ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Taminadu BJP Archives » Dynamic Leader
October 23, 2024
Home Posts tagged Taminadu BJP
ರಾಜಕೀಯ

ಬೆಂಗಳೂರು: ಬಿಜೆಪಿ ಮಾಜಿ ಮುಖಂಡ ಅಣ್ಣಾದೊರೈ ಅವರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿಯ ಸ್ಥಳೀಯಾಡಳಿತ ಅಭಿವೃದ್ಧಿ ವಿಭಾಗದ ಕಾರ್ಯದರ್ಶಿಯಾಗಿದ್ದ ಅಣ್ಣಾದೊರೈ ಅವರನ್ನು 4 ದಿನಗಳ ಹಿಂದೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಅಣ್ಣಾದೊರೈ ಸುದ್ದಿಗಾರರನ್ನು ಭೇಟಿ ಮಾಡಿದರು.

“ನಾನು ಚೆನ್ನೈ, ಪಾಂಡಿಚೇರಿ ಮತ್ತು ಕೊಯಮತ್ತೂರಿನಲ್ಲಿ ‘ಪಳೆಯ ಸೋರು ಡಾಟ್ ಕಾಮ್’ ಅನ್ನು ನಡೆಸುತ್ತಿದ್ದೇನೆ. ಕೊಯಮತ್ತೂರಿನ ಕಟ್ಟಡ ಮಾಲೀಕರೊಂದಿಗೆ ನಮಗೆ ಸಮಸ್ಯೆ ಇತ್ತು, ಆದ್ದರಿಂದ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. ನಾನು ಬಿಜೆಪಿಯಲ್ಲಿದ್ದೇನೆ ಎಂಬ ಕಾರಣಕ್ಕೆ ಕಟ್ಟಡ ಮಾಲೀಕರು ಅಣ್ಣಾಮಲೈ ಅವರ ಬಳಿ ಮಾತನಾಡಿದ್ದಾರೆ. ಅಣ್ಣಾಮಲೈ ಆದೇಶದ ಮೇರೆಗೆ ಬಿಜೆಪಿ ಜಿಲ್ಲಾಧ್ಯಕ್ಷರು, ‘ಪಳೆಯ ಸೋರು ಡಾಟ್ ಕಾಮ್’ ನಡೆಸುತ್ತಿದ್ದ ನನ್ನ ಕಚೇರಿಯ ಬೀಗವನ್ನು ಒಡೆದು, ಒಳಗಿದ್ದ ಸಾಮಾನುಗಳನ್ನು ಕದ್ದು, ಬಿಜೆಪಿ ಧ್ವಜ ನೆಟ್ಟು, ಸೇವಾ ಕೇಂದ್ರ ಎಂಬ ಬೋರ್ಡನ್ನು ಹಾಕಿದ್ದಾರೆ.

ಬಿಜೆಪಿಯವರು ಈ ರೀತಿ ಅನ್ಯಾಯ ಮಾಡುತ್ತಾರೆ ಎಂದು ಗೊತ್ತಿದ್ದರೆ ನಾನು ಈ ಪಕ್ಷಕ್ಕೆ ಸೇರುತ್ತಿರಲಿಲ್ಲ. ಸ್ವಪಕ್ಷದ ಕಾರ್ಯಕರ್ತರನ್ನು ಕರೆದು ಪ್ರಶ್ನಿಸದೆ, ಪಕ್ಷದ ಕಾರ್ಯಕರ್ತರಿಂದಲೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಮಾಲೀಕನಿಗೆ ಹಣ ಪಾವತಿಸುವುದಾಗಿಯೇ ಇರಲಿ, ಪ್ರಕರಣ ನ್ಯಾಯಾಲಯದಲ್ಲಿರುವಾಗ ಕಚೇರಿಯ ಪೀಠೋಪಕರಣಗಳನ್ನು ಒಡೆದು ಖಾಲಿ ಮಾಡುವುದು ಯಾವ ನ್ಯಾಯ? ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ವಿಷಯ ನಿನ್ನೆ ಬೆಳಗ್ಗೆಯಷ್ಟೇ ತಿಳಿದು ಬಂದಿತು. ಅಣ್ಣಾಮಲೈ ಇದರಲ್ಲಿ ನೇರವಾಗಿ ಭಾಗವಾಗಿದ್ದಾರೆ. ಆದ್ದರಿಂದಲೇ ಅವರ ವಿರುದ್ಧ ದೂರು ದಾಖಲಿಸಿದ್ದೇನೆ. ಎಲ್ಲರ ಮೇಲೂ FIR ದಾಖಲು ಮಾಡುವಂತೆ ಪೊಲೀಸ್ ಅಧಿಕಾರಿಯ ಬಳಿ ಮನವಿ ಮಾಡಿದ್ದೇನೆ” ಎಂದರು.

