ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Sanatana Dharma Archives » Dynamic Leader
October 23, 2024
Home Posts tagged Sanatana Dharma
ದೇಶ

“ದಲಿತ ಸಮುದಾಯವನ್ನು ತುಳಿಯುತ್ತಿರುವ ಹಿಂದುತ್ವವಾದಿಗಳು; ಹಿಂದೂಗಳನ್ನು ಗುಲಾಮರಂತೆ ನಡೆಸಿಕೊಳ್ಳುವ ಶಂಕರಾಚಾರ್ಯರುಗಳು”

ಭಾರತವು ಭಾಷೆ, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ವಿವಿಧ ವರ್ಗಗಳಿಂದ ಮೈಗೂಡಿಸಿಕೊಂಡಿವೆ. ಆದಾಗ್ಯೂ, ಮನು ಧರ್ಮ ಮತ್ತು ಸನಾತನವು ಒಟ್ಟಾರೆಯಾಗಿ ಸಮಾಜವನ್ನು ಹುಟ್ಟಿನ ಆಧಾರದ ಮೇಲೆ ನಾಲ್ಕು ವರ್ಣಗಳಾಗಿ ವಿಂಗಡಿಸುತ್ತದೆ.

ಬ್ರಾಹ್ಮಣರು (ಬ್ರಾಹ್ಮಣರು, ತನ್ನನ್ನು ತಾನೇ ಶ್ರೇಷ್ಠ ಎಂದು ಹೇಳಿಕೊಳ್ಳುವ ಸ್ವಘೋಷಿತ ಬಲಾಢ್ಯ ಸಮಾಜ), ಕ್ಷತ್ರಿಯರು (ಆಡಳಿತಗಾರರು – ರಾಜರು), ವೈಶ್ಯರು (ವ್ಯಾಪಾರಿಗಳು) ಮತ್ತು ಶೂದ್ರರು (ಕೃಷಿಕರು; ಬ್ರಾಹ್ಮಣರ ಪ್ರಕಾರ ಗುಲಾಮ ಸಮುದಾಯ)! ನಿರ್ದಿಷ್ಟವಾಗಿ ಹೇಳುವುದಾದರೆ, ಉತ್ತರದ ರಾಜ್ಯಗಳಲ್ಲಿ ವಾಸಿಸುವ ಸನಾತನ ಅನುಯಾಯಿಗಳು ದಕ್ಷಿಣದಲ್ಲಿ ವಾಸಿಸುವ ಎಲ್ಲರನ್ನೂ ಶೂದ್ರರು ಎಂದೇ ಪರಿಗಣಿಸುತ್ತಾರೆ.

ಅಂತಹ ಮನಸ್ಥಿತಿಯ, ಆಧುನಿಕ ಕಾಲದ ಪ್ರಕಾರ, ಬಿಜೆಪಿಯ ಹಿಂದುತ್ವ ರಾಜಕಾರಣವು ದಲಿತ (ದಮನಿತ ಸಮುದಾಯ), ಬ್ರಾಹ್ಮಣೇತರ ಮತ್ತು ಬ್ರಾಹ್ಮಣ ಎಂದು ಮೂರು ವರ್ಗಗಳಾಗಿ ವಿಭಜಿಸುವ ಇಂತಹ ಮನಸ್ಥಿತಿಯನ್ನು ಬೆಳಕಿಗೆ ತರುತ್ತದೆ.

ರಾಜಕೀಯ ಲಾಭಕ್ಕಾಗಿ ದ್ರೌಪದಿ ಮುರ್ಮು ಎಂಬ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಬಿಜೆಪಿ, ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರನ್ನು ಕಡೆಗಣಿಸಿತು. ಭಾರತದ ಪ್ರತಮ ಮಹಿಳಾ ಪ್ರಜೆಯೆಂಬ ಸ್ಥಾನದಲ್ಲಿರುವ ಒಬ್ಬರನ್ನು, ಪಕ್ಕಕ್ಕೆ ಇರಿಸಿ ನಡೆಸಿದ ಉದ್ಘಾಟನಾ ಸಮಾರಂಭ ಭಾರೀ ವಿವಾದಕ್ಕೀಡಾಗಿತ್ತು.

