ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
WHO Archives » Dynamic Leader
October 23, 2024
Home Posts tagged WHO
ದೇಶ

ಲಸಿಕೆಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸರಿಯಾದ ಸಮಯದಲ್ಲಿ ಲಸಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿ, ಅದರ ಮೂಲಕ ವಿವಿಧ ರೋಗಗಳ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನಗಳನ್ನು ಹೆಚ್ಚಿಸಲು ಪ್ರತಿ ವರ್ಷ ನವೆಂಬರ್ 10 ಅನ್ನು “ವಿಶ್ವ ಲಸಿಕೆ ದಿನ” ಎಂದು ಆಚರಿಸಲಾಗುತ್ತದೆ.

ಡಬ್ಲ್ಯೂ.ಹೆಚ್.ಓ (WHO) ಎಂದು ಕರೆಯಲ್ಪಡುವ “ವಿಶ್ವ ಆರೋಗ್ಯ ಸಂಸ್ಥೆ” ಈ ಉದ್ದೇಶಕ್ಕಾಗಿ ಜನರಲ್ಲಿ ವ್ಯಾಕ್ಸಿನೇಷನ್‌ಗಳ ಅಗತ್ಯವನ್ನು ಒತ್ತಿಹೇಳಲು ಪ್ರಪಂಚದಾದ್ಯಂತದ ಅನೇಕ ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಗುಂಪುಗಳ ಸಹಯೋಗದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಮನುಷ್ಯರಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗಗಳ ವಿರುದ್ಧ ಅವರ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು, ಸೂಕ್ಷ್ಮಜೀವಿಗಳೊಂದಿಗೆ ವಿವಿಧ ಸಂಶೋಧನೆಗಳ ನಂತರ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಕುರಿತ ವೈದ್ಯಕೀಯ ಶಿಕ್ಷಣವನ್ನು ‘ವ್ಯಾಕ್ಸಿನಾಲಜಿ’ (vaccinology) ಎಂದು ಕರೆಯಲಾಗುತ್ತದೆ.

ರೋಗವನ್ನು ತಡೆಗಟ್ಟುವಲ್ಲಿ ಲಸಿಕೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ವೈದ್ಯಕೀಯ ಜಗತ್ತಿನಲ್ಲಿ ಪ್ರಾಯೋಗಿಕವಾಗಿ ಒಪ್ಪಿಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿಯೂ ಲಸಿಕೆಗಳು ಪ್ರಮುಖ ಪಾತ್ರವಹಿಸುತ್ತವೆ.

ಡಿಸೆಂಬರ್ 2019ರಲ್ಲಿ ಪ್ರಾರಂಭವಾದ ಕೊರೋನಾ ಸಾಂಕ್ರಾಮಿಕವು 2020ರಲ್ಲಿ ಪ್ರಪಂಚದಾದ್ಯಂತ ಹರಡಿ, ಲಕ್ಷಾಂತರ ಜೀವಗಳನ್ನು ಬಲಿ ಪಡೆಯಿತು. ಇದನ್ನು ಎದುರಿಸಲು, ಭಾರತದಲ್ಲಿ ಭಾರತ್ ಬಯೋಟೆಕ್ (Bharat Biotech) ಸಂಸ್ಥೆ ತಯಾರಿಸಿದ ಲಸಿಕೆಗಳನ್ನು ಸೀಮಿತ ಅವಧಿಯಲ್ಲಿ ಜನರಿಗೆ ಉಚಿತವಾಗಿ ನೀಡಲಾಯಿತು.

ಭಾರತವು ಈ ಲಸಿಕೆಯನ್ನು ಪ್ರಪಂಚದಾದ್ಯಂತ ಅನೇಕ ದೇಶಗಳಿಗೆ ಉಚಿತವಾಗಿ ನೀಡಿತು. ಇದರಿಂದ ಅಪಾರ ಪ್ರಮಾಣದ ಪ್ರಾಣಹಾನಿ ತಪ್ಪಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ವರ್ಷಕ್ಕೆ ಸುಮಾರು 50 ಲಕ್ಷ ಜನ ರೋಗಗಳಿಂದ ಸಾಯುವುದನ್ನು ಲಸಿಕೆಗಳು ತಡೆಯುತ್ತವೆ.