ರಾಜಕೀಯ ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

‘ತಮಿಳುನಾಡಿನ ಕೊಡೈಕಾನಲ್ ಪ್ರದೇಶದಲ್ಲಿ ಬೆಳೆಯುವ ಒಂದು ರೀತಿಯ ಮಾದಕ ಅಣಬೆಯೆ ಇದಕ್ಕೆ ಕಾರಣ’ ಎಂದು ಅಲ್ಲಿನ ಬಿಜೆಪಿಯವರು ಹೇಳುತ್ತಿರುವುದು ಆಶ್ಚರ್ಯವಾಗಿದೆ!

ತಮಿಳುನಾಡಿನ ಬಿಜೆಪಿ ಪಕ್ಷಕ್ಕೆ ಸೇರಿದವನು ಸೆಲ್ವಕುಮಾರ್. ಕರೂರು ಜಿಲ್ಲೆಯ ಇಲುಪ್ಪೂರು ಪ್ರದೇಶಕ್ಕೆ ಸೇರಿದ ಶಕ್ತಿ ಎಂಬ ಡ್ರಗ್ ಪೆಡ್ಲರ್ ಇವನ ಸಂಬಂಧಿ. ತಮಿಳುನಾಡು ಪೊಲೀಸರು ಡ್ರಗ್ಸ್ ಜಾಲವೊಂದನ್ನು ಪತ್ತೆಹಚ್ಚಿದಾಗ, ಅವರ ಸೆಲ್ ಫೋನ್ ನಂಬರ್ ಬಳಸಿ ಶಕ್ತಿಯನ್ನು ಬಂಧಿಸಿದ್ದರು. ಈ ಶಕ್ತಿ ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೆ ಕೊಕೇನ್ ಮತ್ತು ಹೆರಾಯಿನ್‌ನಂತಹ ಮಾದಕವಸ್ತುಗಳನ್ನು ಪೂರೈಸುವ ಡ್ರಗ್ ಗ್ಯಾಂಗ್‌ನ ಒಂದು ಭಾಗ. ಡ್ರಗ್ ಪೆಡ್ಲರ್ ಶಕ್ತಿಯ ಸೋದರ ಸಂಬಂಧಿ ಸೆಲ್ವಕುಮಾರ್ ಬಿಜೆಪಿಯ ಅನುಯಾಯಿ. ಸೋಶಿಯಲ್ ಮೀಡಿಯಾದಲ್ಲಿ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಖ್ಯಾತಿಯನ್ನು ಬಿತ್ತರಿಸುವುದೇ ಇವನ ದಿನನಿತ್ಯದ ಕಾಯಕ. ಶಕ್ತಿ ಬಂಧನಕ್ಕೊಳಗಾದ ನಂತರ ಪೊಲೀಸರು ತನ್ನ ಕಡೆಗೂ ಬರಬಹುದು ಎಂದು ಅನುಮಾನಿಸಿದ ಸೆಲ್ವಕುಮಾರ್ ಅಣ್ಣಾಮಲೈ ಬಳಿ ಶರಣಾಗುತ್ತಾನೆ. ಸೆಲ್ವಕುಮಾರನನ್ನು ಪಕ್ಷಕ್ಕೆ ಸೇರಿಸಿಕೊಂಡ ಅಣ್ಣಾಮಲೈ, ಕೂಡಲೇ ಪಕ್ಷದಲ್ಲಿ ಜವಾಬ್ದಾರಿಯನ್ನೂ ನೀಡುತ್ತಾರೆ. ಅಮರ್ ಪ್ರಸಾದ್ ರೆಡ್ಡಿ, ತಿರುಚ್ಚಿ ಸೂರ್ಯ, ಸೆಲ್ವಕುಮಾರ್ ಮತ್ತು ಅಲಿಶಾ ಅವರನ್ನೊಳಗೊಂಡ ಅಣ್ಣಾಮಲೈ ತಂಡದಲ್ಲಿ ಸೆಲ್ವಕುಮಾರ್ ಪ್ರಮುಖ ಭಾಗವಾಗುತ್ತಾನೆ. ಈ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಸೆಲ್ವಕುಮಾರ್ ಪೊಲೀಸ್ ಕಾರ್ಯಾಚರಣೆಯಿಂದ ಪಾರಾಗುತ್ತಾನೆ.

