ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
China Archives » Dynamic Leader
October 18, 2024
Home Posts tagged China
ರಾಜಕೀಯ

ನವದೆಹಲಿ: “ಚೀನಾ ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಸಮಸ್ಯೆಯಾಗಿದೆ” ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಚೀನಾ ಅನೇಕ ರೀತಿಯಲ್ಲಿ ಸಮಸ್ಯೆಯಾಗಿದೆ. ಆ ದೇಶದ ವಿಶಿಷ್ಟ ರಾಜಕೀಯ ಮತ್ತು ಆರ್ಥಿಕತೆಯೇ ಇದಕ್ಕೆ ಕಾರಣ. ಅದರ ವಿಶಿಷ್ಟತೆಯನ್ನು ಒಬ್ಬರು ಅರ್ಥಮಾಡಿಕೊಳ್ಳದಿದ್ದರೆ, ಅಲ್ಲಿಂದ ಬರುವ ಪರಿಹಾರಗಳು ಮತ್ತು ತೀರ್ಮಾನಗಳು ಸಂಕೀರ್ಣವಾಗಿರುತ್ತವೆ.

ವ್ಯಾಪಾರದಲ್ಲಿ ಚೀನಾ ಅನುಭವಿಸಿದ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಳ್ಳದ ಕಾರಣ ಹಲವರು ಆ ದೇಶದೊಂದಿಗಿನ ವ್ಯಾಪಾರದ ಕೊರತೆಯ ಬಗ್ಗೆ ದೂರು ನೀಡುತ್ತಾರೆ. ಚೀನಾ ಬಗ್ಗೆ ನಾವು ಮಾತ್ರ ಚರ್ಚಿಸುತ್ತಿಲ್ಲ.

ಯುರೋಪ್ ಖಂಡದಲ್ಲಿ, ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆ ಮುಂತಾದ ಎಲ್ಲಾ ವಿಚಾರಗಳಲ್ಲೂ ಚೀನಾದ ಬಗ್ಗೆ ಮಾತ್ರ ಚರ್ಚಿಸಲಾಗುತ್ತದೆ. ಅಮೆರಿಕ ಆ ದೇಶದೊಂದಿಗೆ ಹಲವು ರೀತಿಯಲ್ಲಿ ಘರ್ಷಣೆ ನಡೆಸುತ್ತಿದೆ. ಆದ್ದರಿಂದ, ವಾಸ್ತವವಾಗಿ ಭಾರತಕ್ಕೆ ಮಾತ್ರ ಚೀನಾ ಸಮಸ್ಯೆಯಲ್ಲ. ಚೀನಾ, ಭಾರತ ಮತ್ತು ವಿಶ್ವಕ್ಕೆ ಸಮಸ್ಯೆಯಾಗಿದೆ” ಎಂದು ಜೈಶಂಕರ್ ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ಶತಮಾನದ ಶ್ರೇಷ್ಠ ಸುಳ್ಳುಗಾರ ಪ್ರಧಾನಿ ಮೋದಿಯವರ ಬಾಯಲಿ ಬರುವ ಸುಳ್ಳುಗಳು‌ ಒಂದೇ ಎರಡೇ.? ಸುಳ್ಳನ್ನೇ ಹಾಸು ಹೊದ್ದು‌ ಮಲಗಿರುವ ಮೋದಿಯವರು ‘ಕಚ್ಚತೀವು’ ದ್ವೀಪವನ್ನು ಕಾಂಗ್ರೆಸ್ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದೆ ಎಂಬ ಹಸಿ ಸುಳ್ಳು ಹೇಳಿ ನಗೆಪಾಟಲಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಿಪರ್ಯಾಸವೆಂದರೆ ಪ್ರಧಾನಿಯವರು ಕಚ್ಚತೀವು ದ್ವೀಪದ ಬಗ್ಗೆ ಸುಳ್ಳು ಹೇಳಿಕೊಂಡು ಅಲೆದಾಡುತ್ತಿದ್ದರೆ, ಅತ್ತ ಚೀನಾ ಅರುಣಾಚಲ ಪ್ರದೇಶದ 30 ಊರುಗಳಿಗೆ ತನ್ನ ಹೆಸರು ನಾಮಕರಣ ಮಾಡಿಕೊಂಡಿದೆ. ಈ ಮೂಲಕ ಭಾರತದ ಸಾರ್ವಭೌಮತ್ವವನ್ನೇ ಪ್ರಶ್ನಿಸುತ್ತಿದೆ. ಸುಳ್ಳಿನ ಸರದಾರರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಚುನಾವಣೆಯ ಹೊತ್ತಿನಲ್ಲಿ ‘ಕಚ್ಚತೀವು’ ದ್ವೀಪದ ಪ್ರಸ್ತಾಪ ಮಾಡುತ್ತಿರುವ ಮೋದಿಯವರು, ಚೀನಾ ನಮ್ಮ ದೇಶದ ಭೂ ಭಾಗವನ್ನು ಅಕ್ರಮಿಸುತ್ತಿರುವ ಬಗ್ಗೆ ಎಂದಾದರೂ ಬಾಯಿ ಬಿಟ್ಟಿದಾರೆಯೇ.? ಕಳೆದ ಹತ್ತು‌ ವರ್ಷಗಳಿಂದ ಗಡಿ ವಿಚಾರದಲ್ಲಿ‌ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದೆ ಎಂದು ಹೇಳಿದ್ದಾರೆ.