ಹಿಂದೂ ರಾಜಕಾರಣವು ಪ್ರಥಮ ಪ್ರಜೆಯನ್ನು ಮಾತ್ರವಲ್ಲದೆ ಭಾರತದ ಜನಸಂಖ್ಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಒಂದು ಜನಾಂಗವನ್ನೇ ನಿರ್ಲಕ್ಷಿಸಿ ಅವಮಾನಿಸಿದ ಇತಿಹಾಸವನ್ನು ಹೊಂದಿದೆ!

ಭಾರತ, ಜಾತ್ಯತೀತ ರಾಷ್ಟ್ರ ಎಂಬ ಮುಸಲ್ಮಾನರ ನಂಬಿಕೆಯನ್ನು ಬುಡಮೇಲು ಮಾಡುವ ರಾಮಮಂದಿರ ನಿರ್ಮಾಣದ ಪ್ರಯತ್ನಗಳು ಈಗಾಗಲೇ ದೊಡ್ಡ ವಿವಾದಗಳನ್ನು ಸೃಷ್ಟಿಸಿವೆ. ಆದರೆ, ಅದ್ಯಾವುದನ್ನೂ ಲೆಕ್ಕಿಸದೆ ರಾಮಮಂದಿರದ ಉದ್ಘಾಟನೆಯತ್ತ ತನ್ನ ರಾಜಕೀಯವನ್ನು ವೇಗವಾಗಿ ಚಲಿಸುವ ಮೂಲಕ ಹಿಂದೂ ಧರ್ಮ ಗೆಲುವನ್ನು ಸಾಧಿಸಿದೆ.

ವಿವಾದಗಳಲ್ಲೇ ಹುಟ್ಟಿ ವಿವಾದಗಳಲ್ಲೇ ಬೆಳೆಯುತ್ತಿರುವ ಬಿಜೆಪಿ, ಪ್ರಸ್ತುತ ಘೋಷಣೆ ಮಾಡಿರುವ ರಾಮ ಮಂದಿರದ ಉದ್ಘಾಟನಾ ಸಮಾರಂಭವೂ ವಿವಾದವಿಲ್ಲದೆ ಅಲ್ಲ.

ರಾಮ ಮಂದಿರದ ಉದ್ಘಾಟನೆಯ ದಿನ (ಜನವರಿ 22) ಸಮೀಪಿಸುತ್ತಿದ್ದಂತೆ, ಅನೇಕ ರಾಜಕೀಯ ಮುಖಂಡರುಗಳು ಮತ್ತು ಸಾಮಾನ್ಯ ಜನರು ಇದನ್ನು ಧಾರ್ಮಿಕ ಪ್ರಾಬಲ್ಯ ಮತ್ತು ರಾಜಕೀಯ ಘಟನೆ ಎಂದು ಖಂಡಿಸಿ ಕಾರ್ಯಕ್ರಮಕ್ಕೆ ಹಾಜರಾಗಲು ನಿರಾಕರಿಸುತ್ತಿದ್ದಾರೆ. ಹಿಂದೂ ಧರ್ಮದ ಮೂಲವೆನ್ನಲಾದ ಶಂಕರಾಚಾರ್ಯರುಗಳು ಕೂಡ ಈ ಉತ್ಸವದಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

‘ರಾಮ ಮಂದಿರವನ್ನು ಬ್ರಾಹ್ಮಣೇತರ ಮೋದಿ’ ಉದ್ಘಾಟಿಸಲಿರುವುದೇ ಶಂಕರಾಚಾರ್ಯರುಗಳ ಕೋಪಕ್ಕೆ ಕಾರಣ ಎಂಬ  ಊಹಾಪೋಹಗಳೂ ಇವೆ.

ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯೇ ಆದರೂ ಬುಡಕಟ್ಟಿಗೆ ಸೇರಿದವರಾಗಿರುವುದರಿಂದ ಅವರನ್ನು ಕಡೆಗಣಿಸಲಾಯಿತು. ಅಂತೆಯೇ ಹಿಂದೂ ವಿಚಾರಗಳನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿರುವ ಮೋದಿಯವರು ಭಾರತದ ಪ್ರಧಾನಿಯೇ ಆಗಿದ್ದರೂ ಬ್ರಾಹ್ಮಣರಲ್ಲದ ಕಾರಣಕ್ಕೆ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತವಾಗುತ್ತಿವೆ.

ಆದ್ದರಿಂದ ಒಬ್ಬ ವ್ಯಕ್ತಿ ಸೈದ್ಧಾಂತಿಕ ಮಟ್ಟದಲ್ಲಿ ಸನಾತನವನ್ನು ಎತ್ತಿ ಹಿಡಿದರೂ ಹುಟ್ಟಿನಿಂದ ಬೇರೆಯಾಗಿದ್ದರೆ ಆತನನ್ನು ತುಳಿಯುವುದೇ ತಮ್ಮ ರಾಜಕೀಯ ಸಿದ್ದಾಂತ ಎಂಬುದನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಈ ವಿವಾದದ ಮೂಲಕ ಸ್ಪಷ್ಟವಾಗಿ ನಿರೂಪಿಸಿವೆ.

ದೇಶ

ಚೆನ್ನೈ: ಸನಾತನ ಕುರಿತು ಸಚಿವ ಉದಯನಿಧಿ ಸ್ಟಾಲಿನ್ ಮಾತನಾಡಿರುವುದು ವಿವಾದಕ್ಕೀಡಾಗಿದ್ದು ಇದಕ್ಕೆ ಸಂಬಂಧಿಸಿದ ಪ್ರಕರಣ ಚೆನ್ನೈ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರಂತೆ ಇಂದು ಪ್ರಕರಣದ ವಿಚಾರಣೆ ನಡೆದಾಗ ಉದಯನಿಧಿ ಪರವಾಗಿ ವಾದ ಮಂಡಿಸಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸನಾತನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸನಾತನ ಭಾಷಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಕ್ವೋ ವಾರಾಂಟೊ (Quo Warranto) ಪ್ರಕರಣವನ್ನು ವಜಾಗೊಳಿಸಬೇಕು. ಆರೋಪಿಗಳನ್ನು ಸಾಕ್ಷ್ಯ ಕೇಳುವುದು ಸಂವಿಧಾನ ಬಾಹಿರ.

ಆರೋಪ ಸಾಬೀತುಪಡಿಸಲು ಅರ್ಜಿದಾರರೇ ಸಾಕ್ಷ್ಯ ಸಲ್ಲಿಸಬೇಕು ಎಂದು ಸಚಿವ ಉದಯನಿಧಿ ಸ್ಟಾಲಿನ್ ಪರವಾಗಿ ವಾದಿಸಲಾಯಿತು. ಆದ್ದರಿಂದ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ವಿಫಲವಾಗಿರುವ ಪ್ರಕರಣವನ್ನು ವಜಾಗೊಳಿಸುವಂತೆ ಮನವಿ ಮಾಡಲಾಗಿತ್ತು.

ನಂತರ, ಮದ್ರಾಸ್ ಹೈಕೋರ್ಟ್ ಸಚಿವರಾದ ಉದಯನಿಧಿ ಸ್ಟಾಲಿನ್, ಶೇಖರ್ ಬಾಬು ಮತ್ತು ಇತರರ ವಿರುದ್ಧದ ಪ್ರಕರಣವನ್ನು ನವೆಂಬರ್ 7 ಕ್ಕೆ ಮುಂದೂಡಿತು.