ಸೆಲ್ವಕುಮಾರ್, ಶಕ್ತಿ

‘ಅಣ್ಣಾಮಲೈ ಸದಾ ಸೈಕೋ ತರಹ ವರ್ತಿಸುತ್ತಾನೆ. ಇದ್ದಕ್ಕಿದ್ದಂತೆ ನಾನು ಚಾಣಕ್ಯ ಎಂದು ಕೂಗುತ್ತಾನೆ. ಮುಂದಿನ ನಿಮಿಷ ಮೇಜಿನ ಮೇಲೆ ತಲೆಯಿಟ್ಟು ಮಲಗಿಕೊಳ್ಳುತ್ತಾನೆ. ಆತನು ಪ್ರತಿದಿನ ಸಾಕಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾನೆ. ಆತನಿಗೆ ಮಾನಸಿಕ ಖಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂಬ ಸುದ್ದಿ ಬಿಜೆಪಿ ಕಾರ್ಯಕರ್ತರಲ್ಲಿ ಹಬ್ಬಿತ್ತು. ‘ಅವನಿಗೆ ಯಾವುದೇ ಮಾನಸಿಕ ಕಾಯಿಲೆಗಳು ಇಲ್ಲ. ಯಹೂದಿಗಳು ದೇಶವನ್ನು ಆಳಬೇಕಾದರೆ ಅವರು ಮತಾಂಧರಾಗಿರಬೇಕು ಎಂಬುದಕ್ಕಾಗಿ ಅವರು ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಹಾಗಾಗಿ ಕೊಡೈಕಾನಲ್ ಪ್ರದೇಶದಿಂದ ನೈಸರ್ಗಿಕವಾಗಿ ಬೆಳೆಯುವ ಅಣಬೆ ಮಾದರಿಯ ಮಾದಕ ವಸ್ತುವನ್ನು ಖರೀದಿಸಿ ಅಣ್ಣಾಮಲೈ ಸೇವಿಸುತ್ತಿದ್ದಾನೆ’ ಎಂದು ಅಮರ್ ಪ್ರಸಾದ್ ರೆಡ್ಡಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾನೆ ಎಂದು ಬಿಜೆಪಿ ವಲಯದಲ್ಲಿ ಗುಸುಗುಸು ಇದೆ.

ಅಮರ್ ಪ್ರಸಾದ್ ರೆಡ್ಡಿ ಮತ್ತು ನೈಸರ್ಗಿಕವಾಗಿ ಬೆಳೆಯುವ ಅಣಬೆ ಮಾದರಿಯ ಮಾದಕ ವಸ್ತು

ಅಣ್ಣಾಮಲೈ ಹಾಗೂ ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಡಿಸೆಂಬರ್ 10 ರಂದು ವಿಮಾನದ ತುರ್ತು ಬಾಗಿಲು ತೆರೆಯುವ ಹಿಂದಿನ ದಿನ, ಪೂರ್ವ ಕರಾವಳಿ (ECR) ರಸ್ತೆಯಲ್ಲಿರುವ ಜನಪ್ರಿಯ ಐಷಾರಾಮಿ ರೆಸಾರ್ಟ್‌ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. 10ರಂದು ತಿರುಚ್ಚಿಯಲ್ಲಿ ನಡೆಯುವ ಬಿ.ಜೆ.ಪಿ. ಯುವ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ತೇಜಸ್ವಿ ಸೂರ್ಯ ಬೆಂಗಳೂರಿನಿಂದ ಬಂದಿದ್ದನು.

‘ಆ ರಾತ್ರಿ ತೇಜಸ್ವಿ ಸೂರ್ಯನೊಂದಿಗೆ ಅಣ್ಣಾಮಲೈ ಜೊತೆಗೂಡಿ ಮದ್ಯಪಾನ, ಡ್ಯಾನ್ಸು, ಡ್ರಗ್ಸು ಎಂದು ಇಬ್ಬರೂ ಸಂಭ್ರಮಿಸಿದ್ದರು. ತೇಜಸ್ವಿ ಸೂರ್ಯ ಮಹಿಳೆಯೊಬ್ಬರ ಜೊತೆಯಿರುವ ಖಾಸಗಿ ವಿಡಿಯೋವೊಂದನ್ನು ಅಣ್ಣಾಮಲೈ ತಮ್ಮ ಹನಿ ಟ್ರ್ಯಾಪ್ ಶೈಲಿಯಲ್ಲಿ ಚಿತ್ರೀಕರಿಸಿದ್ದಾನೆ’ ಎಂಬ ಸುದ್ಧಿಗಳು ಅಲ್ಲಿನ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ.

ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ಕರ್ನಾಟಕದ ಶೃಂಗೇರಿ ಶಂಕರ ಮಠದ ಬೆಂಬಲಿಗರಾಗಿದ್ದಾರೆ. ಬಿಜೆಪಿಯನ್ನು ನಿಯಂತ್ರಿಸಲು ಆರ್‌ಎಸ್‌ಎಸ್ ನಿಯೋಜಿಸಿದ ವ್ಯಕ್ತಿಯೇ ಬಿ.ಎಲ್.ಸಂತೋಷ್. ಅವರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೂ ಆಗಿದ್ದಾರೆ. ಇವರು ಶೃಂಗೇರಿ ಶಂಕರ ಮಠದ ಪ್ರಮುಖರಲ್ಲಿ ಒಬ್ಬರು. ತೇಜಸ್ವಿ ಸೂರ್ಯನನ್ನು ಸಂಸದನಾಗಿ ಮಾಡಿದವರು ಇದೇ ಬಿ.ಎಲ್.ಸಂತೋಷ್.

