ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
August 2023 » Page 4 of 5 » Dynamic Leader
October 23, 2024
Home 2023 August (Page 4)
ದೇಶ

ನವದೆಹಲಿ: ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದ ಮೋದಿ ಅಲ್ಲಿನ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಇದರಲ್ಲಿ ಮತ್ತೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ವರಿಷ್ಠರು ರಣತಂತ್ರ ರೂಪಿಸುತ್ತಿದ್ದಾರೆ.

ಇದನ್ನೂ ಓದಿ: 10 ವರ್ಷಗಳಿಂದ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯದೆ ಏನು ಮಾಡಿತ್ತಿದ್ದೀರಿ?: ಪ್ರಧಾನಿಗೆ ಕಪಿಲ್ ಸಿಬಲ್ ಪ್ರಶ್ನೆ

ಈ ಹಿನ್ನಲೆಯಲ್ಲಿ ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲು ಪ್ರಧಾನಿ ಮೋದಿ ಇಂದು ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಬರಮಾಡಿಕೊಂಡರು. ನಂತರ ರಾಷ್ಟ್ರೀಯ ಅಧ್ಯಕ್ಷ ನಡ್ದಾ ಹಾಗೂ ಕೇಂದ್ರ ಸಚಿವರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಪ್ರಭಾವಿ ಜಾತಿ ಮುಖಂಡರ ಬೆಂಬಲ ಪಡೆಯಲು ಬಿಜೆಪಿ ನಿರ್ಧಾರ!

ರಾಜಕೀಯ

ನವದೆಹಲಿ: ಭ್ರಷ್ಟಾಚಾರವನ್ನು ಕೊನೆಗೊಳಿಸುವ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ನೀವು (ಮೋದಿ) ಸುಮಾರು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದೀರಿ; ಏನು ಮಾಡುತ್ತಿದ್ದೀರಿ?’ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ. ನಿನ್ನೆ (ಆಗಸ್ಟ್ 15) ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಭಾಷಣ ಮಾಡಿದರು. ಇದರಲ್ಲಿ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಇತ್ಯಾದಿಗಳನ್ನು ಎತ್ತಿ ತೋರಿಸಿ, ವಿರೋಧ ಪಕ್ಷಗಳನ್ನು ಟೀಕಿಸಿದರು.

ಇದನ್ನೂ ಓದಿ: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹ!

ಮುಂದಿನ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ಮತ್ತೊಮ್ಮೆ ಧ್ವಜಾರೋಹಣ ಮಾಡುವುದಾಗಿಯೂ ಅವರು ಆಶಿಸಿದರು. ‘ಮುಂದಿನ ಐದು ವರ್ಷಗಳು ಅಭಿವೃದ್ಧಿಯ ಅವಧಿಯಾಗಲಿದ್ದು, 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ’ ಎಂದು ಭಾಷಣಮಾಡಿದರು. ಪ್ರಧಾನಿಯವರ ಭಾಷಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹೀಗೆ ಹೇಳಿದ್ದಾರೆ:

ಇದನ್ನೂ ಓದಿ: ಉಪನಿಷತ್ತುಗಳು, ವೇದಗಳು ಮತ್ತು ಸಂಸ್ಕೃತ ಇಡೀ ಜಗತ್ತಿಗೆ ವಿಶ್ವಕೋಶಗಳಾಗಿವೆ; ಯಾವುದೇ ಆಕ್ಷೇಪವಿಲ್ಲದೆ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಒಪ್ಪಿಕೊಳ್ಳುವ ಅಗತ್ಯವನ್ನು ರೂಪಿಸಿಕೊಲ್ಲಿ! – ಅಮಿತ್ ಶಾ

‘ಭ್ರಷ್ಟಾಚಾರವನ್ನು ಕೊನೆಗೊಳಿಸುವ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ನೀವು (ಮೋದಿ) ಸುಮಾರು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದೀರಿ; ಏನು ಮಾಡುತ್ತಿದ್ದೀರಿ? ಮುಂದಿನ 5 ವರ್ಷ ಸುವರ್ಣ ಯುಗ ಎಂದೂ ಹೇಳಿದ್ದೀರಿ. ಯಾರಿಗೆ ಸುವರ್ಣ ಯುಗ? ಬಡವರು, ದಲಿತರು, ಅಲ್ಪಸಂಖ್ಯಾತರಿಗಾ? ಎಂದು ಅವರು ಪ್ರಧಾನಿಯನ್ನು ಪ್ರಶ್ನೆ ಮಾಡಿದ್ದಾರೆ.

ರಾಜಕೀಯ

ತಮಿಳುನಾಡು ಕುರುವೈ ಬೆಳೆಗೆ ಎರಡು ಪಟ್ಟು ನೀರು ಬಳಕೆ ಮಾಡಿದೆ. ನಾಲ್ಕು ಪಟ್ಟು ಕುರುವೈ ಬೆಳೆ ಕ್ಷೇತ್ರ ವಿಸ್ತರಣೆ ಮಾಡಿದೆ. ಕರ್ನಾಟಕ ಸರ್ಕಾರ ಇದನ್ನು ಸಿಡಬ್ಲುಎಂಎದಲ್ಲಿ ಪ್ರತಿಭಟಿಸದೇ ಮತ್ತು ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ ತಕ್ಷಣ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

“ರಾಜ್ಯದ ರೈತರಿಗೆ ಈ ಮೊದಲು ನೀರು ಬಿಡದೇ ನಮ್ಮ ರಾಜ್ಯದ ರೈತರ ಪಾಲನ್ನು ಡ್ಯಾಂನಲ್ಲಿ ಸ್ಟೋರೇಜ್ ಮಾಡಿ, ರಾಜ್ಯದ ರೈತರಿಗೆ ನೀರು ಕೊಡುವ ತೀರ್ಮಾನ ವಿಳಂಬ ಮಾಡಿ ಈಗ ನಮ್ಮ ರೈತರ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸುವ ಸ್ಥಿತಿ ನೀವು ತಂದೊಡ್ಡಿದ್ದೀರಿ.

ಇದನ್ನೂ ಓದಿ: ಹುಟ್ಟಿನಿಂದ ಮನುಷ್ಯರು ಎಲ್ಲರೂ ಸಮಾನರು; ಜನರ ನಡುವೆ ತಾರತಮ್ಯ ಮಾಡುವುದು ಅವಮಾನಕರ! – ನಟ ಕಮಲಹಾಸನ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬ ಹೇಳಿಕೆ ಕೊಟ್ಟ ಮರುದಿನವೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೀರಾವರಿ ಇಲಾಖೆ ತಮಿಳುನಾಡಿಗೆ ನೀರು ಬಿಟ್ಟಿರುವುದು, ರಾಜ್ಯದಲ್ಲಿ ಕಾವೇರಿ ನೀರು ನಿರ್ವಹಣೆಯಲ್ಲಿ ಒಮ್ಮತ ಇಲ್ಲ ಹಾಗೂ ನಮ್ಮ ರಾಜ್ಯದ ನೀರಿನ ಪಾಲನ್ನು ರಕ್ಷಣೆ ಮಾಡುವಂತ ಛಲವೂ ಕಾಣಿಸುತ್ತಿಲ್ಲ.

ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಈ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಯಬೇಕು” ಎಂದು ಹೇಳಿದ್ದಾರೆ.

ದೇಶ

ತಿರುನೆಲ್ವೇಲಿ ಜಿಲ್ಲೆ ನಂಗುನೇರಿಯ ದೊಡ್ದ ಬೀದಿಯ ನಿವಾಸಿ ಚಿನ್ನದುರೈ (ವಯಸ್ಸು 17) ತಂಗಿಯ ಹೆಸರು ಚಂದ್ರ ಸೆಲ್ವಿ. ಇಬ್ಬರೂ ವಳ್ಳಿಯೂರಿನ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಓದುತ್ತಿದ್ದಾರೆ. ಚಿನ್ನದುರೈ 12ನೇ ತರಗತಿಯಲ್ಲಿ ಓದುತ್ತಿದ್ದಾನೆ. ಚಿನ್ನದುರೈ ಜೊತೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಜಾತಿ ತಾರತಮ್ಯ ತೋರಿಸಿ ಓದದಂತೆ ತಡೆದಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಚಿನ್ನದುರೈ ಶಾಲೆಗೆ ಹೋಗಿರಲಿಲ್ಲ.

ಈ ವಿಷಯ ತಿಳಿದ ಶಾಲಾ ಆಡಳಿತ ಮಂಡಳಿ ಚಿನ್ನದುರೈಗೆ ಕಿರುಕುಳ ನೀಡಿದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿತು. ಇದರಿಂದ ಸಿಟ್ಟಿಗೆದ್ದ ಕೆಲವು ವಿದ್ಯಾರ್ಥಿಗಳು ಚಿನ್ನದುರೈ ಅವರ ಮನೆಗೆ ತೆರಳಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ತಡೆಯಲು ಯತ್ನಿಸಿದ ಆಕೆಯ ತಂಗಿ ಚಂದ್ರು ಸೆಲ್ವಿಯನ್ನೂ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಇಬ್ಬರನ್ನೂ ರಕ್ಷಿಸಲಾಗಿದ್ದು, ಸದ್ಯ ತಿರುನಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಉಪನಿಷತ್ತುಗಳು, ವೇದಗಳು ಮತ್ತು ಸಂಸ್ಕೃತ ಇಡೀ ಜಗತ್ತಿಗೆ ವಿಶ್ವಕೋಶಗಳಾಗಿವೆ; ಯಾವುದೇ ಆಕ್ಷೇಪವಿಲ್ಲದೆ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಒಪ್ಪಿಕೊಳ್ಳುವ ಅಗತ್ಯವನ್ನು ರೂಪಿಸಿಕೊಲ್ಲಿ! – ಅಮಿತ್ ಶಾ

ಈ ಘಟನೆಯಲ್ಲಿ 7 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಶಾಲಾ ವಿದ್ಯಾರ್ಥಿಗಳು ತಮ್ಮ ಸಹಪಾಠಿಯನ್ನು ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಇಡೀ ತಮಿಳುನಾಡನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯ ನಂತರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಜಾತಿ ಮತ್ತು ಜನಾಂಗೀಯ ಭಾವನೆಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆಯುವ ಹಿಂಸಾಚಾರ ತಪ್ಪಿಸಲು, ಸಾಮರಸ್ಯ ಮೂಡಿಸಲು ಮತ್ತು ಕ್ರಮಗಳನ್ನು ರೂಪಿಸಲು ನಿವೃತ್ತ ನ್ಯಾಯಮೂರ್ತಿ ಚಂದ್ರು ನೇತೃತ್ವದಲ್ಲಿ ಏಕವ್ಯಕ್ತಿ ಸಮಿತಿಯನ್ನು ರಚಿಸಲಾಗುವುದು ಎಂದು ಘೋಷಿಸಿದ್ದಾರೆ.