ಆದರೆ ಚೀನಾದ ತಗಾದೆ ವಿರುದ್ಧ ಅಂಧಭಕ್ತರ ಪಾಲಿನ 56 ಇಂಚಿನ ಎದೆಯ ಶೂರ ಒಮ್ಮೆಯಾದರೂ ಮಾತನಾಡುವ ಧೈರ್ಯ ತೋರಿಸಿದ್ದಾರೆಯೇ? ಉತ್ತರ ಕುಮಾರನಂತೆ ವಿಪಕ್ಷಗಳ ಎದುರು ಪೌರುಷ ತೋರಿಸುವ ಮೋದಿಯವರು ಚೀನಾದ ವಿಚಾರದಲ್ಲಿ ‘ಡರ್‌ಪೋಕ್‌’ ಆಗುವುದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಚೀನಾದ ವಿರುದ್ಧ ಪೌರುಷ ತೋರಿಸಲು‌ ಮೋದಿಯವರ 56 ಇಂಚಿನ ಎದೆಯಲ್ಲಿ ಧಮ್ ಇಲ್ಲವೆ? ಕೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಸು ಐದು ದಿನಗಳ ಚೀನಾ ಪ್ರವಾಸದಲ್ಲಿದ್ದಾರೆ. ಪ್ರವಾಸೋದ್ಯಮ ವಲಯದಲ್ಲಿ ಸಹಕಾರ ಸೇರಿದಂತೆ 20 ಪ್ರಮುಖ ಒಪ್ಪಂದಗಳಿಗೆ ಮಾಲ್ಡೀವ್ಸ್ ಮತ್ತು ಚೀನಾ ಸಹಿ ಹಾಕಿವೆ ಎಂಬ ಮಾಹಿತಿ ಬಂದಿದೆ. ಚೀನಾ ಸರ್ಕಾರ ಮಾಲ್ಡೀವ್ಸ್ ಅಧ್ಯಕ್ಷರಿಗೆ 21 ಗನ್ ಸಲ್ಯೂಟ್‌ನೊಂದಿಗೆ ರೆಡ್ ಕಾರ್ಪೆಟ್ ಸ್ವಾಗತವನ್ನು ನೀಡಿತು.

ಮಾಲ್ಡೀವ್ಸ್ ಹಿಂದೂ ಮಹಾಸಾಗರದಲ್ಲಿರುವ ಒಂದು ಪುಟ್ಟ ದೇಶ. ಆದರೆ ಚೀನಾ ಅದನ್ನು ಚಿಕ್ಕ ದೇಶ ಎಂದು ಪರಿಗಣಿಸುವ ಬದಲು ತನಗೆ ಸಮಾನವಾದ ಸಾರ್ವಭೌಮ ರಾಷ್ಟ್ರ ಎಂಬ ಗೌರವವನ್ನು ನೀಡಿದೆ. ಇಂತಹ ವಿಷಯಗಳಿಂದಲೇ ಚೀನಾ ಗೆಲ್ಲುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಅವರ ಪ್ರವಾಸವನ್ನು ಮಾಲ್ಡೀವ್ಸ್ ನ ಮೂವರು ಮಂತ್ರಿಗಳು ಟೀಕಿಸಿದ್ದರು. ಇದು ಸಂಪೂರ್ಣವಾಗಿ ಖಂಡನೀಯ. ಭಾರತದ ಪ್ರಧಾನಿ, ಭಾರತದ ಲಕ್ಷದ್ವೀಪ ಭೇಟಿಯನ್ನು ಟೀಕಿಸುವ ಹಕ್ಕು ಮಾಲ್ಡೀವ್ಸ್ ಎಂಬ ಇನ್ನೊಂದು ದೇಶದ ಮಂತ್ರಿಗಳಿಗೆ ಇಲ್ಲ. ಈ ಹಿನ್ನೆಲೆಯಲ್ಲಿ, ಆ ಮೂರು ಸಚಿವರನ್ನು ಆ ದೇಶದ ಅಧ್ಯಕ್ಷರು ಸಂಪುಟದಿಂದ ಅಮಾನತುಗೊಳಿಸಿದರು. ಆ ತ್ವರಿತ ಕ್ರಮ ಶ್ಲಾಘನೀಯ.

ಏತನ್ಮಧ್ಯೆ, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ತೀರ ಹದಗೆಟ್ಟಿವೆ; ಅತ್ಯಂತ ನಿಕಟ ನೆರೆಯ ಮಾಲ್ಡೀವ್ಸ್, ಭಾರತದ ಪ್ರಭಾವದ ವಲಯದಿಂದ ಹೊರ ಹೋಗುವ ಹಂತಕ್ಕೆ ತಲುಪಿದೆ. ಇದು ಸಂಪೂರ್ಣವಾಗಿ ದಕ್ಷಿಣ ಏಷ್ಯಾ ಪ್ರದೇಶದ ಬಗ್ಗೆ ಮೋದಿ ನೇತೃತ್ವದ ಸರ್ಕಾರದ ಪ್ರತಿಕೂಲ ವಿದೇಶಾಂಗ ನೀತಿಯೇ ಕಾರಣವಾಗಿದೆ.

ಮೋದಿಯವರು ಅಧಿಕಾರಕ್ಕೆ ಬಂದ ನಂತರ, ಕಳೆದ ಕೆಲವು ವರ್ಷಗಳಿಂದ ತನ್ನ ಹತ್ತಿರದ ನೆರೆಹೊರೆಯ ದೇಶಗಳಾದ ಮಾಲ್ಡೀವ್ಸ್, ಶ್ರೀಲಂಕಾ, ಭೂತಾನ್, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಜೊತೆಗಿನ ಉತ್ತಮ ಬಾಂಧವ್ಯಕ್ಕಿಂತ ಕಹಿಯೇ ಹೆಚ್ಚಾಗಿದೆ.

