಗಿದೆ ಎಂದು ಹೇಳಲಾಗಿದೆ.

ಅಂತರ್ಜಲ ಮಟ್ಟವನ್ನು ಕಡಿಮೆ ಮಾಡುವುದರಿಂದ ಭೂಮಿಯ ಪರಿಚಲನೆ ಬದಲಾಗುತ್ತಿದೆ ಎಂದು 2016ರಲ್ಲೇ ಸಂಶೋಧಕರು ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ಈ ಪರಿಚಲನೆ ಬದಲಾವಣೆಗಳಿಗೆ ಅಂತರ್ಜಲದ ನಿರ್ದಿಷ್ಟ ಕೊಡುಗೆಯನ್ನು ಸಂಶೋಧನೆ ಮಾಡಲಾಗಿಲ್ಲ. 1993 ರಿಂದ 2010 ರವರೆಗೆ ಪಶ್ಚಿಮ ಉತ್ತರ ಅಮೆರಿಕಾ ವಾಯುವ್ಯ ಭಾರತದ ಮಧ್ಯ ಅಕ್ಷಾಂಶಗಳಲ್ಲಿ ಹೆಚ್ಚಿನ ನೀರನ್ನು ಮರುಹಂಚಿಕೆ ಮಾಡಲಾಗಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಭೂಮಿಯ ತಿರುಗುವಿಕೆ ಬಹಳಷ್ಟು ಬದಲಾಗಿದೆ. ಇದರಿಂದ ಭೂಮಿಯ ಅನೇಕ ಭಾಗಗಳಲ್ಲಿ ಹವಾಮಾನದ ಮೇಲೆ ದೊಡ್ಡ ಪರಿಣಾಮಗಳನ್ನು ಉಂಟುಮಾಡಿದೆ. ಅದೇ ಸಂದರ್ಭದಲ್ಲಿ ಅಂತರ್ಜಲ ಮಟ್ಟ ಕುಸಿಯುವುದನ್ನು ತಡೆಯಲು ಹಲವು ದೇಶಗಳು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದರಿಂದ ಭೂಮಿಯ ತಿರುಗುವಿಕೆಯನ್ನು ಬದಲಾಯಿಸಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ.

ಭೂಮಿಯ ತಿರುಗುವಿಕಯ ಧೃವವು ಸಾಮಾನ್ಯವಾಗಿ ಒಂದು ವರ್ಷದೊಳಗೆ ಅನೇಕ ಮೀಟರ್‌ಗಳು ಬದಲಾಗುವುದರಿಂದ, ಅಂತರ್ಜಲ ಹೊರತೆಗೆಯುವಿಕೆಯಿಂದಾಗಿ ಸಂಭವಿಸುವ ಬದಲಾವಣೆಗಳು, ಋತುಗಳನ್ನು ಬದಲಾಯಿಸುವಂತಹ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

Groundwater extraction has tilted Earth’s spin; how likely is it to fuel climate change?

Humans have caused marked tilts in the Earth’s axis by pumping water out of the ground and moving it elsewhere,  according to a new study.

Pronounced shifts in the Earth’s axis of rotation can impact our planet’s climate, noted the study published in Geophysical Research Letters, the journal of the American Geophysical Union, on June 15, 2023.

Groundwater pumping has tilted the planet nearly 80 centimeters east between 1993 and 2010 alone.

The water circulated across the planet determines how mass is distributed. Scientists had predicted that between 1993 and 2010, people pumped 2,150 gigatons of groundwater, or more than 6 millimeters (0.24 inches), of sea level increase. However, it is difficult to validate that estimate.

ವಿದೇಶ ಶಿಕ್ಷಣ

ಕೋಳಿ ಮೊದಲ-ಮೊಟ್ಟೆ ಮೊದಲ ಎಂಬುದು ಪ್ರಾಚೀನ ಕಾಲದಿಂದಲೂ ಬಿಡಿಸಲಾಗದ ಒಗಟಾಗಿದೆ. ಕೋಳಿ, ಮೊಟ್ಟೆಯಿಂದಲೇ ಬಂದಿದೆ ಎಂದು ಕೆಲವರು ಹೇಳುತ್ತಾರೆ. ಮೊಟ್ಟೆಯನ್ನು ಕೋಳಿಯೇ ಇಟ್ಟಿದ್ದು ಎಂದು ಕೆಲವರು ವಾದಿಸುತ್ತಾರೆ, ಆದ್ದರಿಂದ ಕೋಳಿಯೇ ಮೊದಲು ಬಂದಿತ್ತು ಎಂಬುದು ಕೆಲವರ ವಾದ. ಈ ಒಗಟಿನ ವಾದಗಳಿಗೆ ಈಗ ಸಂಶೋಧಕರು ಉತ್ತರವನ್ನು ಕಂಡುಕೊಂಡಿದ್ದಾರೆ.