ಈ ಹಿನ್ನಲೆಯಲ್ಲಿ ಜನರ ನಡುವೆ ತಾರತಮ್ಯ ಮಾಡುವುದು ನಾಚಿಕೆಗೇಡು ಎಂಬ ಸಾಮಾಜಿಕ ಪಾಠವನ್ನು ಪ್ರಧಾನವಾಗಿ ಕಲಿಸಬೇಕು ಎಂದು ನಟ ಕಮಲಹಾಸನ್ ನೇತೃತ್ವದ ‘ಮಕ್ಕಳ್ ನೀಧಿ ಮೈಯಂ’ ಪಕ್ಷ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ. “ನಂಗುನೇರಿಯಲ್ಲಿ ಜಾತಿಯ ದ್ವೇಷಕ್ಕೆ ತುತ್ತಾಗಿರುವ ಸಹೋದರ ಚಿನ್ನದೊರೈ ಮತ್ತು ಅವರ ಸಹೋದರಿಗೆ ಸಾಂತ್ವನ ಹೇಳಲು ಜಗತ್ತಿನ ಯಾವುದೇ ಭಾಷೆಯಲ್ಲಿ ಪದಗಳಿಲ್ಲ. ಅವರು ಸುರಿಸಿದ ರಕ್ತ, ತಮಿಳುನಾಡಿನಲ್ಲಿ ಮುಗ್ದ ಮಕ್ಕಳ ಮನಸ್ಸಿನಲ್ಲೂ ಜಾತೀಯತೆ ಬೇರೂರಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ. ಸಹೋದರ ಚಿನ್ನದೊರೈ ಮತ್ತು ಅವರ ಸಹೋದರಿ ಬೇಗ ಗುಣಮುಖರಾಗಿ ಬರಬೇಕು. ಶಾಲೆಗೆ ಮರುಪ್ರವೇಶ ಮಾಡಿ ಉತ್ತಮ ಶಿಕ್ಷಣ ಪಡೆದು ಮಹಾನ್ ವಿಜೇತರಾಗಿ ಹೊರನಡೆಯಬೇಕು.

ಬಾಬಾಸಾಹೇಬ್ ಅಂಬೇಡ್ಕರರು ಕೂಡ ಓದುತ್ತಿರುವಾಗ ಇಂತಹ ದೌರ್ಜನ್ಯಗಳನ್ನು ಎದುರಿಸಿದರು; ನಂತರ ವಿಶ್ವ ಮೆಚ್ಚಿದ ಮಹಾನ್ ಶಿಕ್ಷಣ ತಜ್ಞರಾದರು. ಅವರಂತೆ ಇಲ್ಲಿ ಕ್ರೌರ್ಯಕ್ಕೆ ಒಳಗಾದ ಈ ಮಕ್ಕಳು ಕೂಡ ಜಗತ್ತು ಮೆಚ್ಚುವಷ್ಟು ವಿದ್ಯಾವಂತರಾಗಬೇಕು. ಅಂಬೇಡ್ಕರ್, ಗಾಂಧಿ, ಪೆರಿಯಾರ್, ನಾರಾಯಣ ಗುರು ಮತ್ತು ಇನ್ನಿತರ ನಾಯಕರು ಜಾತಿ ಅಸಮಾನತೆ ಮತ್ತು ದಬ್ಬಾಳಿಕೆಯ ವಿರುದ್ಧ ನಡೆಸಿದ ಯುದ್ಧವನ್ನು ನಾವು ಅದೇ ಉತ್ಸಾಹದಿಂದ ಮತ್ತೆ ಪ್ರಾರಂಭಿಸಲು ಒತ್ತಾಯಿಸಲ್ಪಟ್ಟಿದ್ದೇವೆ.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಪ್ರಭಾವಿ ಜಾತಿ ಮುಖಂಡರ ಬೆಂಬಲ ಪಡೆಯಲು ಬಿಜೆಪಿ ನಿರ್ಧಾರ!

ನಂಗುನೇರಿ ಸಮಸ್ಯೆಯ ಗಂಭೀರತೆಯನ್ನು ಮನಗಂಡು ತಮಿಳುನಾಡು ಸರ್ಕಾರ ತ್ವರಿತ ಕ್ರಮ ಕೈಗೊಂಡಿರುವುದು ಸಮಾಧಾನ ತಂದಿದೆ. ಶಾಲೆಗಳಲ್ಲಿ ಅನೇಕ ವಿಷಯಗಳನ್ನು ಕಲಿಸಲಾಗುತ್ತದೆ. ಹುಟ್ಟಿನಿಂದ ಮನುಷ್ಯರು ಎಲ್ಲರೂ ಸಮಾನರು; ಜನರ ನಡುವೆ ತಾರತಮ್ಯ ಮಾಡುವುದು ಅವಮಾನಕರ ಎಂಬುದು ಪ್ರಾಥಮಿಕವಾಗಿ ಕಲಿಸಬೇಕಾದ ಸಾಮಾಜಿಕ ಪಾಠ. ಶಾಲಾ ವಿದ್ಯಾರ್ಥಿಗಳು ಜಾತಿ ಗುರುತಿನ ಹಗ್ಗಗಳನ್ನು ಕಟ್ಟುವುದು, ವಾಹನಗಳಿಗೆ ಜಾತಿ ಹೆಸರು ಬರೆಸುವುದು, ಸಹವರ್ತಿ ವಿದ್ಯಾರ್ಥಿಗಳ ಮೇಲೆ ಒಂದೇ ಜಾತಿಯ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸುವುದು, ಮಾದಕ ವಸ್ತುಗಳ ಸೇವನೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವುದು ಕಹಿ ಸತ್ಯ.

ಈ ಪರಿಸ್ಥಿತಿಯನ್ನು ಬದಲಾಯಿಸಲು ಸರ್ಕಾರ, ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಕೆಲಸ ಮಾಡುವುದು ಅವಶ್ಯಕ. ಸಾಮಾಜಿಕ ಪ್ರಗತಿಗೆ ಶ್ರಮಿಸುತ್ತಿರುವ ಪ್ರಗತಿಪರ ಚಿಂತಕರು, ವಿದ್ವಾಂಸರು, ಕಲಾವಿದರನ್ನು ಕರೆತಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬೇಕು. ಸಾಮಾಜಿಕ ನ್ಯಾಯವನ್ನು ಪ್ರತ್ಯೇಕ ವಿಷಯವಾಗಿ ಕಲಿಸಬೇಕು. ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ರೂಪಿಸಿ ನಡೆಸಬೇಕು. ಜಾತಿ ತಾರತಮ್ಯ ಹೆಚ್ಚಿರುವ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಒಬ್ಬ ಸಾಮಾಜಿಕ ಕಾರ್ಯಕರ್ತನನ್ನು ಮಾರ್ಗದರ್ಶಕರನ್ನಾಗಿ (mentor) ನೇಮಿಸಬಹುದು. ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ತಾರತಮ್ಯ ಮತ್ತು ದ್ವೇಷ ಹರಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ: ಭಾರತ ಮಾತೆ ಕೇವಲ ಭೂಮಿ ಅಲ್ಲ; ನಿರ್ದಿಷ್ಟ ಸಂಸ್ಕೃತಿ, ಇತಿಹಾಸ, ಧರ್ಮಕ್ಕೆ ಸಂಬಂಧಿಸಿಲ್ಲ ಭಾರತ ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದೆ! – ರಾಹುಲ್ ಗಾಂಧಿ

ಶತಶತಮಾಗಳಿಂದ ತುಳಿತಕ್ಕೊಳಗಾದವರು ಶಿಕ್ಷಣವೇ ತಮನ್ನು ದಡಕ್ಕೆ ತರುವ ದಾರಿದೀಪ ಎಂಬುದನ್ನು ಅರಿತುಕೊಂಡು ಪ್ರಗತಿಯಲ್ಲಿರುವಾಗ ಅವರನ್ನು ಬೆಂಬಲಿಸುವುದು ಮತ್ತು ಅಪ್ಪಿಕೊಳ್ಳುವುದು ಆರೋಗ್ಯಕರ ಸಮುದಾಯದ ಕರ್ತವ್ಯವಾಗಿದೆ. ಮುಂದೆ ಇಂತಹ ಅನ್ಯಾಯ ಆಗದಂತೆ ತಡೆಯೋಣ” ಎಂದು ಉಲ್ಲೇಖಿಸಿದ್ದಾರೆ.

ದೇಶ ರಾಜಕೀಯ

ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಭಾವಿ ಜಾತಿ ಮುಖಂಡರ ಬೆಂಬಲ ಪಡೆಯುವಂತೆ ಬಿಜೆಪಿ ರಾಜ್ಯ ನಾಯಕರುಗಳಿಗೆ ಪಕ್ಷದ ನಾಯಕತ್ವ ಸೂಚನೆ ನೀಡಿದೆ ಎಂದು ವರದಿಯಾಗಿದೆ. ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಲ್ಲಿ ಹಾಗೂ ಪಕ್ಷದ ಆಂತರಿಕ ಗೊಂದಲದಿಂದ ಕರ್ನಾಟಕದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನಗಳು ಕಡಿಮೆಯಾಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

ಇದನ್ನೂ ಓದಿ: ಉಪನಿಷತ್ತುಗಳು, ವೇದಗಳು ಮತ್ತು ಸಂಸ್ಕೃತ ಇಡೀ ಜಗತ್ತಿಗೆ ವಿಶ್ವಕೋಶಗಳಾಗಿವೆ; ಯಾವುದೇ ಆಕ್ಷೇಪವಿಲ್ಲದೆ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಒಪ್ಪಿಕೊಳ್ಳುವ ಅಗತ್ಯವನ್ನು ರೂಪಿಸಿಕೊಲ್ಲಿ! – ಅಮಿತ್ ಶಾ

ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಭಾವಿ ಜಾತಿ ಮುಖಂಡರು, ಸಮುದಾಯ ಸಂಘಟನೆಗಳು, ಖ್ಯಾತ ಕ್ರೀಡಾ ಪಟುಗಳು, ಕೈಗಾರಿಕೋದ್ಯಮಿಗಳು, ಚಿತ್ರರಂಗದ ಗಣ್ಯರು ಮುಂತಾದವರ ಬೆಂಬಲ ಪಡೆಯಬೇಕು. ಇವರು ಬಹಿರಂಗವಾಗಿ ಬಿಜೆಪಿಗೆ ಬೆಂಬಲ ನೀಡದಿದ್ದರೂ ಬಿಜೆಪಿ ವಿರುದ್ಧ ಹೋಗದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: ಭಾರತ ಮಾತೆ ಕೇವಲ ಭೂಮಿ ಅಲ್ಲ; ನಿರ್ದಿಷ್ಟ ಸಂಸ್ಕೃತಿ, ಇತಿಹಾಸ, ಧರ್ಮಕ್ಕೆ ಸಂಬಂಧಿಸಿಲ್ಲ ಭಾರತ ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದೆ! – ರಾಹುಲ್ ಗಾಂಧಿ

ಇದರಿಂದ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ವಾತಾವರಣ ನಿರ್ಮಾಣವಾಗುವುದನ್ನು ತಪ್ಪಿಸಬಹುದು ಎಂದು ರಾಜ್ಯ ಅಧ್ಯಕ್ಷರುಗಳು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಿಗೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದೇಶ ರಾಜಕೀಯ

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದು ದೇಶ ಒಂದು ಭಾಷೆ ನೀತಿಯನ್ನು ಸಕ್ರಿಯವಾಗಿ ಜಾರಿಗೊಳಿಸುತ್ತಿದೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಹಿಂದಿಯಲ್ಲಿ ಹೆಸರಿಸುವ ಬಿಜೆಪಿ ಸರ್ಕಾರ ಇತರ ಭಾಷೆಗಳನ್ನು ಕಡೆಗಣಿಸುತ್ತಲೇ ಇದೆ. ಇದಲ್ಲದೆ, ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿಯನ್ನು ಬಳಸಲು ಹೇಳುವುದು, ಅಧಿಕೃತ ಪತ್ರವ್ಯವಹಾರಕ್ಕಾಗಿ ಇಂಗ್ಲಿಷ್ ಬದಲಿಗೆ ಹಿಂದಿ ಬಳಸುವುದು ಇತ್ಯಾದಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.

ಕೇಂದ್ರ ಸರ್ಕಾರದ ಈ ಕ್ರಮವನ್ನು ದಕ್ಷಿಣ ರಾಜ್ಯಗಳು, ಈಶಾನ್ಯ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ತೀವ್ರವಾಗಿ ಖಂಡಿಸಿವೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅಧಿಕೃತ ಭಾಷೆಯ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಅಮಿತ್ ಶಾ, “ಯಾವುದೇ ಆಕ್ಷೇಪವಿಲ್ಲದೆ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಒಪ್ಪಿಕೊಳ್ಳುವ ಅಗತ್ಯವನ್ನು ರೂಪಿಸಬೇಕು. ಹಿಂದಿಯನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದರೂ ಅಂತಿಮವಾಗಿ ಹಿಂದಿಯನ್ನು ಯಾವುದೇ ಆಕ್ಷೇಪವಿಲ್ಲದೆ ಒಪ್ಪಿಕೊಳ್ಳಬೇಕು” ಎಂದು ಹೇಳಿದ್ದರು.