ಈ ಎಲ್ಲಾ ದೇಶಗಳಲ್ಲಿ, ಕೆಲವು ವರ್ಷಗಳ ಹಿಂದೆ ಅಮೆರಿಕ ಹೆಚ್ಚಿನ ಪ್ರಭಾವವನ್ನು ಹೊಂದಿತ್ತು. ಕಳೆದೆರಡು ವರ್ಷಗಳಲ್ಲಿ ಆ ಪ್ರಭಾವ ಕೊಂಚ ಪಲ್ಲಟಗೊಂಡು, ಚೀನಾದತ್ತ ಮುಖಮಾಡಿದೆ. ಅದಕ್ಕೆ ಮುಖ್ಯ ಕಾರಣ, ಅತ್ಯಂತ ಹಿಂದುಳಿದ ದೇಶಗಳೊಂದಿಗೆ “ಬೆಲ್ಟ್ ಅಂಡ್ ರೋಡ್” ಎಂದು ಕರೆಯಲ್ಪಡುವ ಜಾಗತಿಕ ಕಾರಿಡಾರ್ ಯೋಜನೆಯೊಂದಿಗೆ ಚೀನಾ ವ್ಯಾಪಾರ ಸಂಬಂಧವನ್ನು ಹೊಂದಿದ್ದು, ಅದರ ಮೂಲಕ ಆ ದೇಶಗಳ ಮೂಲಸೌಕರ್ಯಕ್ಕೆ ನೆರವು ನೀಡುತ್ತಿದ್ದೆ.

ಇದರಲ್ಲಿ ಸೇರ್ಪಡೆಯಾಗದ ಏಕೈಕ ದಕ್ಷಿಣ ಏಷ್ಯಾದ ದೇಶವೆಂದರೆ ಅದು ಭಾರತ. ಭಾರತವು ಅಮೆರಿಕ ಪಾಲುದಾರರಾಗಿ ಕಾರ್ಯನಿರ್ವಹಿಸುವುದರಿಂದ ತಮಗೆ ಪ್ರಯೋಜನವಿಲ್ಲ ಎಂದು ನೆರೆಯ ದೇಶಗಳು ದೂರ ಸರಿಯುತ್ತಿವೆ. ಭಾರತ, ನೆರೆಹೊರೆ ಸ್ನೇಹಿತರನ್ನು ಕಳೆದುಕೊಂಡು ಮಾಡುವುದಾದರು ಏನು? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ವಿದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ನಿಕಟವಾಗಿದ್ದ ರಕ್ಷಣಾ ಸಚಿವ ಕ್ವಿನ್ ಗ್ಯಾಂಗ್ ಅನ್ನು ಕೆಲವು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾದ ನಂತರ, ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸಿದ್ದಾರೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್. ಈ ಹಿಂದೆ ವಿದೇಶಾಂಗ ಸಚಿವರೂ ಇದೇ ರೀತಿಯಲ್ಲಿ ಕಣ್ಮರೆಯಾಗಿದ್ದು ಅವರನ್ನೂ ಸಹ ಹುದ್ದೆಯಿಂದ ತೆಗೆದುಹಾಕಲಾಗಿದೆ. ಚೀನಾದಲ್ಲಿ ಸಚಿವರುಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುವುದು ಮತ್ತು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಇದು ಚೀನಾದ ಜನರಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮೊದಲು ಕಾಣೆಯಾದ ವಿದೇಶಾಂಗ ಮಂತ್ರಿ: ಚೀನಾದ ವಿದೇಶಾಂಗ ಸಚಿವರಾಗಿದ್ದ ಕ್ವಿನ್ ಗ್ಯಾಂಗ್ (Qin Gang) ಜೂನ್ ಅಂತ್ಯದಿಂದ ನಾಪತ್ತೆಯಾಗಿದ್ದಾರೆ. ಕಳೆದ ಜೂನ್ 25 ರಂದು ರಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕ್ವಿನ್ ಗ್ಯಾಂಗ್ ನಂತರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಅಂತರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದ ನಂತರವೇ ಹೊರಜಗತ್ತಿಗೆ ಇಂಥದ್ದೊಂದು ಘಟನೆ ನಡೆದಿರುವುದು ತಿಳಿದು ಬಂದಿತು. ಒಂದು ತಿಂಗಳು ಕಳೆದಿದ್ದರೂ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಬಗ್ಗೆ ಇನ್ನೂ ಯಾವುದೇ ಸುದ್ದಿ ಇಲ್ಲ. ಈ ಹಿನ್ನಲೆಯಲ್ಲಿ, ಕ್ವಿನ್ ಗ್ಯಾಂಗ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ವಾಂಗ್ ಯಿ ಅವರನ್ನು ಚೀನಾದ ಹೊಸ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಯಿತು.