ಕೋಳಿ ಮೊದಲ-ಮೊಟ್ಟೆ ಮೊದಲ ಎಂಬ ವಾದಕ್ಕೆ ವೈಜ್ಞಾನಿಕವಾಗಿ ಉತ್ತರಿಸಲು, ಮೊದಲು 51 ಪಳೆಯುಳಿಕೆ ಜಾತಿಗಳು ಮತ್ತು 29 ಜೀವಂತ ಜಾತಿಗಳನ್ನು ಅಧ್ಯಯನ ಮಾಡಲಾಯಿತು. ಈ ಜೀವಿಗಳನ್ನು ಮೊಟ್ಟೆ ಇಟ್ಟು ಮರಿಮಾಡುವ ಜೀವಿಗಳು (oviparous) ಮತ್ತು ಮರಿಹಾಕುವ ಜೀವಿಗಳು  (viviparous) ಎಂದು ವರ್ಗೀಕರಿಸಲಾಯಿತು.

ಮೀನಿನಂಥ ಜಲಚರಗಳಿಂದ ವಿಕಾಸದಲ್ಲಿ ಕಶೇರುಕ ಆಮ್ನಿಯೋಟ್ಸ್ (Amniotes) ಕಾಣಿಸಿಕೊಂಡಿತು. ಅವು ನೀರಿನಲ್ಲಿ ಮತ್ತು ಭೂಮಿಯಲ್ಲಿ ವಾಸಿಸುವ ಉಭಯಚರಗಳ ಗುಣಲಕ್ಷಣಗಳನ್ನು ಹೊಂದಿದ್ದವು. ಈ ಜೀವಿಗಳು ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ನೀರಿನ ಹತ್ತಿರವೇ ಇದ್ದವು. ಉದಾಹರಣೆಗೆ, ಕಪ್ಪೆಗಳು ಮತ್ತು ಮೊಸಳೆಯಂತಹ (Salamander) ಜೀವಂತ ಜೀವಿಗಳು.

320 ಮಿಲಿಯನ್ ವರ್ಷಗಳ ಹಿಂದೆ ಕಾಣಿಸಿಕೊಂಡ ಆ ಜೀವಿಗಳು, ಜಲನಿರೋಧಕ ಚರ್ಮ ಮತ್ತು ನೀರಿನ ನಷ್ಟವನ್ನು ನಿಯಂತ್ರಿಸಲು ಪಳಗಿಕೊಂಡಿತು. ಆ ಮೂಲಕ ನೀರಿನಿಂದ ಬೇರ್ಪಟ್ಟು ಭೂಮಿಯಲ್ಲಿ ವಾಸಿಸುವ ಅಭ್ಯಾಸವನ್ನು ಬೆಳೆಸಿಕೊಂಡಿತು.

ಈ ಹಿನ್ನಲೆಯಲ್ಲಿ ಅನೇಕ ಹಲ್ಲಿಗಳು ಮತ್ತು ಹಾವುಗಳು, ಮರಿಹಾಕುವ ಸ್ವಭಾವದಿಂದ ಬದಲಾಗಿ ಮೊಟ್ಟೆ ಇಡುವ ಸ್ವಭಾವಕ್ಕೆ ಬದಲಾವಣೆಗೊಂಡಿತು. ಹಾಗೆಯೇ  ಕೋಳಿಯ ಪೂರ್ವಜ ಕೂಡ ಮರಿಹಾಕುವ ಸ್ವಭಾವದಿಂದ ಮೊಟ್ಟೆಯಿಡುವಿಕೆಗೆ ಬದಲಾವಣೆಗೊಂಡಿತು. ಮೊಟ್ಟೆಯ ಚಿಪ್ಪುಗಳು, ಆರಂಭದಲ್ಲಿ ಮೃದುವಾಗಿದ್ದವು ನಂತರ ಗಟ್ಟಿಯಾದ ಚಿಪ್ಪುಗಳಾಗಿ ವಿಕಸನಗೊಂಡಿತು.

ತಾಯಿ ಜೀವಿಗಳು ಮರಿಗಳನ್ನು ದೀರ್ಘಕಾಲದವರೆಗೆ ಗರ್ಭಾಶಯದಲ್ಲಿ ಇಟ್ಟು, ಸಾಕಷ್ಟು ತಾಪಮಾನ ಮತ್ತು ಬೇಕಾದಷ್ಟು ಆಹಾರದ ಸಿದ್ದತೆಯನ್ನು ಮಾಡಿಕೊಂಡ ನಂತರ ಮರಿಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡಿರಬಹುದು. ವಿಜ್ಞಾನಿಗಳು ಇದನ್ನು ವಿಸ್ತೃತ ಭ್ರೂಣ ಧಾರಣೆ (Extended Embryo Retention) ಎಂದು ಕರೆಯುತ್ತಾರೆ.

ಇದರಿಂದ ಕೋಳಿಯಿಂದ ಮೊಟ್ಟೆಯೇ ಬಂದಿತು ಎಂದು ಅಧ್ಯಯನದಲ್ಲಿ ತಿಳಿದುಕೊಂಡಿದ್ದಾರೆ. ಹಾಲಿ ಇರುವ ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳ ಪೂರ್ವಜರು ಮೊದಲು ಮೊಟ್ಟೆ ಇಡದೆ ಮರಿಗಳನ್ನು ಹಾಕಿರುವುದು ಇದೀಗ ಕಂಡುಬಂದಿದೆ.