ಬಿ.ಎಲ್.ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದಶಿ

ಸೂರ್ಯನ ಅಮಲಿನ ಮಾತು ಕರ್ನಾಟಕದಲ್ಲಿ ಜನಪ್ರಿಯ. ಈತನ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಬೆಂಗಳೂರು ನಗರವು ಮಳೆಯ ಅಬ್ಬರಕ್ಕೆ ತತ್ತರಸಿ ಹೋಗಿದ್ದ ಸಂದರ್ಭದಲ್ಲಿ ಪದ್ಮನಾಭನಗರದ ಹೋಟೆಲ್‌ ಒಂದರಲ್ಲಿ ನಿಂತು ‘ನಾನು ಖುಷಿಯಿಂದ ಮಸಾಲೆ ದೋಸೆ ತಿನ್ನುತ್ತಿದ್ದೇನೆ’ ಎಂದು ವಿಡಿಯೋ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಅವಹೇಳನಕ್ಕೆ ಒಳಗಾದವನು ಈ ತೇಜಸ್ವಿ ಸೂರ್ಯ. ಕೋವಿಡ್ ಸಮಯದಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಬೇಟಿ ನೀಡಿ, ‘ಹಿಂದೂ ರೋಗಿಗಳನ್ನು ಮುಸ್ಲಿಂ ಸಿಬ್ಬಂದಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ’ ಎಂಬ ಸುಳ್ಳು ನಾಟಕವಾಡಿ ಜನರಿಂದ ಉಗಿಸಿಕೊಂಡಿದ್ದನ್ನು ಯಾರೂ ಇನ್ನೂ ಮರೆತಿಲ್ಲ.  

ಇದೇ ತೇಜಸ್ವಿ ಸೂರ್ಯ ಅರಬ್ ಮಹಿಳೆಯರನ್ನು ಅವಹೇಳನ ಮಾಡಿ ‘ಕಳೆದ ಕೆಲವು ಶತಮಾನಗಳಿಂದ 95% ಅರಬ್ ಮಹಿಳೆಯರು ಪರಾಕಾಷ್ಠೆಯನ್ನು (Orgasm) ತಲುಪಲಿಲ್ಲ’ ಎಂದು ಬರೆದ ಟ್ವೀಟ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಂ ರಾಷ್ಟ್ರಗಳ ಮದ್ಯೆ ಭಾರತವು ತಲೆ ತಗ್ಗಿಸುವಂತೆ ಮಾಡಿತು.

ಬಿ.ಎಲ್.ಸಂತೋಷ್ ಮುಖಾಂತರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ಡಿಸಂಬರ್ 10ರಂದು ಮದ್ಯದ ಅಮಲಿನಲ್ಲಿ ತಿರುಚ್ಚಿಗೆ ವಿಮಾನ ಹತ್ತಿದರು. ಇವರ ಜೊತೆ ನಾಲ್ವರು ಬಿಜೆಪಿ ಸದಸ್ಯರು ಇದ್ದರು ಎಂದು ಈ ಹಿಂದೆ ತಮಿಳುನಾಡು ಬಿಜೆಪಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿದ್ದ ಪಿ.ಟಿ.ಅರಸುಕುಮಾರ್, ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ. ತಮಿಳುನಾಡು ಬಿಜೆಪಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿದ್ದ ಪಿ.ಟಿ.ಅರಸುಕುಮಾರ್ 2019ರಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷದಲ್ಲಿ ಸೇರ್ಪಡೆಯಾದರು. ಅರಸುಕುಮಾರ್ ಕೂಡ ಇದೇ ವಿಮಾನದಲ್ಲಿ ಅಂದು ಪ್ರಯಾಣ ಮಾಡಿರುತ್ತಾರೆ. ಇವರು ಈ ಘಟನೆಯನ್ನು ಹತ್ತಿರದಿಂದ ನೋಡಿದ ಪ್ರತ್ಯಕ್ಷದರ್ಶಿಯೂ ಆಗಿದ್ದಾರೆ.

ಪಿ.ಟಿ.ಅರಸುಕುಮಾರ್

‘ಬೆಳಿಗ್ಗೆ ಹತ್ತು ಗಂಟೆಯ ಸಮಯಕ್ಕೆ ತಿರುಚ್ಚಿಗೆ ಹೊರಡಲಿರುವ ಆ ಪುಟ್ಟ ವಿಮಾನದಲ್ಲಿ ಒಟ್ಟು 76 ಪ್ರಯಾಣಿಕರು ಕುಳಿತುಕೊಳ್ಳಬಹುದು. ನಾನು ತಡವಾಗಿಯೇ ಆ ವಿಮಾನದೊಳಗೆ ಪ್ರವೇಶ ಮಾಡಿದೆ. ವಿಮಾನದ ತುರ್ತು ನಿರ್ಗಮನದ ಬಾಗಿಲ ಬಳಿ ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ಕುಳಿತಿದ್ದರು. ಪ್ರಯಾಣಿಕರು ಯಾವುದೇ ಅಪಘಾತ ಸಂಭವಿಸಿದಾಗ ತುರ್ತು ಬಾಗಿಲು ತೆರೆಯುವುದು ಹೇಗೆ ಎಂದು ಪ್ರಯಾಣಿಕರಿಗೆ ವಿವರಿಸಿಕೊಂಡಿದ್ದ ಗಗನಸಖಿಯರು ಹಿಂದಿನ ಬಾಗಿಲುಗಳನ್ನು ಮುಚ್ಚಿ ಪಕ್ಕಕ್ಕೆ ನಡೆದರು.