ಇದನ್ನೂ ಓದಿ: ಭಾರತ ಮಾತೆ ಕೇವಲ ಭೂಮಿ ಅಲ್ಲ; ನಿರ್ದಿಷ್ಟ ಸಂಸ್ಕೃತಿ, ಇತಿಹಾಸ, ಧರ್ಮಕ್ಕೆ ಸಂಬಂಧಿಸಿಲ್ಲ ಭಾರತ ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದೆ!

ಇದಕ್ಕೆ ಪ್ರಮುಖ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಯಾವುದಕ್ಕೂ ಕಿವಿಗೊಡುವುದಿಲ್ಲ ಎಂದ ಅಮಿತ್ ಶಾ, ಹಿಂದಿಯನ್ನು ಎಲ್ಲರೂ ಕಲಿಯಬೇಕು ಎಂದು ಹೇಳಿದ್ದಾರೆ.

ಗುಜರಾತ್‌ ಅಹಮದಾಬಾದ್‌ನ ಐಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, “ಇಂಗ್ಲಿಷ್ ಜೊತೆಗೆ, ಮಕ್ಕಳು ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಕಲಿಯುತ್ತಾರೆ. ಹಾಗೆಯೇ ಗುಜರಾತಿಗಳು ಗುಜರಾತಿ ಭಾಷೆಯೊಂದಿಗೆ ಹಿಂದಿಯನ್ನೂ ಕಲಿಯಬೇಕು. ಅಸ್ಸಾಮಿಗಳು ಅಸ್ಸಾಮಿ ಭಾಷೆಯ ಜೊತೆಗೆ ಹಿಂದಿಯನ್ನೂ ಕಲಿಯಬೇಕು; ಅದೇ ರೀತಿ ಇತರರು ತಮ್ಮ ಭಾಷೆಯೊಂದಿಗೆ ಹಿಂದಿಯನ್ನು ಕಲಿಯಬೇಕು. ಹೀಗಾದರೆ ನಮ್ಮ ದೇಶದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಉಪನಿಷತ್ತುಗಳು, ವೇದಗಳು ಮತ್ತು ಸಂಸ್ಕೃತ ಇಡೀ ಜಗತ್ತಿಗೆ ವಿಶ್ವಕೋಶಗಳಾಗಿವೆ. ಆದ್ದರಿಂದ ಅದನ್ನು ಕಲಿಯಬೇಕು. ಹಾಗೆ ಕಲಿತರೆ ಜೀವನದಲ್ಲಿ ಯಾವ ಸಮಸ್ಯೆಯೂ ನಿಮಗೆ ಸಮಸ್ಯೆಯಾಗಿ ಇರುವುದಿಲ್ಲ” ಎಂದು ಹೇಳಿದ್ದಾರೆ. ಅವರ ಮಾತು ಮತ್ತೆ ವಿವಾದಕ್ಕೆ ಕಾರಣವಾಗಿದೆ.

ದೇಶ ರಾಜಕೀಯ

ನವದೆಹಲಿ: ‘ಭಾರತ ಮಾತೆ’ ಕೇವಲ ಭೂಮಿ ಅಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಪ್ರಕಟಿಸಿದ ಪೋಸ್ಟ್‌ನಲ್ಲಿ, ‘ಕಳೆದ ವರ್ಷ ನಾನು ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 145 ದಿನಗಳ ಕಾಲ ಪಾದಯಾತ್ರೆ ಮಾಡಿದ್ದೇನೆ. ಸಮುದ್ರ ತೀರದಿಂದ ಪ್ರಾರಂಭವಾದ ನನ್ನ ಪ್ರಯಾಣ, ಬಿಸಿಲು, ಧೂಳು, ಮಳೆ, ಕಾಡು, ನಗರಗಳು, ಪರ್ವತಗಳ ಮೂಲಕ ನಾನು ಕಾಶ್ಮೀರದ ಹಿಮವನ್ನು ತಲುಪಿದೆ. ಅನೇಕ ವರ್ಷಗಳಿಂದ ನಾನು ಪ್ರತಿದಿನ 8 ಕಿಮೀ ಓಡುತ್ತೇನೆ.

ಹಾಗಾದರೆ ಪ್ರತಿದಿನ ಏಕೆ 25 ಕಿಮೀ ಓಡಬಾರದು ಎಂದು ನಾನು ಯೋಚಿಸಿದೆ? ನಿತ್ಯ 25 ಕಿ.ಮೀ.ಗಳನ್ನು ಸುಲಭವಾಗಿ ಕ್ರಮಿಸಬಲ್ಲೆ ಎಂದು ನಂಬಿದ್ದೆ. ಹಾಗೆ ಪಾದಯಾತ್ರೆ ಮಾಡುವಾಗ ಮೊಣಕಾಲು ನೋವು ಕಾಣಿಸಿಕೊಂಡಿತು. 3,800 ಕಿಲೋಮೀಟರ್ ಪ್ರಯಾಣವನ್ನು ನಾನು ಹೇಗೆ ಪೂರ್ಣಗೊಳಿಸುವುದು? ಎಂದು ಯೋಚಿಸುತ್ತಾ ಒಬ್ಬನೇ ಅಳುತ್ತಿದ್ದೆ. ಈ ಪ್ರಯಾಣವನ್ನು ನಿಲ್ಲಿಸಲು ಅಥವಾ ಈ ಯೋಜನೆಯನ್ನು ಬಿಡಲು ನಾನು ಯೋಚಿಸಿದಾಗ, ಯಾರಾದರೂ ಎಲ್ಲಿಂದಲೋ ಓಡಿ ಬಂದು ನನಗೆ ಪ್ರೀತಿಯ ಉಡುಗೊರೆಯನ್ನು ನೀಡುತ್ತಿದ್ದರು.

ಒಮ್ಮೆ ಹುಡುಗಿ ಪತ್ರ ಕೊಟ್ಟಳು; ಅಜ್ಜಿ ಬಾಳೆಹಣ್ಣಿನ ಚಿಪ್ಸ್ ಕೊಟ್ಟರು; ಒಬ್ಬರು ಓಡಿ ಬಂದು ನನ್ನನ್ನು ತಬ್ಬಿಕೊಂಡರು. ‘ಭಾರತ ಮಾತೆ’ ಕೇವಲ ಭೂಮಿ ಅಲ್ಲ. ನಿರ್ದಿಷ್ಟ ಸಂಸ್ಕೃತಿ, ಇತಿಹಾಸ, ಧರ್ಮಕ್ಕೆ ಸಂಬಂಧಿಸಿಲ್ಲ. ಭಾರತ ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದೆ. ಭಾರತವು ಎಷ್ಟೇ ದುರ್ಬಲ ಅಥವಾ ಬಲಶಾಲಿಯಾಗಿದ್ದರೂ, ನೋವು, ಸಂತೋಷ ಮತ್ತು ಭಯದಿಂದ ನಿಗ್ರಹಿಸಲ್ಪಟ್ಟಿದೆ’ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಭಾರತ ಏಕತಾ ಪಾದಯಾತ್ರೆಯ ಎರಡನೇ ಹಂತದ ಕೆಲಸಗಳು ನಡೆಯುತ್ತಿರುವ ಈ ವೇಳೆಯಲ್ಲಿ ಇಂದು ರಾಹುಲ್ ಗಾಂಧಿ ಅವರ ಪೋಸ್ಟ್ ಮಹತ್ವವನ್ನು ಪಡೆದುಕೊಂಡಿದೆ. ಅಕ್ಟೋಬರ್ 2 ರಿಂದ ಗುಜರಾತ್‌ನ ಪೋರಬಂದರ್‌ನಿಂದ ಪ್ರಾರಂಭಿಸಿ ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ಕೊನೆಗೊಳ್ಳುವ ಎರಡನೇ ಹಂತದ ಪಾದಯಾತ್ರೆಯನ್ನು ಅವರು ಮುಂದುವರಿಸಲಿದ್ದಾರೆ ಎಂದು ಕಾಂಗ್ರೆಸ್ ಉನ್ನತ ನಾಯಕರಿಂದ ತಿಳಿದುಬಂದಿದೆ.

ದೇಶ

ಡಿ.ಸಿ.ಪ್ರಕಾಶ್

ಆಗಸ್ಟ್ 8, 1942 ಭಾರತದ ಸ್ವಾತಂತ್ರ‍್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಳ್ಳುವವರಿಗೆ ಮರೆಯಲಾಗದ ದಿನ. ಆ ದಿನವೇ ಮಹಾತ್ಮಾ ಗಾಂಧಿಯವರು ಮುಂಬೈ ಕಾಂಗ್ರೆಸ್ ಸಮ್ಮೇಳನದಲ್ಲಿ “ಕ್ವಿಟ್ ಇಂಡಿಯಾ” ಚಳವಳಿಯನ್ನು ಘೋಷಿಸಿದರು. ಇದರ ಪರಿಣಾಮದಿಂದ ಐದು ವರ್ಷಗಳ ನಂತರ, 1947 ಆಗಸ್ಟ್ 15 ರಂದು ಬ್ರಿಟಿಷರು ಭಾರತವನ್ನು ತೊರೆದರು.

1939 ಸೆಪ್ಟೆಂಬರ್ 1 ರಂದು ಜರ್ಮನಿ ಪೋಲೆಂಡ್ ಮೇಲೆ ಆಕ್ರಮಣ ಮಾಡಿದಾಗ ಎರಡನೇ ಮಹಾಯುದ್ಧ ಪ್ರಾರಂಭವಾಯಿತು. ಜರ್ಮನಿಯ ಆಕ್ರಮಣ ಕ್ರಮವನ್ನು ಖಂಡಿಸಿದ ಇಂಗ್ಲೆಂಡ್, ಜರ್ಮನಿಯ ಮೇಲೆ ಯುದ್ಧವನ್ನು ಘೋಷಿಸಿತು. ಅಲ್ಲದೇ ಘೋಷಿಸಿದ ಕೆಲವೇ ಗಂಟೆಗಳಲ್ಲಿ ‘ಜರ್ಮನಿಯ ವಿರುದ್ಧ ಭಾರತವೂ ಯುದ್ಧರಂಗದಲ್ಲಿದೆ’ ಎಂದು ಭಾರತೀಯ ವೈಸ್‌ರಾಯ್ ಲಾರ್ಡ್ ಲಿನ್ಲಿತ್ಗೋ ಘೋಷಿಸಿದರು. ವೈಸ್‌ರಾಯ್ ತಮ್ಮ ಅಭಿಪ್ರಾಯವನ್ನು ಯಾರ ಬಳಿಯೂ ಕೇಳದೆ,  ಭಾರತವನ್ನು ಯುದ್ಧದ ಮುನ್ನಲೆಗೆ ತಂದಿದ್ದು ಭಾರತೀಯರಲ್ಲಿ ಅಸಮದಾನವನ್ನು ಉಂಟುಮಾಡಿತು. ಕಾಂಗ್ರೆಸ್ ಪಕ್ಷವು ಫ್ಯಾಸಿಸಂ ಮತ್ತು ನಾಜಿಸಂ ವಿರುದ್ಧದ ನಿಲುವನ್ನು ತಳೆದಿತ್ತಾದರೂ ನೆಹರೂ ಹೇಳಿದಂತೆ ‘ಭಾರತೀಯ ಜನರು ಗುಲಾಮರಾಗಿ ಯುದ್ಧದಲ್ಲಿ ಭಾಗವಹಿಸುವುದಿಲ್ಲ’ ಎಂಬ ವಿಚಾರದಲ್ಲಿ ಸ್ಪಷ್ಟವಾಗಿತ್ತು.