ಈ ಅಧ್ಯಯನದ ವರದಿ `Nature Ecology & Evolution’ ಎಂಬ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ದೇಶ ವಿದೇಶ

ಕೊಲಂಬೊ: ಶ್ರೀಲಂಕಾದ ಸೇನಾ ವೈದ್ಯರ ತಂಡವೊಂದು, ವಿಶ್ವದ ಅತಿ ಭಾರವಾದ ಕಿಡ್ನಿ ಕಲ್ಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. 2004ರಲ್ಲಿ ಭಾರತೀಯ ವೈದ್ಯರು ಹೊರತೆಗೆದ ಮೂತ್ರಪಿಂಡದ ಕಲ್ಲೇ ಅತಿ ದೊಡ್ಡದೆಂಬ ದಾಖಲೆ ಆಗಿತ್ತು. ಇದೀಗ ಆ ದಾಖಲೆ ಮುರಿದಿದೆ.

ಈ ತಿಂಗಳ ಆರಂಭದಲ್ಲಿ ಕೊಲಂಬೊ ಮಿಲಿಟರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಂದ ತೆಗೆಯಲಾಗಿದ್ದ ಕಲ್ಲು, 13.372 ಸೆಂ.ಮೀ ಉದ್ದ ಮತ್ತು 801 ಗ್ರಾಂ ತೂಕವಿತ್ತು ಎಂದು ಸೇನೆ ತಿಳಿಸಿದೆ. ಗಿನ್ನೆಸ್ ವಿಶ್ವ ದಾಖಲೆಗಳ ಪಟ್ಟಿಯಲ್ಲಿ, ಇದುವರೆಗೆ ತೆಗೆದ ಕಲ್ಲುಗಳಲ್ಲಿ, 2004ರಲ್ಲಿ ಭಾರತದಲ್ಲಿ ತೆಗೆದ 13 ಸೆಂ.ಮೀ ಉದ್ದದ ಕಲ್ಲೇ ದೊಡ್ಡದಾಗಿತ್ತು. ಅದೇ ರೀತಿ, 2008ರಲ್ಲಿ ಪಾಕಿಸ್ತಾನದಲ್ಲಿ ತೆಗೆದ 620 ಗ್ರಾಂ ಕಲ್ಲನ್ನು ಅತ್ಯಂತ ಭಾರವಾದ ಕಲ್ಲು ಎಂದು ಪಟ್ಟಿ ಮಾಡಲಾಗಿದೆ.

ಶ್ರೀಲಂಕಾದ ಪ್ರಸ್ತುತ ದಾಖಲೆಯನ್ನು ದೃಢಪಡಿಸಿರುವ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ, ಶ್ರೀಲಂಕಾದ ಕ್ಯಾನಿಸ್ಟಸ್ ಕೂಂಗೆಯವರ ಮೂತ್ರಪಿಂಡದಿಂದ 13.372 ಸೆಂಟಿಮೀಟರ್ (5.264 ಇಂಚು) ಅಳತೆಯ ಮೂತ್ರಪಿಂಡದ ಕಲ್ಲನ್ನು ಕಳೆದ 1ರಂದು ಹೊರತೆಗೆಯಲಾಗಿದೆ ಎಂದು ವರದಿ ಮಾಡಿದೆ. ಸೇನಾ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುದರ್ಶನ್ ನೇತೃತ್ವದಲ್ಲಿ, ಡಾ.ಪತಿರತ್ನ ಹಾಗೂ ಡಾ.ತಮಶಾ ಪ್ರೇಮತಿಲಕ ಶಸ್ತ್ರ ಚಿಕಿತ್ಸೆ ನಡೆಸಿದ್ದರು.

SRI LANKAN ARMY DOCTORS REMOVE WORLD’S LARGEST KIDNEY STONE, SET WORLD RECORD
A group of Sri Lankan Army doctors have set a Guinness World Record by removing the world’s largest kidney stone, surpassing the previous record registered by Indian doctors in 2004. The stone, removed early this month at the Colombo Army Hospital, is 13.372 centimeters long and weighs 801 grams, a statement by the Army said on Tuesday.

ವಿದೇಶ

ಭಾರತ್ ಜೋಡೋ ಪಯಣ ಮುಗಿಸಿದರೂ ರಾಹುಲ್ ಪಯಣ ವಿಶ್ರಮಿಸಲಿಲ್ಲ. ಕೆಲವು ವಾರಗಳ ಹಿಂದೆ ಅವರು ದೆಹಲಿ-ಚಂಡೀಗಢದಲ್ಲಿ ರಾತ್ರಿ ಸರಕು ಟ್ರಕ್‌ನಲ್ಲಿ ಪ್ರಯಾಣಿಸಿ, ಚಾಲಕನ ಕಷ್ಟದ ಬಗ್ಗೆ ಕೇಳಿದ್ದರು. ಪ್ರಸ್ತುತ ಅವರು ಅಮೆರಿಕಾದ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.