ರಾಜಕೀಯ

ಬೆಂಗಳೂರು: ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಅತ್ಯಂತ ಪ್ರಚೋದನಕಾರಿಯಾದುದು ಮಾತ್ರವಲ್ಲ ಸಂವಿಧಾನ ವಿರೋಧಿಯಾಗಿದೆ. ಈ ಪ್ರಚೋದನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿಷಯ-ವಿದ್ಯಮಾನಗಳೇನೇ ಇರಲಿ, ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ. ಇದರ ಬದಲಿಗೆ ತಕ್ಕ ಪ್ರತ್ಯುತ್ತರ ನೀಡಿ ಎಂದು ಜನರನ್ನು ಪ್ರಚೋದಿಸುವುದು, ಕಾನೂನನ್ನು ಕೈಗೆತ್ತಿಕೊಳ್ಳಲು ನೀಡುವ ಕರೆಯಾಗುತ್ತದೆ. ಇದನ್ನು ಪ್ರಧಾನಿ ಮಾಡಿದರೂ ಅಪರಾಧವೇ ಆಗುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಬಿಜೆಪಿಯ ನಾಯಕರಲ್ಲ, ಅವರು ಸಾಂವಿಧಾನಿಕ ಹುದ್ದೆಯಾದ ಪ್ರಧಾನಮಂತ್ರಿಯ ಕುರ್ಚಿಯಲ್ಲಿ ಕುಳಿತಿರುವವರು. ಹೀಗಿರುವಾಗ ಅವರ ನಡೆ-ನುಡಿ ಮತ್ತು ಕ್ರಿಯೆ-ಪ್ರತಿಕ್ರಿಯೆ ಆ ಸ್ಥಾನದ ಘನತೆ-ಗೌರವ ಮತ್ತು ಜವಾಬ್ದಾರಿಗಳಿಗೆ ತಕ್ಕಂತೆ ಇರಬೇಕಾಗಿರುವುದು ರಾಜಧರ್ಮವಾಗಿದೆ. ನರೇಂದ್ರ ಮೋದಿ ಅವರು ಇನ್ನೂ ಆರ್‌ಎಸ್‌ಎಸ್‌ ನ ತನ್ನ ಪೂರ್ವಾಶ್ರಮದ ಗುಂಗಿನಲ್ಲಿದ್ದಂತೆ ಕಾಣುತ್ತಿದೆ. ತಾನು ಈ ದೇಶದ 140 ಕೋಟಿ ಜನರಿಗೂ ಪ್ರಧಾನಿ ಎನ್ನುವುದನ್ನು ಮರೆತಂತಿದೆ. ಪ್ರಧಾನಿಯವರ ಇಂತಹ ಹೇಳಿಕೆಗಳಿಂದ ಪ್ರಚೋದಿತರಾಗಿ ಅವರದ್ದೇ ಪಕ್ಷ ಮತ್ತು ಸಂಘಟನೆಯ ಅನೇಕ ನಾಯಕರು ಹಿಂಸಾಚಾರಕ್ಕೆ ಕರೆನೀಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ನಡವಳಿಕೆಗಳನ್ನು ಗಮನಿಸಿದರೆ ಅವರ ಈಗಿನ ಹೇಳಿಕೆಗಳು ಅಚ್ಚರಿ ಹುಟ್ಟಿಸುವುದಿಲ್ಲ. ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ನಡೆದುಕೊಂಡ ರೀತಿಯ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರೇ ಅಸಮಾಧಾನ ವ್ಯಕ್ತಪಡಿಸಿ, ರಾಜಧರ್ಮ ಪಾಲಿಸಲು ಕರೆ ಕೊಟ್ಟಿದ್ದರು. ದಿವಂಗತ ವಾಜಪೇಯಿ ಅವರ ಆ ಬುದ್ದಿಮಾತನ್ನೇ ಈ ಸಂದರ್ಭದಲ್ಲಿ ಮೋದಿಯವರಿಗೆ ನೆನಪು ಮಾಡಿಕೊಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ರಾಜಕೀಯ