ಅಪಾಯಕಾರಿ ರೋಗಗಳನ್ನು ತಡೆಗಟ್ಟುವಲ್ಲಿ, ಪ್ರಪಂಚದಿಂದ ಮಾರಣಾಂತಿಕ ರೋಗಗಳನ್ನು ನಿರ್ಮೂಲನೆ ಮಾಡುವಲ್ಲಿ, ರೋಗದ ಹರಡುವಿಕೆಯನ್ನು ಸರಳವಾಗಿ ತಡೆಗಟ್ಟುವಲ್ಲಿ ಮತ್ತು ಭವಿಷ್ಯದ ಪೀಳಿಗೆಯನ್ನು ರೋಗದಿಂದ ರಕ್ಷಿಸುವಲ್ಲಿ ಲಸಿಕೆಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ.

ಸುಮಾರು 30 ವರ್ಷಗಳ ಹಿಂದಿನವರೆಗೂ ಪೋಲಿಯೊ (poliomyelitis) ಎಂಬ ಸಾಂಕ್ರಾಮಿಕ ರೋಗ, ಮಕ್ಕಳ ಕೈ ಅಥವಾ ಕಾಲುಗಳನ್ನು ನಿಷ್ಕ್ರಿಯಗೊಳ್ಳುವಂತೆ ಮಾಡಿ, ಮಕ್ಕಳು ಜೀವನದುದ್ದಕ್ಕೂ ಅನುಭವಿಸಿದ ದುರದೃಷ್ಟಕರ ಘಟನೆಗಳು ದೇಶದೆಲ್ಲೆಡೆ ನಡೆಯುತ್ತಿತ್ತು.

ಆದರೆ, ಕೇಂದ್ರ ಸರ್ಕಾರವು ಮಕ್ಕಳಿಗೆ ನೀಡಿದ ಉಚಿತ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವು ಭಾರತದಿಂದ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿತು ಎಂಬುದು ಗಮನಾರ್ಹ.

2023ರ ವಿಶ್ವ ರೋಗನಿರೋಧಕ ದಿನದ ವಿಷಯವಾಗಿ (theme) ವಿಶ್ವ ಆರೋಗ್ಯ ಸಂಸ್ಥೆ “ಬಿಗ್ ಕ್ಯಾಚ್-ಅಪ್” ಶೀರ್ಷಿಕೆಯನ್ನು ತೆಗೆದುಕೊಂಡಿದೆ. ಲಸಿಕೆಯನ್ನು ಪಡೆಯದ ಮಕ್ಕಳನ್ನು ಹುಡುಕುವ ಮತ್ತು ಲಸಿಕೆ ನೀಡುವ ಮುಖ್ಯ ಉದ್ದೇಶವನ್ನು ಕೇಂದ್ರೀಕರಿಸುವ ಈ ವಿಷಯವನ್ನು ಈ ವರ್ಷ ಪ್ರಚಾರ ವಸ್ತುವಾಗಿ ಬಳಸಲಾಗುತ್ತಿದೆ.