ರಾಹುಲ್ ಗಾಂಧಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅದರ ಒಂದು ಭಾಗವಾಗಿ, ವಾಷಿಂಗ್ಟನ್‌ನಿಂದ ನ್ಯೂಯಾರ್ಕ್ ನಗರಕ್ಕೆ ‘ಅಮೆರಿಕನ್ ಟ್ರಕ್ ಯಾತ್ರಾ’ ಹೆಸರಿನಲ್ಲಿ 190 ಕಿಲೋ ಮೀಟರ್, ಭಾರತೀಯರೊಬ್ಬರು ಚಾಲಕಾರಾಗಿರುವ ಅತ್ಯಾಧುನಿಕ ಟ್ರಕ್‌ನಲ್ಲಿ ಪ್ರಯಾಣಿಸಿದ್ದಾರೆ.

“ಸಮುದಾಯದಲ್ಲಿನ ವೈವಿಧ್ಯಮಯ ಜನರ ಧ್ವನಿಗಳನ್ನು ಕೇಳುವ ಪ್ರಯಾಣವು ಅಮೆರಿಕಾದಲ್ಲೂ ಮುಂದುವರೆದಿದೆ. ಭಾರತದ ದೆಹಲಿಯಿಂದ ಚಂಡೀಗಢಕ್ಕೆ ಹೋದ ನನ್ನ ಟ್ರಕ್ ಪ್ರಯಾಣದಂತೆ, ಈ ಬಾರಿ ಅಮೆರಿಕಾದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್‌ಗಳ ದೈನಂದಿನ ಜೀವನವನ್ನು ನಾನು ತಿಳಿದುಕೊಂಡೆ.

ಅವರೊಂದಿಗಿನ ಸಂಭಾಷಣೆ ಹೃದಯಸ್ಪರ್ಶಿಯಾಗಿತ್ತು. ಚಾಲಕನ ಸೌಕರ್ಯಗಳಿಗೆ ಒತ್ತು ನೀಡುವ ವ್ಯವಸ್ಥೆ, ಅವರು ಗಳಿಸುವ ನ್ಯಾಯಯುತ ವೇತನವನ್ನು ನೋಡಿ ನನಗೆ ಸಂತೋಷವಾಯಿತು. ಭಾರತದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಟ್ರಕ್ ಚಾಲಕರು ಸಹ ಯೋಗ್ಯವಾದ ಜೀವನಕ್ಕೆ ಅರ್ಹರಾಗಿದ್ದಾರೆ. ಅವರನ್ನು ಮುಂದೆ ಕೊಂಡೊಯ್ಯುವ ಯೋಜನೆ, ನಮ್ಮ ಇಡೀ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕವಾದ ಶ್ರೇಣೀಕೃತ ಪರಿಣಾಮವನ್ನು ಬೀರುತ್ತದೆ” ಎಂದು ಹೇಳಿದ್ದಾರೆ.

ಟ್ರಕ್ ಚಾಲಕನೊಂದಿಗೆ ಮಾತನಾಡುತ್ತಲೇ ಸಾಗಿದ ರಾಹುಲ್ ಗಾಂಧಿಯೊಂದಿಗೆ ಮಾತನಾಡಿದ ಆ ಚಾಲಕ, “ಇಲ್ಲಿ ನನಗೆ ಮಾಸಿಕ ರೂ.6 ರಿಂದ 8 ಲಕ್ಷದವರೆಗೆ ವೇತನ ಸಿಗುತ್ತಿದೆ; ನಾನು ಸ್ವಂತವಾಗಿ ಟ್ರಕ್ ಹೊಂದಿದ್ದೇನೆ” ಎಂದು ಹೇಳಿದರು. “ಭಾರತದಲ್ಲಿ ಟ್ರಕ್ ಮಾಲೀಕರು ಬೇರೆಯವರಾಗಿರುತ್ತಾರೆ; ಚಾಲಕರೇ ಬೇರೆಯಾಗಿರುತ್ತಾರೆ. ಚಾಲಕರು ಅತೀ ಬಡವರಾಗಿರುತ್ತಾರೆ. ಅವರು ಆಸ್ತಿ ಇಲ್ಲದೆ ಸಾಲ ಪಡೆಯಲು ಸಾಧ್ಯವಿಲ್ಲ. ಅನೇಕ ಜನರು ಅಲ್ಲಿ ಆಸ್ತಿ ಹೊಂದಿರುವುದಿಲ್ಲ. ಹಾಗಾಗಿ ಅವರು ಚಾಲಕರಾಗಿ ಮುಂದುವರಿಯುತ್ತಾರೆ. ಭಾರತದಲ್ಲಿರುವಂತೆ ಆರ್‌ಟಿಒ ಕಿರುಕುಳ ಇಲ್ಲಿ ಇರುವುದಿಲ್ಲ” ಎಂದು ಹೇಳಿದರು. Rahul Gandhi takes truck ride from Washington to New York