ಸನಾತನವನ್ನು ತೊಲಗಿಸಬೇಕು ಎಂಬ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಬಿಜೆಪಿ ಪಕ್ಷದ ಮುಖಂಡರು, ಸದಸ್ಯರು ಸೇರಿದಂತೆ ಹಲವರು ಉದಯನಿಧಿ ಸ್ಟಾಲಿನ್ ಅವರನ್ನು ಖಂಡಿಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೊಲೀಸ್ ಠಾಣೆಗಳಲ್ಲಿ ದೂರು ಸಹ ದಾಖಲಿಸಲಾಗುತ್ತಿದೆ. ಸನಾತನ ವಿಷಯ ಇಡೀ ದೇಶದಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ಅಯೋಧ್ಯೆಯ ಸ್ವಾಮೀಜಿಯೊಬ್ಬರು ನೀಡಿರುವ ಹೇಳಿಕೆ ಸದ್ಯ ಸಂಚಲನ ಮೂಡಿಸಿದೆ.

ತಮಿಳುನಾಡು ಕ್ರೀಡಾ ಸಚಿವ ಉದಯನೀಧಿ ಸ್ಟಾಲೀನ್

ಅಯೋಧ್ಯೆಯ ಸ್ವಾಮೀಜಿ ಪರಮಹಂಸ ಆಚಾರ್ಯರು ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆಗೆ ರೂ.10 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಸಚಿವ ಉದಯನಿಧಿ ಸ್ಟಾಲಿನ್ ಅವರ ಛಾಯಾಚಿತ್ರವನ್ನು ಕತ್ತಿಯಿಂದ ಹರಿದು, ಬೆಂಕಿ ಹಚ್ಚಿರುವ ವೀಡಿಯೊ ಬಿಡುಗಡೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂದೆ ಇದೇ ಸ್ವಾಮೀಜಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು; ಘೋಷಿಸದಿದ್ದರೆ ಜಲಸಮಾಧಿ ಆಗುತ್ತೇನೆಎಂದು 2021ರಲ್ಲಿ ಘೋಷಿಸಿದ್ದರು (ನೀರಿಗೆ ಇಳಿದು ತಮ್ಮ ಪ್ರಾಣವನ್ನು ತೆಗೆದುಕೊಳ್ಳುತ್ತಾರೆ). ಆದರೆ, ಅವರು ಹಾಗೆ ಮಾಡಲಿಲ್ಲ. ಆ ಮೂಲಕ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ದೇಶ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸನಾತನ ಧರ್ಮವನ್ನು ಎತ್ತಿ ಹಿಡಿಯುವ ಸಮಯ ಬಂದಿದೆ. ಸತತ ಆಕ್ರಮಣಗಳಿಂದ ಉತ್ತರ ಭಾರತದಲ್ಲಿ ವೈದಿಕ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂದು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ.

ವೇದಗಳು ಜ್ಞಾನದ ಸಂಪತ್ತನ್ನು ಒಳಗೊಂಡಿವೆ. ಧರ್ಮದ ಜ್ಞಾನವನ್ನು ಜಗತ್ತಿಗೆ ತಿಳಿಸಬೇಕು. ಸತ್ಯವೇ ಧರ್ಮದ ಆಧಾರ. ಇಂದು ಇಡೀ ಜಗತ್ತು ವೇದಗಳ ಬಗ್ಗೆ ಯೋಚಿಸುತ್ತಿದೆ.

ನಮ್ಮ ಆಧ್ಯಾತ್ಮಿಕತೆಯನ್ನು ರಕ್ಷಿಸಲು ನಾವು ಕೆಲಸ ಮಾಡಬೇಕು. ದೇಶ ಪ್ರಗತಿಯಲ್ಲಿದೆ. ಧರ್ಮದ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ದೇವಾಲಯಗಳನ್ನು ರಕ್ಷಿಸುವ ಮತ್ತು ಧಾರ್ಮಿಕ ಸಂಸ್ಥೆಗಳ ಮೂಲಕ ಧರ್ಮ ಪ್ರಚಾರ ಮಾಡುವ ಅಗತ್ಯವಿದೆ. ಎಂದು ಹೇಳಿದರು.