ದೇಶ

ಲಂಡನ್: ವಿಶ್ವದಾದ್ಯಂತ ಜನರನ್ನು ಬಲಿತೆಗೆದುಕೊಂಡ ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ವೈರಸ್ ಹರಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 2020ರಲ್ಲಿ ಚೀನಾದಿಂದ ಹರಡಿದ ಕೊರೊನಾ ವೈರಸ್ ಮೂರು ವರ್ಷಗಳಿಂದ ಪ್ರಪಂಚದಾದ್ಯಂತ ಜನರನ್ನು ಬೆಚ್ಚಿ ಬೀಳಿಸಿತು. ಈ ಸಾಂಕ್ರಾಮಿಕ ರೋಗದಿಂದ ವಿಶ್ವದಾದ್ಯಂತ ಸುಮಾರು 70 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಈ ಹಿನ್ನಲೆಯಲ್ಲಿ, ಕೊರೊನಾ ವೈರಸ್‌ಗಿಂತ ಏಳು ಪಟ್ಟು ಹೆಚ್ಚು ಅಪಾಯಕಾರಿಯ ಹೊಸ ವೈರಸ್ ಹೊರಹೊಮ್ಮಲಿದ್ದು, ಆ ಹೊಸ ಸಾಂಕ್ರಾಮಿಕ ರೋಗದಿಂದ ಸುಮಾರು 5 ಕೋಟಿ ಜನರು ಸಾಯಬಹುದು ಎಂದು ಅಂದಾಜಿಸಲಾಗಿದೆ. 1918-1920ರ ಅವಧಿಯಲ್ಲಿ ಜಗತ್ತನ್ನು ಬೆಚ್ಚಿ ಬೀಳಿಸಿದ ‘ಸ್ಪ್ಯಾನಿಷ್’ ಜ್ವರದಷ್ಟೇ ಇದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಹೊಸ ರೀತಿಯ ವೈರಸ್‌ಗೆ ‘ಎಕ್ಸ್’ ಎಂದು ಹೆಸರಿಸಿದೆ. ಇದರ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ತಜ್ಞ ಮತ್ತು ಯುಕೆ ಲಸಿಕೆ ಕಾರ್ಯಪಡೆಯ ಮುಖ್ಯಸ್ಥ ಡೇಮ್ ಕೇಟ್ ಬಿಂಗ್‌ಹ್ಯಾಮ್, ‘ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಹೊಸ ರೀತಿಯ ವೈರಸ್ ಅನ್ನು ಅಧ್ಯಯನ ಮಾಡಲಾಗಿದೆ. ಅಧ್ಯಯನದ ವರದಿಯಂತೆ, ಹೊಸದಾಗಿ ಗುರುತಿಸಲಾದ ‘ಎಕ್ಸ್’ ವೈರಸ್ ಹರಡಿದರೆ ಕನಿಷ್ಠ 5 ಕೋಟಿ ಜನರನ್ನು ಕೊಲ್ಲಬಹುದು ಎಂದು ಅಂದಾಜಿಸಲಾಗಿದೆ.

ಈ ಸಾಂಕ್ರಾಮಿಕ ರೋಗವನ್ನು ಎದುರಿಸುವುದು ದೊಡ್ಡ ಸವಾಲಾಗಿರುತ್ತದೆ. ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಸಾಂಕ್ರಾಮಿಕ ‘X’ ಹರಡುವ ಮೊದಲು ಅದನ್ನು ಎದುರಿಸಲು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 25 ಬಗೆಯ ವೈರಾಣುಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ದೇಶ

ವಿವಿಧ ಉತ್ಪನ್ನಗಳಲ್ಲಿ ಸಕ್ಕರೆಗೆ ಪರ್ಯಾಯವಾಗಿ ಬಳಸುವ ಕೃತಕ ಸಿಹಿಕಾರಕಗಳು, ತೂಕವನ್ನು ಕಡಿಮೆ ಮಾಡದೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಸಕ್ಕರೆಗೆ ಪರ್ಯಾಯವಾಗಿ, ಡಯಟ್ ಸೋಡ, ಕಾಫಿ ಮುಂತಾದವುಗಳಲ್ಲಿ ದೇಹದ ತೂಕವನ್ನು ಕಡಿಮೆ ಮಾಡಲಿಕ್ಕಾಗಿ ದಿನವೂ ಲಕ್ಷಾಂತರ ಜನರಿಂದ, ಕೃತಕ ಸಿಹಿಕಾರಕಗಳನ್ನು ಬಳಸಲಾಗುತ್ತಿದೆ. ಆದರೆ ಇವು ಆರೋಗ್ಯಕರವೇ ಎಂಬುದರ ಬಗ್ಗೆ ಬಹಳ ಹಿಂದಿನಿಂದಲೂ ವಿವಾದಗಳು ನಡೆಯುತ್ತಲೇ ಇವೆ.