ಯುದ್ಧದ ನಂತರ ಬ್ರಿಟನ್ ಸರ್ಕಾರ ಭಾರತಕ್ಕೆ ಸ್ವಾತಂತ್ರ‍್ಯವನ್ನು ನೀಡುತ್ತದೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ಇಂಗ್ಲೆಂಡ್ ಸರ್ಕಾರದಿಂದ ಯಾವ ಭರವಸೆಯ ಪ್ರಕಟನೆಯೂ ಹೊರಬಿದ್ದಿಲ್ಲದ ಕಾರಣ, ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ನಿರೀಕ್ಷೆಗೆ ವಿರುದ್ಧವಾಗಿ ‘ಸಮಿತಿಗಳನ್ನು ರಚಿಸಲಾಗುವುದು ಮತ್ತು ಅವುಗಳಲ್ಲಿ ಭಾರತೀಯರನ್ನು ಪ್ರತಿನಿಧಿಸಲಾಗುವುದು’ ಎಂದು ವೈಸ್‌ರಾಯ್ ಪ್ರಕಟಿಸಿದ್ದರಿಂದ ಕೆಂಡಾಮಂಡಲವಾದ ಕಾಂಗ್ರೆಸ್, ಇದನ್ನು ಒಪ್ಪಿಕೊಳ್ಳದಿದ್ದರೂ ಅದರ ವಿರುದ್ಧ ಯಾವುದೇ ಗಂಭೀರವಾದ ಪ್ರತಿಭಟನೆಗಳನ್ನು ನಡೆಸಲು ಮುಂದಾಗಲಿಲ್ಲ. ಯುದ್ಧದ ಸಂಧರ್ಭದಲ್ಲಿ ಬ್ರಿಟಿಷ್ ಸರ್ಕಾರದೊಂದಿಗೆ ಘರ್ಷಣೆಯ ಹಾದಿಯನ್ನು ಅನುಸರಿಸುವುದು ಸೂಕ್ತವಲ್ಲ ಎಂಬುದು ಕಾಂಗ್ರೆಸ್‌ನ ನಿಲುವಾಗಿತ್ತು. ಆದರೂ ತನ್ನ ವಿರೋಧವನ್ನು ವ್ಯಕ್ತಪಡಿಸಲು ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದ ಎಲ್ಲಾ ಪ್ರಾಂತ್ಯಗಳಲ್ಲಿಯೂ ರಾಜೀನಾಮೆಯನ್ನು ಘೋಷಿಸಿತು.

ಎರಡನೇ ಮಹಾಯುದ್ಧ

ಯುದ್ಧದ ಸಂದರ್ಭದಲ್ಲಿ ಭಾರತದ ಬೆಂಬಲವನ್ನು ಪಡೆಯಲು ಬ್ರಿಟಿಷ್ ಸರ್ಕಾರ ಆಗಸ್ಟ್ 8, 1940 ರಂದು ‘ಆಗಸ್ಟ್ ರಿಯಾಯಿತಿ’ಯನ್ನು ಘೋಷಿಸಿತು. ಯುದ್ಧದ ನಂತರ ಹೊಸ ರಾಜಕೀಯ ವ್ಯವಸ್ಥೆಯನ್ನು ರೂಪಿಸಲು ಭಾರತೀಯ ಪ್ರತಿನಿಧಿಗಳನ್ನು ಒಳಗೊಂಡ ಸಂಸ್ಥೆಯನ್ನೂ ರಚಿಸಲಾಗುವುದು ಎಂದು ಘೋಷಿಸಿತು. ಗಾಂಧಿ ಅದನ್ನು ಒಪ್ಪಿಕೊಳ್ಳದೇ ವೈಯಕ್ತಿಕ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಅದೇ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿ ವಿರುದ್ಧ ಜನರನ್ನು ದೊಡ್ಡಮಟ್ಟದಲ್ಲಿ ಸಂಘಟಿಸಲು ಗಾಂಧಿ ಹಿಂದೇಟು ಹಾಕಿದರು.

1941 ಡಿಸಂಬರ್ 7 ರಂದು ಜಪಾನ್ ‘ಪರ್ಲ್ ಹಾರ್ಬರ್’ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕಾವನ್ನು ಎರಡನೇ ಮಹಾಯುದ್ದಕ್ಕೆ ಎಳೆದು ತಂದಿತು. ಎರಡನೇ ಮಹಾಯುದ್ಧದ ಆರಂಭದಲ್ಲಿ, ಜರ್ಮನಿ ನೇತೃತ್ವದ ಆಕ್ಷಿಸ್ (ಜರ್ಮನಿ, ಇಟಲಿ, ಜಪಾನ್ ಮತ್ತಿತರ ರಾಷ್ಟ್ರಗಳು) ಶಕ್ತಿಗಳು ಉತ್ತಮ ಯಶಸ್ಸಿನೊಂದಿಗೆ ಮುನ್ನಡೆಯುತ್ತಿದ್ದವು. ಅಮೆರಿಕ-ಬ್ರಿಟಿನ್ ಪಡೆಗಳು ಹಿನ್ನಡೆಯನ್ನು ಎದುರಿಸುತ್ತಿದ್ದವು. ಜಪಾನಿನ ದಾಳಿಯಲ್ಲಿ ಬ್ರಿಟಿಷ್ ಪಡೆಗಳು ಸೋಲನ್ನು ಅನುಭವಿಸಿದವು. ಫಿಲಿಪೈನ್ಸ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ವಿಯೆಟ್ನಾಂ ಅನ್ನು ಸತತವಾಗಿ ಗೆದ್ದ ಜಪಾನ್ ನಂತರ ಬರ್ಮಾದತ್ತ ಸಾಗಿತ್ತು. ಅದರ ಮುಂದಿನ ಗುರಿ ಭಾರತವನ್ನು ವಶಪಡಿಸಿಕೊಳ್ಳುವುದೇ ಆಗಿತ್ತು.

ಬ್ರಿಟಿಷ್ ಭಾರತವನ್ನು ಜಪಾನ್ ಎದುರು ಕಳೆದುಕೊಳ್ಳುವ ಭಯದಲ್ಲಿತ್ತು. ಆ ಸಮಯದಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್, ಬ್ರಿಟನ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರಿಗೆ ಪತ್ರವೊಂದನ್ನು ಬರೆದು, ಭಾರತೀಯ ಜನರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಅಗತ್ಯತೆಯನ್ನು ಒತ್ತಿ ಹೇಳಿದರು. ಹಾಗಾಗಿ ಬ್ರಿಟನ್ ಸರ್ಕಾರ ತರಾತುರಿಯಲ್ಲಿ ಭಾರತದೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳಲು ಪ್ರಯತ್ನಿಸಿತು. ಇದಕ್ಕಾಗಿ ಪ್ರಧಾನಿ ಚರ್ಚಿಲ್, ಭಾರತೀಯರೊಂದಿಗೆ ಮಾತುಕತೆ ನಡೆಸಲು ಕ್ರಿಪ್ಸ್ ಎಂಬ ಬ್ರಿಟಿಷ್ ಮಂತ್ರಿಯನ್ನು ಕಳುಹಿಸಿಕೊಟ್ಟರು. ಕ್ರಿಪ್ಸ್ ಅವರು ನೆಹರೂವಿನ ಸ್ನೇಹಿತರಾಗಿದ್ದ ಕಾರಣ ಅವರ ಆಗಮನವು ಭಾರತದಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿತ್ತು.

ಮಹಾತ್ಮ ಗಾಂಧಿಯೊಂಧಿಗೆ ಕ್ರಿಪ್ಸ್

ಕ್ರಿಪ್ಸ್ ಒತ್ತು ತಂದ ಬ್ರಿಟನ್ ಸರ್ಕಾರದ ಶಿಫಾರಸ್ಸುಗಳು:
ಯುದ್ಧದ ನಂತರ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಲಾಗುವುದು. (ಅಂದರೆ, ಕೆನಡಾ, ಆಸ್ಟ್ರೇಲಿಯಾ, ಮತ್ತು ನ್ಯೂಜಿಲೆಂಡ್ ದೇಶಗಳು ಬ್ರಟಿಷ್ ರಾಜನನ್ನು ತನ್ನ ಮುಖ್ಯಸ್ಥನಾಗಿ ಸ್ವೀಕರಿಸಿಕೊಂಡಿರುವ ದೇಶಗಳಂತೆೆ)

ಯುದ್ಧದ ನಂತರ ಸ್ವದೇಶಿ ರಾಜ್ಯಗಳು ಮತ್ತು ಬ್ರಿಟಿಷ್ ಭಾರತೀಯ ಪ್ರಾಂತ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಸಂವಿಧಾನ ಸಭೆಯನ್ನು ಸ್ಥಾಪಿಸಲಾಗುವುದು.

ಬ್ರಿಟಿಷ್ ಭಾರತದಲ್ಲಿನ ಯಾವುದೇ ಪ್ರಾಂತ್ಯವು ಈ ಸಂವಿಧಾನವನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ, ಅದು ಹಾಗೆಯೇ ಮುಂದುವರಿಯಲು ಅಥವಾ ತನ್ನದೇ ಆದ ಪ್ರತ್ಯೇಕ ಸಂವಿಧಾನವನ್ನು ರಚಿಸುವ ಮತ್ತು ಹಿಂತೆಗೆದುಕೊಳ್ಳುವ ಅವಕಾಶ ನೀಡಲಾಗುವುದು.

ಕ್ರಿಪ್ಸ್ ಒತ್ತು ತಂದ ಬ್ರಿಟನ್ ಸರ್ಕಾರದ ಶಿಪಾರಸ್ಸುಗಳನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ನಿರಾಕರಿಸಿತು. ‘ಇದು ದೇಶವನ್ನು ಒಡೆಯುವ ಹೇಳಿಕೆ’ ಎಂದ ಕಾಂಗ್ರೆಸ್ ಇದನ್ನು ತಳ್ಳಿಹಾಕಿತು. ಗಾಂಧಿ ಇದನ್ನು ‘ಪೋಸ್ಟ್ ಡೇಟೆಡ್ ಚೆಕ್’ ಎಂದು ಟೀಕಿಸಿದರು.

ದೇಶವನ್ನು ವಿಭಜಿಸುವ ಯಾವುದೇ ಸಲಹೆಯನ್ನು ಸ್ವೀಕರಿಸಲು ಕಾಂಗ್ರೆಸ್ ಸಿದ್ಧವಿರಲಿಲ್ಲ. ಅಲ್ಲದೇ ‘ಭಾರತೀಯರ ಅಭಿಪ್ರಾಯ ಕೇಳದೆ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ’ ಎಂದು ಬಹಿರಂಗವಾಗಿಯೇ ಹೇಳಿತ್ತು. ಹಲವಾರು ಸುತ್ತಿನ ಮಾತುಕತೆಗಳ ನಂತರವೂ ಕ್ರಿಪ್ಸ್ನ ಪ್ರಯತ್ನವು ವಿಫಲವಾಯಿತು. ಅದಕ್ಕೆ ಮುಖ್ಯ ಕಾರಣ, ಭಾರತದಲ್ಲಿ ತಕ್ಷಣವೇ ರಾಷ್ಟ್ರ ರಾಜಕಾರಣವನ್ನು ಸ್ಥಾಪಿಸಲು ಬ್ರಿಟಿಷರು ನಿರಾಕರಣೆ ಮಾಡಿದ್ದೆ ಇದಕ್ಕೆ ಕಾರಣವಾಗಿತ್ತು. ವೈಸ್‌ರಾಯ್‌ನ ಅಧಿಕಾರವನ್ನು ಕಡಿಮೆ ಮಾಡಲು ಚರ್ಚಿಲ್ ಸಿದ್ಧರಿರಲಿಲ್ಲ. ಅವರ ಕೈಗೊಂಬೆಯಂತೆ ಕೆಲಸ ಮಾಡಲು ಇಲ್ಲಿ ಯಾವ ರಾಷ್ಟ್ರೀಯ ನಾಯಕರೂ ಸಿದ್ಧವಾಗಿರಲಿಲ್ಲ. ರೂಸ್ವೆಲ್ಟ್ ಅವರ ರಾಯಭಾರಿ ತಮ್ಮ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ‘ನೆಹರೂ ಮತ್ತು ಕ್ರಿಪ್ಸ್ ಐದು ನಿಮಿಷಗಳಲ್ಲಿ ಪರಿಹರಿಸಬಹುದಾದ ಈ ಸಮಸ್ಯೆಯನ್ನು ಲಂಡನ್ ಬಯಸದ ಕಾರಣ ಪರಿಹರಿಸಲಾಗದಂತಾಯಿತು’ ಎಂದು ವಿವರಿಸಿದ್ದಾರೆ. ಕ್ರಿಪ್ಸ್ನ ಸೋಲು ಗಾಂಧಿಯವರ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿತು. ಬಿಳಿಯರನ್ನು ಹೊರ ಹಾಕಬೇಕಾದರೆ ಜನಪರ ಹೋರಾಟವೇ ಇದಕ್ಕೆ ಸರಿಯಾದ ಮಾರ್ಗ ಎಂಬ ನಿರ್ಧಾರಕ್ಕೆ ಅವರು ಬಂದರು.