ವಿದೇಶ

ಪ್ಯೊಂಗ್ಯಾಂಗ್: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತರ ಕೊರಿಯಾದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಶೇ.40 ರಷ್ಟು ಹೆಚ್ಚಾಗಿರುವ ಕಾರಣ, ಅಲ್ಲಿ ಆತ್ಮಹತ್ಯೆಯನ್ನು ನಿಷೇಧಿಸಿ ಅಧ್ಯಕ್ಷ ಕಿಮ್ ಜಾಂಗ್ ಉನ್ ರಹಸ್ಯ ಆದೇಶ ನೀಡಿದ್ದಾರೆ. ಆತ್ಮಹತ್ಯೆ ಎಂದರೆ ಒಬ್ಬರು ಸ್ವಯಂಪ್ರೇರಿತವಾಗಿ ಮಾಡಿಕೊಳ್ಳುವ ಕೊಲೆಯಾಗಿದೆ. ದ್ವೇಷ, ಕೋಪ, ಒತ್ತಡ, ಭಯ, ಬಡತನ ಮುಂತಾದ ಹಲವು ಕಾರಣಗಳಿಂದ ಆತ್ಮಹತ್ಯೆ ನಡೆಯುತ್ತದೆ. ಇದನ್ನು ಅಪರಾಧವೆಂದು ಪರಿಗಣಿಸಲಾಗಿದ್ದರೂ, ಆ ಆಲೋಚನೆಯಿಂದ ಚೇತರಿಸಿಕೊಳ್ಳಲು ಹಲವು ಮಾರ್ಗಗಳಿವೆ.

ಈ ಸ್ಥಿತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತರ ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಶೇ.40ರಷ್ಟು ಹೆಚ್ಚಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಆ ದೇಶದ ಅಧ್ಯಕ್ಷ ಕಿಮ್ ಜಾಂಗ್ ಉನ್ ದೇಶದಲ್ಲಿ ಆತ್ಮಹತ್ಯೆ ನಿಷೇಧಿಸಿ ರಹಸ್ಯ ಆದೇಶವನ್ನು ಹೊರಡಿಸಿದ್ದಾರೆ. ಮತ್ತು ಇದನ್ನು ‘ಆತ್ಮಹತ್ಯೆ ಸಮಾಜವಾದದ ವಿರುದ್ದ ದೇಶದ್ರೋಹ’ ಎಂದು ಲೇಬಲ್ ಮಾಡಲಾಗಿದೆ. ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಿಮ್ ಸ್ಥಳೀಯ ಸರ್ಕಾರಗಳಿಗೆ ಆದೇಶ ನೀಡಿದ್ದಾರೆ ಎಂದು ರೇಡಿಯೊ ಫ್ರೀ ಏಷ್ಯಾದ ವರದಿ ಹೇಳಿದೆ.

North Korea’s Kim Jong Un passes ‘secret order’ banning suicide:
North Korean leader Kim Jong-un has reportedly passed a secret order to ban suicide in the country, labelling it as a “treason against socialism”. A report by Radio Free Asia claimed that Kim has ordered local governments to take preventative measures.

ವಿದೇಶ

ಇಟಲಿ ಸಂಸತ್ತಿನಲ್ಲಿ ಮಹಿಳಾ ಸಂಸದೆಯೊಬ್ಬರು ಅಳುತ್ತಿದ್ದ 2 ತಿಂಗಳ ಮಗುವಿಗೆ ಹಾಲುಣಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಟಲಿ ಸಂಸತ್ತು ಇತ್ತೀಚೆಗೆ ಮಹಿಳಾ ಸಂಸದರು ತಮ್ಮ ಮಕ್ಕಳನ್ನು ಸಂಸತ್ತಿಗೆ ಕರೆತರಲು ಮತ್ತು ಒಂದು ವರ್ಷದವರೆಗೆ ತಮ್ಮ ಶಿಶುಗಳಿಗೆ ಹಾಲುಣಿಸಲು ಅನುಮತಿಸುವ ನಿಯಮಗಳಿಗೆ ತಿದ್ದುಪಡಿ ತಂದು ಜಾರಿಗೊಳಿಸಿತು. ಇಟಲಿ ಸಂಸತ್ತಿನ ಸದಸ್ಯೆಯಾಗಿರುವ 36 ವರ್ಷದ ಗಿಲ್ಡಾ ಸ್ಪೋರ್ಟಿಯೆಲ್ಲೊ ತನ್ನ 2 ತಿಂಗಳ ಗಂಡು ಮಗುವಿನೊಂದಿಗೆ ಸಂಸತ್ತಿಗೆ ಬಂದಿದ್ದರು. ನಂತರ ಮಗು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿತು.

ಇದನ್ನು ಕೇಳಿ ಸಂಸತ್ತು ಮೌನವಾಯಿತು. ಮಗು ಹಸಿವಿನಿಂದ ಅಳುತ್ತಿದೆ ಎಂದು ತಿಳಿದ ಗಿಲ್ಡಾ ಸ್ಪೋರ್ಟಿಯೆಲ್ಲೊ ಮಗುವನ್ನು ಶಾಂತಗೊಳಿಸಿ ಹಾಲುಣಿಸಲು ಆರಂಭಿಸಿದಳು. ಆಗ ಸಭೆಯ ಎಲ್ಲಾ ಸದಸ್ಯರು ಚಪ್ಪಾಳೆ ತಟ್ಟಿ ಹಾರೈಸಿದರು. ಇದರೊಂದಿಗೆ ಇಟಲಿ ಸಂಸತ್ತಿನಲ್ಲಿ ಮಗುವಿಗೆ ಹಾಲುಣಿಸಿದ ಮೊದಲ ಮಹಿಳಾ ಸಂಸದೆ ಎಂಬ ಗೌರವಕ್ಕೆ ಪಾತ್ರರಾದರು. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Gilda Sportiello becomes first Italian MP to breastfeed baby in Parliament.