ಟಿವಿ ಶೋ ನಿರೂಪಕಿ ಫೂ ಕ್ಸಿಯಾಟಿಯನ್ (Fu Xiaotian) ಎಂಬ ಮಹಿಳೆಯೊಂದಿಗೆ ಮಾಜಿ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್

ಏನು ಕಾರಣ: ಆರಂಭದಲ್ಲಿ, ಅನಾರೋಗ್ಯದ ಕಾರಣದಿಂದ ಕ್ವಿನ್ ಗ್ಯಾಂಗ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಗಳಾದವು. ನಂತರ ಸಚಿವ ಸ್ಥಾನದಿಂದ ವಜಾಗೊಳಿಸಿದ ಮೇಲೆ ರಹಸ್ಯ ಬಯಲಾಯಿತು. ಅಂದರೆ, ಟಿವಿ ಶೋ ನಿರೂಪಕಿ ಫೂ ಕ್ಸಿಯಾಟಿಯನ್ (Fu Xiaotian) ಎಂಬ ಮಹಿಳೆಯೊಂದಿಗೆ ಕ್ವಿನ್ ಗ್ಯಾಂಗ್ ರಹಸ್ಯ ಸಂಬಂಧದಲ್ಲಿದ್ದು, ಚೀನಾ ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವವರು ವಿವಾಹೇತರ ಸಂಬಂಧ ಹೊಂದಬಾರದು ಎಂಬ ಅಧಿಕೃತ ಆದೇಶವಾಗಿರುವ ಕಾರಣ ಕ್ವಿನ್ ಗ್ಯಾಂಗನ್ನು ನಾಪತ್ತೆಮಾಡಿರಬಹುದು ಎಂಬ ವರದಿಗಳೂ ಸೋರಿಕೆಯಾಗುತ್ತಿವೆ.

ಪ್ರಸ್ತುತ ನಾಪತ್ತೆಯಾಗಿರುವ ರಕ್ಷಣಾ ಸಚಿವರು: ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರಂತೆಯೇ ರಕ್ಷಣಾ ಸಚಿವ ಶಾಂಗ್‌ಫು ಕೂಡ ಕಣ್ಮರೆಯಾಗಿದ್ದಾರೆ. ಕೊನೆಯ ಬಾರಿಗೆ ಕಳೆದ ಆಗಸ್ಟ್ ಅಂತ್ಯದಲ್ಲಿ ಚೀನಾ-ಆಫ್ರಿಕಾ ಶಾಂತಿ ಮತ್ತು ಭದ್ರತಾ ವೇದಿಕೆಯ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಲಿ ಶಾಂಗ್‌ಫು ಕೂಡ ನಾಪತ್ತೆಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿತು. ಈ ಹಿನ್ನಲೆಯಲ್ಲಿ ಶಾಂಗ್‌ಫು ಅವರನ್ನು ಚೀನಾದ ರಕ್ಷಣಾ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಚೀನಾ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಔಪಚಾರಿಕವಾಗಿ, ಶಾಂಗ್‌ಫು ಅವರಿಗೆ ಸಂಬಂಧಿಸಿದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಒಪ್ಪಿಗೆಯಿಂದ ತೆಗೆದುಹಾಕಲಾಗಿದೆ.

ಚೀನಾ ರಕ್ಷಣಾ ಮಾಜಿ ಸಚಿವ ಲಿ ಶಾಂಗ್‌ಫು

ಏನು ಕಾರಣ: ಲಿ ಶಾಂಗ್‌ಫು ಚೀನಾದ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಚೀನಾ-ಅಮೆರಿಕಾ ಮಿಲಿಟರಿ ವಿನಿಮಯದಲ್ಲಿ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೀನಾ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ ನಂತರ, ಅಮೆರಿಕಾ ಶಾಂಗ್‌ಫು ಅವರನ್ನು ತಮ್ಮ ದೇಶಕ್ಕೆ ಬರುವುದನ್ನು ನಿಷೇಧಿಸಿತು. ಅದೇ ರೀತಿ ಅವರು ಸಚಿವರಾಗಿದ್ದಾಗ ಚೀನಾ ತೈವಾನ್‌ಗೆ ಶಸ್ತ್ರಾಸ್ತ್ರ ಪೂರೈಸಿದ್ದು ಕೂಡ ಅಮೆರಿಕಾವನ್ನು ಕೆರಳಿಸಿತ್ತು. ಏತನ್ಮಧ್ಯೆ, ಅಮೆರಿಕಾ ರಕ್ಷಣಾ ಇಲಾಖೆಯ ಪ್ರತಿನಿಧಿಗಳು ಪ್ರಾದೇಶಿಕ ಭದ್ರತಾ ಸಮಾಲೋಚನೆಗಾಗಿ ಮುಂದಿನ ತಿಂಗಳು ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ, ಅಮೆರಿಕಾದಿಂದ ನಿಷೇಧಕ್ಕೊಳಗಾಗಿರುವ ಲಿ ಶಾಂಗ್‌ಫು ರಕ್ಷಣಾ ಸಚಿವರಾಗಿರುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಅವರನ್ನು ಹುದ್ದೆಯಿಂದ ಕೆಳಗಿಳಿಸಿರಬಹುದು ಎನ್ನಲಾಗುತ್ತಿದೆ.

ಪದಚ್ಯುತಿ ಮಾಡಿದೆಲ್ಲವೂ ಸರಿಯೇ… ಆದರೆ ಕಾಣೆಯಾದವರ ಗತಿಯೇನು?’ ಇದನ್ನು ಚೀನಾ ಸರ್ಕಾರ ಮರೆಮಾಚುತ್ತಿರುವುದೇ ಇಲ್ಲಿ ನಿಗೂಢ!