ದೇಶ

ಚೆನ್ನೈ: ಸನಾತನ ಧರ್ಮದ ಕುರಿತು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ಹೇಳಿಕೆಗೆ ಸಂಬಂಧಿಸಿದಂತೆ, ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಕೋರಿ ಸಲ್ಲಿಸಿದ ಅರ್ಜಿಗೆ 8 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಭಾಗವಹಿಸುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸನಾತನ ಧರ್ಮದ ಶ್ರೇಯಸ್ಸನ್ನು ವಿವರಿಸುತ್ತಾ, ಅದನ್ನು ಅನುಸರಿಸುವುದು ಮುಖ್ಯ ಎಂದು ನಿರಂತರವಾಗಿ ಹೇಳುತ್ತಿದ್ದರು. ಸನಾತನ ಧರ್ಮದ ಉಲ್ಲೇಖಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ, ಚೆನ್ನೈ ಮೂಲದ ಹಿರಿಯ ವಕೀಲ ಎಸ್.ದುರೈಸ್ವಾಮಿ ಅವರು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಅರ್ಜಿ ಸಲ್ಲಿಸಿ, ಸನಾತನ ಧರ್ಮದ ಬಗ್ಗೆ ಮಾಹಿತಿ ಒದಗಿಸುವಂತೆ ಕೋರಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ತಮಿಳುನಾಡು ರಾಜಭವನ ಕಚೇರಿಯ ಮಾಹಿತಿ ಅಧಿಕಾರಿ, ‘ವಕೀಲರು ಎತ್ತಿರುವ ಪ್ರಶ್ನೆಗಳು ಆರ್‌ಟಿಐ ಕಾಯ್ದೆಯಡಿ ಬರುವುದಿಲ್ಲ. ಅದಕ್ಕೆ ಸಂಬಂಧಪಟ್ಟ ಮಾಹಿತಿ ತಮ್ಮ ಕಛೇರಿಯಲ್ಲಿ ಲಭ್ಯವಿಲ್ಲ’ ಎಂಬ ಮಾಹಿತಿಯನ್ನು ಒದಗಿಸಿದ್ದರು.

ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ ಅಪೂರ್ಣವಾದ ಮಾಹಿತಿಯ ವಿರುದ್ಧ, ವಕೀಲ ಎಸ್.ದುರೈಸ್ವಾಮಿ ಅವರು ಕಳೆದ ವರ್ಷ ನವೆಂಬರ್ 3 ರಂದು ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿಗೆ ಸಕ್ಷನ್ 19(1) ರಡಿಯಲ್ಲಿ ಮೇಲ್ಮನವಿ ಸಲ್ಲಿಸಿದರು.

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ

 ಅರ್ಜಿಯಲ್ಲಿ, ‘ರಾಜಕೀಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಸೂಕ್ತ ಉತ್ತರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅವರು ಸನಾತನ ಧರ್ಮದ ಬಗ್ಗೆ ಮಾತನಾಡಲು ಆಧಾರವೇನು ಎಂಬುದನ್ನು ತಿಳಿಸಬೇಕು’ ಎಂದು ಕೋರಿದ್ದರು.

ಈ ಮೇಲ್ಮನವಿಯ ಮೇಲೆ ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿ ಕ್ರಮ ಕೈಗೊಳ್ಳದ ಕಾರಣ, ವಕೀಲ ದುರೈಸ್ವಾಮಿ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದರು. ನ್ಯಾಯಮೂರ್ತಿ ಎಂ.ತಂಡಪಾಣಿ ಅವರ ಮುಂದೆ ಪ್ರಕರಣ ವಿಚಾರಣೆಗೆ ಬಂದಿತ್ತು.ಅರ್ಜಿದಾರರ ಪರವಾಗಿ ವಕೀಲ ಇಳಂಗೋವನ್ ವಾದ ಮಂಡಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ‘ವಕೀಲ ದುರೈಸ್ವಾಮಿ ಅವರ ಮೇಲ್ಮನವಿ ಕುರಿತು ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿ 8 ವಾರಗಳಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ಆದೇಶಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.

The Madras High Court has directed the appellant authority of Tamil Nadu Raj Bhavan to take action against the RTI application seeking an explanation about the Sanatan Dharma quotes used by the Governor during his speeches, within 8 weeks.