ವಿದೇಶ

ದುಬೈ: ಇರಾನ್‌ನ ಪರಮಾಣು ಕಾರ್ಯಕ್ರಮದಿಂದಾಗಿ, ಅಮೆರಿಕ ಮತ್ತು ಆ ದೇಶದ ನಡುವೆ, ಈಗಾಗಲೇ ಸಂಘರ್ಷ ನಡೆಯುತ್ತಿರುವ ಹಿನ್ನಲೆಯಲ್ಲಿ, ಶಬ್ದದ ವೇಗಕ್ಕಿಂತ 15 ಪಟ್ಟು ಹೆಚ್ಚು ಚಲಿಸುವ ಸಾಮರ್ಥ್ಯ ಹೊಂದಿದ ಹೈಪರ್ಸಾನಿಕ್ ಕ್ಷಿಪಣಿಯನ್ನು ಇರಾನ್ ಅಭಿವೃದ್ಧಿಪಡಿಸಿದೆ ಎಂಬ ಘೋಷಣೆಯು ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಹೈಪರ್ಸಾನಿಕ್ ಕ್ಷಿಪಣಿ

ಪಶ್ಚಿಮ ಏಷ್ಯಾ ರಾಷ್ಟ್ರವಾದ ಇರಾನ್ ಮತ್ತು ಅಮೆರಿಕ ನಡುವೆ, ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಉದ್ವಿಗ್ನತೆಗಳು ಬಹಳ ಹಿಂದಿನಿಂದಲೂ ನಡೆಯುತ್ತಿವೆ. ಈ ಹಿನ್ನಲೆಯಲ್ಲಿ, ವಾಯು ರಕ್ಷಣೆಯನ್ನು ಬಲಪಡಿಸುವ ದೃಷ್ಟಿಯಿಂದ, ಶಬ್ದಕ್ಕಿಂತ 15 ಪಟ್ಟು ಹೆಚ್ಚು ವೇಗವಾಗಿ ಚಲಿಸುವ ಹೈಪರ್ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಇರಾನ್ ನಿನ್ನೆ ಘೋಷಿಸಿದೆ.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ

ಈ ಬಗ್ಗೆ ಹೇಳಿರುವ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, “ನಾವು ದೊಡ್ಡ ಪ್ರತಿಬಂಧಕವನ್ನು ರಚಿಸಿದ್ದೇವೆ ಎಂದು ಭಾವಿಸುತ್ತೇವೆ. ಇದು ಪ್ರಾದೇಶಿಕ ದೇಶಗಳ ಶಾಶ್ವತ ಭದ್ರತೆ ಮತ್ತು ಶಾಂತಿಗೆ ಆಧಾರವಾಗಲಿದೆ” ಎಂದರು. ಇರಾನ್‌ನ ಅರೆಸೇನಾ ಪಡೆಯ ಬಾಹ್ಯಾಕಾಶ ಯೋಜನೆಯ ಮುಖ್ಯಸ್ಥ ಜನರಲ್ ಅಮೀರ್ ಅಲಿ ಹಾಜಿಜಾದೆ ಅವರು ನಿನ್ನೆ ಹೈಪರ್ಸಾನಿಕ್ ಕ್ಷಿಪಣಿಯ ಮಾದರಿಯನ್ನು ಅನಾವರಣಗೊಳಿಸಿದರು.

ಜನರಲ್ ಅಮೀರ್ ಅಲಿ ಹಾಜಿಜಾದೆ

ಈ ಕುರಿತು ಮಾತನಾಡಿದ ಅವರು, “ಈ ಕ್ಷಿಪಣಿಯು 1,400 ಕಿ.ಮೀ. ವರೆಗೆ ಹೋಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಕ್ಷಿಪಣಿಯೊಂದಿಗೆ ಸ್ಪರ್ಧಿಸುವ ಅಥವಾ ಎದುರಿಸುವ ಯಾವುದೇ ವ್ಯವಸ್ಥೆ ಇಲ್ಲ” ಎಂದರು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಪಶ್ಚಿಮ ಏಷ್ಯಾದ ಸೌದಿ ಅರೇಬಿಯಾಕ್ಕೆ ಹೋಗಲಿರುವ ಹಿನ್ನಲೆಯಲ್ಲಿ, ಕ್ಷಿಪಣಿ ಕುರಿತು ಇರಾನ್ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್

ಏತನ್ಮಧ್ಯೆ, ಸೌದಿ ಅರೇಬಿಯಾದಲ್ಲಿ, ಏಳು ವರ್ಷಗಳ ನಂತರ, ನಿನ್ನೆ ಇರಾನ್ ತನ್ನ ರಾಯಭಾರ ಕಚೇರಿಯನ್ನು ತೆರೆದಿರುವುದು ಗಮನಾರ್ಹ.