ಪ್ರಯಾಣಿಕರ ಆಗಮನವು ಮುಗಿಯುತ್ತಿದ್ದಂತೆ, ವಿಮಾನ ಚಲಿಸಲು ಜೋರಾಗಿ ಎಂಜಿನ್ ಆನ್ ಮಾಡಲಾಯಿತು. ವಿಮಾನ ಟೇಕ್ ಆಫ್ ಆಗುತ್ತಿದೆ ಎಂದು ನಾವು ಭಾವಿಸುತ್ತಿದ್ದಂತೆ, ವಿಮಾನ ಸಿಬ್ಬಂದಿಗಳು (ಕಾಕ್‌ಪಿಟ್ ಕಡೆಗೆ) ಪೈಲಟ್ ಕೋಣೆಯ ಕಡೆಗೆ ಓದಿದರು. ಅದೇ ವೇಳೆಯಲ್ಲಿ ಪೊಲೀಸರೂ ಏಕಾಏಕಿ ವಿಮಾನವನ್ನು ಪ್ರವೇಶಿಸಿದರು.

‘ವಿಮಾನದಲ್ಲಿ ದೊಡ್ಡ ಸೋರಿಕೆಯಾಗಿದೆ ಎಂದು ಪೈಲಟ್ ನ ಕಂಪ್ಯೂಟರ್ ತಿಳಿಸುತ್ತಿದೆ. ಆದ್ದರಿಂದ ಈ ವಿಮಾನವನ್ನು ಚಲಾಯಿಸಲು ಸಾಧ್ಯವಿಲ್ಲ. ಆ ಸೋರಿಕೆಯನ್ನು ಸರಿಪಡಿಸಲಾಗುತ್ತದೆಯೇ? ಅಥವಾ ಪ್ರಯಾಣಿಕರನ್ನು ಬೇರೆ ವಿಮಾನಕ್ಕೆ ಸ್ಥಳಾಂತರಿಸಲಾಗುತ್ತದೆಯೇ? ಇದನ್ನು ಇಂಡಿಗೋ ಏರ್‌ಲೈನ್ಸ್ ನಿರ್ಧರಿಸುತ್ತದೆ’ ಎಂದು ಗಗನಸಖಿಯರು ಘೋಷಣೆ ಮಾಡಿದರು.

ವಿಮಾನದ ತುರ್ತು ನಿರ್ಗಮನದ ಬಾಗಿಲು

ವಿಮಾನದೊಳಗೆ ಬಂದಿದ್ದ ಪೊಲೀಸರು ಅಣ್ಣಾಮಲೈ, ತೇಜಸ್ವಿ ಸೂರ್ಯ ಹಾಗೂ ಅವರೊಂದಿಗಿದ್ದ ಬಿಜೆಪಿಯವರನ್ನು ಪ್ರತ್ಯೇಕವಾದ ಒಂದು ಬಸ್ಸಿನಲ್ಲಿ ಹತ್ತಿಸಿ ವಿಮಾನ ನಿಲ್ದಾಣದೊಳಗೆ ಕರೆದೊಯ್ದರು. ನಾನೂ ಸೇರಿದಂತೆ ಇತರ ಪ್ರಯಾಣಿಕರನ್ನು ಬೇರೆಯ ಬಸ್ಸಿನೊಳಗೆ ಕೂರಿಸಿ, ನಮಗೆ ಸ್ನಾಕ್ಸ್ ಮತ್ತು ಕೂಲ್ ಡ್ರಿಂಕ್ಸ್ ಕೊಟ್ಟರು. ಅಷ್ಟರೊಳಗೆ ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ಇಬ್ಬರು ಸೇರಿಕೊಂಡು ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು (Emergency Exit) ತೆರೆದಿದ್ದ ಕಾರಣ, ವಿಮಾನದೊಳಗೆ ದೊಡ್ಡ ಸೋರಿಕೆ ಉಂಟಾಯಿತು ಎಂಬುದನ್ನು ಪೈಲಟ್ ಪತ್ತೆ ಮಾಡಿದ್ದರು. ಪೈಲಟ್ ಅದನ್ನು ಕಂಡುಹಿಡಿದಿರದಿದ್ದರೆ ನೇಪಾಳ ದೇಶದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 76 ಜನರು ಅಪಘಾತದಲ್ಲಿ ಸತ್ತಂತೆ ನಾವು ಕೂಡ ಸತ್ತಿರಬೇಕು. ಪೈಲೆಟ್ ಸಾಮಾರ್ಥ್ಯದಿಂದ ಅಣ್ಣಾಮಲೈ ಮತ್ತು ಇತರರು ಮಾಡಿದ ಕೆಲಸ ಪತ್ತೆ ಮಾಡಲಾಯಿತು.