ವಿದೇಶ

ಬೀಜಿಂಗ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರದಲ್ಲಿ ಮೌನವಾಗಿದ್ದ ಚೀನಾ ಇದೀಗ ತನ್ನ ನಿಲುವನ್ನು ಬದಲಿಸಿದ್ದು, “ಇಸ್ರೇಲ್ ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ” ಎಂದು ಹೇಳಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ 18ನೇ ದಿನವೂ ಮುಂದುವರಿದಿದೆ. ಈ ದಾಳಿಯ ಪ್ರಾರಂಭದಿಂದಲೂ, ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ದೇಶಗಳು ಇಸ್ರೇಲನ್ನು ಬೆಂಬಲಿಸುತ್ತಾ ಹಮಾಸ್ ಹೋರಾಟಗಾರರನ್ನು ಖಂಡಿಸುತ್ತಾ ಬಂದಿವೆ. ಆದರೆ ಈ ವಿಚಾರದಲ್ಲಿ ಚೀನಾ ಯಾರನ್ನೂ ಬೆಂಬಲಿಸದೆ ದೂರವೇ ಉಳಿದಿತ್ತು.

ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ಯಾಲೆಸ್ತೀನ್ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಅರಬ್ ರಾಷ್ಟ್ರಗಳು ಮತ್ತು ಈಜಿಪ್ಟ್ ಜೊತೆ ಸೇರಿ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಅಮಾಯಕರನ್ನು ಕೊಂದ ಹಮಾಸ್ ಭಯೋತ್ಪಾದಕರನ್ನು ಖಂಡಿಸಬೇಕು ಎಂದು ಅಮೆರಿಕಾ ಸಂಸದರು ಚೀನಾವನ್ನು ಒತ್ತಾಯಿಸುತ್ತಾ ಬಂದರು. ಇಸ್ರೇಲ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿತ್ತು.

ಇದರ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, “ಪ್ರತಿಯೊಂದು ರಾಷ್ಟ್ರಕ್ಕೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಅದೇ ಸಮಯದಲ್ಲಿ, ನಾವು ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸಬೇಕು ಮತ್ತು ಮುಗ್ಧ ಜನರನ್ನು ರಕ್ಷಿಸಬೇಕು. ಯುದ್ಧದಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಅಲ್ಲಿ ಪರಿಸ್ಥಿತಿ ಕೆಟ್ಟಿರುವುದು ಬೇಸರವಾಗಿದೆ. ಅಮಾಯಕರು ಸಂಕಷ್ಟಕ್ಕೆ ಸಿಲುಕಿರುವುದನ್ನು ನಾನು ಖಂಡಿಸುತ್ತೇನೆ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯ ವಿರುದ್ಧವೂ ಪ್ರತಿಭಟಿಸುತ್ತೇನೆ” ಎಂದು ಹೇಳಿದ್ದಾರೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇದೇ 26 ರಿಂದ 28 ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ದೇಶದ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟದಿಂದ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹಮಾಸ್ ಸಂಘಟನೆಯನ್ನು ಚೀನಾ ಖಂಡಿಸಿರುವುದು ಗನಾರ್ಹ.

ದೇಶ

‘ನ್ಯೂಸ್ ಕ್ಲಿಕ್’ ಸಂಸ್ಥೆ ಚೀನಾದಿಂದ ಹಣ ಪಡೆದಿದೆ ಎಂದು ಅಮೆರಿಕದ ಮಾಧ್ಯಮ ಸಂಸ್ಥೆ ‘ನ್ಯೂಯಾರ್ಕ್ ಟೈಮ್ಸ್’ ಸುಮಾರು 2 ತಿಂಗಳ ಹಿಂದೆ ಆಧಾರರಹಿತ ವರದಿ ಪ್ರಕಟಿಸಿತ್ತು. ಅದರ ಆಧಾರದ ಮೇಲೆ, ಜಾರಿ ನಿರ್ದೇಶನಾಲಯ (ಇಡಿ) ಸೆಪ್ಟೆಂಬರ್ 2021 ರಲ್ಲಿ ‘ನ್ಯೂಸ್ ಕ್ಲಿಕ್’ ಮಾಧ್ಯಮ ಕಚೇರಿ ಮೇಲೆ ದಾಳಿ ನಡೆಸಿತು. ಮನಿ ಲಾಂಡರಿಂಗ್ ತಡೆ ಕಾಯಿದೆ ಅಡಿಯಲ್ಲಿ, ‘ನ್ಯೂಸ್ ಕ್ಲಿಕ್’ ಕಂಪನಿಯ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ ಮಾಲೀಕತ್ವದಲ್ಲಿನ ರೂ.4.5 ಕೋಟಿ ಮೌಲ್ಯದ ಮನೆ ಮತ್ತು ರೂ. 41 ಲಕ್ಷ ಸ್ಥಿರ ಠೇವಣಿಗಳನ್ನೂ ಸ್ಥಗಿತಗೊಳಿಸಿತು.

ಈ ಹಿನ್ನಲೆಯಲ್ಲಿ, ಅಕ್ಟೋಬರ್ 3 ರಂದು ‘ನ್ಯೂಸ್ ಕ್ಲಿಕ್’ ಮಾಧ್ಯಮ ಮತ್ತು ಅದರ ಸಂಬಂಧಿತ ಪತ್ರಕರ್ತರಿಗೆ ಸೇರಿದ 100 ಸ್ಥಳಗಳಲ್ಲಿ 12 ಗಂಟೆಗಳ ಕಾಲ ದಾಳಿ ನಡೆಸಿದ ದೆಹಲಿ ಪೊಲೀಸರು, ಸೆಲ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಇತ್ಯಾದಿಗಳನ್ನು ಜಪ್ತಿ ಮಾಡಿದ್ದಾರೆ. ‘ನ್ಯೂಸ್ ಕ್ಲಿಕ್’ ನೌಕರರು ಮತ್ತು 9 ಪತ್ರಕರ್ತರಿಗೆ 25 ಪ್ರಶ್ನೆಗಳ ಪಟ್ಟಿಯನ್ನು ನೀಡಿ  ತನಿಖೆ ನಡೆಸಲಾಯಿತು.