1942 ಜುಲೈ 14 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ‘ಭಾರತ ಬಿಟ್ಟು ತೊಲಗಿ’ ಎಂಬ ನಿರ್ಣಯವನ್ನು ತೆಗೆದುಕೊಂಡಿತು. ಬ್ರಿಟಿಷ್ ಸರ್ಕಾರವನ್ನು ತಮ್ಮ ಬೇಡಿಕೆಗಳಿಗೆ ಮಣಿಯುವಂತೆ ಒತ್ತಡ ಹೇರುವ ಹೋರಾಟವೇ ‘ಕ್ವಿಟ್ ಇಂಡಿಯಾ ಚಳುವಳಿ’ ಎಂದು ಗಾಂಧಿ ಭಾವಿಸಿದ್ದರು. ಭಾರತದ ವಿಮೋಚನೆಯು ಭಾರತದ ಭದ್ರತೆಗೆ ಮಾತ್ರವಲ್ಲ, ಪ್ರಪಂಚದ ಭದ್ರತೆಗೂ ಸಹ ಅಗತ್ಯವಾಗಿದೆ. ನಾಜಿಸಂ, ಫ್ಯಾಸಿಸಂ, ಮಿಲಿಟರಿ ಸರ್ವಾಧಿಕಾರ ಮತ್ತು ಸಾಮ್ರಾಜ್ಯಶಾಹಿಯಂತಹ ಜನವಿರೋಧಿ ಶಕ್ತಿಗಳನ್ನು ಶಕ್ತಿಯುತವಾಗಿ ಎದುರಿಸಬೇಕಾದರೆ ಭಾರತದ ವಿಮೋಚನೆ ಅತ್ಯಗತ್ಯವೆಂಬುದರಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿತ್ತು.

ಕ್ವಿಟ್ ಇಂಡಿಯಾ ಚಳುವಳಿ

1942 ಆಗಸ್ಟ್ 8 ರಂದು ಬಾಂಬೆ ಗೊವಾಳಿಯ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಸಭೆಯು ‘ಕ್ವಿಟ್ ಇಂಡಿಯಾ’ ನಿರ್ಣಯವನ್ನು ಅಂಗೀಕರಿಸಿತು. ‘ಮಾಡು ಇಲ್ಲವೇ ಮಡಿ’ ಎಂಬ ಗಾಂಧಿಯವರ ಘೋಷಣೆಯೊಂದಿಗೆ ಚಳುವಳಿಯನ್ನು ಪ್ರಾರಂಭಿಸುವ ಅಗತ್ಯತೆಯ ಬಗ್ಗೆ ಗಾಂಧಿ ಮಾತನಾಡಿದರು. ಅವರು ಸಮ್ಮೇಳನದಲ್ಲಿ 2 ಗಂಟೆ 20 ನಿಮಿಷಗಳ ಕಾಲ ಭಾವುಕರಾಗಿ ಮಾತನಾಡಿದರು. ‘ಸ್ವಾತಂತ್ರ‍್ಯ ತಕ್ಷಣವೇ ಬರಬೇಕು; ಇಂದು ರಾತ್ರಿ ಸ್ವಾತಂತ್ರ‍್ಯವನ್ನು ಖಾತರಿಪಡಿಸಿದರೆ, ಅದು ಬೆಳಗಾಗುವ ಮೊದಲು ಇರಬೇಕು. ಈ ಕ್ಷಣದಿಂದ ದೇಶದ ಪ್ರತಿಯೊಬ್ಬರೂ ನಾನು ಸ್ವತಂತ್ರ ವ್ಯಕ್ತಿ ಎಂದು ಭಾವಿಸಿಕೊಳ್ಳಬೇಕು. ನೀವು ಇನ್ನು ಮುಂದೆ ಗುಲಾಮರಲ್ಲ. ಇದುವೇ ಸ್ವಾತಂತ್ರ‍್ಯದ ಮೂಲತತ್ವ. ನಾನು ಗುಲಾಮನಲ್ಲ ಎಂದು ಭಾವಿಸಿದ ಆ ಕ್ಷಣದಿಂದಲೇ ಗುಲಾಮಗಿರಿಯ ಸಂಕೋಲೆಗಳು ಒಡೆಯುತ್ತವೆ. ನಾನೊಂದು ತಾರಕ ಮಂತ್ರವನ್ನು ಹೇಳುತ್ತೇನೆ; ಇದನ್ನು ಮರೆಯದೆ ನೆನಪಿನಲ್ಲಿಡಿ. ‘ಮಾಡು ಇಲ್ಲವೇ ಮಡಿ’ ಎಂಬುದೇ ನಿಮ್ಮೆಲ್ಲರ ಉಸಿರಾಗಿರಬೇಕು. ಭಾರತವನ್ನು ಮುಕ್ತಗೊಳಿಸೋಣ ಅಥವಾ ಆ ಪ್ರಯತ್ನದಲ್ಲಿ ಸಾಯೋಣ. ಗುಲಾಮಗಿರಿ ಶಾಶ್ವತವಾಗಿರುವುದನ್ನು ನೋಡಲು ನಾವು ಬದುಕಬೇಕಾಗಿಲ್ಲ’ ಎಂದು ಮಹಾತ್ಮಗಾಂಧಿ ಮೊಳಗಿದರು.

ಆಗಸ್ಟ್ 9 ರಂದು ‘ಕ್ವಿಟ್ ಇಂಡಿಯಾ’ ಆಂದೋಲನವು ದೇಶದಾದ್ಯಂತ ವ್ಯಾಪಕವಾಗಿ ಹರಡಿತು. ಕಸ್ತೂರಿ ಭಾಯ್ ಗಾಂಧಿ, ಮೀರಾ ಬೆನ್, ವಲ್ಲಭಭಾಯಿ ಪಟೇಲ್, ಜವಾಹರ್‌ಲಾಲ್ ನೆಹರು, ಮೌಲಾನಾ ಅಬುಲ್ ಕಲಾಂ ಆಜಾದ್ ಮುಂತಾದ ಅನೇಕ ನಾಯಕರನ್ನು ಬಂಧಿಸಿ ಬೇರೆ ಬೇರೆ ಜೈಲುಗಳಿಗೆ ಕರೆದೊಯ್ಯಲಾಯಿತು. ಆಗಸ್ಟ್ 11ರ ವೇಳೆಗೆ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಮುಖ ನಾಯಕರನ್ನೂ ಬಂಧಿಸಲಾಗಿತ್ತು. ಪುಣೆಯ ಆಗಾಖಾನ್ ಅರಮನೆಯಲ್ಲಿ ಗಾಂಧಿಯನ್ನು ಎರಡು ವರ್ಷಗಳ ಕಾಲ ಬಂಧನದಲ್ಲಿ ಇಡಲಾಯಿತು. ಅವರು ಜೈಲಿನಲ್ಲಿ 21 ದಿನಗಳ ಕಾಲ ಉಪವಾಸ ಇದ್ದರು. ಗಾಂಧಿಯವರ ಪತ್ನಿ ಕಸ್ತೂರಿಭಾಯ್ ಗಾಂಧಿ ಫೆಬ್ರವರಿ 22, 1944 ರಂದು ಜೈಲುವಾಸದ 18ನೇ ತಿಂಗಳಲ್ಲಿ ನಿಧನರಾದರು. ನೆಹರೂ ಮತ್ತು ಅಬುಲ್ ಕಲಾಂ ಆಜಾದ್ ಮುಂತಾದ ನಾಯಕರು, ಅಹಮದ್ ನಗರ ಕೋಟೆಯಲ್ಲಿ ಜೈಲು ಸೇರಿದ್ದರು. ಎರಡನೇ ಮಹಾಯುದ್ಧ ಮುಗಿಯುವವರೆಗೂ ನೆಹರೂವನ್ನು ಬಿಡುಗಡೆ ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷ ಯೋಜಿಸಿದ್ದ ಪ್ರತಿಭಟನೆಯನ್ನು, ಮುಂದುವರಿಸಲು ಬಿಡದ ಬ್ರಿಟಿಷ್ ಸರ್ಕಾರ, ಕಾಂಗ್ರೆಸ್ ಪಕ್ಷವನ್ನು ಎಲ್ಲಾ ರೀತಿಯಲ್ಲೂ ದಮನ ಮಾಡಿತು. ಆದರೆ ‘ಭಾರತ ಬಿಟ್ಟು ತೊಲಗಿ’ ಎಂಬ ಘೋಷವಾಕ್ಯ ಮಾತ್ರ ಜನರನ್ನು ಹಿಡಿದಿಟ್ಟುಕೊಂಡು ಜನಪರ ಹೋರಾಟವಾಗಿ ಮಾರ್ಪಟ್ಟಿತು.

ಮಹಾಯುದ್ಧದ ಕಾರಣದಿಂದಾಗಿ ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು, ಮಹಾ ಕ್ಷಾಮ ಮತ್ತು ನಿರುದ್ಯೋಗ ಸಮಸ್ಯೆಯು ದೇಶದಾದ್ಯಂತ ಜನರನ್ನು ಪ್ರಕ್ಷುಬ್ಧಗೊಳಿಸಿತ್ತು. ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಬಗೆಗಿನ ದ್ವೇಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಬಂಧಿಸಲು ಬ್ರಿಟಿಷ್ ಸರ್ಕಾರ ಮುಂದಾಗಿದ್ದು, ಜನರನ್ನು ಮತ್ತಷ್ಟು ಕೆರಳಿಸಿತ್ತು. ಇದರಿಂದ ಜನರು ಗುಂಪು ಗುಂಪಾಗಿ ಪ್ರತಿಭಟನೆಗೆ ಇಳಿಯಲು ಆರಂಭಿಸಿದರು. ಹೋರಾಟವು ದೊಡ್ಡ ಜನಸಮೂಹವನ್ನು ಹಿಡಿದುಕೊಂಡ ನಂತರ ಹೋರಾಟದ ಸ್ವರೂಪವೇ ಬದಲಾಯಿತು. ಗಾಂಧಿಯ ಅಹಿಂಸಾ ಮಾರ್ಗವು ಮಿತಿಯಿಲ್ಲದ ಮತ್ತು ಹುರುಪಿನ ದಿಕ್ಕಿನಲ್ಲಿ ಮುನ್ನಡೆಯಿತು.

