ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Cauvery Water Archives » Dynamic Leader
October 23, 2024
Home Posts tagged Cauvery Water
ರಾಜಕೀಯ

ಚೆನ್ನೈ: ಮೈತ್ರಿಕೂಟದ ಲಾಭಕ್ಕಾಗಿ ಮುಖ್ಯಮಂತ್ರಿ ಸ್ಟಾಲಿನ್ ಅವರು ತಮಿಳುನಾಡು ರೈತರ ಹಿತ ಕಡೆಗಣಿಸುವುದನ್ನು ಬಿಟ್ಟು ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಕೊಡಿಸಲು ಮುಂದಾಗಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಡೆಲ್ಟಾ ಭತ್ತದ ಕೃಷಿಗಾಗಿ ಮೇಟ್ಟೂರು ಅಣೆಕಟ್ಟನ್ನು ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 12 ರಂದು ತೆರೆಯಲಾಗುತ್ತದೆ. ಆದರೆ, ಈ ವರ್ಷ ಮೇಟ್ಟೂರು ಅಣೆಕಟ್ಟು ತೆರೆಯುವ ಸಾಧ್ಯತೆ ಇಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮಿಳುನಾಡು ಸರ್ಕಾರವನ್ನು ಖಂಡಿಸಿದ್ದಾರೆ.

ಈ ಸಂಬಂಧ ಅಣ್ಣಾಮಲೈ ತಮ್ಮ ಎಕ್ಸ್ ಪೇಜ್ ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ, “ಕಳೆದ ವರ್ಷ ಕಾವೇರಿಯಲ್ಲಿ ಪಡೆದುಕೊಂಡ ನೀರಿನ ಪ್ರಮಾಣ ಕೇವಲ 81.4 ಟಿಎಂಸಿ ಮಾತ್ರ. ವರ್ಷಕ್ಕೆ 177.25 ಟಿಎಂಸಿ ನೀರು ಪಡೆಯಬೇಕಾದ ತಮಿಳುನಾಡಿಗೆ ಅದರಲ್ಲಿ ಅರ್ಧದಷ್ಟೂ ಸಿಗದಿರುವುದು ಡಿಎಂಕೆ ಸರಕಾರದ ಅದಕ್ಷತೆಯನ್ನು ತೋರಿಸುತ್ತದೆ.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಡಿಎಂಕೆ-ಕಾಂಗ್ರೆಸ್ ಅವಕಾಶವಾದಿ ಇಂಡಿಯಾ ಮೈತ್ರಿಕೂಟದ ಲಾಭಕ್ಕಾಗಿ ತಮಿಳುನಾಡು ರೈತರ ಕಲ್ಯಾಣವನ್ನು ಸಂಪೂರ್ಣವಾಗಿ ಒತ್ತೆಯಿಟ್ಟಿದ್ದಾರೆ. ಕಾವೇರಿಯಲ್ಲಿ ಸಾಕಷ್ಟು ನೀರು ಹರಿದು ಬರದ ಕಾರಣ, ಈ ವರ್ಷ ಜೂನ್ 12ರಂದು ಕೃಷಿಗೆ ನೀರು ಬಿಡಬೇಕಿದ್ದ ಮೇಟ್ಟೂರು ಅಣೆಕಟ್ಟು ತೆರೆಯಲಿಲ್ಲ. ಇದರಿಂದ ನೀರಾವರಿಗೆ ನೀರಿಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆದರೆ ಮುಖ್ಯಮಂತ್ರಿ ಸ್ಟಾಲಿನ್‌ಗೆ ಈ ಬಗ್ಗೆ ಯಾವುದೇ ಚಿಂತೆಯಿಲ್ಲ. ತಾನೊಬ್ಬ ಡೆಲ್ಟಾ ವ್ಯಕ್ತಿ ಎಂದು ಹೇಳಿಕೊಂಡು, ಹೊಲದಲ್ಲಿ ಕಾಂಕ್ರಿಟ್ ರಸ್ತೆಗಳನ್ನು ಹಾಕಿಕೊಂಡು ಓಡಾಡುವ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ರೈತರ ನೋವು ಅರ್ಥವಾಗುವುದಾದರೂ ಹೇಗೆ?

ಮುಖ್ಯಮಂತ್ರಿ ಸ್ಟಾಲಿನ್ ಅವರು ತಮ್ಮ ಮೈತ್ರಿಯ ಲಾಭಕ್ಕಾಗಿ ತಮಿಳುನಾಡು ರೈತರ ಹಿತವನ್ನು ಕಡೆಗಣಿಸುವುದನ್ನು ಬಿಟ್ಟು ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಕೊಡಿಸಲು ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ರಾಜ್ಯ

ನವದೆಹಲಿ: ಕಾವೇರಿಯಲ್ಲಿ ತಮಿಳುನಾಡಿಗೆ 2.5 ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 30ನೇ ಸಭೆಯು ಅದರ ಅಧ್ಯಕ್ಷ ಎಸ್.ಕೆ.ಹಲ್ದಾರ್ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯಿತು.

ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ ಅಧಿಕಾರಿಗಳು ವಿಡಿಯೋ ಕಾನ್ಫೆರನ್ಸ್ ಮೂಲಕ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯ ಕೊನೆಯಲ್ಲಿ ತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.

ಇಂದಿನ ಸಭೆಯಲ್ಲಿ ಮೇಕೆದಾಟು ಬಗ್ಗೆ ಚರ್ಚೆ ನಡೆದಿಲ್ಲ. ಮುಂದಿನ ಸಭೆ ಜೂನ್ ಮೊದಲ ವಾರದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.