ಇದನ್ನೂ ಓದಿ: ಜನರ ಮನಸ್ಥಿತಿ ಬದಲಾಗಿದೆ; ಮುಂದಿನ ದಿನಗಳಲ್ಲಿ ಕುಟುಂಬ ಪ್ರಾಬಲ್ಯವಿರುವ ರಾಜ್ಯ ಪಕ್ಷಗಳು ನೆಲಕಚ್ಚುವುದು ಖಚಿತ!

ಇದಕ್ಕೂ ಮುನ್ನ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿಕೊಂಡ ದೆಹಲಿ ಪೊಲೀಸರು, 12 ಗಂಟೆಗಳ ದಾಳಿ ಮತ್ತು ವಿಚಾರಣೆಯ ನಂತರ, ‘ನ್ಯೂಸ್ ಕ್ಲಿಕ್’ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ರಾತ್ರಿ ಬಂಧಿಸಲಾಗಿದೆ.

‘ನ್ಯೂಸ್ ಕ್ಲಿಕ್’ ಮೇಲಿನ ದಾಳಿಯು ದೇಶಾದ್ಯಂತ ಆಘಾತವನ್ನು ಉಂಟುಮಾಡಿದೆ. ‘ಇಂಡಿಯಾ’ ಮೈತ್ರಿಕೂಟದ ವಿರೋಧ ಪಕ್ಷಗಳು ಮತ್ತು ಭಾರತೀಯ ಪತ್ರಕರ್ತರ ಸಂಘ, ಪತ್ರಕರ್ತರ ರಾಷ್ಟ್ರೀಯ ಒಕ್ಕೂಟ, ದೆಹಲಿ ಪತ್ರಕರ್ತರ ಒಕ್ಕೂಟ ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮುಂತಾದ ಸಂಘಟನೆಗಳು ‘ಇದು ಮೋದಿ ಸರ್ಕಾರದ ದಬ್ಬಾಳಿಕೆ ವಿಧಾನ’ ಎಂದು ಖಂಡಿಸಿವೆ.

ಇದನ್ನೂ ಓದಿ: ಕಾವಾಡಿಗರ ಹಟ್ಟಿಯ ಅಭಿವೃದ್ದಿಗೆ 3 ಎಕರೆ ಜಾಗ 4 ಕೋಟಿ ರೂಪಾಯಿ: ಸಿದ್ದರಾಮಯ್ಯ

ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು, “ಚೀನಾದ ಕಂಪನಿಗಳಿಂದ ಭಾರಿ ಹಣ ಪಡೆದಿರುವ ‘ಪಿಎಂ ಕೇರ್ಸ್’ (PM CARES) ನ ವ್ಯವಸ್ಥಾಪಕರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ” ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ, “ಮೋದಿ ಸರಕಾರವೇ ಚೀನಾಕ್ಕೆ ಬೆಂಬಲವಾಗಿ ವರ್ತಿಸುತ್ತಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಈ ಬಗ್ಗೆ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ‘ಎಕ್ಸ್’ ಪೇಜ್ ನಲ್ಲಿ, “ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು 20 ಬಾರಿ ಭೇಟಿಯಾಗಿದ್ದಾರೆ. ಜೂನ್ 19, 2020 ರಂದು ಚೀನಾ ಸೇನೆಯು ಗಡಿಯಲ್ಲಿ ಅತಿಕ್ರಮಣ ಮಾಡಿದಾಗ ಅದರ ಬಗ್ಗೆ ಅವರು ಯಾವುದೇ ಪ್ರಶ್ನೆಗಳನ್ನು ಎತ್ತಲಿಲ್ಲ. ಪಿಎಂ ಕೇರ್ಸ್‌ಗಾಗಿ ಚೀನಾ ಕಂಪನಿಗಳಿಗೆ ಕೋಟಿಗಟ್ಟಲೆ ಹಣ ನೀಡಲು ಮೋದಿ ಅವಕಾಶ ನೀಡಿದ್ದರು. ಹಾಗಾದರೆ ವಿದೇಶಿ ಶಕ್ತಿಗಳು ಯಾರನ್ನು ನಿಯಂತ್ರಿಸುತ್ತಿವೆ?” ಎಂದು ಪ್ರಶ್ನಿಸಿ ಆರೋಪಿಸಿದ್ದಾರೆ.

ದೇಶ ರಾಜಕೀಯ

ಗಲಭೆಗಳು ಭುಗಿಲೆದ್ದಿರುವ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡದಿರಲು ಚೀನಾವೇ ಕಾರಣ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವಿಟರ್ ಪುಟದಲ್ಲಿ ಹೇಳಿದ್ದಾರೆ.