ಈ ವೇಳೆ ಎನ್‌ಎಸ್‌ಎಸ್ (NSS) ಎಂದು ಕರೆಯಲ್ಪಡುವ ಸಕ್ಕರೆ ರಹಿತ ಕೃತಕ ಸಿಹಿಕಾರಕಗಳನ್ನು ಬಳಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ‘ನಮ್ಮ ಬಳಿ ಇರುವ ಪುರಾವೆಗಳನ್ನು ಮೌಲ್ಯಮಾಪನ ಮಾಡಿದಾಗ, ಹಿರಿಯರು ಮತ್ತು ಮಕ್ಕಳ ಕೊಬ್ಬನ್ನು ಕರಗಿಸುವುದರಲ್ಲಿ ಕೃತಕ ಸಿಹಿಕಾರಕಗಳು ದೀರ್ಘ ಕಾಲದ ಫಲವನ್ನು ನೀಡುವುದಿಲ್ಲ. ದೀರ್ಘ ಕಾಲದಿಂದ ಇದನ್ನು ಬಳಸುವ ಹಿರಿಯರಿಗೆ ಮಧುಮೇಹ, ಹೃದಯ ಸಮಸ್ಯೆ, ಸಾವು ಸೇರಿದಂತೆ ಹೆಚ್ಚಿನ ಅಪಾಯಗಳನ್ನು ಏರ್ಪಡಿಸುವಂತಹ ಸಾಧ್ಯತೆಗಳೇ ಹೆಚ್ಚಾಗಿದ್ದು, ಇದರಿಂದ ಅಹಿತಕರ ಘಟನೆಗಳು ಸಂಭವಿಸಬಹುದು ಎಂಬ ಶಿಫಾರಸ್ಸನ್ನು ಮಾಡಲಾಗುತ್ತದೆ’ ಎಂದು ಅದರಲ್ಲಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪೋಷಣೆ ಮತ್ತು ಆಹಾರ ಸುರಕ್ಷತಾ ಇಲಾಖೆಯ ನಿರ್ದೇಶಕ ಫ್ರಾನ್ಸೆಸ್ಕೊ ಬ್ರಾಂಕಾ ಅವರು, ‘ಕೃತಕ ಸಿಹಿಕಾರಕಗಳನ್ನು ಬಳಸುವುದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುವುದಿಲ್ಲ. ಹಣ್ಣುಗಳು ಅಥವಾ ಸಿಹಿ ಅಲ್ಲದ ಆಹಾರ ಮತ್ತು ನೈಸರ್ಗಿಕವಾಗಿ ಸಕ್ಕರೆಗಳನ್ನು ಹೊಂದಿರುವ ಪಾನೀಯಗಳಂತಹ ಆಹಾರಗಳನ್ನು ಹಾಗೂ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಇತರ ಆಹಾರ ವಿಧಾನಗಳನ್ನು ಪರಿಗಣಿಸಬೇಕು.

ಕೃತಕ ಸಿಹಿಕಾರಕವು ಅತ್ಯಗತ್ಯ ಆಹಾರವಲ್ಲ. ಅದರಲ್ಲಿ ಪೌಷ್ಟಿಕಾಂಶವಿಲ್ಲ. ಆದ್ದರಿಂದ, ಜನರು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು, ಜೀವನದ ಆರಂಭದಿಂದಲೂ ಸಿಹಿ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಮತ್ತೆಲ್ಲರಿಗೂ ಇದು ಅನ್ವಯಿಸುತ್ತದೆ’ ಎಂದು ಹೇಳಿದ್ದಾರೆ.