ಮೊದಲನೇ ಸ್ವಾತಂತ್ರ‍್ಯ ದಿನದ ಸಂದರ್ಭದಲ್ಲಿ

ನಾಯಕರಿಲ್ಲದೆ ಜನರೇ ಮುಂದಾಳುತ್ವ ವಹಿಸಿ ದೇಶದೆಲ್ಲೆಡೆ ಹೋರಾಟವನ್ನು ಮುನ್ನಡೆಸಿದರು. ಜನರ ಯುದ್ಧೋಚಿತ ಪ್ರತಿಭಟನೆಯು ನಗರ ಪ್ರದೇಶಗಳಲ್ಲಿ ಪ್ರಾರಂಭವಾಗಿ ಗ್ರಾಮೀಣ ಪ್ರದೇಶಗಳಿಗೂ ಹರಡಿತು. ಉತ್ತರ ಪ್ರದೇಶ ಮತ್ತು ಬಿಹಾರದ ಅನೇಕ ಹಳ್ಳಿಗಳು ಸ್ವಾತಂತ್ರ‍್ಯವನ್ನು ಘೋಷಿಸಿದವು. ಜಯಪ್ರಕಾಶ್ ನಾರಾಯಣ್, ಅರುಣಾ ಆಸಫ್ ಅಲಿ, ಸುಷೇತಾ ಕೃಪಲಾನಿ ಮುಂತಾದ ಮುಖಂಡರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಬ್ರಿಟಿಷ್ ಸರ್ಕಾರ ಪ್ರತಿಭಟನಕಾರರ ಮೇಲೆ ವಿಮಾನಗಳಿಂದ ಗುಂಡಿನ ದಾಳಿಯಂತಹ ದುಷ್ಕೃತ್ಯಗಳನ್ನು ಮಾಡುತ್ತಿತ್ತು. ಕನಿಷ್ಠ ಹತ್ತು ಸಾವಿರ ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ನೆಹರೂ ಹೇಳಿದರು.

ಬ್ರಿಟಿಷ್ ಸರ್ಕಾರ ಜನರ ಪ್ರತಿಭಟನೆಯನ್ನು ನಿರ್ದಯವಾಗಿ ಹತ್ತಿಕ್ಕಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿತು. ಪ್ರತಿಭಟನೆಯನ್ನು ಹತ್ತಿಕ್ಕಲು 57 ಬೆಟಾಲಿಯನ್ ಯೋಧರನ್ನು ನಿಯೋಜಿಸಿತ್ತು. ಕೆಲವೇ ದಿನಗಳಲ್ಲಿ ಬಂಧಿತರ ಸಂಖ್ಯೆ 1 ಲಕ್ಷವನ್ನು ದಾಟಿತ್ತು. ಒಟ್ಟು 538 ಬಾರಿ ಗುಂಡು ಹಾರಿಸಲಾಗಿತ್ತು. ಅದಾಗ್ಯೂ, ಸ್ವಾತಂತ್ರ‍್ಯಕ್ಕಾಗಿ ಜನರ ಬೇಡಿಕೆಯ ಮುಂದೆ ಬ್ರಿಟಿಷ್ ಪಡೆಗಳು ಸಿಲುಕಿ ನುಚ್ಚುನೂರಾದವು. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಹೋರಾಟವು, ‘ಭಾರತದಲ್ಲಿ ತಮ್ಮ ಪ್ರಾಬಲ್ಯವನ್ನು ಇನ್ನು ಮುಂದೆ ಸುಲಭವಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟಿತು’ ಜನರು ತಮ್ಮ ಹೋರಾಟದ ಮೂಲಕ ತಮ್ಮ ಮಹಾನ್ ಶಕ್ತಿಯನ್ನು ಸಹ ಅರಿತುಕೊಂಡರು.

‘ಕ್ವಿಟ್ ಇಂಡಿಯಾ’ ಚಳುವಳಿಯನ್ನು ಭಾರತೀಯ ಇತಿಹಾಸದಲ್ಲಿ ‘ಆಗಸ್ಟ್ ಕ್ರಾಂತಿ’ ಎಂದೇ ಕರೆಯಲಾಗುತ್ತದೆ. ಈ ಕ್ರಾಂತಿಯ ಇತಿಹಾಸವನ್ನು 77ನೇ ಸ್ವಾತಂತ್ರ‍್ಯ ದಿನದಂದು ನೆನಪಿಸಿಕೊಳ್ಳುವುದು ಸೂಕ್ತವಾಗಿರುತ್ತದೆ.

ಭಾರತದ ವೈಸ್‌ರಾಯ್ ಮತ್ತು ಗವರ್ನರ್ ಜನರಲ್‌ಗಳ ಹೆಸರು ಹಾಗೂ ಅವರ ಕಾಲದ ಪ್ರಮುಖ ಘಟನೆಗಳು:

1. ವಾರನ್ ಹೇಸ್ಟಿಂಗ್ಸ್ (1774-1785)
ಮೊದಲ ಬಂಗಾಳದ ಗವರ್ನರ್ ಜನರಲ್. ಈತನ ಅಧಿಕಾರವಧಿಯಲ್ಲಿ ರ‍್ಯೆಗ್ಯುಲೇಟಿಂಗ್ ಕಾಯಿದೆಯನ್ನು (1773) ಪರಿಚಯಿಸಲಾಯಿತು. ಈ ಕಾಯ್ದೆ ಬಂಗಾಳದಲ್ಲಿದ್ದ ದ್ವಿಮುಖ ಸರ್ಕಾರವನ್ನು ಅಂತ್ಯಗೊಳಿಸಿತು. ಈತನನ್ನು ಕಳಪೆ ಆಡಳಿತ ನಿರ್ವಹಣೆ ಮತ್ತು ವೈಯಕ್ತಿಕ ಭ್ರಷ್ಟಾಚಾರ ಕಾರಣಗಳಿಂದ ವಜಾಗೊಳಿಸಲಾಯಿತು. ಆದರೆ, ಅಂತಿಮವಾಗಿ ನಿರ್ದೋಷಿಯೆಂದು ತೀರ್ಮಾನಿಸಲಾಯಿತು. ಕಂದಾಯ ಮಂಡಳಿ ಮತ್ತು ವ್ಯಾಪಾರ ಮಂಡಳಿಯ ರಚನೆ. ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ.

2. ಲಾರ್ಡ್ ಕಾರ್ನ್ ವಾಲಿಸ್ (1786- 1793)
ಬಂಗಾಳದಲ್ಲಿ ಖಾಯಂ ಜಮೀನ್ದಾರಿ ಪದ್ಧತಿ ಜಾರಿ (1793). ಪೊಲೀಸ್ ಠಾಣೆಗಳ ಸ್ಥಾಪನೆ. ಪೊಲೀಸ್ ಸುಧಾರಣೆಗಳು ಜಾರಿ. ಟಿಪ್ಪು ಸುಲ್ತಾನನನ್ನು ಸೋಲಿಸಲು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಗಳು ಭಾಗಿ.

3. ಲಾರ್ಡ್ ವೆಲ್ಲೆಸ್ಲಿ (1798-1805)
ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿ (Policy of Subsidiary Alliance) ಪರಿಚಯ. ಹೈದರಾಬಾದ್ ಪ್ರಾಂತ್ಯವು ಈ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ದೇಶಿಯ ಸಂಸ್ಥಾನ.

4. ಲಾರ್ಡ್ ಮಿಂಟೋ-1 (1807-1813)
ಮಹಾರಾಜ ರಂಜಿತ್ ಸಿಂಗ್‌ನೊಂದಿಗೆ ಅಮೃತಸರ ಒಡಂಬಡಿಕೆ.

5. ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ (1813-1823)
ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ ಮೊದಲಿಗ. ಟೆನೆನ್ಸಿ ಕಾಯಿದೆ ಜಾರಿ (1828)

6. ಲಾರ್ಡ್ ವಿಲಿಯಂ ಬೆಂಟಿಕ್ (1828-1835)
ಭಾರತದ ಮೊದಲ ಗವರ್ನರ್ ಜನರಲ್‌ (ಈ ಮೊದಲು ಬಂಗಾಳದ ಗವರ್ನರ್ ಜನರಲ್ ಎಂಬ ಹುದ್ದೆ ಇತ್ತು). ಸತಿ ಪದ್ಧತಿಯ ನಿಷೇಧ. ಭಾರತೀಯರನ್ನು ಮತ್ತೆ ಅಧೀನ ನ್ಯಾಯಾಧೀಶರಾಗಿ ನೇಮಕ ಜಾರಿ. ಇಂಗ್ಲಿಷ್ ಉನ್ನತ ಶಿಕ್ಷಣದ ಭಾಷೆಯಾಯಿತು. ಮಧ್ಯ ಭಾರತದಲ್ಲಿ ಥಗ್ಗರನ್ನು ನಿಗ್ರಹಿಸಲಾಯಿತು. 1835ರಲ್ಲಿ ಕಲ್ಕತ್ತಾದಲ್ಲಿ ವೈದ್ಯಕೀಯ ಕಾಲೇಜು ಆರಂಭ.

7. ಸರ್.ಚಾರ್ಲ್ಸ್ ಮೆಟಾಕೆಫ್ (1835-1836)
ಮೊದಲ ಬಾರಿಗೆ ದೇಶಿಯ ಪತ್ರಿಕೆಗಳಿಗೆ ಸ್ವಾತಂತ್ರ‍್ಯ. ಎಲ್ಲಾ ನಿರ್ಭಂಧಗಳು ರದ್ದು. (ಭಾರತದ ವೃತ್ತ ಪತ್ರಿಕೆಗಳ ನಿರ್ಭಂಧ ವಿಮೋಚಕ)

8. ಲಾರ್ಡ್ ಆಕ್ಲೆಂಡ್ (1836-1842)
ಮೊದಲ ಅಫ್ಘಾನ್ ಯುದ್ಧ.

9. ಲಾರ್ಡ್ ಡಾಲ್ ಹೌಸಿ (1848-1856)
ಬಾಂಬೆಯಿಂದ ಥಾಣೆಯವರೆಗೆ ಮೊದಲ ಭಾರತೀಯ ರೈಲ್ವೆ ಮಾರ್ಗ ನಿರ್ಮಾಣ (1853). ಕೊಲ್ಕತ್ತಾದಿಂದ ಆಗ್ರದವರೆಗೆ ಟೆಲಿಗ್ರಾಫ್ ತಂತಿಯ ನಿರ್ಮಾಣ (1853). ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ಜಾರಿ. ಸತಾರ (1848), ಜೈಪುರ ಮತ್ತು ಸಂಬಲ್ ಪುರ (1849), ಉದಯ್ ಪುರ (1852), ಝಾನ್ಸಿ (1853) ಮತ್ತು ನಾಗ್ಪುರ (1854) ರಾಜ್ಯಗಳನ್ನು ವಸಪಡಿಸಿಕೊಳ್ಳಲಾಯಿತು. ಶಿಮ್ಲಾವನ್ನು ಬೇಸಿಗೆ ರಾಜಧಾನಿಯಾಗಿ ಘೋಷಣೆ. ಲೋಕೋಪಯೋಗಿ ಇಲಾಖೆ ರಚನೆ. ವಿಧವಾ ಮರುವಿವಾಹ ಕಾಯಿದೆ (1856) ಅನುಷ್ಠಾನದೊಂದಿಗೆ ವಿಧವೆಯರ ಮರುಮದುವೆಯನ್ನು ಕಾನೂನು ಬದ್ಧಗೊಳಿಸಲಾಯಿತು. ಭಾರತೀಯ ನಾಗರೀಕ ಸೇವೆಗಳ ಸ್ಪರ್ದಾತ್ಮಕ ಪರೀಕ್ಷೆ ಪ್ರಾರಂಭ (1853).