ಪ್ರಸ್ತುತ ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ 2 ಬುಡಕಟ್ಟುಗಳ ನಡುವೆ ಸಂಘರ್ಷವಿದೆ. ಕಳೆದ ವರ್ಷ ಇಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬುಡಕಟ್ಟು ಸಮುದಾಯಕ್ಕೆ ಸೇರಿದ ಬಿರೇನ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ ಸಮಸ್ಯೆಗಳು ಹೆಚ್ಚುತ್ತಲೇ ಇವೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಮೈತೇಯಿ ಸಮುದಾಯದ ಜನರು ತಮ್ಮನ್ನು ಬುಡಕಟ್ಟು ಪಟ್ಟಿಗೆ ಸೇರಿಸಬೇಕು ಎಂದು ಕಳೆದ ಕೆಲವು ತಿಂಗಳಿನಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಪರಿಶಿಷ್ಟ ಪಂಗಡಕ್ಕೆ ಸೇರಿದ ‘ಕುಕಿ’ ಸಮುದಾಯ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ.

ಇದರಿಂದಾಗಿ ಎರಡು ಸಮುದಾಯಗಳ ನಡುವೆ ಸಮಸ್ಯೆಗಳು ಉದ್ಭವಿಸಿ ಗಲಭೆಯಾಗಿ ಮಾರ್ಪಟ್ಟಿವೆ. ಈ ಗಲಭೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಅಲ್ಲಿರುವ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದಲ್ಲದೇ ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ಈ ಗಲಭೆಯನ್ನು ನಿಯಂತ್ರಣಕ್ಕೆ ತರದೆ ತಮಾಷೆ ನೋಡುತ್ತಿದೆ ಎಂದು ದೇಶಾದ್ಯಂತ ವಿರೋಧ ಪಕ್ಷಗಳು ಟೀಕಿಸುತ್ತಿರುವ ಬೆನ್ನಲ್ಲೇ, ರಾಜ್ಯದ ಬಿಜೆಪಿ ಸಚಿವರುಗಳು, ಬಿಜೆಪಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ಪತ್ರ ರವಾನಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೇ 50 ದಿನಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಅಹಿತಕರ ಘಟನೆಯನ್ನು ಸರಿಪಡಿಸಲು ಮುಂದಾಗದ ಪ್ರಧಾನಿ ಮೋದಿ, ಮಣಿಪುರದ ಬದಲು ಅಮೆರಿಕ-ಈಜಿಪ್ಟ್ ಪ್ರವಾಸಕ್ಕೆ ತೆರಳಿದ್ದರು. ಈ ಘಟನೆಯಿಂದ ದೇಶದೆಲ್ಲೆಡೆ ಮೋದಿಯವರ ವಿರುದ್ದ ವ್ಯಾಪಕವಾದ ಖಂಡನೆಗಳು ವ್ಯಕ್ತವಾದವು. ಆದರೂ, ಇಲ್ಲಿಯವರೆಗೆ ಮೋದಿಯವರು ಮಣಿಪುರದ ಕಡೆ ನೋಡಲೇ ಇಲ್ಲ.

ಈ ಹಿನ್ನಲೆಯಲ್ಲಿ ಮೋದಿ ಮಣಿಪುರಕ್ಕೆ ಹೋಗದಿರಲು ಚೀನಾವೇ ಕಾರಣ ಎಂದು, ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವಿಟರ್ ಪುಟದಲ್ಲಿ ಹೇಳಿದ್ದಾರೆ. ಇದರ ಬಗ್ಗೆ ಅವರು ಮಾಡಿರುವ ಟ್ವೀಟ್ ನಲ್ಲಿ, “ಪ್ರಧಾನಿ ಮೋದಿ ಮಣಿಪುರಕ್ಕೆ ಹೋಗಿ ಅಲ್ಲಿನ ಜನರಿಗೆ ಏಕೆ ಸಾಂತ್ವನ ಹೇಳಲಿಲ್ಲ.

ಬರ್ಮಾ (ಮ್ಯಾನ್ಮಾರ್) ಮೂಲಕ ಚೀನಾ ಸರಬರಾಜು ಮಾಡುವ ಶಸ್ತ್ರಾಸ್ತ್ರಗಳಿಂದ ಮೈತೇಯಿ ವಿರೋಧಿ (ಹಿಂದೂ) ಜನರನ್ನು ಗುರಿಯಾಗಿಸಲಾಗುತ್ತಿದೆ. ಈ ಹಿಂದೆ ಲಡಾಖ್‌ನಲ್ಲಿ ಚೀನಾ ನಮ್ಮ ಭೂಮಿಯನ್ನು ಕಬಳಿಸಲು ಯತ್ನಿಸಿದಾಗ ಮೋದಿ ಹೆದರಿದ್ದರು.

ಅಂದರೆ, ಮ್ಯಾನ್ಮಾರ್ ಮೂಲಕ ಮೈತೇಯಿ ಸಮುದಾಯದ ಮೇಲೆ ದಾಳಿ ಮಾಡಲು ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದು, ಚೀನಾದ ಭಯದಿಂದ ಪ್ರಧಾನಿ ಮೋದಿ ಈ ವಿಷಯದಲ್ಲಿ ಮೌನವಾಗಿದ್ದಾರೆ” ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

ಗಲಭೆಯಿಂದ ಸಂತ್ರಸ್ತರಾದ ಜನರನ್ನು ಮೋದಿ ಭೇಟಿ ಮಾಡದಿರುವ ಹಿನ್ನಲೆಯಲ್ಲಿ, ಅಲ್ಲಿನ ಜನರನ್ನು ಭೇಟಿ ಯಾಗಲು ಇಂದು ರಾಹುಲ್ ಗಾಂಧಿ ಮಣಿಪುರಕ್ಕೆ ತೆರಳಿದ್ದಾರೆ. ಆದರೆ ಇಂಫಾಲ ವಿಮಾನ ನಿಲ್ದಾಣದಿಂದ ಸುರಚಂದಪುರಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಅವರನ್ನು ಬಿಷ್ಣುಪುರ ಪ್ರದೇಶದಲ್ಲಿ ಪೊಲೀಸರು ತಡೆದರು. ಇದರಿಂದಾಗಿ ಕಾಂಗ್ರೆಸ್ ಪಕ್ಷವು ಅಲ್ಲಿ ಪ್ರತಿಭಟನೆಯಲ್ಲಿ ತೊಡಗಿತು.