ವಿದೇಶ

ಮಿಸೌರಿ: ಜಗತ್ತಿನಲ್ಲಿ ಎಲ್ಲೋ ಒಂದು ಕಡೆ ಪವಾಡ ಸದೃಶ ಘಟನೆಗಳು ನಡೆಯುತ್ತಿರುತ್ತವೆ. ಅದರಂತೆ ಅಮೆರಿಕದ ಮಿಸೌರಿ ಎಂಬ ಪುಟ್ಟ ಪಟ್ಟಣದಲ್ಲಿ ಪವಾಡವೊಂದು ನಡೆದಿದೆ. ಅಲ್ಲಿನ ಕ್ಯಾಥೋಲಿಕ್ ಸನ್ಯಾಸಿನಿ ವಿಲ್‌ಹೆಲ್ಮಿನಾ ಲಾನ್‌ಸಾಸ್ಟರ್ 2019 ರಲ್ಲಿ ತಮ್ಮ 95ನೇ ವಯಸ್ಸಿನಲ್ಲಿ ನಿಧನರಾದರು.

ಅವರ ದೇಹವನ್ನು ಮರದ ಶವಪೆಟ್ಟಿಗೆಯಲ್ಲಿ ಇರಿಸಿ ಸಮಾಧಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಅವರ ಶವವನ್ನು ಬೇರೆಡೆ ಹೂಳಲು ಕ್ರಮಕೈಗೊಳ್ಳಲಾಗಿದೆ. ಅದರಂತ ಕೆಲ ದಿನಗಳ ಹಿಂದೆ ಅವರ ದೇಹವನ್ನು ಹೊರತೆಗೆಯಲಾಗಿತ್ತು. ನಂತರ ಇತರ ಸನ್ಯಾಸಿನಿಯರು ಶವಪೆಟ್ಟಿಗೆಯನ್ನು ತೆರೆದಾಗ ಅವರಿಗೆ ಆಶ್ಚರ್ಯವಾಯಿತು. ಕಾರಣ, ಸನ್ಯಾಸಿನಿ ವಿಲ್‌ಹೆಲ್ಮಿನಾ ಲಾನ್‌ಸಾಸ್ಟರ್ ಅವರ ದೇಹವು ಸಮಾಧಿಯಾದ 4 ವರ್ಷಗಳ ನಂತರವೂ ಅದು ಹಾಗೇ ಇತ್ತು. ಅವರ ಕೂದಲು, ಮೂಗು, ತುಟಿಗಳು ಮತ್ತು ಕಣ್ಣುಗಳು ಹಾನಿಗೊಳಗಾಗದೆ ಹಾಗೆಯೇ ಇತ್ತು. ಅವರ ಮುಖದಲ್ಲಿ ನಗು ಬೆಳಗಿತು.

ಸಾಮಾನ್ಯವಾಗಿ ಯಾರಾದರೂ ಸತ್ತರೆ, ಅವರ ದೇಹವನ್ನು ಹೂಳಿದಾಗ ಅದು ಕೆಲವೇ ತಿಂಗಳುಗಳಲ್ಲಿ ಅಸ್ಥಿಪಂಜರವಾಗಿ ಬದಲಾಗುತ್ತದೆ. ಆದರೆ ಸನ್ಯಾಸಿನಿಯ ಶವ ಅಂತಹದ್ದೇನೂ ಇಲ್ಲದೇ ಇದ್ದುದರಿಂದ ಆ ಸುದ್ದಿ ವೇಗವಾಗಿ ಹಬ್ಬಿತ್ತು. ಇದರಿಂದ ಮಿಸೌರಿ ಪಟ್ಟಣದ ಜನರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿದರು. ಅವರು ಸನ್ಯಾಸಿನಿಯ ದೇಹವನ್ನು ಆಶ್ಚರ್ಯದಿಂದ ನೋಡಿದರು. ಜನರು ಅವರ ಪಾದಗಳನ್ನು ಮುಟ್ಟಿ ನಮಿಸಿದರು. ಇಂದಿಗೂ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಬಳಿಕ ಮತ್ತೆ ಅಂತ್ಯಕ್ರಿಯೆ ನಡೆಯಲಿದೆ. ಇದು ಮಿಸೌರಿಯ ಪವಾಡ ಎಂದು ಆ ಊರಿನವರು ಹೇಳುತ್ತಿದ್ದಾರೆ.

ಅವರ ಶವದ ಬಳಿ ಸೂಚನಾ ಫಲಕವೊಂದನ್ನು ಹಾಕಲಾಗಿದೆ. ಅದರಲ್ಲಿ ‘ಸಹೋದರಿಯ ದೇಹವನ್ನು ವಿಶೇಷವಾಗಿ ಅವರ ಪಾದಗಳನ್ನು ಸ್ಪರ್ಶಿಸುವಲ್ಲಿ ದಯವಿಟ್ಟು ಮೃದುವಾಗಿರಿ’ ಎಂದು ಉಲ್ಲೇಖಿಸಲಾಗಿದೆ.