10. ಲಾರ್ಡ್ ಕ್ಯಾನಿಂಗ್ (1856-1862)
1857ರ (ಭಾರತದ ಮೊದಲ ಸ್ವಾತಂತ್ರ‍್ಯ ಸಂಗ್ರಾಮ) ಸಿಪಾಯಿ ದಂಗೆಯ ಸಮಯದಲ್ಲಿದ್ದ ಗವರ್ನರ್ ಜನರಲನ್ನು ದಂಗೆಯ ನಂತರ ಭಾರತದ ಮೊದಲ ವೈಸ್‌ರಾಯನಾಗಿ ನೇಮಕ. ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ರದ್ದು. 1861ರಲ್ಲಿ ಭಾರತೀಯ ಕೌನ್ಸಿಲ್ ಕಾಯ್ದೆ ಜಾರಿ. 1854ರ ‘ವುಡ್ಸ್ ಡಿಸ್ ಪ್ಯಾಚ್’ನ ಪ್ರಕಾರ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳ ಆರಂಭ. 1858ರ ವಿಕ್ಟೋರಿಯ ಮಹಾರಾಣಿಯ ಮಹಾಸನ್ನದು ‘ಭಾರತದ ಮ್ಯಾಗ್ನಾಕಾರ್ಟಾ’ ಪ್ರಕಟಣೆ. 1837ರಲ್ಲಿ ಮೆಕಾಲೆಯು ತಯಾರಿಸಿದ್ದ ‘ಭಾರತೀಯ ದಂಡ ಸಂಹಿತೆ’ ಜಾರಿ (1860). ಸಿವಿಲ್ ಪ್ರೊಸೀಜರ್ ಕೋಡ್ಸ್ ಜಾರಿ (1861).

11. ಲಾರ್ಡ್ ಲಾರೆನ್ಸ್ (1864-1869)
ಎರಡನೇ ಸಿಖ್ ಯುದ್ಧದ ನಂತರ ಈತನು ಪಂಜಾಬ್ ಆಡಳಿತ ಇಲಾಖೆಯ ಸದಸ್ಯನಾದನು. ಮತ್ತು ಪಂಜಾಬಿನಲ್ಲಿ ಹಲವಾರು ಜವಾಬ್ದಾರಿಯುತ ಸುಧಾರಣೆಗಳನ್ನು ಜಾರಿಗೆ ತಂದು ‘ಪಂಜಾಬ್‌ನ ರಕ್ಷಕ’ ನೆಂದು ಖ್ಯಾತನಾದನು. 1865ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್‌ಗಳಲ್ಲಿ ಹೈಕೋರ್ಟ್ ಗಳನ್ನು ಸ್ಥಾಪಿಸಲಾಯಿತು.

12. ಲಾರ್ಡ್ ಮಾಯೋ (1869-1872)
ಭಾರತದಲ್ಲಿ ಪ್ರಥಮ ಜನಗಣತಿ (1871). 1872ರಲ್ಲಿ ಅಂಡಮಾನ್ ದ್ವೀಪಗಳ ಭೇಟಿ ಸಂದರ್ಭದಲ್ಲಿ (ಕೈದಿ ಶೇರ್ ಅಲಿಯಿಂದ) ಭಾರದಲ್ಲಿ ಕೊಲ್ಲಲ್ಪಟ್ಟ ಏಕ ಮಾತ್ರ ವೈಸ್‌ರಾಯ್. ಕೃಷಿ ಇಲಾಖೆ ಸ್ಥಾಪನೆ.

13. ಲಾರ್ಡ್ ಲಿಟ್ಟನ್ (1876-1880)
1877ರಲ್ಲಿ ದೆಹಲಿಯಲ್ಲಿ ದರ್ಬಾರ್ ಆಯೋಜಿಸಿ, ರಾಣಿ ವಿಕ್ಟೋರಿಯಾಗೆ ‘ಕೈಸರ್ ಇ ಹಿಂದ್’ ಬಿರುದು ಪ್ರಧಾನ. ಭಾರತದ ವೃತ್ತ ಪತ್ರಿಕೆಗಳ ಮೇಲೆ ನಿರ್ಭಂಧ ವಿಧಿಸುವ ‘ದೇಶಿಯ ಪತ್ರಿಕಾ ಕಾಯ್ದೆ’ ಜಾರಿ (1878). ಶಸ್ತ್ರಾಸ್ತ್ರ ಕಾಯ್ದೆ (1878). ಸರ್.ಸಯ್ಯದ್ ಅಹ್ಮದ್ ಖಾನರಿಂದ ಅಲಿಘಡದಲ್ಲಿ ‘ಮಹಮ್ಮದನ್ ಆಂಗ್ಲೋ ಓರಿಯಂಟಲ್ ಕಾಲೇಜು’ ಸ್ಥಾಪನೆ (1877) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು 21 ರಿಂದ 19ಕ್ಕೆ ಇಳಿಸಲಾಯಿತು.

14. ಲಾರ್ಡ್ ರಿಪ್ಪನ್ (1880-1884)
ಭಾರತದ ವೃತ್ತ ಪತ್ರಿಕೆಗಳ ಮೇಲೆ ನಿರ್ಭಂಧ ವಿಧಿಸುವ ‘ದೇಶಿಯ ಪತ್ರಿಕಾ ಕಾಯ್ದೆ’ ರದ್ದು (1882). ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು ಪುನಃ 19 ರಿಂದ 21ಕ್ಕೆ ಏರಿಸಲಾಯಿತು. ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು ಮೊದಲ ಫ್ಯಾಕ್ಟರಿ ಕಾಯ್ದೆ ಅಂಗೀಕಾರ (1881). ಭಾರತೀಯ ಸ್ಥಳೀಯ ಸರ್ಕಾರಗಳ ‘ಪಿತಾಮಹ’. ದೇಶದಲ್ಲಿ ನಗರ ಸಭೆಗಳು, ಜಿಲ್ಲಾ ಮತ್ತು ಸ್ಥಳೀಯ ಮಂಡಳಿಗಳ ಸ್ಥಾಪನೆ (1882). ಇಲ್ಬರ್ಟ್ ಬಿಲ್ ಕಾಯ್ದೆ ಜಾರಿ (1883).

15. ಲಾರ್ಡ್ ಡಫೆರಿನ್ನ (1884-1894)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚಿಸಲಾಯಿತು.

16. ಲಾರ್ಡ್ ಲಾನ್ಸ್ ಡೌನ್ (1888-1894)
ಭಾರತೀಯ ಕೌನ್ಸಿಲ್ ಕಾಯ್ದೆ (1892). ಬ್ರಿಟಿಷ್ ಭಾರತ ಮತ್ತು ಆಫ್ಘಾನಿಸ್ಥಾನ ನಡುವೆ ಗಡಿರೇಖೆ ಗುರುತಿಸಲು ಡುರಾಂಡ್ ಆಯೋಗದ ನೇಮಕ.

17. ಲಾರ್ಡ್ ಕರ್ಜನ್ (1899-1905)
ಬಂಗಾಳದ ವಿಭಜನೆ (1905). ಸ್ವದೇಶಿ ಚಳುವಳಿಯ ಆರಂಭ. ಕೃಷಿ ಬ್ಯಾಂಕುಗಳ ಸ್ಥಾಪನೆ. ಬಂಗಾಳದ ಪೂಸಾದಲ್ಲಿ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆ (1904). ಪುರಾತನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ ಜಾರಿ. ಪುರಾತತ್ವ ಇಲಾಖೆ ಜಾರಿ. (1901). ಸರ್.ಥಾಮಸ್ ರಾಲೆ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯಗಳ ಕಾಯ್ದೆ ಜಾರಿ (1904). ಪೊಲೀಸ್ ಆಯೋಗ ರಚನೆ. ಕ್ರಿಮಿನಲ್ ಇಲಾಖೆ ರಚನೆ.

18. ಲಾರ್ಡ್ ಮಿಂಟೋ (1905-1910)
ಭಾರತೀಯ ಮಂಡಳಿ ಕಾಯ್ದೆ (1909) ಮಾರ್ಲೆ-ಮಿಂಟೊ ಸುಧಾರಣೆಗಳನ್ನು ಅಂಗೀಕರಿಸಿತು. ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರ ಪ್ರಾತಿನಿಧ್ಯ.

19. ಲಾರ್ಡ್ ಹಾರ್ಡಿಂಗ್ (1910-1916)
ಇಂಗ್ಲೆಂಡ್‌ ದೊರೆ 4ನೇ ಜಾರ್ಜ್ ನ ಪಟ್ಟಾಭಿಷೇಕ – ದೆಹಲಿ ದರ್ಬಾರ್ (1911). ಭಾರತದ ರಾಜಧಾನಿಯಾಗಿದ್ದ ಕಲ್ಕತ್ತಾ ದೆಹಲಿಗೆ ಸ್ಥಾಳಾಂತರ (1911). ಅನ್ನಿ ಬೆಸೆಂಟ್ ರಿಂದ ಹೋಂ ರೂಲ್ ಚಳುವಳಿ ಆರಂಭಿಸಲಾಯಿತು (1916). ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮನ (1915).

20. ಲಾರ್ಡ್ ಚೆಲ್ಮೆಸ್ ಫೋರ್ಡ್ (1916-1921)
ಭಾರತ ಸರ್ಕಾರದ ಕಾಯ್ದೆ (1919). (ಮೊಂಟಾಗು ಚೆಲ್ಮೆಸ್ ಫೋರ್ಡ್ ಸುಧಾರಣೆಗಳು) ರೌಲಟ್ ಕಾಯ್ದೆ ಜಾರಿ (1919) ಜಲಿಯನ್ ವಾಲಾ ಬಾಗ್ ದುರಂತ (ಏಪ್ರೀಲ್ 13, 1919). ಖಿಲಾಪತ್ ಚಳುವಳಿ. ಅಸಹಕಾರ ಚಳುವಳಿ.

21. ಲಾರ್ಡ್ ರೆಡಿಂಗ್ (1921-1931)
ರೌಲಟ್ ಆಕ್ಟ್ ರದ್ದುಗೊಳಿಸಲಾಯಿತು. ಸ್ವರಾಜ್ ಪಕ್ಷ ರಚನೆ. ಚೌರಿ ಚೌರ್ ಘಟನೆ.

22. ಲಾರ್ಡ್ ಇರ್ವಿನ್ (1926-1931)
ಸೈಮನ್ ಆಯೋಗ ಭಾರತಕ್ಕೆ ಭೇಟಿ (1928). ದಂಡಿ ಸತ್ಯಾಗ್ರಹ ಪ್ರಾರಂಭಿಸಲಾಯಿತು. ನಾಗರಿಕ ಅಸಹಕಾರ ಚಳುವಳಿಯನ್ನು ಆರಂಭಿಸಲಾಯಿತು. (1930) ಗಾಂಧಿ – ಇರ್ವಿನ್ ಒಪ್ಪಂದಕ್ಕೆ ಸಹಿ. ಮೊದಲ ದುಂಡು ಮೇಜಿನ ಸಭೆ.

23. ಲಾರ್ಡ್ ವಿಲ್ಲಿಂಗ್ಡನ್ (1031-1931)
1931ರಲ್ಲಿ ಎರಡನೇ ಮತ್ತು ಮೂರನೇ ದುಂಡು ಮೇಜಿನ ಸಭೆ. ಬಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್ ಡೊನಾಲ್ಡ್ ರಿಂದ ಕಮ್ಯುನಲ್ ಅವಾರ್ಡ್ ಪ್ರಾರಂಭ. ಪೂನಾ ಒಪ್ಪಂದದ ಸಹಿ. ಭಾರತ ಸರ್ಕಾರದ ಆಕ್ಟನ್ನು ಪ್ರಾಂತ್ಯಗಳಲ್ಲಿ ಜಾರಿ (1935).

24. ಲಾರ್ಡ್ ಲಿನ್ಲಿತ್ಗೋ (1936-1944)
2ನೇ ಮಹಾಯುದ್ಧದ ಆರಂಭ. ಕ್ರಿಪ್ಸ್ ಸಮಿತಿ 1942ರಲ್ಲಿ ಭಾರತಕ್ಕೆ ಭೇಟಿ. ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭ.

