ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Shri Ram Archives » Dynamic Leader
October 17, 2024
Home Posts tagged Shri Ram
ದೇಶ

14 ವರ್ಷಗಳಿಂದ ಕಾಡಿನಲ್ಲಿ ವಾಸಿಸುವ ವ್ಯಕ್ತಿ ಸಸ್ಯಾಹಾರಿಯಾಗಲು ಹೇಗೆ ಸಾಧ್ಯ? ಎಂದು ಜಿತೇಂದ್ರ ಅವದ್ ಪ್ರಶ್ನಿಸಿದ್ದಾರೆ!

ಭಗವಾನ್ ರಾಮನಿಂದ ಮಹಾವಿಕಾಸ್ ಅಗಾಡಿ (ಎಂವಿಎ) ಸರ್ಕಾರದವರೆಗೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡೂ ಬಣಗಳು ಬುಧವಾರ ಪರಸ್ಪರ ದೂಷಣೆಗೆ ತಿರುಗಿದವು. ವಿರೋಧ ಪಕ್ಷವಾದ ಎನ್‌ಸಿಪಿ ಶಾಸಕ ಜಿತೇಂದ್ರ ಅವದ್ ಅವರು ಶಿರಸಿಯಲ್ಲಿ ಪಕ್ಷದ ಅಧ್ಯಯನ ಶಿಬಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, “ಶ್ರೀರಾಮನು ಬಹುಜನರ ರಾಜ ಮತ್ತು ಮಾಂಸಾಹಾರಿ” ಎಂದು ಗದ್ದಲವನ್ನು ಸೃಷ್ಟಿಸಿದರು.

“ನಾವು ಇತಿಹಾಸವನ್ನು ಓದಿಬಿಟ್ಟು ರಾಜಕೀಯದಲ್ಲಿ ಎಲ್ಲವನ್ನೂ ಮರೆಯುವುದಿಲ್ಲ. ರಾಮ ನಮ್ಮವರು. ನಾವು ಬಹುಜನರು ಆಹಾರಕ್ಕಾಗಿ ಬೇಟೆಗಾರರು… ರಾಮ ಎಂದಿಗೂ ಸಸ್ಯಾಹಾರಿಯಾಗಿರಲಿಲ್ಲ. ಅವರು ಮಾಂಸಹಾರಿಯಾಗಿದ್ದರು. 14 ವರ್ಷಗಳ ಕಾಲ ಕಾಡಿನಲ್ಲಿ ವಾಸಿಸುವವರು ಸಸ್ಯಾಹಾರಿಯಾಗಲು ಹೇಗೆ ಸಾಧ್ಯ” ಎಂದು ಅವರು ಕೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ತೆರೆಯುವ ಜನವರಿ 22 ರಂದು ಡ್ರೈ ಡೇ ಎಂದು ಘೋಷಿಸುವಂತೆ ಮತ್ತು ಮಾಂಸಾಹಾರದ ಮೇಲೆ ಒಂದು ದಿನದ ನಿಷೇಧವನ್ನು ಹೇರುವಂತೆ ಆಡಳಿತಾರೂಢ ಬಿಜೆಪಿ ಶಾಸಕ ರಾಮ್ ಕದಂ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪತ್ರ ಬರೆದಿರುವ ಸಮಯದಲ್ಲಿ ಅವಧ್ ಅವರ ಹೇಳಿಕೆ ಬಂದಿದೆ.

ಕೋಟ್ಯಾಂತರ ರಾಮ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ತಕ್ಷಣವೇ ಅವಧ್ ಅವರನ್ನು ಗುರಿಯಾಗಿಸಿತು. “ರಾಮ ಮಾಂಸಾಹಾರ ಸೇವಿಸಿದ್ದಕ್ಕೆ ಜಿತೇಂದ್ರ ಅವದ್ ಬಳಿ ಯಾವ ಸಾಕ್ಷ್ಯವಿದೆ? ಅವರು ಅದನ್ನು ನೋಡಿದ್ದಾರೆಯೇ? ದೇವಸ್ಥಾನ ತೆರೆಯುವ ವೇಳೆಗೆ ಕೋಟ್ಯಾಂತರ ರಾಮನ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ” ಎಂದು  ರಾಮ್ ಕದಂ ಕಿಡಿಕಾರಿದ್ದಾರೆ.