ಅಗ್ನಿಶಾಮಕ ವಾಹನಗಳು ಸೇರಿದಂತೆ ಎಲ್ಲಾ ತುರ್ತು ವಾಹನಗಳು ವಿಮಾನದ ಸುತ್ತಲೂ ನಿಂತಿದ್ದವು. ಫ್ಲೈಟ್ ಎಂಜಿನಿಯರ್‌ಗಳು ವಿಮಾನವನ್ನು ಇಂಚಿಂಚಾಗಿ ಪರೀಕ್ಷಿಸಿದರು. ತೇಜಸ್ವಿ ಸೂರ್ಯ ಹಾಗೂ ಅಣ್ಣಾಮಲೈ ವಿಮಾನದ ತುರ್ತು ಬಾಗಿಲನ್ನು ಏಕೆ ತೆರೆದರು? ಅವರು ಭಯೋತ್ಪಾದಕರೇ? ಎಂದೆಲ್ಲ ಅವರನ್ನು ಪ್ರತ್ಯೇಕವಾಗಿ ತನಿಖೆಗೆ ಒಳಪಡಿಸಲಾಯಿತು. ಆ ನಂತರ ಅವರ ಆಸನಗಳನ್ನು ಬದಲಾಯಿಸಿ ಬೇರೆಕಡೆ ಕೂರಿಸಲಾಯಿತು. ಹತ್ತು ಗಂಟೆಗೆ ಹೊರಡಬೇಕಿದ್ದ ವಿಮಾನ ಒಂದೂವರೆ ಗಂಟೆ ತಡವಾಗಿ ಹನ್ನೊಂದು ಮೂವತ್ತಕ್ಕೆ ಟೇಕ್ ಆಫ್ ಆಯಿತು’ ಎಂದು ಅಲ್ಲಿ ನಡೆದ ಘಟನೆಯನ್ನು ಬಿಡಿಬಿಡಿಯಾಗಿ ವಿವರಿಸಿದ್ದಾರೆ ಅರಸುಕುಮಾರ್.

ಅಮಿತ್ ಶಾ, ಗೃಹ ಸಚಿವರು

ಇದರ ಬಗ್ಗೆ ಇಂಡಿಗೋ ಸಂಸ್ಥೆಯು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿತ್ತು. ದೂರಿನ ಆಧಾರದ ಮೇಲೆ, ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತನಿಖೆ ನಡೆಸಿ, ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯ ಇಬ್ಬರಿಂದಲೂ ಕ್ಷಮಾಪಣೆ ಪತ್ರ ಬರೆದು ಕೊಂಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶದ ನಂತರ ಇಬ್ಬರನ್ನೂ ಬಿಡುಗಡೆ ಮಾಡಲಾಗಿತ್ತು.

ತಮಿಳುನಾಡು ಮತ್ತು ಕರ್ನಾಟಕದ ಬಿ.ಜೆ.ಪಿ. ನಾಯಕರು ಮದ್ಯದ ಅಮಲಿನಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿದ್ದನ್ನು ಕೇಂದ್ರ ಸರ್ಕಾರ ಮರೆತ್ತಿದ್ದರೂ ಇಂಡಿಗೋ ವಿಮಾನ ಸಂಸ್ಥೆ ನೀಡಿದ ದೂರಿನ ಮೇರೆಗೆ ಒಂದು ತಿಂಗಳ ನಂತರ ಪ್ರಕರಣ ವಿಚಾರಣೆಗೆ ಬಂದಿತ್ತು. ‘ಇಂತಹ ಒಂದು ಘಟನೆ ನಡೆದಿದ್ದು ನಿಜ; ಅದನ್ನು ನಾವು ವಿಚಾರಣೆ ಮಾಡುತ್ತಿದ್ದೇವೆ’ ಎಂದು ನಾಗರಿಕ ವಿಮಾನಯಾನ ಇಲಾಖೆ ತಿಳಿಸಬೇಕಾದ ಅನಿವಾರ್ಯತೆ ಇವರಿಂದ ಎದುರಾಯಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜೋತಿರಾಧಿತ್ಯ ಸಿಂಧ್ಯ, ‘ವಿಮಾನದ ತುರ್ತು ಬಾಗಿಲನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ಕಳಚಿದ್ದನ್ನು ಒಪ್ಪಿಕೊಂಡಿದ್ದು ಅಲ್ಲದೆ, ಈಗಾಗಲೇ ಅವರು ಕ್ಷಮಾಪಣೆ ಪತ್ರ ಬರೆದು ಕೊಟ್ಟಿದ್ದಾರೆ ಎಂದು ಹೇಳಿ ಈ ಪ್ರಕರಣಕ್ಕೆ ಇತಿಶ್ರೀ ಹಾಡಿದರು.