ವಿದೇಶ

“ಉತ್ತರ ಕೊರಿಯಾದಲ್ಲಿ ಬೈಬಲ್‌ಗಳೊಂದಿಗೆ ಸಿಕ್ಕಿಬಿದ್ದ ಕ್ರೈಸ್ತರು ಮರಣದಂಡನೆಯನ್ನು ಎದುರಿಸುತ್ತಿದ್ದಾರೆ. ಮತ್ತು ಅವರ 2 ತಿಂಗಳ ಮಗು ಸೇರಿದಂತೆ ಅನೇಕ ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ” ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವರದಿ ಬಹಿರಂಗಪಡಿಸಿವೆ.

ಕಿಮ್ ಜಾಂಗ್ ಉನ್ ಆಳ್ವಿಕೆಯಲ್ಲಿರುವ ಉತ್ತರ ಕೊರಿಯಾದಲ್ಲಿ ವಿವಿಧ ಮತ್ತು ವಿಲಕ್ಷಣವಾದ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಉಲ್ಲಂಘಿಸುವವರಿಗೆ ಮರಣದಂಡನೆ ವಿಧಿಸಲಾಗುತ್ತದೆ. ಆ ದೇಶದಲ್ಲಿ ಏನಾಗುತ್ತಿದೆ ಎಂಬುದು ತಕ್ಷಣಕ್ಕೆ ಹೊರೆಗೆ ಕಾಣುವುದಿಲ್ಲ.

ಈ ಹಿನ್ನಲೆಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ, 2022ರ ‘ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ’ ಎಂಬ ಶೀರ್ಷಿಕೆಯಡಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ, “ಉತ್ತರ ಕೊರಿಯಾದಲ್ಲಿ 75,000 ಕ್ರೈಸ್ತರನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ. 2009ರಲ್ಲಿ ಬೈಬಲ್‌ಗಳನ್ನು ಹೊಂದಿದ್ದ ಅನೇಕ ಜನರನ್ನು ಸೆರೆಮನೆಗೆ ಹಾಕಲಾಗಿದೆ. ಅವರಲ್ಲಿ ಹಲವರು ಮರಣದಂಡನೆಯನ್ನು ಎದುರಿಸುತ್ತಿದ್ದಾರೆ.

ಬಂಧಿತರಲ್ಲಿ 2 ತಿಂಗಳ ಮಗುವೂ ಸೇರಿದೆ. ಈ ಮಗು ಸೇರಿದಂತೆ ಕೆಲವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಬಿರಗಳಲ್ಲಿ ಅವರು ಹೀನಾಯ ಸ್ಥಿತಿಯಲ್ಲಿದ್ದಾರೆ. ಅವರಿಗೆ ದೈಹಿಕ ಕಿರುಕುಳ ನೀಡಲಾಗುತ್ತಿದೆ. ಕ್ರಿಶ್ಚಿಯನ್ನರ ವಿರುದ್ಧ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ 90% ರಕ್ಷಣಾ ಸಚಿವಾಲಯ ಕಾರಣವಾಗಿದೆ” ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿದೇಶ

ಇಸ್ಲಾಮಾಬಾದ್: ಅಲ್ ಖಾದಿರ್ ಟ್ರಸ್ಟ್ ಹಗರಣದ ಪ್ರಕರಣದಲ್ಲಿ, ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನಾಯಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕಳೆದ 9 ರಂದು ಇಸ್ಲಾಮಾಬಾದ್ ಹೈಕೋರ್ಟ್ ಆವರಣದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳದವು ಬಂದಿಸಿತ್ತು. ಅವರ ಬಂಧನವು ಕಾನೂನು ಬಾಹೀರ ಎಂದು ಹೇಳಿದ ಅಲ್ಲಿನ ಸುಪ್ರೀಂ ಕೋರ್ಟ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಅಲ್ಲಿನ ಹೈಕೋರ್ಟ್ ಗೆ ಆದೇಶ ನೀಡಿತ್ತು.

ಈ ಪ್ರಕರಣವು ಇಸ್ಲಾಮಾಬಾದ್ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಇಮ್ರಾನ್ ಖಾನ್ ಅವರಿಗೆ ಎರಡು ವಾರಗಳ ಕಾಲ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ನೀಡಿದ್ದ ಎರಡು ವಾರಗಳ ಜಾಮೀನ್ ಇಂದು ಮುಕ್ತಾಯಗೊಂಡಿದ್ದ ಹಿನ್ನಲೆಯಲ್ಲಿ ಈ ಪ್ರಕರಣವು ಮತ್ತೆ ಇಂದು ವಿಚಾರಣೆಗೆ ಬಂದಿತ್ತು.

ಇದನ್ನೂ ಓದಿ: ಅಸ್ಥಿರ ಪಾಕಿಸ್ತಾನ ಅಪಾಯಕಾರಿ: ಫಾರೂಕ್ ಅಬ್ದುಲ್ಲಾ ಅಭಿಪ್ರಾಯ!

ವಿಚಾರಣೆಯ ನಂತರ ಇಮ್ರಾನ್ ಖಾನ್ ಅವರ ವಿರುದ್ಧ ಆರೋಪಿಸಲಾಗಿದ್ದ 8 ಪ್ರಕರಣಗಳಲ್ಲಿ ಜೂನ್ 8 ರವರೆಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.