ಎನ್‌ಸಿಪಿಯ ರಾಜ್ಯಾಧ್ಯಕ್ಷ ಸುನಿಲ್ ತಾತ್ಕರೆ, “ನನಗೆ ಅವರಷ್ಟು ಬುದ್ಧಿವಂತಿಕೆ ಇಲ್ಲ, ಅದರ ಬಗ್ಗೆ ಮಾತನಾಡದಿರುವುದು ಉತ್ತಮ” ಎಂದು ಅವಧ್ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಸಿರುವ ಅವದ್, “ವಿವಾದಾತ್ಮಕವಾಗಿ ನಾನು ಏನನ್ನೂ ಹೇಳಲಿಲ್ಲ” ನನ್ನ ಮಾತುಗಳು ನಿಜವಾಗಿದ್ದವು. ರಾಮನನ್ನು ಸಸ್ಯಾಹಾರಿಯನ್ನಾಗಿ ಮಾಡಲು ಯೋಜಿತ ಪ್ರಯತ್ನ ನಡೆಯುತ್ತಿದೆ. ಈ ದೇಶದ ಶೇ.80ಕ್ಕೂ ಹೆಚ್ಚು ಜನರು ಮಾಂಸಾಹಾರಿಗಳಾಗಿದ್ದಾರೆ. ಅವರು ಶ್ರೀರಾಮನ ಭಕ್ತರು,’’ ಎಂದು ಹೇಳಿದ್ದಾರೆ.

ದೇಶ

ಲೆಪ್ಚಾ: 2014 ರಿಂದ ಪ್ರತಿ ವರ್ಷವೂ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದ ಪ್ರಧಾನಿ ಮೋದಿ, ಈ ವರ್ಷ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಯೋಧರ ನಡುವೆ ಮಾತನಾಡಿದ ಮೋದಿ ಅವರು,

“ರಾಮ ಇರುವ ಸ್ಥಳ ಅಯೋಧ್ಯೆ” ಎಂದು ಹೇಳಲಾಗುತ್ತದೆ. ಆದರೆ, ನನ್ನ ಪ್ರಕಾರ ಸೈನಿಕರು ಎಲ್ಲಿದ್ದಾರೋ ಆ ಸ್ಥಳವೇ ನನಗೆ ಅಯೋಧ್ಯೆ” ಎಂದು ಹೇಳಿದ್ದಾರೆ.

ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಯಾವುದೇ ಸವಾಲನ್ನು ಎದುರಿಸಲು ಯೋಧರು ಸಿದ್ಧರಾಗಿದ್ದಾರೆ. ನಮ್ಮ ಯೋಧರು ಎಲ್ಲದರಲ್ಲೂ ಮುಂದಿದ್ದಾರೆ. ದೇಶವು ತನ್ನ ಸೈನಿಕರಿಗೆ ಋಣಿಯಾಗಿದೆ. ಸ್ವಾವಲಂಬನೆಯ ಭಾರತ ಎಂಬ ಗುರಿಯತ್ತ ನಮ್ಮ ದೇಶ ಸಾಗುತ್ತಿದೆ. ಭಾರತದಲ್ಲಿ ಭದ್ರತಾ ಉಪಕರಣಗಳ ಉತ್ಪಾದನೆ 1 ಲಕ್ಷ ಕೋಟಿ ದಾಟಿದೆ. 140 ಕೋಟಿ ಜನ ನಿಮ್ಮೊಂದಿಗಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ನಿಮಗಾಗಿ ಪ್ರಾರ್ಥಿಸುತ್ತಿದ್ದಾನೆ.

ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದೇನೆ. ಇಲ್ಲಿಂದ ನಾಡಿನ ಜನರಿಗೆ ಶುಭಾಶಯಗಳನ್ನು ಹೇಳುವುದು  ವಿಷೇಶವಾಗಿರುತ್ತದೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ರಾಮ ಇರುವ ಸ್ಥಳ ಅಯೋಧ್ಯೆ ಎಂದು ಹೇಳಲಾಗುತ್ತದೆ. ಆದರೆ, ನನ್ನ ಪ್ರಕಾರ ಸೈನಿಕರು ಎಲ್ಲಿದ್ದಾರೋ ಆ ಸ್ಥಳವೇ ನನಗೆ ಅಯೋಧ್ಯೆ”

ಪ್ರಸ್ತುತ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳ ನಡುವೆ ಭಾರತದ ಮೇಲಿನ ನಿರೀಕ್ಷೆ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭಗಳಲ್ಲಿ ಭಾರತದ ಗಡಿ ಪ್ರದೇಶಗಳು ಸುರಕ್ಷಿತವಾಗಿರುವುದು ಮುಖ್ಯ. ದೇಶದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುತ್ತಿದ್ದೇವೆ. ಅದರಲ್ಲಿ ನಿಮಗೆ ಮಹತ್ವದ ಪಾತ್ರವಿದೆ. ಗಡಿಯಲ್ಲಿ ಯೋಧರು ಹಿಮಾಲಯದಂತೆ ಗಟ್ಟಿಯಾಗಿ ನಿಂತಿರುವುದರಿಂದ ನಮ್ಮ ದೇಶ ಸುರಕ್ಷಿತವಾಗಿದೆ. ಎಂದು ಮೋದಿ ಹಾಳಿದ್ದಾರೆ.