ದೇಶ

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೈಯಲ್ಲಿ ಕಟ್ಟಿರುವ ಸುಮಾರು 5 ಲಕ್ಷ ಬೆಲೆ ಬಾಳುವ ರಫೇಲ್ ಕೈ ಗಡಿಯಾರದ ವಿಚಾರವೇ ಈಗ ತಮಿಳುನಾಡಿಲ್ಲಿ ಟ್ರೆಂಡಿಂಗ್ ನ್ಯೂಸ್.

ತಮಿಳುನಾಡು ಇಂಧನ ಸಚಿವ ಸೆಂದಿಲ್ ಬಾಲಾಜಿ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, ‘ಫ್ರೆಂಚ್ ಕಂಪನಿಯ ರಫೇಲ್ ವಾಚ್ ಹೊಂದಿರುವ ಅಣ್ಣಾಮಲೈ, ಖರೀದಿಯ ರಸೀದಿಯನ್ನು  ಒಂದು ಗಂಟೆಯ ಒಳಗೆ ಪ್ರಕಟಿಸಿದರೆ, ಸಾಮಾನ್ಯ ಜನರು ಸಹ ಅದನ್ನು ಖರೀದಿಸಿ ಆನಂದಿಸಬಹುದು. ಮತ್ತು ಕೇವಲ 4 ಕುರಿಮರಿಗಳನ್ನು ಹೊಂದಿರುವುದಾಗಿ ಹೇಳಿಕೊಳ್ಳುವ ಅಣ್ಣಾಮಲೈ, 5 ಲಕ್ಷಕ್ಕೂ ಹೆಚ್ಚು ಬೆಲೆಯ ದುಬಾರಿ ರಫೇಲ್ ವಾಚನ್ನು ಹೊಂದಿದ್ದಾರೆ ಎಂದು ಟೀಕಿಸಿದ್ದರು.

ಇದಕ್ಕೆ ಕೆಂಡಾಮಂಡಲವಾದ ಅಣ್ಣಾಮಲೈ ‘ನಾನು ಬಿಜೆಪಿ ಅಧ್ಯಕ್ಷನಾಗುವ ಮೊದಲೇ 2021 ಮೇ ತಿಂಗಳಲ್ಲಿ ರಫೇಲ್ ವಾಚನ್ನು ಖರೀದಿ ಮಾಡಿದ್ದೆ. ಅದರ ರಸೀದಿ, ಆದಾಯ ತೆರಿಗೆ ರಿಟರ್ನ್ಸ್, 10 ವರ್ಷಗಳು  ಬ್ಯಾಂಕಿನಲ್ಲಿ ನಡೆಸಿದ ಹಣಕಾಸಿನ ವ್ಯವಹಾರ, ಐಪಿಎಸ್ ಕಾಲದಲ್ಲಿ ಸಂಪಾದಿಸಿದ ಹಣ, ಮುಂತಾದ ಎಲ್ಲಾ ವಿವರಗಳನ್ನು ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ ನಡೆಯಲಿರುವ ಪಾದಯಾತ್ರೆಯ ಮೊದಲ ದಿನವೇ ಪ್ರಕಟಿಸುತ್ತೇನೆ’ ಎಂದು ಹೇಳಿದ ಅಣ್ಣಾಮಲೈ, ‘ಅದೇ ರೀತಿ ಡಿಎಂಕೆ ಪಕ್ಷದ ಆಸ್ತಿ ವಿವರಗಳನ್ನು ಪ್ರಕಟಿಸಲು ಅವರು ಸಿದ್ಧರಿದ್ದಾಯೇ’ ಎಂದೂ ಪ್ರಶ್ನೆ ಮಾಡಿದರು. ‘ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಅವರ ಕುಟುಂಬ ವರ್ಗದವರು, ಸಚಿವರುಗಳು, ಅವರ ಸಂಬಂಧಿಗಳು, ಅವರ ಬೇನಾಮಿಗಳು ಮಾಡಿರುವ ಭ್ರಷ್ಟಾಚಾರ ಎಲ್ಲವನ್ನೂ ಒಂದೊಂದಾಗಿ ಬಯಲು ಮಾಡುತ್ತೇನೆ’ ಎಂದೂ ಅಣ್ಣಾಮಲೈ ಗುಡುಗಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಸೆಂದಿಲ್ ಬಾಲಾಜಿ, ‘ನಾವು ನಿಮ್ಮಲ್ಲಿ ಕೇಳಿದ್ದು ಬರೀ ಬಿಲ್ ಮಾತ್ರ‌. ಬಿಲ್ ಇದೆ ಅಥವಾ ಇಲ್ಲ ಎಂಬುದೇ ಇದಕ್ಕೆ ಸರಿಯಾದ ಉತ್ತರವಾಗಿರುತ್ತದೆ. ಚುನಾವಣೆ ನಂತರ ಖರೀದಿ ಮಾಡಿದ್ದು ಎಂದು ಹೇಳಿದರೆ, ಚುನಾವಣಾ ನಾಮಪತ್ರದಲ್ಲಿ ಏಕೆ ಲೆಕ್ಕ ತೋರಿಸಲಿಲ್ಲ ಎಂಬ ಪ್ರಶ್ನೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ 2021 ಮೇ ತಿಂಗಳಲ್ಲಿ ಖರೀದಿ ಮಾಡಿದ್ದು ಎಂದು ಹೇಳುವ ಸುಮಾರು 5 ಲಕ್ಷ ಬೆಲೆಬಾಳುವ  ರಫೇಲ್ ವಾಚಿಗೆ ನಿಮ್ಮ ಬಳಿ ಬಿಲ್ ಇದೆಯೇ? ಅಥವಾ ತಯಾರಿ ಮಾಡಬೇಕೇ? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. 