25. ಲಾರ್ಡ್ ವಾವೆಲ್ (1944-1947)
ಕ್ಯಾಬಿನೆಟ್ ನಿಯೋಗದ ಯೋಜನೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಶಿಮ್ಲಾ ಸಮ್ಮೇಳನ. ಮುಸ್ಲಿಂ ಲೀಗ್‌ನಿಂದ ಡೈರೆಕ್ಟ್ ಆಕ್ಷನ್ ಡೇ. ನೆಹರೂ ನೇತೃತ್ವದ ಮಧ್ಯಂತರ ಸರ್ಕಾರ ರಚನೆ.

26. ಲಾರ್ಡ್ ಮೌಂಟ್ ಬ್ಯಾಟನ್ (ಮಾರ್ಚ್ 1947-ಆಗಸ್ಟ್ 1947).
ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸ್‌ರಾಯ್. ಸಿ.ರಾಜಗೋಪಾಲಾಚಾರಿ, ಸ್ವಾತಂತ್ರ್ಯ ಭಾರತದ ಮೊದಲ ಮತ್ತು ಕಡೆಯ ಗವರ್ನರ್ ಜನರಲ್ ಉತ್ತರಾಧಿಕಾರಿ.

ದೇಶ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಮಣಿಪುರ ವಿಚಾರವಾಗಿ ಪ್ರಧಾನಿ ಮೋದಿ ವಿವರಣೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಆದರೆ ಉಭಯ ಸದನಗಳಲ್ಲಿ ಅನುಮತಿ ನಿರಾಕರಣೆ ಆಗುತ್ತಿರುವುದರಿಂದ ನಿರಂತರ ಉದ್ವಿಗ್ನತೆ ಉಂಟಾಗಿದೆ. ಮತ್ತು ಸದನಗಳನ್ನು ಸಹ ಮುಂದೂಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ನಿರ್ಣಯದ ಮೇಲಿನ ಚರ್ಚೆ ಇಂದು (ಆ.9) 2ನೇ ದಿನವೂ ನಡೆಯಿತು.

ಇಂದಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಡಿಎಂಕೆ ಪಕ್ಷದ ಸಂಸದೆ ಕನಿಮೊಳಿ ಮಾತನಾಡಿದರು. ”ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ರಾಜ್ಯವನ್ನು ಉಳಿಸಬೇಕಾದ ಪರಿಸ್ಥಿತಿ ಇದೆ. ‘ಡಬಲ್ ಇಂಜಿನ್ ಸರ್ಕಾರ’ ಎಂದು ಬಿಂಬಿಸಿಕೊಳ್ಳುವ ಬಿಜೆಪಿ, ಮಣಿಪುರದ ವಿಚಾರದಲ್ಲಿ ಏಕೆ ವಿವರಣೆ ನೀಡುತ್ತಿಲ್ಲ? ಮಣಿಪುರದ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಮೌನವಾಗಿರುವುದೇಕೆ?

ಮಣಿಪುರದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಫಲವಾಗಿವೆ. ಮಣಿಪುರದಲ್ಲಿ ಮೂರು ತಿಂಗಳಿನಿಂದ ಗಲಭೆ ತಡೆಯುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ಮಣಿಪುರದ ಶಿಬಿರಗಳಲ್ಲಿ ತಂಗಿರುವ ಜನರ ಸ್ಥಿತಿ ಗಂಭೀರವಾಗಿದೆ. ‘ಮಣಿಪುರ ಕ್ಯಾಂಪ್‌ನಲ್ಲಿ ತಂಗಿರುವ ಜನರನ್ನು ನೋಡಲು ಮಣಿಪುರದ ಮುಖ್ಯಮಂತ್ರಿ ಮತ್ತು ಪ್ರಧಾನಿ ಏಕೆ ಬಂದಿಲ್ಲ’ ಎಂದು ಹುಡುಗಿಯೊಬ್ಬರು ನನ್ನನ್ನು ಕೇಳಿದರು.

ಮಣಿಪುರದಲ್ಲಿ ಸಂತ್ರಸ್ತರಿಗೆ ಪೊಲೀಸರು ಯಾವ ಸಹಾಯವನ್ನೂ ಮಾಡಲಿಲ್ಲ. 161 ಸಶಸ್ತ್ರ ಪಡೆಗಳು ಅಲ್ಲಿದ್ದರೂ ಹಿಂಸಾಚಾರವನ್ನು ತಡೆಯಲಿಲ್ಲ. ಮೃತ ದೇಹಗಳು ಕೂಡ ಸಂಬಂಧಿಕರಿಗೆ ತಲುಪಿಲ್ಲ. ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆ ಮಾತ್ರವಲ್ಲ, ಮಹಿಳೆಯರ ಮೇಲಿನ ಅಪರಾಧಗಳೂ ಹೆಚ್ಚಿವೆ. ಮಣಿಪುರದಲ್ಲಿ ಸ್ಥಾಪಿಸಲಾಗಿರುವ ನೂರಾರು ಪರಿಹಾರ ಶಿಬಿರಗಳಲ್ಲಿ ಸೂಕ್ತ ಸೌಲಭ್ಯ, ಆಹಾರ, ಕುಡಿಯುವ ನೀರೂ ಇಲ್ಲ. ಮಣಿಪುರದಲ್ಲಿನ ಪರಿಹಾರ ಶಿಬಿರಗಳು ಅನೈರ್ಮಲ್ಯ ಮತ್ತು ವಾಸಕ್ಕೆ ಯೋಗ್ಯವಲ್ಲ.

ದೇಶದಲ್ಲಿ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಖಾಲಿ ಇರುವ ಹುದ್ದೆಗಳ ಭರ್ತಿಗೂ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಅದರಲ್ಲೂ ರೈಲ್ವೆ ವಲಯದಲ್ಲಿ ಹುದ್ದೆಗಳು ಭರ್ತಿಯಾಗಿಲ್ಲ. ಸಂಸತ್ತಿನಲ್ಲಿ ರಾಜದಂಡವನ್ನು ಅಳವಡಿಸಿ, ‘ಇದು ಚೋಳರಾಜನಿಗೆ ಸೇರಿದ್ದು’ ಎಂದು ಹೇಳಿದ್ದೀರಿ. ಕನ್ನಗಿಯ ಕೋಪಕ್ಕೆ ಪಾಂಡಿಯನ ರಾಜದಂಡ ಮುರಿದ ಕಥೆ ಏನು ಗೊತ್ತಾ? ನಮ್ಮ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಿಕೊಂಡು, ಸಿಲಪತಿಕಾರಂ ಓದಿ; ಅದರಲ್ಲಿ ನಿಮಗೆ ಅನೇಕ ಪಾಠಗಳಿವೆ.

ಪ್ರಧಾನಮಂತ್ರಿಯವರು ಮಣಿಪುರದ ಜನರನ್ನು ಖುದ್ದಾಗಿ ಭೇಟಿ ಮಾಡಿ ನ್ಯಾಯ ಸ್ಥಾಪಿಸುವುದು ಅಗತ್ಯವಾಗಿದೆ. ಮಣಿಪುರ ಹಿಂಸಾಚಾರದಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ದ್ರೌಪದಿಯಂತೆಯೇ ಮಣಿಪುರದ ಮಹಿಳೆಯರನ್ನು ವಿವಸ್ತ್ರಗೊಳಿಸಿದಾಗ ಅವರ ಇಷ್ಟ ದೇವರನ್ನು ಪ್ರಾರ್ಥಿಸಿರುತ್ತಾರೆ. ಆದರೆ ಅವರನ್ನು ರಕ್ಷಿಸಲು ದೇವರಾಗಲಿ, ಸರ್ಕಾರವಾಗಲಿ ಬರಲಿಲ್ಲ.

ಮಹಾಭಾರತವನ್ನು ಚೆನ್ನಾಗಿ ಓದಿದವರಿಗೆ ಗೊತ್ತು. ಅಪರಾಧಿಗಳಿಗೆ ಮಾತ್ರವಲ್ಲ, ಅದನ್ನು ಮೌನವಾಗಿದ್ದು ನೋಡಿ ಆನಂದಿಸಿದವರಿಗೂ ಶಿಕ್ಷೆಯಾಯಿತು. ಹತ್ರಾಸ್, ಕಥುವಾ, ಉನ್ನಾವೋ, ಬಿಲ್ಕಿಸ್ ಬಾನು, ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲಿ ಮೌನವಹಿಸಿದವರನ್ನು ಭಾರತ ಮಾತೆಯರು ಶಿಕ್ಷಿಸುತ್ತಾರೆ. ಆಡಳಿತಾರೂಢ ಸಮ್ಮಿಶ್ರ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕನಿಮೋಳಿ ಭಾವುಕ ಭಾಷಣ ಮಾಡಿದ್ದಾರೆ.

ದೇಶ

ಅಮೆರಿಕಾದ ಒಕ್ಲಹೋಮ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುತಾತ್ಮರ ಧ್ವನಿ (Voice of Martyrs) ಸಂಸ್ಥೆ, ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರ ಮೇಲೆ ನಡೆಯುವಂತಹ ಕಿರುಕುಳಗಳನ್ನು ದಾಖಲು ಮಾಡಿ, ಅಂತಹ ಚಟುವಟಿಕೆಗಳು ನಡೆಯುವ ದೇಶಗಳ ಸರ್ಕಾರಗಳಿಂದ ಸ್ಪಷ್ಟೀಕರಣಗಳನ್ನು ಪಡೆಯಲು ಅಮೆರಿಕಾವನ್ನು ಒತ್ತಾಯಿಸುತ್ತದೆ.

ಕೆಲವು ದಿನಗಳ ಹಿಂದೆ, ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್ persecution.com ನಲ್ಲಿ “ಭಾರತದಲ್ಲಿ ಇತರ ಧರ್ಮದ ಜನರನ್ನು ತಮ್ಮ ಧರ್ಮಕ್ಕೆ ಮತಾಂತರಿಸುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಕ್ರೈಸ್ತರಿಗೆ ತೀವ್ರ ರೀತಿಯ ಕಿರುಕುಳ ನೀಡಲಾಗುತ್ತಿದೆ” ಎಂದು ವರದಿ ಮಾಡಿದೆ.

3 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬಿಡನ್ ಸೆ.7 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ, ಜೋ ಬಿಡೆನ್ ಅವರ ಭಾರತ ಭೇಟಿ ಮತ್ತು ಧಾರ್ಮಿಕ ಕಿರುಕುಳದ ಕುರಿತಾದ ಪ್ರಶ್ನೆಗಳಿಗೆ ಅಮೆರಿಕ ಸರ್ಕಾರದ ವಕ್ತಾರ ಮ್ಯಾಥ್ಯೂ ಮಿಲ್ಲರ್ (Matthew Miller) ಪ್ರತಿಕ್ರಿಯಿಸಿದ್ದಾರೆ.

ಇದರ ಕುರಿತು ಮಾತನಾಡಿದ ಅವರು, “ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕಾಳಜಿ ವಹಿಸುವ ದೇಶಗಳೊಂದಿಗೆ ನಾವು ವಾಡಿಕೆಯಂತೆ ಮಾತನಾಡುತ್ತಿದ್ದೇವೆ. ನಾವು ಹಿಂದೆಯೂ ಮಾತನಾಡಿದ್ದೇವೆ; ಭವಿಷ್ಯದಲ್ಲೂ ಮಾತನಾಡುತ್ತೇವೆ. ಧಾರ್ಮಿಕ ಕಿರುಕುಳದ ಬಗ್ಗೆ ಮಾತನಾಡಲು ಅಮೆರಿಕ ಎಂದಿಗೂ ಹಿಂಜರಿಯುವುದಿಲ್ಲ.

ಕೇವಲ ಕ್ರಿಶ್ಚಿಯನ್ನರು ಮಾತ್ರವಲ್ಲ, ಭಾರತ ಸೇರಿದಂತೆ ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ಧರ್ಮದ ಶೋಷಣೆಗೆ ಅಮೆರಿಕ ವಿರುದ್ಧವಾಗಿದೆ. ಅದರ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇವೆ” ಎಂದು ಹೇಳಿದರು.