ಹೆಚ್ಚು ವ್ಯಾಪಕವಾಗಿ ಬಳಸುವ ಕೃತಕ ಸಿಹಿಕಾರಕಗಳಲ್ಲಿ Acesulfame K, Aspartame, Advantame, Cyclamates, Neotame, Saccharin, Sucralose, stevia ಮತ್ತು stevia derivatives ಮುಂತಾದವುಗಳು ಒಳಗೊಂಡಿರುತ್ತದೆ.

ದೇಶ

2019ರ ಕೊನೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾಯಿತು. ನಂತರ ವಿವಿಧ ದೇಶಗಳಿಗೆ ಹರಡಿದ ಕರೋನಾ ವೈರಸ್ ಪ್ರಪಂಚದ ಸಹಜ ಸ್ಥಿತಿಯನ್ನು ಬೆಚ್ಚಿಬೀಳಿಸಿತು. ಪ್ರಪಂಚದಾದ್ಯಂತ ಕೋಟಿಯಾಂತರ ಜನರು ತಮ್ಮ ಜೀವವನ್ನು ಕಳೆದುಕೊಂಡರು. ಈ ಭಯಾನಕ ಕಾಯಿಲೆಯ ಗಂಭೀರತೆಯಿಂದಾಗಿ, ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್ ಅನ್ನು ಅಂತರರಾಷ್ಟ್ರೀಯ ವೈದ್ಯಕೀಯ ತುರ್ತುಸ್ಥಿತಿ ಎಂದು ಘೋಷಿಸಿತು.

ಮೊದಲ ಅಲೆ ಮತ್ತು ಎರಡನೇ ಅಲೆಯೆಂದು ಕಳೆದ ಕೆಲವು ವರ್ಷಗಳಿಂದ ವಿಶ್ವದ ದೇಶಗಳನ್ನು ಕರೋನಾ ವೈರಸ್‌ ಬೆದರಿಸುತ್ತಲೇ ಬಂದಿತು. ವೈದ್ಯಕೀಯ ಸಂಶೋಧಕರು ಇದಕ್ಕೆ ಲಸಿಕೆ ಹುಡುಕುವ ಮತ್ತು ಈ ಕಾಯಿಲೆಯಿಂದ ಹೊರಬರುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುದೀರ್ಘ ಸಂಶೋಧನೆಯ ನಂತರ, ಕರೋನಾ ವೈರಸ್‌ನ ಪರಿಣಾಮಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದ ಲಸಿಕೆಗಳನ್ನು ಕಂಡುಹಿಡಿದರು. ನಂತರ ಈ ಔಷಧದ ಕೊರತೆಯು ಹೆಚ್ಚಾಯಿತು.

ಪ್ರಸ್ತುತ ಕೊರೊನಾ ವೈರಸ್‌ನ ತೀವ್ರತೆ ಇಳಿಮುಖವಾಗಿದೆ. ಇದರಿಂದ ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ವಿವಿಧ ಅಂಶಗಳನ್ನು ಪರಿಗಣಿಸಿ, ಕರೋನಾ ವೈರಸ್‌ನ ತುರ್ತು ಪರಿಸ್ಥಿತಿ ಕೊನೆಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. “ಆದರೂ ಕೊರೊನಾ ವೈರಸ್‌ ಕೊನೆಗೊಂಡಿದೆ ಎಂದು ಯಾರೂ ಭಾವಿಸಬೇಡಿ. ಕಳೆದ ವಾರದವರೆಗೆ, ಕೊರೊನಾ ವೈರಸ್‌ನಿಂದ ಪ್ರತಿ ಮೂರು ನಿಮಿಷಕ್ಕೆ ಒಂದು ಸಾವು ದಾಖಲಾಗುತ್ತಿತ್ತು. ಮತ್ತು ಇದು ನಮಗೆ ತಿಳಿದಿರುವ ಲೆಕ್ಕಮಾತ್ರ” ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ. COVID no longer a global health emergency, WHO says