ವಿದೇಶ

ಮುಂದಿನ 3 ತಿಂಗಳಲ್ಲಿ ಚೀನಾದಲ್ಲಿ 16 ಲಕ್ಷ ಜನರು ಸಾಯುವ ಸಾದ್ಯತೆಯಿದೆ!


– ಸಾಂಕ್ರಾಮಿಕ ತಜ್ಞ ಎರಿಕ್ ಫಿಗಲ್ ಡಿಂಗ್

ಮುಂದಿನ 3 ತಿಂಗಳಲ್ಲಿ ಚೀನಾದಲ್ಲಿ ಶೇ.60ಕ್ಕೂ ಮೇಲಾದ ಜನರು ಕೊರೊನಾ ಸೋಂಕಿಗೆ ಗುರಿಯಾಗಬಹುದು. ಅದೇ ರೀತಿ 16 ಲಕ್ಷ ಜನರು ಸಾಯುವ ಸಾದ್ಯತೆಯೂ ಇದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ಎಚ್ಚರಿಕೆಯನ್ನು ನೀಡಿದ್ದಾರೆ.

ಚೀನಾದಲ್ಲಿ ಕೊರೊನಾ ಹರಡುವಿಕೆ ಮತ್ತೆ ಹೆಚ್ಚುತ್ತಿದೆ. ಪ್ರತಿದಿನ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವ್ಯಾಪಕವಾಗಿ ಹರಡುತ್ತಿರುವ ಕೊರೊನಾವನ್ನು ತಡೆಗಟ್ಟಲು ಸರ್ಕಾರ ನಾನಾ ರೀತಿಯ ನಿರ್ಬಂಧಗಳನ್ನು ಹಾಕಿತ್ತು. ಆದರೇ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಚೀನಿಯರು ಹೋರಾಟದ ದಾರಿಯನ್ನು ಕೈಗೆತ್ತಿಕೊಂಡರು. ಜನಪರವಾದ ಹೋರಾಟಕ್ಕೆ ಮಣಿದ ಸರ್ಕಾರ, ತಮ್ಮ ನಿರ್ಬಂಧಗಳನ್ನು ಸಡಿಲಗೊಳಿಸಿತು.

ಕ್ರಿಸ್ಮಸ್, ನ್ಯೂ ಇಯರ್ ಮತ್ತು ಚಂದ್ರಮಾನದ ಹೊಸ ವರ್ಷಾಚರಣೆಯಿಂದ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗು ಸಾದ್ಯತೆ ಇದೆಯೆಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಸ್ಮಶಾನಗಳಿಗೆ ಬರುವ ಮೃತರ ಶವಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಅದೇರೀತಿ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇದರ ಬಗ್ಗೆ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ‘ಮುಂದಿನ 3 ತಿಂಗಳಲ್ಲಿ ಚೀನಾದಲ್ಲಿ ಕೊರೊನಾದಿಂದ ಶೇ.60 ರಷ್ಟು ಜನ ಸೋಂಕಿಗೆ ಗುರಿಯಾಗಬಹುದು. ಇದರಿಂದ 16 ಲಕ್ಷ ಜನರು ಸಾಯಬಹುದು. ಬೀಜಿಂಗ್‍ನಲ್ಲಿರುವ ಸ್ಮಶಾನಗಳಲ್ಲಿ ಶವಗಳನ್ನು ಮಣ್ಣು ಮಾಡುವ ಕೆಲಸಗಳು ದಿನದ 24 ಗಂಟೆಯೂ ನಡೆಯುತ್ತಿದೆ. ಪ್ರತಿ ಸ್ಮಶಾನಕ್ಕೆ ಪ್ರತಿದಿನ 2000 ಶವಗಳನ್ನು ತರಲಾಗುತ್ತಿದೆ. ಇಲ್ಲಿನ ಶವಗಾರಗಳು ಹೆಚ್ಚು ಹೊರೆಯಾಗುತ್ತಿದೆ.

ಸೋಂಕಿನ ತ್ವರಿತ ಹರಡುವಿಕೆಯಿಂದ 90 ದಿಗಳಲ್ಲಿ 87 ಕೋಟಿ ಜನರು ಸೋಂಕಿಗೆ ಒಳಗಾಗುತ್ತಾರೆ. ಮತ್ತು ಹಲವಾರು ಲಕ್ಷ ಜನರು ಸಾಯುತ್ತಾರೆ. ಚೀನಾದ ಕಮ್ಯುನಿಷ್ಟ್ ಪಕ್ಷದ ಈಗಿನ ಧ್ಯೇಯವಾಕ್ಯ ಏನಂದರೆ, ಸಾಯುತ್ತೇವೆ ಎಂದುಕೊಂಡವರು ಸಾಯಲಿ ಎಂಬುದೇ ಆಗಿದೆ. ಎಂದು ಹೇಳುತ್ತಿದ್ದಾರೆ.