ಅಣ್ಣಾಮಲೈ ಕೈಯಲ್ಲಿ ಇರುವ ಕೈ ಗಡಿಯಾರ ಫ್ರಾನ್ಸ್ ದೇಶದ ರಫೇಲ್ ಕಂಪನಿಯಿಂದ ತಯಾರಿಸಿದ್ದು ಎಂದು ಹೇಳಲಾಗುತ್ತಿದೆ. ರಫೆಲ್ ಕಂಪನಿಯು ಈಗಾಗಲೇ ಯುದ್ಧ ರಾಕೆಟ್ ಗಳನ್ನು ತಯಾರಿಸಿ ನಮ್ಮ ದೇಶಕ್ಕೆ ಸರಬರಾಜು ಮಾಡಿದೆ. ‘ರಾಕೆಟ್ ಗಳ ಬಿಡಿ ಭಾಗಗಳಿಂದ ಈ ರಫೇಲ್ ವಾಚನ್ನು ತಯಾರಿಸಲಾಗಿದೆ. ಬರೀ 500 ವಾಚ್ ಗಳನ್ನಷ್ಟೇ ರಫೇಲ್ ಕಂಪನಿ ತಯಿರಿಸಿತ್ತು ಅದರಲ್ಲಿ ನನ್ನ ಬಳಿಯಿರುವುದು 149ನೇ ವಾಚ್’ ಎಂದು ಅಣ್ಣಾಮಲೈ ಹೇಳಿದ್ದಾರೆ.

ಈ ಹಿಂದೆ ಕರ್ನಾಟಕದಲ್ಲಿ ‘ರಿಯಲ್ ಸಿಂಗಮ್’, ‘ಕರ್ನಾಟಕ ಸಿಂಗಮ್’ ಎಂದೆಲ್ಲ ಅಡ್ಡಹೆಸರಿಟ್ಟು ಕರೆಯುತ್ತಿದ್ದ ಐಪಿಎಸ್ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈಗೆ 2016ರಲ್ಲಿ ಕಾಫಿ ಮಾಲೀಕರೊಬ್ಬರು ಈ ವಾಚನ್ನು ಉಡುಗೊರೆಯಾಗಿ ನೀಡಿದ್ದು ಎಂದು ಹೇಳಲಾಗುತ್ತಿದೆ.

ಈಗ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದವರು ಅಣ್ಣಾಮಲೈಗೆ ‘ಬಿಲ್ ಎಲ್ಲಿ’ ಎಂದು ಕೇಳುವುದನ್ನೇ ಟ್ರೆಂಡ್ ಮಾಡಿಕೊಂಡಿದ್ದಾರೆ.

ತಮಿಳುನಾಡು ಕರೂರಿನ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ‘ಅಣ್ಣಾಮಲೈನ 5 ಲಕ್ಷ ರೂಪಾಯಿಯ ಕೈ ಗಡಿಯಾರ, ಮೋದಿಯ 10 ಲಕ್ಷ ರೂಪಾಯಿಯ ಕೋಟ್ ಇವೆಲ್ಲವೂ ಸರಳ. ಪ್ರಾಮಾಣಿಕತೆಯ ಸಂಕೇತ. ಕುರಿಮರಿ ಮತ್ತು ಚಹಾ ಮಾರಾಟದಿಂದ ಗಳಿಸಿದ ಹಣದಿಂದ ಖರೀದಿಸಿದ್ದು. ಬಿಜೆಪಿಗೂ ಭ್ರಷ್ಟಾಚಾರಕ್ಕೂ ಅವಿನಾಭಾವ ಸಂಬಂಧ. ಅದನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ. ಬಿಜೆಪಿಯು ತನ್ನ ಭ್ರಷ್ಟಾಚಾರವನ್ನು ಮರೆಮಾಚಲು ದೇಶಭಕ್ತಿ  ಎಂಬ ಮುಖವಾಡವನ್ನು ಧರಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.